ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿಶಾ ಗೌರೀಪ್ರಾಣಾಧೀಶ ಜಯ ಜಯದುರಿತ 'ನಾಶ ಮಹೇಶ ಪದಕ್ಷಯಜ್ಞ 'ಧ್ವಂಸಕಾರಿ ಸುರಪಕ್ಷಪಾತಿ ಕಾಮಾರಿ ದುಃಖಹರ 1ಘೋರಪಾಪ ಸಂದೋಹನಾಶನಭೂರಿ ದಯಾಳೋ ಭೋಗಿಭೂಷಣ 2ಈಶಗಿರೀಶ ಧನೇಶ್ವರ 'ುತ್ರಕಾಶೀಶ್ವರ ಸುರಸನ್ನುತಿ ಪಾತ್ರ 3ವಾಸವಾದಿನುತ ದುಷ್ಟಭಯಂಕರವೇಷ ಜಟಾಧರ ಚಂದ್ರಶೇಖರ 4ಕಲಭಪ್ರೌಢ ಮಹಾನಾಟ್ಯೇಶ್ವರಆ'ಮುಕ್ತೇಶ್ವರ ಪ್ರಮಥ ಗಣೇಶ್ವರ 5ಕಾಳಿಂದೀಪ್ರಿಯ ಕಮಲನಯನಸಖಕಾಲಕಾಲ ಕಾಲಾಗ್ನಿ ಪಂಚಮುಖ 6ನೀಲಕಂಠ ನಿಖಿಲಾಮರ ರಕ್ಷಕಫಾಲಚಂದ್ರ ಸಂಸೃತಿ 'ಷಭಕ್ಷಕ 7ಶಾಂತಮೂರ್ತಿವರಕಾಂತಿ ಗುಣಪ್ರಿಯಶಾಂತಿದಾಯಕಾ ಶಾಂತ ಸಂಶಯ 8ಕುಂಭಜಾತ ನುತನಟನ'ಲಾಸಶಂಭು ಹರ ಚಿದಾಕಾಸ ನಿವಾಸ 9
--------------
ಹೊಸಕೆರೆ ಚಿದಂಬರಯ್ಯನವರು
ಶ್ರೀ ಕ್ರೋಧನ ನಾಮ ಸಂವತ್ಸರ ಸ್ತೋತ್ರ 157 ಕ್ರೋಧನ ಸಂವತ್ಸರ ನಿಯಾಮಕ ಸ್ವಾಮೀಶ್ರೀ ಪದುಮಾಲಯಪತಿ ನಾರಸಿಂಹನ ಪಾದ ಕೃತಿ ನಡೆಸಿ ಶರಣರ ಕಾಯ್ವ ಪ ಈ ಸಂವತ್ಸರ ರಾಜಾ ಶುಕ್ರ ಮಂತ್ರೀ ಶನಿಯು ಶನೈಶ್ಚರನೇ ಸೈನ್ಯಾರ್ಘ ಮೇಘ ಸಸ್ಯಪತಿ ರಸಪಗುರು ನಿರಸ ಸಸ್ಯಪ ಮಂಗಳ ಸುಸೌಖ್ಯ ಬಹುಕ್ಷೀರ ಧಾನ್ಯ ವೃಷ್ಟಿದ ಚಂದ್ರ 1 ಕಾಡು ಕಿಚ್ಚು ಮೊದಲಾದ ಅಗ್ನಿಭಯ ರೋಗ ಪೀಡೆ ಜನರಲ್ಲು ರಾಜರಲು ಪರಸ್ಪರ ಅಡಿಗಡಿಗೆ ಸ್ನೇಹಹಾನಿ ಸೈನ್ಯಕಲಹ ದುಷ್ಟಭಯ ಕಳೆದು ಭಕ್ತರ ಕಾಯ್ವ ಹರಿ 2 ತತ್ವದೇವರ್ಗಳು ಸಭಾರ್ಯಾ ರವಿಸೋಮರು ಶಿವಾಶಿವ ವರ ಸಮೀರ ಇವರುಗಳಿಂ ಸೇವ್ಯ ಶ್ರೀ ಶ್ರೀಯುಕ್ ಪ್ರಾಣಯಮ್ಮೊಳ್‍ಜ್ವಲಿಸಿಕಾಯ್ವ ಸರ್ವಗ ವೇಧಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಜಯದಾಸರು134ವಿಜಯದಾಸರೆ ನಿಮ್ಮ ಪಾದವನಜಗಳನ್ನುಭಜಿಸೆ ಭಾಗ್ಯವದೆಂದು ಸಾಧುಜನಮತವು ಪವಸುಧೆವೈಕುಂಠಪತಿವಿಜಯವೆಂಕಟಕೃಷ್ಣಬಿಸಜಭವಪಿತ ಬಿಂದು ಮಾಧವಗೆ ಪ್ರಿಯವಾಸವಾಹ್ವಯ ದಾಸಶ್ರೇಷ್ಠರಿಗೆ ಪ್ರಿಯತಮರೆದಾಸವರ ಸುರವರ್ಯ ವಿಜಯಾರ್ಯ ಶರಣು 1ಮೃತ್ಯು ಅಪಮೃತ್ಯುಗಳ ತರಿದು ನಂಬಿದವರಿಗೆಸತ್ಯಾರಮಣನೊಲುಮೆ ಒದಗಿಸಿದಿರಿಮತ್ರ್ಯರಲಿ ನಾಮಂದನಿಮ್ಮ ನಂಬಿದೆ ಎನ್ನಭೃತ್ಯನೆಂದೆನಿಸಿ ವಾತ್ಸಲ್ಯದಿ ಪಾಲಿಪುದು 2ಎನ್ನ ಸರ್ವೇಂದ್ರಿಯವು ಹೀನವಿಷಯದಿ ರತವುಬಿನ್ನಹವ ಮಾಡಲ್ಕೆ ಬಗೆ ಏನು ಕಾಣೆಘನಔದಾರ್ಯನಿಧಿ ನಿಮಗೆ ಶರಣೆಂಬುವುದುಒಂದನ್ನೆ ನಾ ಬಲ್ಲೆ ಶರಣುಸುರಧೇನು3ಇಷ್ಟಧನ ಆಯುಷ್ಯ ಕೀರ್ತಿ ಉನ್ನತಜಯದುಷ್ಟಭಯ ಬಂಧನಿಗ್ರಹವು ವೈರಾಗ್ಯಉತ್ಕøಷ್ಟ ಹರಿಭಕ್ತಿ ಜ್ಞಾನವೀವುವು ನಿಮ್ಮಶ್ರೇಷ್ಠಪದ ಕೀರ್ತನೆ ನಾಮ ಸಂಸ್ಮರಣೆ 4ಅಜನ ಜನಕನು ಶ್ರೀ ಪ್ರಸನ್ನ ಶ್ರೀನಿವಾಸನುಅಜಿತ ಅಜನಂದಿನೀಪಿತನು ಗೋಪಾಲಅಬ್ಜಶಂಖವ ಪಿಡಿದವರಅಭಯಹಸ್ತ ಶ್ರೀವಿಜಯವಿಜಯಾಪತಿಯ ದಾಸರಿಗೆ ಶರಣು5
--------------
ಪ್ರಸನ್ನ ಶ್ರೀನಿವಾಸದಾಸರು