ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏ ರಂಗಧಾಮ ರಂಗ ಏ ರಂಗಧಾಮ ಪ. ನಾರುವ ಮೈಯವನತ್ತ ಸಾರು ಮುಟ್ಟದಿರೊ ಎನ್ನ ದೂರನಿಲ್ಲು ತರವಲ್ಲ ಏ ರಂಗಧಾಮ ಧೀರ ಮತ್ಸ್ಯರೂಪಕಾಣೆ ಎಲೆ ಸತ್ಯಭಾಮೆ 1 ಚೆಂದವಂತನೆಂದು ನಾ ಬಂದೆ ತರ್ಕಿಸಿ ನಿನ್ನ ಬೆನ್ನು ಡÉೂಂಕಿದೇನೋ ಪೇಳೋ ಏ ರಂಗಧಾಮ ಮಂದರ ಮುಳುಗೆ ಕೂರ್ಮ ಎಲೆ ಸತ್ಯಭಾಮೆ 2 ನೋಡಿದರೆ ಮೈಯೊಳಗೆ ಮೂಡಿರುವ ರೋಮಗಳು ಗಾಡಿಕಾರ ನೀನಾರಯ್ಯ ಏ ರಂಗಧಾಮ ಕ್ರೋಡರೂಪದಿಂದಿಳೆಯ ದಾಡೆಯ ಮೇಲಿಟ್ಟು ತಂದ ಕಾಡವರಾಹನು ಕಾಣೆ ಎಲೆ ಸತ್ಯಭಾಮೆ 3 ಮನುಷ್ಯಾಗಿದ್ದಮೇಲಣಕಾನನದ ಮೃಗರಾಜ ಆನನವಿದೇನೊ ಪೇಳೊ ಏ ರಂಗಧಾಮ ಮಾನಿನಿ ಕೇಳೆ ಪ್ರಹ್ಲಾದನ್ನ ಮಾನಭಂಗಕ್ಕೊದಗಿದ ಶ್ರೀ ನರಸಿಂಹ ಕಾಣೆ ಎಲೆ ಸತ್ಯಭಾಮೆ 4 ದೊರೆತನವುಳ್ಳವನೆಂದು ಮರುಳುಗೊಂಡೆ ನಾ ನಿನಗೆ ತಿರುಕನೆಂಬೋದರಿಯದಾದೆನೊ ಏ ರಂಗಧಾಮ ತರಳೆ ಸುರರಿಗಾಗಿ ಬಲಿಯ ತುಳಿದು ಪಾತಾಳಕೊತ್ತಿದ ಗರುವ ವಾಮನ ಕಾಣೆ ಎಲೆ ಸತ್ಯಭಾಮೆ 5 ಅಡವಿಯೊಳು ಕಟ್ಟಿಗೆಯ ಕಡಿವವನಂತೆ ಕೊಡಲಿಯ ಪಿಡಿವುದೇನೊ ಪುಣ್ಯವಾಸ ಏ ರಂಗಧಾಮ ಮಡುಹಿ ಕ್ಷತ್ರೇರನೆಲ್ಲ [ಮುದದಿ] ಸೇರ್ದ ಮಾತೆಗಾಗಿ ಒಡೆಯನಾದ ಪರಶುರಾಮ ಎಲೆ ಸತ್ಯಭಾಮೆ 6 ಊರಬಿಟ್ಟರಣ್ಯವನು ಸೇರಿ ಮುನಿಗಳಂತಿಪ್ಪ [ಕಾರಣ]ವಿದೇನೊ ಪೇಳೊ ಏ ರಂಗಧಾಮ ಕ್ರೂರರಾವಣನ ಗೆಲಿದು ನಾರಿಸೀತೆಯನು ತÀಂದ ಧೀರರಾಘವನು ಕಾಣೆ ಎಲೆ ಸತ್ಯಭಾಮೆ 7 ವಲ್ಲಭೆಜನರಿಗೆಲ್ಲ ನೀ ವಲ್ಲಭನಾಗಿ ಗೊಲ್ಲನಂತೆ ಗೋವ ಕಾಯುವ ಕಾರಣವೇನೊ ಏ ರಂಗಧಾಮ ಬಿಲ್ಲಹಬ್ಬಕ್ಕೆ ಹೋಗಿ[ಮಲ್ಲ] ಕಂಸನ ಕೊಂದ ಬಲ್ಲಿದ ಶ್ರೀಕೃಷ್ಣ ಕಾಣೆ ಎಲೆ ಸತ್ಯಭಾಮೆ 8 ನಗೆಗೀಡು ಮಾಡಿಕೊಂಡು ದಿಗ್ವಸನನಾಗಿ ನಿಂತ ಹಗರಣವಿದೇನೊ ಪೇಳೊ ಏ ರಂಗಧಾಮ ಮಿಗೆ ಮೂರುಪುರದ ಸತಿಯರ ವ್ರತವ ಕೆಡಿಸಿ ಜಗವ ಮೋಹಿಸುವ ಬೌದ್ಧ ಎಲೆ ಸತ್ಯಭಾಮೆ 9 ಕರದಿ ಖಡ್ಗವನೆ ಪಿಡಿದು ತರಳ ಅಶ್ವವನೇರಿ ತಿರುಗುವುದಿದೇನು ಪೇಳೊ ಏ ರಂಗಧಾಮ ವರ ಹಯವದನ ಹರುಷದಿಂದಲಾಡಿ ಪಾಡಿ ಕಲ್ಕಿಯಾದೆ ಹರಿಲೋಚನೆ ಎಲೆ ಸತ್ಯಭಾಮೆ 10
--------------
ವಾದಿರಾಜ
ರಕ್ಷ ಚಿದಾನಂದ ರಕ್ಷಚಿದಾನಂದ ರಕ್ಷಮಾಂ ರಕ್ಷ ಪಪಟುತರಕಾಂತಿ ವಿಸ್ಪುಟಿತ ಮಧುರ ಪುಂಜಘಟವಿಧಿಪೂರ ಸದ್ಘಟನ ಚಿದಾನಂದ1ಸಾರನಿಗಮತತಿ ದೂರ ಸುಮನ ಮನೋ-ಹರನಿಖಿಳಜಗೋತ್ತಾರ ಚಿದಾನಂದ2ಬಿಸಜರಿಪು ನೇತ್ರ ಸುಭಸಿತ ಮಂಗಳಾಕಾರವಿಷಧರೋದ್ಧಾರ ದಿಗ್ವಸನ ಚಿದಾನಂದ3ಈಶಭೂತೇಶಮಹೇಶ ಗಿರೀಶಉಮೇಶ ನಟೇಶ ಸರ್ವೇಶ ಚಿದಾನಂದ4ಗುರುಪ್ರಣವಾನಂದಗುರುತ್ರಿಯಕ್ಷರಗುರುಚಿದಾನಂದ ಗುರುವೇ ಚಿದಾನಂದ5
--------------
ಚಿದಾನಂದ ಅವಧೂತರು
ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿಸುವ್ವಿಮಲ್ಲಮುಷ್ಟಿಕರವೈರಿಶ್ರೀ ಕೃಷ್ಣನ್ನಸುವ್ವೆಂದು ಪಾಡಿ ರಕ್ಷಿಪ ಸುವ್ವಿ ಪ.ವಿಶ್ವಬೀಜವ ಪೊತ್ತ ಗಿರಿ ಪೊತ್ತಧರೆಪೊತ್ತಶಿಶು ಕೃಷ್ಣಾಜಿನ ಪರಶು ಧನು ಪೊತ್ತಶಿಶು ಕೃಷ್ಣಾಜಿನ ಪರಶುಧನು ಪೊತ್ತಗವ ಪೊತ್ತ ದಿಗ್ವಸನ ಇಟ್ಟಿಯ ಪೊತ್ತ 1ಶ್ರುತಿಗೆದ್ದವನ ಗೆದ್ದಾಮೃತ ಗೆದ್ದಸತಿಗೆದ್ದದಿತಿಜಬಲಿಕ್ಷತ್ರಿಯರಾಕ್ಷಸರ ಗೆದ್ದದಿತಿಜಬಲಿಕ್ಷತ್ರಿಯ ರಾಕ್ಷಸರ ಗೆದ್ದ ಅಲರ ಗೆದ್ದಪತಿವ್ರತೆ ಅಧರ್ಮಿಗಳ ಗೆದ್ದ 2ಎವೆ ಇಲ್ಲ ಮೃದು ಇಲ್ಲ ಜವದೊಳೆಡಬಲವಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲ ಕೃಷ್ಣ ಪ್ರಸನ್ವೆಂಕಟಯೋಗಿಕೃಪೆಗೆ ಕಡೆಯಿಲ್ಲ3
--------------
ಪ್ರಸನ್ನವೆಂಕಟದಾಸರು