ಒಟ್ಟು 231 ಕಡೆಗಳಲ್ಲಿ , 53 ದಾಸರು , 189 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು 1 ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು ಅಜ್ಞಾನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು 2 ಬಂಟ ಜನರು ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು3 ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು4 ಮೆರೆಯುತಿಹರು ಪಂಚೇಂದ್ರಿಯಗಳು ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು 5 ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು 6 ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು 7 ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು 8 ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು 9 ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು 10 ದುರ್ಮೋಹ ಬಲದಲಿ ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ 11 ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ ಸಮ್ಯಜ್ಞಾನೆಂಬಾಶಗತಿಯ ಜ್ಞಾನ ವೈರಾಗ್ಯಸುತರು 12 ಬಂಟ ಜನರು ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು 13 ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು ಮಗುಟ ವರ್ಧನರು 14 ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು 15 ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು 16 ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು 17 ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು 18 ಸುಜ್ಞಾನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು 19 ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ ಶೋಭಿಸುವದು ಶೃಂಗಾರದಲಿ 20 ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು 21 ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು 22 ನಡೆವರು ಅತಿಶಯ ಶೀಘ್ರದಲಿ ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು 23 ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು 24 ಮಗುಟ ವರ್ಧನರು ನಡೆದರು ಅತಿ ಹರುಷದಲಿ ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು 25 ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ 26 ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ 27 ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು 28 ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ 29 ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು 30 ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ 31 ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು ಕೂಡಿತು ಉಭಯ ದಳವು 32 ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ33 ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು 34 ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು 35 ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು 36 ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು 37 ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ 38 ಬಂಟ ಜನರು ಬಂದರು ಸಿಟ್ಟು ಕೋಪದಲಿ ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು 39 ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು 40 ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು 41 ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ 42 ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು 43 ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು 44 ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ 45 ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು 46 ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು 47 ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು 48 ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ 49 ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ 50 ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು 51 ಅಜ್ಞಾನವೆಂಬಾಶಾಗತಿಯು ಮುಕ್ತವಾದಳು ಸುಜ್ಞಾನz ಮಾಯವಾದರು ವೈರಾಗ್ಯದಲಿ52 ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ 53 ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು 54 ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ 55 ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ ಸಹಸ್ರದಳ ಕಮಲಗಲು ಥಳಥಳಿಸುವದದರೊಳು 56 ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ 57 ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು 58 ವಿಶ್ವ ವ್ಯಾಪಕನೆಂಬ ಸ್ಥಿತಿಯು ಮಹಿಮಾನಂದ ಸ್ಫೂರ್ತಿಯು 59 ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ 60 ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ 61
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ದೀನಜನ ಬಂಧೂ ದಯಾರಸ ಸಿಂಧೂ ಪ ದಿವಿಜರ ಸಮುದಾಯವಿದ್ದರೇನು ಅವನ ವ್ಯಾಳೆಗೆ ಒದಗಲಿಲ್ಲಾ ಅವನಿವಲ್ಲಭ ಅವ್ಯಯವೆಂದರೆ ಅವಸರಕ್ಕೊದಗಿ ಕಾಯದೇ ಕೃಷ್ಣಾ 1 ಭೂತ ಪರಿವಾರವಿದ್ದರೇನು ಆತನ ಅಭಂಗಕ್ಕೆ ಒದಗಲಿಲ್ಲಾ ಪೂತಾತ್ಮ ಪುರುಷೋತ್ತಮನೆಂದರೆ ಚಾತುರ್ಯದಿಂದ ಸಲಹಿದೆ ಕೃಷ್ಣಾ 2 ಚತುರಾಸ್ಯಾದಿಗಳು ಇದ್ದರೇನು ಶ್ರುತಿಯಹಾನಿರೆ ಒದಗಲಿಲ್ಲಾ ಚತುರಾತ್ಮ ಸಿರಿಪತಿ ಉರಗಾದ್ರಿ ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ3
--------------
ವಿಜಯದಾಸ
* ನರಹರಿಯೆ ಸುಕ್ಷೇಮವ ಪ. ಪರಮಪ್ರಿಯರಿಗೆ ಇತ್ತು ವರ ಸೇವೆ ಕೈಕೊಂಡು ನಿರುತದಿ ಪಾಲಿಸೆನ್ನ ಘನ್ನ ಅ.ಪ. ದಾಸ ಗುರುಕುಲತಿಲಕರಿವರಿಗೆ ನೀನೀಗ ಘಾಸಿಗೊಳಿಸುವುದುಚಿತವೆ ದೋಷದೂರನೆ ಎಮ್ಮ ಮನವನರಿತವ ಜನರ ದೂಷಣೆಗೆ ಗುರಿ ಮಾಳ್ಪರೆ ಘಾಸಿಪಡುತಿಹರ ಆಯಾಸಪಡಿಸುವುದು ಬಹು ಲೇಸಲ್ಲ ನಿನಗೆ ಥರವೆ ಶೇಷಶಯನನೆ ಎಮ್ಮ ಮಾತು ಲಾಲಿಸಿ ಈಗ ಪೋಷಿಸಲಿ ಬೇಕೊ ಸ್ವಾಮಿ ಪ್ರೇಮಿ 1 ಕಲ್ಪತರುವಂತಿಹರು ಶಿಷ್ಯವೃಂದಕೆ ಇವರು ಇಪ್ಪರೋ ಚಂದ ಜಗದಿ ತಪ್ಪದಲೆ ಆಯುರಾರೊಗ್ಯ ಕೊಟ್ಟು ನೀ ಸರ್ಪಶಯನನೆ ರಕ್ಷಿಸೊ ಒಪ್ಪದಿಂದಲಿ ಎಮ್ಮ ಸೇವೆ ಸಫಲವಗೊಳಿಸಿ ಅಪ್ಪ ಸಂತಸವಪಡಿಸೊ ಬಪ್ಪ ಪೋಪ ಕೀರ್ತಿ ಅಪಕೀರ್ತಿ ನಿನ್ನಡಿಗೆ ಪುಷ್ಪದಂತರ್ಪಿಸುವೆನೊ ನೃಹರಿ 2 ಮನವಚನ ಕಾಯದಲಿ ಅನ್ಯ ಬಗೆಯದೆ ಎಮ್ಮ ಗುರುಗಳನು ಸೇವಿಸುವೆವೊ ಚಿನುಮಯನೆ ನೀ ಸಾಕ್ಷಿಯೋ ಮನುಜರಿದನೇನ ಬಲ್ಲರು ಕೇಳು ತಂತಮ್ಮ ಮನ ಬಂದ ತೆರ ನುಡಿವರೊ ಎನಗದರ ಗೊಡವೇನು ನೀನಿರಲು ಭಯವೇನು ಘನ ಮಹಿಮ ಪೊರೆಯೊ ಬೇಗ ಸ್ವಾಮಿ 3 ಪಂಚಪ್ರಾಣರು ಇವರು ವಂಚನಿಲ್ಲದೆ ಪೇಳ್ವೆ ಮುಂಚೆ ನೀ ಕಾಪಾಡೆಲೊ ಸಂಚಿತಾಗಾಮಿ ಪ್ರಾರಬ್ಧ ದುಷ್ಕರ್ಮಗಳು ಮಿಂಚಿನಂದದಿ ಮಾಡೆಲೊ ಸಂಚಿತಾಗಾಮಿಗಳ ಶಿಷ್ಯರಿಗೆ ಕಳೆವರಿಗೆ ಕೊಂಚ ಬಾಧೆಯ ಕೊಡದೆಲೊ ಸಂಚಿತಿತ ಪ್ರದನೆ ಎನ್ನ ಮೊರೆ ಲಾಲಿಸು ಅಚಂಚಲದ ಕ್ಷೇಮವೀಯೋ ದೇವ 4 ಪರಿ ಪ್ರಾರ್ಥಿಸುವೆ ಶ್ರೀ ಪತಿಯೆ ದಯವ ಮಾಡೊ ನಾ ಪೇಳ್ವುದಿನ್ನೇನು ನಿನ್ನ ಸೇವಾದಿಗಳು ಕೃಪೆಯಿಂದ ಗುರುಗಳಿಂದ ಪಾಪ ಪರಿಹರನೆ ನೀ ಕೈಕೊಂಡು ಕೀರ್ತಿಯನು ಈ ಪೃಥ್ವಿಯಲ್ಲಿ ನೆಲಸೊ ಗೋಪಾಲಕೃಷ್ಣವಿಠ್ಠಲನೆ ನೀ ಕಾಪಾಡು ಕಾಪಾಡು ಜಗದ್ರಕ್ಷಕ ಹರಿಯೆ 5
--------------
ಅಂಬಾಬಾಯಿ
* ಹರಿಗುರು ಕರುಣದಿ ದೊರಕಿದುದೆನಗೀ ಪರಮ ಪಾವನ ತಂಬೂರಿ ಪ. ನರÀಹರಿ ಭಕ್ತರು ಒಲಿದೆನಗಿತ್ತರು ಸುಲಲಿತ ನಾದದ ತಂಬೂರಿ ಅ.ಪ. ತಂದೆ ಮುದ್ದುಮೋಹನರು ಸ್ವಪ್ನದಿ ತಂದು ತೋರಿದಂಥ ತಂಬೂರಿ ನಂದ ಕಂದನ ಗುಣ ಅಂದದಿ ಸ್ತುತಿಸೆ ಆ- ನಂದವ ತೋರುವ ತಂಬೂರಿ ಇಂದಿರೇಶನ ಭಕ್ತರಂದದಿ ಧರಿಸುವ ರೆಂದೆಂದಿಗು ಈ ತಂಬೂರಿ ನೊಂದು ಭವದೊಳು ತಪ್ತರಾದವರಿಗೆ ಬಂಧನ ಬಿಡಿಸುವ ತಂಬೂರಿ 1 ಅಂತರಭಕ್ತರು ಹರುಷದಿ ನುಡಿಸುವ ಕಂತುಪಿತಗೆ ಪ್ರೀತಿ ತಂಬೂರಿ ಸಂತತ ಮಾನಾಭಿಮಾನವ ತೊರೆದು ಏ- ಕಾಂತದಿ ಸುಖಿಸುವ ತಂಬೂರಿ ಶಾಂತದಿ ನಾರದಾದಿಗಳು ವೈಕುಂಠದಿ ನಿಂತು ನುಡಿಸುವಂಥ ತಂಬೂರಿ ಪಂಥದಿ ಹರಿಪಾದಂಗಳ ಭಜಿಸೆ ನಿ- ಶ್ಚಿಂತೆಯ ಮಾಳ್ಪಂಥ ತಂಬೂರಿ2 ಬಲು ಬಲು ಪರಿಯಲಿ ಹರಿದಾಸತ್ವಕೆ ಬರುವಂತೆ ಮಾಡಿದ ತಂಬೂರಿ ಛಲದಿಂದಲಿ ಶ್ರೀ ಹರಿ ತಾನಿಡ್ಹಿಸಿದ ಒಲುಮೆಯಿಂದಲಿ ಈ ತಂಬೂರಿ ನೆಲೆಯಾದೆನು ಹರಿದಾಸರ ಮಾರ್ಗದಿ ಕಲುಷವ ಕಳೆದಿತು ತಂಬೂರಿ ಸುಲಭದಿಂದ ಶ್ರೀ ಗುರುಗಳು ಕರುಣಿಸಿ ನೆಲೆಗೆ ನಿಲಿಸಿದಂಥ ತಂಬೂರಿ 3 ಶ್ರೀನಿವಾಸನು ತಾ ಕೊಡಿಸಿದನು ಏನೆಂಬೆನು ಈ ತಂಬೂರಿ ಮಾನಾಭಿಮಾನವ ತೊಲಗಿಸುವುದಕೆ ಕಾರಣವಾಗಿಹ ತಂಬೂರಿ ಶ್ರೀನಿಧಿ ಸೊಸೆ ಬಹು ಆನಂದದಲಿ ತಾ ನುಡಿಸುವಳೀ ತಂಬೂರಿ ಗಾನಲೋಲ ಕೃಷ್ಣ ತಾನೊಲಿವುದಕೆ ಕಾರಣ ಮಾಡಿಹ ತಂಬೂರಿ 4 ಬೆಟ್ಟದೊಡೆಯ ತಾನಿಷ್ಟು ಹಟವ ಮಾಡಿ ಕೊಟ್ಟೀ ಕೊಟ್ಟನು ತಂಬೂರಿ ಎಷ್ಟು ನಾಚಿಕೆಪಟ್ಟರು ಬಿಡದಲೆ ಕಷ್ಟ ಕಳೆಯಲಿತ್ತ ತಂಬೂರಿ ಭವ ಕಟ್ಟು ಇಂದೆನ್ನನು ಮುಟ್ಟಿಸಿತ್ಹರಿಪುರ ತಂಬೂರಿ ಎಷ್ಟು ಹೇಳಲಿ ಶ್ರೀನಿಧಿ ಗೋಪಾಲ ಕೃಷ್ಣವಿಠ್ಠಲನಿತ್ತ ತಂಬೂರಿ 5
--------------
ಅಂಬಾಬಾಯಿ
ಶ್ರೀಮದ್ರಾಮಾಯಣ ಮಂಗಳಂ ಮಂಗಳಂ ಮಹಾನುಭಾವಗೆ ಮಂಗಳಂ ಲೋಕಮಾತೆ ಸೀತೆಗೆ ಮಂಗಳಂ ಶತ್ರುಘ್ನ ಭರತಗೆ ಮಂಗಳಂ ಸೌಮಿತ್ರಿರಾಮಗೆ ಪ ದಶರಥನ ಉದರದಲಿ ಜನಿಸುವೆನೆಂದು ವರವನಿತ್ತ ರಾಮಚಂದ್ರಗೆ 1 ಭರತಸಹವಾಗಿ ಜನಿಸಿದ ರಾಮಚಂದ್ರಗೆ 2 ಜಾತಕರ್ಮವು ನಾಮಕರಣವು ಚೌಲ ಉಪನಯನಗಳ ಮಾಡಿ ವಿಶ್ವಾ ಮಿತ್ರರೊಡನೆ ಸಕಲ ವಿದ್ಯವ ಕಲಿಯೆ ಪೊರಟ ರಾಮಗೆ3 ಬಲ ಅತಿಬಲವೆಂಬ ವಿದ್ಯವ ವಿಶ್ವಾಮಿತ್ರರೊಡನೆ ಕಲಿತು ಅಶ್ವಿನಿದೇವತೆಗಳಂದದಿ ಬಂದ ಸೌಮಿತ್ರಿರಾಮ್ರಗೆ 4 ಭರದಲಿ ಅನಂಗನಾಶ್ರಮವನು ಪೊಕ್ಕು ಸರಯು ನದಿಯನು ದಾಟಿ ಬರದೂಷಣಜಾ ದೇಶದೊಳಗುಳ್ಳ ತಾಟಕಾಂತಕ ರಾಮಚಂದ್ರಗೆ 5 ಅಸ್ತ್ರವನ್ನು ಗ್ರಹಿಸಿ ಬೇಗನೆ ಸಿದ್ಧಾಶ್ರಮಕ್ಕೆ ನಡೆತಂದು ಸುಭಾಹುವ ನು ಸಂಹರಿಸಿ ಭರದಿ ಮಾರೀಚನ ಹಾರಿಸಿದ ರಾಮಗೆ 6 ವಿಶ್ವಾಮಿತ್ರರ ಯಜ್ಞ ಪಾಲಿಸಿ ಕುಶನ ವಂಶವಿಸ್ತಾರವ ಕೇಳಿ ಆಸರ [ಯು]ನದಿಯ ದಾಟಿ ಭರದದಿತಿಯಾಶ್ರಮಕೆ ಬಂದ ರಾಮಗೆ 7 ಮರುತ್ತ ಜನ್ಮವ ಕೇಳಿ ಅಹಲ್ಯೆಯನ್ನು ಪಾವನ ಮಾಡಿ ಬಂದ ರಾಮಗೆ 8 ಜನಕ ವಂದಿಸಿ ಧನ್ಯನೆನ್ನಲು ವಿಶ್ವಾಮಿತ್ರರು ವೃತ್ತಾಂತ ಹೇಳಿ ಧನುವ ತರಿಸಲು ನೋಡಿ ಕ್ಷಣದಿಮುರಿದಾ ರಾಮಚಂದ್ರಗೆ 9 ಕರವ ಪಿಡಿದು ಪೊರಟ ರಾಮಗೆ 10 [ಬೇಗ]ಮಾತಾಪಿತರ ಮಾತನಡೆಸಿ ಪ್ರೀತಿತೋರಿದ ಸೀತಾರಾಮಗೆ 11 ಕಂಡವರ ಮನದಲ್ಲಿ ರಮಿಸುವ ಪುಂಡರೀಕಾಕ್ಷನಿಗೆ ರಾಜ್ಯವ ಕೊಡುವೆನೆ[ನುತ] ದಶರಥ ವ್ರತವನಾಚರಿಸಿದ ರಾಮಚಂದ್ರಗೆ 12 ಕೈಕೆ ಪೂರ್ವದ ವರವ ಸ್ಮರಿಸಿ ಭರತನಿಗೆ ರಾಜ್ಯವನು ಬೇಡಿ ರಾಮನರ ಣ್ಯಕ್ಕೆ ಪೋಗೆನೆ ಬೇಗ ಪೊರಟ ಶ್ರೀರಾಮಚಂದ್ರಗೆ 13 ಮಾತೆಯನು ಬಹುವಿಧದಿ ಮನ್ನಿಸಿ ಪಿತನ ಪ್ರತಿಜ್ಞೆಯನು ಪಾಲಿಸಿ ಸೀತೆಲಕ್ಷ್ಮಣರೊಡನೆ ವನವಾಸಕ್ಕೆ ಪೊರಟ ರಾಮಚಂದ್ರಗೆ 14 ಪುರದ ಜನರನು ಸಂತವಿಟ್ಟು ಗುಹನ ಸಖ್ಯದಿ ನದಿಯ ದಾಟಿ ಭರದಿ ಭಾರದ್ವಾಜರ ಕಂಡು ಚಿತ್ರಕೂಟಕ್ಕೆ ಬಂದ ರಾಮಗೆ 15 ಅರಸು ಸ್ವರ್ಗವನೈದೆ ಭರತನಕರಸಿ ಕರ್ಮವನೆಲ್ಲ ಕಳೆದು [ವರ] ಮಾತೆಗೆ ಭಾಷೆ ಕೊಟ್ಟು ತಮ್ಮನಾಲಿಂಗಿಸಿದ ರಾಮಗೆ 16 ಭರತನಂಕದೊಳಿಟ್ಟು ಪ್ರೇಮದಿ ಮನ್ನಸಿ ಮೃದುವಾಕ್ಯದಿಂದ ಗುರುಗಳನುಮತದಿಂದ ಪಾದುಕೆಯಿತ್ತು ಕಳುಹಿದ ರಾಮಚಂದ್ರಗೆ 17 ಬೇಗನೆ ಚಿತ್ರಕೂಟವ ಬಿಟ್ಟು ಅತ್ರಿ ಯಾಶ್ರಮಕೆ ಬಂದು ಅಂಗರಾಗಾರ್ಪಣವನೆಲ್ಲ ಅಂಗೀಕರಿಸಿದ ರಾಮಚಂದ್ರಗೆ 18 ದಂಡಕಾರಣ್ಯವನ್ನು ಪೊಕ್ಕು ಉದ್ದಂಡವಿರಾಧನ್ನ ಕೊಂದು ಕಂಡು ಇಂದ್ರನ ಶರಭಂಗರಿಗೆ ಮುಕ್ತಿಯನಿತ್ತ ಶ್ರೀರಾಮಚಂದ್ರಗೆ 19 ಋಷಿಗಳಿಗೆ ಅಭಯವನು ಇತ್ತು ಲೋಕಮಾತೆಯ ನುಡಿಯ ಕೇಳಿ ಋಷಿಮಂಡಲವನು ಪೊಕ್ಕು ಬಂದು ಸುತೀಕ್ಷ್ಣರ ಕಂಡ ರಾಮಗೆ 20 ಅಸ್ತ್ರವನು ಕೊಡಲು ಗ್ರಹಿಸಿ ಪಂಚವಟಿಗೆ ಬಂದ ರಾಮಗೆ 21 ಶೂರ್ಪನಖಿ ರಘುಪತಿಯ ಮೋಹಿಸೆ ಕರ್ಣನಾಸಿಕವನ್ನು ಛೇದಿಸಿ ದುರುಳ ಖರದೂಷಣರ ಕೊಂದು ಸತಿಯನಾಲಿಂಗಿಸಿದ ರಾಮಗೆ 22 ದುರುಳ ಖಳನು ಜಾನಕಿಯ ಕದ್ದೊಯ್ಯೆ ಮಾರಿಚನ್ನ ಕೊಂದು ಬರುತ ಮಾರ್ಗದಿ ಗೃಧ್ರರಾಜಗೆ ಮುಕ್ತಿಯಿತ್ತ ಶ್ರೀರಾಮಚಂದ್ರಗೆ 23 ಕಬಂಧನಾ ವಾಕ್ಯವನು ಕೇಳಿ ಮಾರ್ಗದಲಿ ಅಯಮುಖಿಯ ಭಂಗಿಸಿ ಶಬರಿ ಭಕ್ತಿಯೊಳಿತ್ತ ಫಲವನು ಸವಿದು ಮುಕ್ತಿಯನಿತ್ತ ರಾಮಗೆ 24 ಸೀತೆಯರಸುತ ಮಾರ್ಗದಲಿ ಋಷ್ಯಮೂಕಪರ್ವತವ ಸೇರಿ ಪಂ ಪಾತೀರದಿ ತಮ್ಮನೊ[ಂದಿ]ಗೆ ನಿಂತ ಶ್ರೀರಘುರಾಮಚಂದ್ರಗೆ 25 ಪಂಪಾಪುಳಿನದ ವನವಕಂಡು ಪಂಕಜಾಕ್ಷಿಯ ನೆನೆದು ವಿರಹ [ತಾಪದರೆ] ಬಂದ ಆಂಜನೇಯಗೆ ಸಖ್ಯ ನೀಡಿದ ರಾಮಚಂದ್ರಗೆ 26 ಅಭಯವನು ಇತ್ತು ರವಿಜಗೆ ಏಳು ತಾಳೇಮರವ ಛೇದಿಸಿ ದುಂ ದುಭಿಯ ಕಾಯವನು ಒಗೆದ ಇಂದಿರಾಪತಿ ರಾಮಚಂದ್ರಗೆ 27 ಇಂದ್ರಸುತನು ರವಿಜನೊಡನೆ ದ್ವಂದ್ವಯುದ್ಧವ ಮಾಡುತಿರಲು ಒಂದುಬಾಣದಿಂದ ವಾಲಿಯ ಕೊಂದು ಕೆಡಹಿದ ರಾಮಚಂದ್ರಗೆ 28 ಮುದ್ರೆಯುಂಗುರವಿತ್ತು [ಅ]ಸಾಧ್ಯ ಇವನೆಂತೆಂದ ರಾಮಗೆ 29 ಬೆಳೆದ ಹನುಮಗೆ 30 ಶತ್ರುಪಟ್ಟಣವ ಕಂಡು ಛಾಯೆಯ ಕುಟ್ಟಿ ಸುರಚಿಯುಪಾಯದಿಮನ್ನಿ ಸುತ್ತ ಮೈನಕನ ಭರದಲಿ ಲಂಕಿಣಿಯನಡಗಿಸಿದ ಹನುಮಗೆ 31 [ವೀರ] ಹನುಮಗೆ 32 ದುರುಳ ರಾ ವಣನ ನಿಂದಿಸಿ ಪುರವಸುಟ್ಟಾ ವೀರಹನುಮಗೆ 33 ಸೀತೆಯೊಡನೆ ಗುರುತಕೇಳಿ ಸಮುದ್ರತೀರಕೆ ಬಂದು ಬೇಗನೆ ಜಾಂಬ ವಂತ ಅಂಗದರ ಕೂಡಿ ಮಧುವನವ ಭಂಗಿಸಿದ ಹನುಮಗೆ 34 ಕಂಡೆ ಲೋಕಮಾತೆಯನನ್ನೆನ್ನುತ ಬಂದು ಮುದದಿ ವಂದಿಸಿ ಇತ್ತ ಹನುಮನನಾಲಿಂಗಿಸಿದವಗೆ 35 ಬಂದ ರಾಮಗೆ 36 [ಭಕ್ತ] ವಿಭೀಷಣಗೆ ಅಭಯವನಿತ್ತು ಶರಧಿಗೆ ಸೇತುವೆಯನ್ನು ಬಂಧಿಸಿ ಮುತ್ತಿ ಲಂಕಾಪುರವ ಸಂಧಿಗೆ ಅಂಗದನ ಕಳುಹಿಸಿದ ರಾಮಗೆ 37 ಇಂದ್ರ[ಜಿತ್ತು]ವೊಡನೆ ಕಾದಿ ಸರ್ಪಾಸ್ತ್ರದಿಂದ ಬಿಡಿಸಿಕೊಂಡು [ಆ]ದುರುಳ ರಾವಣನ ನಡುಗಿಸಿ ಕಿರೀಟವನು ಭಂಗಿಸಿದ ರಾಮಗೆ 38 ಕುಂಭಕರ್ಣನ ತುಂಡುತುಂಡಾಗಿ ಕೊಂದುಕೆಡಹಿದ ರಾಮಚಂದ್ರಗೆ 39 ಕೊಂದು ವಜ್ರದಂಷ್ಟ್ರ ಆಕಂಪ ದೇವಾಂತಕ ನರಾಂತಕರನ್ನು ಮ ಹೋದರ ಮಹಾಪಾಶ್ರ್ವ ಅತಿಕಾಯ ತ್ರಿಶಿರಸ್ಸನ್ನು ಕೊಂದ ರಾಮಗೆ 40 ಮಾಯೆಯುದ್ಧದಿ ಮೇಘನಾಥನು [ಅನುಜನ] ಬ್ರಹ್ಮಾಸ್ತ್ರದಲಿ ಕಟ್ಟಲು ವಾಯುನಂದನನಿಂದ ಸಂಜೀವನವ ತರಿಸಿದ ರಾಮಚಂದ್ರಗೆ 41 ಮಾಯಾಸೀತೆಯ ಶಿರವನರಿಯಲು ವಿಭೀಷಣನ ಉ ಪಾಯದಿಂದ ಇಂದ್ರಜಿತ್ತು ಶಿರವಕಡಿದ ತಮ್ಮನಾಲಂಗಿಸಿದ ರಾಮಗೆ 42 ಮೂಲಬಲವನು ಕಡಿದು ರಾವಣನೊಡನೆ ಯುದ್ಧವ ಯೋಚಿಸೆ ಕಡಿದ ರಾಮಗೆ 43 ರಾವಣಾನೆಂಬ ಗಂಧಹಸ್ತಿಯ ರಾಮಕೇಸರಿ ಬಂದು ಮುರಿಯಲು ಸುರರು ಶಿರದಿ ಧರಿಸಿದ ರಾಮಚಂದ್ರಗೆ 44 ವಿಭೀಷಣಗೆ ಪಟ್ಟವನು ಕಟ್ಟಿ ಸೀತೆಯೊಡನೆ ಪ್ರತಿಜ್ಞೆ ಮಾಡಿ ರೆ ಬ್ರಹ್ಮರುದ್ರಾದಿಗಳು ಸ್ತುತಿಸಲು ತಂದೆಗೆರಗಿದ ರಾಮಚಂದ್ರಗೆ 45 ಸೀತೆಯಂಕದೊಳಿಟ್ಟು ಕಪಿಗಳಸಹಿತ ಪುಷ್ಪಕವೇರಿ ಭರದಿ [ಬ ರುತ್ತ] ಭಾರದ್ವಾಜರಿಗೆರಗಿ ಭರತನ ಮನ್ನಿಸಿದ ರಾಮಗೆ 46 ಕೈಕೆಸುತ ಕೈಮುಗಿದು ಕಿಶೋರ ಭಾರವ ತಾಳಲಾಗದೆಂದಾ ಳುತ [ಲಾ]ಯಿತ್ತ ರಾಜ್ಯವನ್ನು ಕೊಡಲು ಗ್ರಹಿಸಿದ ರಾಮಚಂದ್ರಗೆ 47 ಉಟ್ಟ ಮಡಿಯ ಜಟೆಯನುತಾ ಶೋಧಿಸೆ ಸೀತೆ ಸಕಲಾಭರಣ ತೊಟ್ಟು ಸುಗ್ರೀವ ಸಕಲರೊಡನೆ ರಥವನೇರಿದ ರಾಮಚಂದ್ರಗೆ 48 ಸರಮೆಪತಿ ಸೌಮಿತ್ರಿ ಚಾಮರ ಪಿಡಿಯೆ ಶತ್ರುಘ್ನ ಛತ್ರಿಯನು ಭರತ ಸಾರಥ್ಯವನು ಮಾಡಲು ಪುರಕೆತೆರಳಿದ ರಾಮಚಂದ್ರಗೆ 49 ರಾಜಗೃಹವನು ತೋರಿ ರವಿಜಗೆ ಶರಧಿಯುದಕಗಳೆಲ್ಲ ತರಿಸಿ [ವಿ ರಾಜಿಸಿ] ಪೀಠದಿ ಸೀತೆಯೊಡನೆ ವೊಪ್ಪಿದಾ ರಘುರಾಮಚಂದ್ರಗೆ 50 ವಸಿಷ್ಠ ಮೊದಲಾದ ಸಪ್ತ ಋಷಿಗಳು ಲಕ್ಷ್ಮೀಪತಿಗಭಿಷೇಕ ಮಾಡಲು ರಾಮಚಂದ್ರಗೆ 51 ಪಾದ ಪಿಡಿದಿಹ ರಾಮಚಂದ್ರಗೆ
--------------
ಯದುಗಿರಿಯಮ್ಮ
(3) ನದಿಗಳು ಯಾತ್ರೆ ಮಾಡಿಕೊಂಡೈದೆ ಜಾಹ್ನವಿಗೆ ಹೋಗಿ ತೀರ್ಥ ಪ ಸೂತ್ರಧಾರಿ ತಾನಿಹ ದಿವ್ಯ ಕ್ಷೇತ್ರೋದ್ಭವೆ ಶ್ರೀ ಕಾವೇರಿ ಧಾತ್ರಿಪಾವನೆಜಯಮಂಗಳೆನೇತ್ರೋಂ ಮಧ್ಯಾ ಭಾಗೀರಥಿ 1 ಹರಿಪಾದ ರಜೋರಿ ಝೇಂಕಾರಿ ತರಂಗಧಾರಿ ಗಿರಿಜಾರ ಗುಹಾವಿಹಾರಿತರುಣಿ ಜಯ ಭಾಗಮಂಡಲೆ 2 ಗಂಗೆ ಮತ್ಕಲುಷಾಭಂಗ ಸ್ವರ್ಗಸೋಪಾನಸಂಗ ಮಂಗಳಾಂಗಿಯೆ ತರಳತರಂಗೆ ಯೆನ್ನುತಾ ಕಂಚೀ 3 ಲಲನೆ ನಿನ್ನಯ ಸುದರುಶನ ಫಲಿಸಿದಾಕ್ಷಣವೆ ದು:ಖ ಮಳಿದುಹೋಗುವ ಚಂದಾ ಕಲಿತು ಗುರುಮುಖದಿಂ ಕಾಶೀ4 ಮದನಾರಿಮೌಳಿಯ ತಂ ಘೃತಂಪೂರ್ಣ ಅಸ್ಮಾದಯನೀ ಮದಾಚಾರ್ಯನೆ ಶ್ರೀ ತುಲಶೀಮಧುರಾಮೃತ ಸುರಿಯುವ ದ್ವಾರಕಾ5
--------------
ಚನ್ನಪಟ್ಟಣದ ಅಹೋಬಲದಾಸರು
(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
(ಮಂಗಳೂರಿನ ಪ್ರಾಣದೇವರನ್ನು ನೆನೆದು) ಪಾಲಿಸೆನ್ನ ಪಾವಮಾನಿ ಪಾವನಾತ್ಮ ಸುಜ್ಞಾನಿ ಪ. ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ. ಮೂರವತಾರವ ಗೈದು ಮುರಾರಿಯ ಪೂಜಿಸಿದೆ ಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ 1 ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳು ಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ 2 ಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು 3 ಸರ್ವಾಪರಾಧಗಳನು ಸಾಧುವರದ ಕ್ಷಮಿಸು ಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು 4 ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶ ವರ ಲಕ್ಷ್ಮೀನಾರಾಯಣ ಶರಣಾಗತರೀಶ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಷೋಡಶೋಪಚಾರ ಪೂಜಾ ಕೀರ್ತನೆಗಳು) ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ ಪ ಧ್ಯಾನಿಸಲರಿಯೆನು ದೀನಮಂದಾರ ನಿ- ತ್ಯಾನಂದ ಮೂರ್ತಿಯಂದರಿತು ಹೃದಯದೊಳು ಅ.ಪ ಕ್ರಮದಿ ಪ್ರತ್ಯಾಹಾರದಿ ಭ್ರಮಗೊಳಿಸುವ ಮನವ ನಿಲಿಸಿಧಾರಣೆಯನು- ಪಮ ಸಮಾಧಿಯಲಿ ಹಂಮಮಯಂಬುವದು ಬಿಟ್ಟು 1 ಪರಿಪರಿಶಾಸ್ತ್ರ ವೇದ ಪುರಾಣಗಳ ತರತಮ ಭೇದಾಭೇದದರುವಿಗೆ ಸಾಕ್ಷಿಯಾ- ಚರಣಕಮಲವರಿತು 2 ಮದಮತ್ಸರಾದಿಗಳು ಕೂಡಿಯನ್ನನು ಬಾಧಿಸುತಿಪ್ಪವು ಅನುದಿನವು ಸದಮಲಾತ್ಮಕ ಶ್ರವಣ ಮನನಗಳರಿಯೆ ಮೋ- ಹದ ಕೂಪದಲ್ಲಿ ಬಿದ್ದೆ ಗುರುರಾಮ ವಿಠಲನೆ 3
--------------
ಗುರುರಾಮವಿಠಲ
[ಶ್ರೀ ಪ್ರಾಣದೇವರ ಅನುಗ್ರಹವಿಲ್ಲದೆ ಶ್ರೀ ಹರಿಯು ಎಂದಿಗೂ ಒಲಿಯನೆಂಬ ಪ್ರಮೇಯ. ಪೂರ್ವಜನ್ಮದಲ್ಲಿ ವಾಲಿ ಹನುಮಂತನ ಅನುಗ್ರಹವಿಲ್ಲದ ಕಾರಣ ರಾಮನು ನಿಗ್ರಹಿಸಿದ. ಅರ್ಜುನನಾದಾಗ್ಗೆ ಭೀಮನು ಅಗ್ರಜನಾಗಿ ದಯ ಮಾಡಿದುದಕ್ಕೆ ಕೃಷ್ಣನು ಸಖನಾದ. ಮೂರನೆ ಜನ್ಮ ಜಯತೀರ್ಥರಾದಾಗ್ಗೆ ಜ್ಞಾನವಿತ್ತು ಕುಮತಗಳ ನಿರಾಕರಿಸಿದಿ ಪ್ರಾಣನ ಕೃಪೆಯಿಂದ ಎಲ್ಲ ಸೌಖ್ಯ ಗಂಟು. ಈಗಾದರು ಹಿಂದಿನಂತೆ ಪೊರೆಯೊ ಎಂದು ಪ್ರಾರ್ಥನೆ.] ಧ್ರುವತಾಳ ಹಿತಮಾಳ್ಪ ಜನಕನಾಗಿ ರಕ್ಷಸು ಎಂದೆಂಬೆನೆಪಿತೃ ಸಮಾನ ಜೇಷ್ಠನೆಂದೆಂಬ ವಿಧದಿ ಪಿತನೆ ಸರಿ ಎನಗೆ ಉಪಕಾರವ್ಯಾತಕಿನ್ನುಮಾತರಿಶ್ವನೆ ದೂರ ನೋಳ್ಪದೇನೊಭಾತೃನಾಗಿ ಎನ್ನ ಪಾಲಿಸು ಎಂದೆಂಬೆನೆನೋತ ಪುಣ್ಯಗಳಿಂದ ಹರಿಯು ತಾನೆ ಸ್ವತ ಏವ ಮಾಡಿದ ಈಗ ನುಡಿವದೇನೊಮಾತೃ ನೀನೆ ದೇಹ ಪೊರೆಯುವಲ್ಲಿಅತುಳ ಗುರುವಾಗಿ ಬೋಧಿಸು ಎಂದೆಂಬೆನೆಆತ್ಮ ಗುರುವಿಗೆ ನಿಜ ಗುರುವೆನಿಸಿದೆ ನಿತ್ಯನೂತನವಾಗಿ ಯಿದನು ಬೇಡಿಕೊಂಬುವದೇನುವೀತಿ ಹೋತ್ರನೆ ದೈತ್ಯ ಸಂತತಿಗೆಪ್ರತ್ಯಂತರ ಜನುಮದ್ವಯದಿ ನಿಜ ಮುಖದಿಂದಲೆಮತಿಯು ನೀಡಿದ ಮುಖ್ಯ ಗುರು ನೀನೆ ಪ್ರತಿಯಿಲ್ಲದೆ ಇದ್ದ ಇಷ್ಟನೇನೊ ಎನಗೆಗತಿ ಪ್ರದಾತನು ನೀನೆ ಆವಕಾಲಆಪ್ತನಾಗಿ ನೀನು ಸಲಹಬೇಕೆಂಬೆನೆ ಗತ ಜನ್ಮಗಳಲಿ ನೀನು ಮಾಡಿದುಪ-ಕೃತಿಗಳೆಣಿಸೆ ಈಗ ನಿನಗಿಂದಧಿಕವಾದಆಪ್ತನಾವನು ಎನಗೆ ಅರಸಿ ನೋಡಾಮತಿಯು ರಹಿತವಾದ ಜನುಮಗಳು ಬರಲಿಅತಿ ಹಿತ ನೀನೆ ಎನಗೆ ಇಹ ಪರದಿಅತಿಶಯ ಕೃಪಾನಿಧೆ ಗುರು ವಿಜಯ ವಿಠ್ಠಲರೇಯಅತಿ ಪೀಯನಾಗುವನು ನಿನ್ನ ದಯದಿ 1 ಮಟ್ಟತಾಳ ಬಾಂಧವನು ನೀನೆ ಎರಡು ಬಗೆಯಿಂದ ತಂದೆ ನಿನ್ನುಪಕಾರ ಅನಂತ ಜನುಮದಲಿಮಂದನಾದವ ನನು ತೀರಿಸಬಲ್ಲೆನೆಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲ ನಿ-ನ್ನಿಂದಲಿ ಎನಗೆ ಅನುಗ್ರಹ ಮಾಡುವನೊ 2 ತ್ರಿವಿಡಿತಾಳ ನಿನ್ನ ಕರುಣಪೇಕ್ಷ ಮಾಡದಲೆ ಒಂದುಜನುಮ ಹರಿ ಕರುಣವಿಲ್ಲದಲೆ ಕಳದೇಅನಂತರದಿ ಎನ್ನ ಪುಣ್ಯ ಸಾಸಿರದಿಂದಅನುಜನಾದೆ ನಿನ್ನ ಕೃಪೆಯಿಂದಲಿಮನುಜ ಕೃತಿಯಾದರು ಪ್ರತಿಮದಲ್ಲಿ ಘನ್ನ ಚೇಷ್ಟಾದಿಗಳು ತೋರಿದಂತೆ ಎನ್ನ ನಾಮಕನಾಗಿ ಎನ್ನ ರೂಪದಿಂದಎನ್ನ ಕೃತ್ಯಗಳೆಲ್ಲ ನೀನೆ ಮಾಡಿಉನ್ನತವಾದ ಕೀರ್ತಿ ತಂದು ಇತ್ತು ಎನ್ನಜನ್ನರ ಮಧ್ಯದಲಿ ಶ್ರೇಷ್ಠನೆನಸಿಪನ್ನಗ ತಲ್ಪನ್ನ ಕರವಶನೆನನಿಸಿದಿನಿನ್ನ ಕರುಣಕೆ ಎಣೆ ಆವದಯ್ಯಾಎನ್ನ ಸ್ವಭಾವದಿಂದ ಹರಿ ತಾನು ಇನಿತಾದ ಮನ್ನಣೆ ಮಾಡುವನೆ ಎಂದಿಗನ್ನನಿನ್ನುಪಕಾರವೆಂಬ ವನ್ನಧಿಯೊಳಗೆ ನಿರುತಮುಣಗಿ ಇಪ್ಪೆನಯ್ಯಾ ತೆರವಿಲ್ಲದೆ ಚನ್ನ ಪ್ರಸನ್ನ ಗುರು ವಿಜಯ ವಿಠ್ಠಲರೇಯನಿನ್ನಿಂದಲೆ ಎನಗೆ ಬಂಧುನಾದಾ 3 ಅಟ್ಟತಾಳ ದುರುಳ ಮತಗಳೆಂಬೊ ಮಾಯಿ ಗೋಮಾಯಿಗಳುಶಿರವೆತ್ತಿ ನೋಡದೆ ಪಲಾಯಧ್ವರಾದರು ಈತೆರವಾದ ಮಹತ್ಮಿ ನಿನ್ನದು ನಿನ್ನದುಮರಳೆ ಮಾತುಗಳನ್ನು ತೋರದಿದ್ದರನಿಗೆ (ರೆನಗೆ)ಕರುಣವಲ್ಲದೆ ಅನ್ಯಾಲೋಚನೆ ಇದಕ್ಕಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಪೊರೆವನು ನಿನ್ನಯ ಬಲದಿಂದಲಾವಾಗ 4 ಆದಿತಾಳ ಮೂರ್ತಿ ಗುರು ವಿಜಯ ವಿಠ್ಠಲರೇಯನಿನ್ನಿಂದ ಮಾಡಿಸುವ ವಸುಧಿಯ ವ್ಯಾಪಾರ 5 ಜತೆ ನಿಖಿಳ ಸೌಖ್ಯವೆ ಉಂಟುಉನ್ನತ ಮಹಿಮ ಗುರು ವಿಜಯ ವಿಠ್ಠಲ ಒಲಿವ || [ನಳ ನಾಮ ಸಂ|| ಚೈತ್ರ ಬ|| 12 ಆದಿತ್ಯವಾರ]
--------------
ಗುರುವಿಜಯವಿಠ್ಠಲರು
|| ಶ್ರೀ|| ಪದ್ಯ|| ಮುಂದೆ ತುಳುಜಾ ದೇವಿ ಬಂದು ನಿಂತಿರಲು ತ್ವರದಿಂದ ನೋಡ್ಯನುಭೂತಿ ಬಂದಂಥ ದೇವಿಯ ಚಂದದ ಬಹು ತೇಜವೆಂದು ತಿಳಿಯದೆ ಎನ್ನ ಮುಂದೆದುರಿಗೆ ಏನು ಬಂದಿರುವುದೆಂದು ತ್ವರದಿಂದ ನಡುಗಿದಳು|| ಮುಂದ ಆದೇವಿ ತಾ ಮುಂದಕ್ಕೆ ಕರೆಯುತಲೇ ಕುಂದರದನಿಯೇ ಕೇಳು ಕುಂದು ನಿನ್ನಲ್ಲಿ ಇಲ್ಲ ಎಂದು ನಿನ್ನ ಭಕ್ತಿಗೆ ಚಂದಾಗಿ ಅಭಯದ ಕೂಟ್ಟಂದಳೀಪರಿಯ||1 ಪದ ರಾಗ:ಕಾನಾಡ ಆದಿತಾಳ ಬೇಡು ಬೇಕಾದ್ದು ಬ್ಯಾಗನೇ|| ಅನುಭೂತಿ|| ಬೇ|| ನೀಡುವೆ ನಾನು|| ಪ ಮಾನಸ ದುಃಖವ್ಯಾಕಿದು || ನಿನ್ನ ಭಿಮಾನವೆಂಬುದು ನನ್ನದು|| ಮಾನಿತರೊಳ್ಹಗತಿ ಮಾನವಂತೆಯೇ ಮಾನುನಿ ಮಣಿ ಅನುಮಾನವ ಬಿಟ್ಟು|| 1 ಎಷ್ಟು ಸ್ನೇಹವ ತೋರಲಿ|| ಬಂದೆ ಸಂತುಷ್ಟಳಾಗುತ ನಿನ್ನಲಿ|| ಶಿಷ್ಟಳೆ ನೀ ಕೇಳಸ್ಪಷ್ಟದಿ ನಿನಗೆ ದೃಷ್ಟಿಗೆ ಬೀಳಲು ಕಷ್ಟಗಳುಂಟೆ|| 2 ಚಿಂತಿಸಿದಿ ಯಾಕೆನ್ನನು|| ಬಂದಂತಹ ಚಿಂತೆ ಎಲ್ಲಾನೂ ಕಳೆವೆನು|| ಸಂತೋಷದಲಿ ಅನಂತಾದ್ರೀಶನ ಚಿಂತನದಿಂದಿರು ಚಿಂತೆಯನು ಬಿಟ್ಟು|| 3 ಆರ್ಯಾ ಅತಿ ಹಿತ ವಚನವನು ಕೇಳಿ || ಅತಿ ಹರುಷಿತಳಾದಳಾಗ ಆ ಬಾಲೆ ಹಿತವಾಯಿತು ಎನಗೆಂದು || ನತಿಸುತ ಮಾತಾಡಿದಳು ಹೀಗೆಂದು|| 1 ಪದ ರಾಗ:ಮುಖಾರಿ ಆದಿತಾಳ ತುಳುಜಾದೇವಿಯೇ|| ಪ ನಮೋ ಎಂಬೆ ಮತ್ತು ಜಗದ್ಥಾತ್ತಿಯೆ || ಬಹುಪ್ರಮಿತಾ ಹಿಮಾಚಲನ ಪುತ್ರಿಯೇ || ಸುಮಹಿಮ ಸುಂದರಗಾತ್ರಿಯೇ|| ಮನದಾ ಅಮಿತಾರೋಗಕ್ಕೆ ಮಹಾಮಾತ್ತಿಯೇ|| 1 ತ್ವರಿತಾದಿಂದಲೇ ಬಂದಂಥಾಕಿಯೇ || ಎಂದು ತ್ವರಿತಾ ತ್ವರಿತಾದೇವಿಯು ಎನಿಸು ವಾಕೆಯೆ|| ಮರೆತಿರಲಾರೆ ನಾ ನಿನ್ನಕಿಯೇ || ಸ್ನೇಹಾಭರಿತಾಗಿ ಭಕ್ತರನ ಸಲಹವಾಕಿಯೇ|| 2 ಚಿಂತಿ ಮಾಡಲು ಬಂದು ನಿಂತಿಯೇ || ಎನಗೆ ಚಿಂತಿಯು ಮಾಡಬ್ಯಾಡಂತಿಯೇ|| ಎಂಥಾಕಿ ನೀನು ದಯಾವಂತಿಯೇ || ವರದಾ ನಂತಾದ್ರೀಶನ ಸಖನ ಕಾಂತಿಯೇ|| 3 ಆರ್ಯಾ ಕರ ಮುಗಿದು|| 1 ಪದ ರಾಗ :ಆನಂದ ಭೈರವಿ ವರಕೊಡು ಎನಗಿದು ತ್ವರಿತದಿ ತಾಯಿ|| ಮರೆಯ ದೆಂದೆಂದೂ ಹಗಲಿರುಳು ನೀ ಕಾಯಿ|| ಪ ಮಂದ ಮತಿಯು ದೈತ್ಯ ಬಂದಿಹನೋಡು|| ಕೊಂದವನ ಎನಗಾನಂದವ ನೀಡು 1 ಮಾಡುವ ತಪಸ್ಸಿಗೆ ಕೇಡು ತಂದಿಹನು|| ಮಾಡಲಿನ್ನೇನು ನಿನಗೆ ಬೇಡಕೊಂಬುವೆನು|| 2 ಪತಿಯ ಸೇವಿಸುವಂಥ ಸತಿಯು ಬೇಡುವೆನೂ|| ಸತತಾನಂತಾದ್ರೀಶನಾ ಸ್ವøತಿಯು ಮಾಡುವೆನು|| 3 ಅನುಭೂತಿಯ ವಚನವನು || ಅನುಸರಿಸುತ ಬ್ಯಾಗಕೊಟ್ಟು ಎನಗಿಲ್ಲೆಂತ್ಯಂದಳಾಗ ಜಗದಂಬಾ|| 1 ಮಾಡಿದಳು|| ಹುಂಕಾರ|| 2 ಒಗೆದಾನು ಯುದ್ಧದಲ್ಲಿ ಜಾಣಾ|| 3 ಸಾರಶಕ್ತಿಯನು ತೆಗೆದಾ ಶೌರ್ಯದಿ ಮತ್ತಾಕೆಯಲ್ಲೇ ಒಗೆದಾ|| 4 ಎದೆಗ್ಹೊಡೆದಳು ಶೂಲದಲೆ||ಅದುರೂಪವು ಬಿಟ್ಟು|| ತನ್ನಕ ಪಟದಲೆ ಕುದುರೆಯ ರೂಪವ ಧರಿಸಿ|| ಒದರುತ ನಿಂತಾಗ ಮುಂದ ಖ್ಯಾಕರಿಸಿ|| 5 ಗಾಢನೆ ಮಹಿಷಾಗಿ ಬಂದ ಬದಿಯ್ಮಲೇ 6 ತೋರುವ ಬಹುಬೆಟ್ಟಗಳ|| ಕೊಡಗಳಿಂದಲೇ ಕೊಡಗಳ್ಹಗಳು| ಮಾಡುವ ವೃಷ್ಟಿಯದೆಷ್ಟು|| ಕಾಡುವ ಕಪಟದಿಂದ ಮತ್ತಿಷ್ಟು 7 ಶೃಂಗಗಳಿಂದ ಹಿಡಿದಳು ದÉೈತ್ಯಬಾಯಿಬಿಡುವಾ|| 8 ಅವನ ಮುರದೊತ್ತಿ 9 ಕಡೆದಳು ಆಗವನ ಬಿಲ್ಲುಬಾಣದಲೆ|| 10 ದಾನವನು|| ಹುಟ್ಟಿದ ಸೈನ್ಯವು ಎಲ್ಲಾ|| ಪೆಟ್ಟು ಹಾಕುತ ಬಂತು ಭೂತಗಳಿಗೆಲಾ||್ಲ 11 ತಡಿಯದೇ ಅವನ ಹುಡುಕುತಲಿ || ಕಡಿದಳು ಶಿರ ಕಡೆದಳು ಮತ್ತವನ ಶಿರವು ಖಡ್ಗದಲೇ|| 12 ಸುರರು ಥಟ್ಟನೆ ಕರೆದರು ಪುಷ್ಪ ದೃಷ್ಟಿಯನು|| 13 ಪದ್ಯ ರಾಗ:ದೇಶಿ ಅಟತಾಳ, ಸ್ವರ ಷಡ್ಜ ಓಡಿ xಟ್ಟನೆ ಹಿಡಿದರಾಗ|| 1 ಕುಕ್ಷಿಗಿಲ್ಲದಲೆ ಬುಭೂಕ್ಷಿತರದು ಎಲ್ಲಾ ಭಕ್ಷಣ ಮಾಡುವರು|| ಅಕ್ಷಯ ಬಲದಿಂದ ದಕ್ಷರು ಎಲ್ಲಾರು ರಾಕ್ಷಸರಾದರು|| 2 ಭೈರವಾದಿಗಳು ಎಲ್ಲಾರು ದೇವಿಯ ಪರಿಚಾರಕರಾದವರು ಸೇರಿ ಸೈನ್ಯದಲ್ಲಿ ಅಪಾರ ಸಂಭ್ರಮದಲ್ಲಿ ಹಾರ್ಯಾಡುತಿರುವರು3 ಆ ತಾಳಮೊರದಂಥ ಬೇತಾಳ ಗಣಗಳು ಪ್ರೇತ ಪಿಶಾಚಿಗಳು|| ಯಮದೂತರಸಮರವರು|| 4 ರಕ್ತ ಪಾನವ ಮಾಡಿದರು|| 5 ದುರುಳರನೆಲ್ಲನು ಹೊರಳಿಸಿ ಹೊಟ್ಟೆಯ ಕರಳವ ಬಗಟಿದರು| ಸರಳವಾದ ಆ ಕರಳ ಮಾಲೆಯ ಮಾಡಿ ಕೊರಳೊಗ್ಹಾಕಿದರು||6 ಹಾಕಿಕೊಂಡು ಕುಣಿದಾಡಿದರು||7 ಕಂಕಲಾದಿಗಳು ಭಯಂಕರರವರು ಅಸಂಖ್ಯಾಕರಾಸವರು|| ಶಾಂಕರೀ ದೇವಿಯ ಕಿಂಕರರಿಂಥ ಅಲಂಕಾರಗಳನಿಟ್ಟರು || 8 ಅವನಂತವ ಅರಿಯೇ ನಾನು|| 9 ಆರ್ಯಾ ಬಲ್ಲಿದ ದೈತ್ಯದ ಕೊಂದು || ನಿಲ್ಲದೆ ಅನುಭೂತಿ ಬದಿಯಲೇ ಬಂದು || ಅಲ್ಲಿಹಳು ಮಹಾಮಾಯಾ|| ಇಲ್ಲಿ ಗೆ ಪೂರ್ಣಾಯಿತು ಎರಡು ಅಧ್ಯಾಯಾ || ಶ್ರೀ ಹರೇಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
2. ಶ್ರೀ ವೆಂಕಟೇಶ ಸ್ತೋತ್ರ 6 ಶರಣಾಗತರ ಕಲ್ಪತರುವೆ ವೆಂಕಟ ಧರಾ ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ ದರುಶನವ ಈಯೊ ಎಂದೆಂದು 1 7 ಸ್ವಾಮಿ ತೀರ್ಥ ನಿವಾಸ ಸು ಭಯಹಾರಿ ಸುರರ ಸಾರ್ವ ಭೌಮ ನೀ ಸಲಹೆಮ್ಮೆ 2 8ವೆಂಕಟಾಚಲನಿಲಯ ಪಂಕಜೋದ್ಭವನಯ್ಯ ಕಿಂಕರನೆನಿಸೊ ಶುಭಕಾಯ 3 9 ಸತ್ಯಸಂಕಲ್ಪ ಜಗದತ್ಯಂತ ಭಿನ್ನಸ ರ್ವೋತ್ತಮ ಪುರಾಣ ಪುರುಷೇಶ | ಪುರುಷೇಶ ಸತತತ್ವ ದ್ಭೈತ್ಯನ್ನ ಕಾಯೊ ಕರುಣಾಳೊ 4 10 ದೇವಶರ್ಮನ ತುತಿಗೆ ನೀನೊಲಿದು ಪಾಲಿಸಿದೆ ದೇವಕೀಕಂದ ದಯದಿಂದ | ದಯದಿಂದ ಒಲಿದೆನ್ನ ತಾವಕರೊಳಿಟ್ಟು ಸಲಹಯ್ಯ 5 11 ಕೃತಿಪತಿಯೆ ನಿನ್ನ ಸಂಸ್ಮøತಿಯೊಂದಿರಲಿ ಜನ್ಮ ಮೃತಿ ನರಕ ಭಯವು ಬರಲಂಜೆ | ಬರಲಂಜೆ ಎನಗೆಕೃಸಂ ತತ ನಿನ್ನ ಸ್ಮರಣೆ ಕರುಣೀಸೊ 6 12ಶುಚಿಸದ್ಮನೆ ಮನೋವಚನಾತ್ಮಕೃತ ಕರ್ಮ ನಿಚಯ ನಿನಗೀವೆ ಸುಚರಿತ್ರ | ಸುಚರಿತ್ರ ಸುಗುಣಗಳ ರಚನೆ ಸುಖವೀಯೊ ರುಚಿರಾಗ 7 13ಹೃದಯದಲಿ ತವರೂಪ ವದನದಲಿ ತವನಾಮ ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ ಪದಜಲಗಳಿರಲು ಭಯವುಂಟೆ 8 14ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿಕೊಳುವೆ ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜ ಭಾಗ ವತರ ಸಂಗವನ್ನೇ ಕರುಣೀಸೊ 9 15ಪ್ರಕೃತಿ ಗುಣಗಳ ಕಾರ್ಯ ಸುಖ ದುಃಖ ಮೂಲ ಜಡ ಪತಿ ನಿನ್ನ ಭಕುತ ನಾನಯ್ಯ ಎಂದೆಂದು 10 16ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ ನಿನ್ನರಿವ ಜ್ಞಾನ ಕರುಣೀಸೊ 11 17ಝಷಕೇತು ಜನಕ ದುರ್ವಿಷಯಕೊಳಗಾಗಿ ಸಾ ಹಸ ಪಡುವ ಚಿತ್ತ ಪ್ರತಿದಿನ | ಪ್ರತಿದಿನಗಳಲ್ಲಿ ನಿನ್ನ ವಶಮಾಡಿಕೊಳ್ಳೊ ವನಜಾಕ್ಷ 12 18ಇನಿತಿದ್ದ ಬಳಿಕ ಯೋಚನೆ ಯಾಕೆ ಗರುಡವಾ ಹನನೆ ಮಹಲಕ್ಷ್ಮಿ ನರಸಿಂಹ/ನರಸಿಂಹ ಬಿನ್ನೈಪೆ ಘನತೆ ನಿನಗಲ್ಲ ಕರುಣಾಳು 13 19ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ ಬಲವಂತರುಂಟೆ ಸುರರೊಳು/ಸುರರೊಳು ನೀನು ಬೆಂ ಬಲವಾಗಿ ಇರಲು ಭಯವುಂಟೆ 14 20ಹಯವದನ ಸೃಷ್ಟಿ ಸ್ಥಿತಿಲಯ ಕಾರಣನುನೀನೆ ದಯವಾಗಲೆಮಗೆ ದುರಿತೌಘ / ದುರಿತೌಘರ್ಕಳು ಬಟ್ಟ ಬಯಲಾಗುತಿಹವೊ ಸುಕೃತಿಯಿಂದ 15 21ಕಲುಷವರ್ಜಿತನೆ ಮಂಗಳ ಚರಿತ ಭಕ್ತವ ತ್ಸಲ ಭಾಗ್ಯವ ಪುಷ ಬಹುರೂಪಿ /ಬಹುರೂಪಿ ಎನಗೆಚಂ ಚಲ ಬಿಡಿಸಿ ನೀ ಕರುಣೀಸೊ 16 22ಫಾಲಾಕ್ಷಪ್ರಿಯ ನಿನ್ನ ಲೀಲೆಗಳ ಮರೆಯದಲೆ ಕಾಲಕಾಲದಲಿ ಸ್ಮರಿಸುವ/ ಸ್ಮರಿಸಿ ಹಿಗ್ಗುವ ಭಾಗ್ಯ ಪಾಲಿಸೊ ಎನಗೆ ಪರಮಾತ್ಮ 17 23ಚತುರವಿಧ ಪುರುಷಾರ್ಥ ಚತುರಾತ್ಮ ನೀನಿರಲು ಇತರ ಪುರುಷಾರ್ಥ ನಾನೊಲ್ಲೆ | ನಾನೊಲ್ಲೆ ತ್ವತ್ಪಾದ ರತಿ ಭಾಗ್ಯ ನೀನೆ ಕರುಣೀಸೊ 18 24 ಜಯ ಮತ್ಸ್ಯ ಕೂರ್ಮ ವರಹ ನರಸಿಂಹ ಭೃಗುರಾಮರಘುರಾಮ ಜಯ ಬೌದ್ಧ ಕಲಿಹರ್ತಾ 19 25 ಜಯ ವಿಶ್ವತೈಜಸನೆ ಜಯ ಪ್ರಾಜ್ಞ ತುರ್ಯಾತ್ಮ ಜಯ ಅಂತರಾತ್ಮ ಪರಮಾತ್ಮ | ಪರಮಾತ್ಮ ಜ್ಞಾನಾತ್ಮ ಅನಿರುದ್ಧ ಪ್ರದ್ಯುಮ್ನ 20 26 ಜಯ ಸಂಕರುಷಣನೆ ಜಯ ವಾಸುದೇವನೆಜಯ ಜಯತು ಲಕ್ಷ್ಮೀನಾರಾಯಣಾ |ನಾರಾಯಣಾನಂತ ಜಯತು ಗೋವಿಂದಾಚ್ಯುತ ಶ್ರೀ ಕೃಷ್ಣ 21 27ಜಯ ಪೂರ್ಣ ಜ್ಞಾವಾತ್ಮ ಜಯ ಪೂರ್ಣೈಶ್ವರ್ಯ ಜಯ ಪ್ರಭಾ ಪೂರ್ಣ ತೇಜಾತ್ಮ | ತೇಜಾತ್ಮ ನಂದಾತ್ಮ ಜಯತು ಶಕ್ತ್ಯಾತ್ಮ ಕೃದ್ಧೋಲ್ಕ 22 28ಜಯ ಜಯತು ಮಹೋಲ್ಕ ಜಯತು ವೀರೋಲ್ಕ ಜಯ ಜಯತು ದ್ಯುಲ್ಕ ಸಹಸ್ರೊಲ್ಕ | ಸಹಸ್ರೊಲ್ಕ ಜಯ ಜಯ ಜಯತು ಜಗನ್ನಾಥ ವಿಠಲಾರ್ಯ 23 29 ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆ ದಾನಿಗಳುಂಟೆ ಜಗದೊಳು |ಜಗದೊಳು ನೀನೆ ಗತಿಯೆಂದನರರಿಗೆ ಆನಂದವೀವೆ ಅನುಗಾಲ 24 30ಒಪ್ಪಿಡಿ ಅವಲಕ್ಕಿಗೊಪ್ಪಿಕೊಂಡು ಮುಕುಂದ ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ ಮ್ಮಪ್ಪಗಿಂತಧಿಕ ದೊರೆಯುಂಟೆ 25 31ಏನು ಕರುಣಾ ನಿಧಿಯೊ ಶ್ರೀನಿತಂಬಿನಿರಮಣ ತಾನುಮ್ಮನಗಲಿ ಸೈರಿಸ | ಸೈರಿಸದ ಕರುಣಿಯ ನಾನೆಂತು ತುತಿಸಿ ಹಿಗ್ಗಲಿ 26 32ಶ್ರೀನಿಧೆ ನಿನ್ನವರ ನಾನಾಪರಾಧಗಳ ನೀನೆಣಿಸದವರ ಸಲಹುವಿ | ಸಲಹುವಿ ಸರ್ವಜ್ಞ ಏನೆಂಬೆ ನಿನ್ನ ಕರುಣಕ್ಕೆ 27 33ಎನ್ನ ಪೋಲುವ ಭಕ್ತರನ್ನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲ | ಎನಗಿಲ್ಲವದರಿಂದ ಬಿನ್ನೈಪೆನಿನ್ನು ಸಲಹೆಂದು 28 34ಅಚ್ಯುತನೆ ನಿನ್ನಂಥ ಹುಚ್ಚು ದೊರೆಯನು ಕಾಣೆ ಕಚ್ಚಿ ಬಯದೊಡ್ಡೆ ಭಕುತರ | ಭಕುತರಪರಾಧಗಳ ತುಚ್ಛಗೈದವರ ಸಲಹೀದೆ 29 35ಎನ್ನ ಬಂಧುಗಳೆಲ್ಲ ನಿನ್ನ ದಾಸರು ಸ್ವಾಮಿ ಮನ್ನಿಸಬೇಕು ಮಹರಾಯ | ಮಹರಾಯ ನೀನಲ್ಲ ದನ್ಯರು ಸಾಕಲರಿಯರು 30 36 ತಂದೆ ತಾಯಿಯು ಭ್ರಾತ ಸಖ ಗುರು ಪುತ್ರ ಎಂದೆಂದು ನೀನೆ ಗತಿ ಗೋತ್ರ | ಗತಿಗೋತ್ರ ಇಹಪರಕೆ ಇಂದಿರಾರಾಧ್ಯ ಸಲಹೆಮ್ಮ 31 37 ಪತಿತ ನಾನಾದರೂ ಪತಿತ ಪಾವನ ನೀನು ರತಿನಾಥ ನಗಪಾಣಿ | ನಗಪಾಣಿ ನೀನಿರಲು ಇತರ ಚಿಂತ್ಯಾಕೊ ಎನಗಿನ್ನು 32 38 ನಡೆ ನುಡಿಗಳಪರಾಧ ಒಡೆಯ ನೀನೆಣಿಸಿದರೆ ಬಡವ ನಾನೆಂತು ಬದುಕಲಿ | ಬದುಕಲಿ ಕರುಣಿಯೆ ಕಡೆ ಬೀಳ್ವುದೆಂತೊ ಭವದಿಂದ 33 39ಏಸೇಸು ಜನ್ಮದಲಿ ದಾಸ ನಾ ನಿನಗಯ್ಯ ಈಶ ನೀನೆಂಬೊ ನುಡಿಸಿದ್ಧ | ನುಡಿಸಿದವಾಗಿರಲು ದಾಸೀನ ಮಾಡೋದುಚಿತಲ್ಲ 34 40ಆವ ಯೋನಿಯಲಿರಿಸು ಆವ ಲೋಕದಲಿರಿಸು ಆವಾಗ್ಯೆ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೊ ದೇವಕೀಕಂದ ದಯದಿಂದ 35 41ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ ಜನರಿಂದ ನುಡಿಸಿದ್ದು
--------------
ಜಗನ್ನಾಥದಾಸರು
3. ನೀತಿಬೋಧೆ ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ಪ ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ಅ.ಪ. ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲ್ಲಿ ತಂದು ನಿಲ್ಲಿಸಿ ನೃಪರಕನ್ನೆಯರ ಷೋಡಶಸಹಸ್ರವನೆ ತಂದಾತಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ 1 ಕರ ಪಡೆದ ಕಾರ್ತವೀರ್ಯಾರ್ಜುನನುಭೂವಲಯದೊಳಗೊಬ್ಬನೇ ವೀರನೆನಿಸಿರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿಸಾವಾಗ ಏನು ಕೊಂಡೊಯ್ದನೋ ನೋಡೊ 2 ಕೌರವನು ಧರೆಯೆಲ್ಲ ತನಗಾಗಬೇಕೆಂದುವೀರ ಪಾಂಡವರೊಡನೆ ಕದನಮಾಡಿಮಾರಿಯ ವಶವೈದಿ ಹೋಹಾಗ ತನ್ನೊಡನೆಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ3 ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿಉರಗ ಜನುಮವನೈದಿ ಹೋದಾಗ ತನ್ನೊಡನೆಸುರಲೋಕದೊಳಗೇನ ಕೊಂಡ್ಹೋದ ನೋಡೊ 4 ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳುಮಂಗಳಾತ್ಮಕ ಹರಿಯನರಿತು ಭಜಿಸಿಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನುರಂಗವಿಠಲರೇಯನ ನೆರೆ ನಂಬಿರೋ 5
--------------
ಶ್ರೀಪಾದರಾಜರು
ಅಂಕಿತ ರಹಿತ ಹಾಡುಗಳು ತುಳಸಿಯ ವೃಕ್ಷಗಳ ದಳದಳಗಳ ಮೇಲೆನೆಲಸಿಹನು ಹರಿಯು ಮುದದಿಂದಮುದದಿ ತುಲಸಿಯ ಪೂಜೆಗಳಮಾಡಬೇಕು ಸುಜನರು 1 ತುಲಸಿಯ ಮೂಲದೆ ನದಿಗಳುತುಲಸಿಯ ದಳದೊಳೆ ಶ್ರೀಹರಿಯುತುಲಸಿಯ ಶಾಖೆಯೊಳೆ ಸುರರೆಲ್ಲಾನೆಲೆಸಿಹರು ಶ್ರೀತುಲಸಿಯಮಹಿಮೆಗೆಣೆಯುಂಟೆ 2 ವೃಂದಾವನ ತುಲಸಿಗೆಒಂದು ಪ್ರದಕ್ಷಿಣವಚಂದದಿ ರಚಿಸಿದವರಿಗೆಭೂಮಿಯ ಸುತ್ತಿ ಬಂದಂಥಾಪುಣ್ಯ ದೊರೆವುದು 3 ಜಲದೊಳು ಶೋಧಿಸಿದತುಲಸಿ ದಳವನೆ ಹಾಕಿಆ ಜಲವನು ಶಿರದಿ ತಳಿದರೆತಳಿದರೆ ಗಂಗಾದಿಸಲಿಲದಿ ಮಿಂದ ಸುಫಲವು4 ಭೌಮ ಭಾರ್ಗವ ವಾರದಿಶ್ರೀ ಮಹಾಲಕ್ಷುಮಿಯುನೇಮದಿ ತುಲಸಿ ವನದೊಳುವನದೊಳಗಿರುವಳು ಧೀಮಂತರುಕೊಯ್ಯರದರಿಂದ 5 ಇಳೆಯೊಳಗುಳ್ಳಂಥಾಹಲವು ತೀರ್ಥಗಳಿಹವುತುಲಸಿಯ ಮೂಲದೆಡೆಯಲಿಎಡೆಯಲಿ ತನ್ಮøತ್ತಿಕೆಯತಳೆವುದು ಬಲ್ಲ ಸುಜನರು 6 ಅರುಣೋದಯದಲೆದ್ದುಸಿರಿ ತುಲಸಿಯ ದರುಶನವವಿರಚಿಪುದು ಬಲ್ಲ ಸುಜನರುಸುಜನರು ಪಾತಕಹರಿವುದು ಹರಿಯ ಕೃಪೆಯಿಂದಾ 7 ಸಾರಿಸಿ ರಂಗವಲಿಯನೇರಗೈದಿಕ್ಕಿದನಾರಿಯರಿಗೈದೆತನವನುತನವನು ವೃಂದಾವನಶ್ರೀರಮಣಿಯಿತ್ತು ಪೊರೆವಳು 8 ಮುತ್ತೈದೆತನವನುಪುತ್ರಸಂತಾನವನಿತ್ಯ ಸೇವೆಯನು ರಚಿಸಲುರಚಿಸಲು ತುಲಸೀದೇವಿಇತ್ತು ರಕ್ಷಿಪಳು ಕೃಪೆಯಿಂದಾ9
--------------
ಕೆಳದಿ ವೆಂಕಣ್ಣ ಕವಿ
ಅಚ್ಯುತಾನಂದ ಗೋವಿಂದ ಎಚ್ಚರಾಗಿರು ನಂಬಿದವರ ನೋಡನೆಂಬ ತುಚ್ಛನುಡಿಯ ಪಡೆಯದಿರು ಪ. ಪವನ ಮುಷ್ಟಿವೆಷ್ಟವಿಷವ ಶಿವನು ಗೆಲಲು ನಿನ್ನ ನಾಮ ಸ್ತವನಗೈದನೆಂದು ಮಂತ್ರ ಕವಿಗಳೆಂಬೊ ಕವನವೇನೊ 1 ಭರ್ಮಗರ್ಭಾದಿಗಳು ಪೇಳ್ದ ಕರ್ಮಕಾಂಡ ನೋಡೆ ದೇವ ಶರ್ಮ ವರದ ನಿನ್ನ ಸ್ಮರಣೆ ಮರ್ಮವೆಂದು ಒದರುತಿಹುದು 2 ಮೂರಾರು ಪುರಾಣ ಮಹಾ ಭಾರತಾದಿ ಕಾವ್ಯಾದಿಗಳ ಸಾರವರದು ನೋಡೆ ದೀನೋ- ದ್ಧಾರ ನೀನೆ ತೋರಿಕೊಂಬಿ 3 ಇಂಥನಂತಾನಂತ ಮಹಿಮ ವಂತ ನೀನೆ ಶರಣನೆಂದು ಚಿಂತಿಸುವರಾಜನರಿ- ಗಂತರಾಯವೆಂತಾಗುವುದು 4 ಚಂದನ ಮೂರುತಿಯ ನಂಬಿ ಕುಂದಿದನೆಂಬಪಕೀರುತಿಯ ಎಂದೆಂದಿಗು ವಹಿಸದಿರು ತಂದೆ ಲಕ್ಷ್ಮೀ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ