ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಇಂದು ಶ್ರೀಹರಿ ಬಂಧ ಜಾಲಗಳಿಂದ ಮೋಚಿಸಿ ಸಾನಂದಗೈದನು ಪ ಈದ ಗೋವು ಮರೆಯಾದ ವತ್ಸವನು ಶೋಧಿಸುವಂದದಿ ಬಂದನು ಮಂದಗೆ 1 ಯೆವೆಗಳು ಕಂಗಳ ಜವದಿ ಓವಂದದಿ ಭವದೂರ ಬಾಂಧÀವ ಬಂದನು ಮಂದಗೆ 2 ಪೆಣ್ಣುವಕ್ಕಿ ತನ್ನ ಸಂಣ ಮರಿಗಳಿಗೆ ಉಣ್ಣನೀವಂದದಿ ಬಂದನು ಮಂದಗೆ 3 ಇಂದು ನೋಡಿ ಸಂದಣಿವಂದದಿ ಬಂದನು ಮಂದಗೆ4 ಇಂದು ನರಸಿಂಹವಿಠಲ ಬಂಧನ ಬಿಡಿಸಲು ನಂದನಂದನಾಗೆ ಬಂದನು ಮಂದಗೆ 5
--------------
ನರಸಿಂಹವಿಠಲರು
ಮನೆಗೆ ಬಾರೋ ರಂಗ ಮನಸಿಜಯ್ಯನೆ ನೆನವು ಬಿಡದು ಎನ್ನ ಕಣ್ಣಿನೊಳಗೂ ನಿನ್ನ ಪ ಮನಗೆ ಬಾರೋ ರಂಗ ಮನೆಗೆ ಬಾರೋ ಕೃಷ್ಣ ಮನಗೆ ಬಾರೋ ರಾಮ ಅ.ಪ ಮನಗೆ ಬಂದರೆ ನಿನ್ನ ಮಹಿಮೆಯ ಪಾಡುತ ಮನ ದಣಿವಂದದಿ ಕುಣಿದೇನೊ ರಂಗಯ್ಯ 1 ಮನೆಯು ನಿನ್ನದು ಎನ್ನ ತನುವು ನಿನ್ನದು ಮುನ್ನ ಧನವು ನಿನ್ನದು ಎನ್ನ ಘನವು ನಿನ್ನದು ರನ್ನ 2 ದರಹತಿತಾನನ ಸರಸಿಜನಯನ ವರದವಿಠಲ ಪುಲಿಗಿರಿ ವರಸದನ 3
--------------
ವೆಂಕಟವರದಾರ್ಯರು
ಮನೆಗೆ ಬಾರೋ ರಂಗ-ಮನಸಿಜನಯ್ಯನೆ ಕಣ್ಣಿನೊಳಗೂ ನಿನ್ನನೆನಹು ಬಿಡದುಯನ್ನ ಪ ಮನೆಗೆ ಬಾರೋ ರಂಗ-ಮನೆಗೆ ಬಾರೋ ಕೃಷ್ಣ ಮನೆಗೆ ಬಾರೋ ರಾಮ ಅ.ಪ ಮನೆಗೆ ಬಂದರೆನಿನ್ನ ಮಹಿಮೆಯ ಪಾಡುತ ಮನದಣಿವಂದದಿ ಕುಣಿದೇನೊ ರಂಗಯ್ಯ 1 ಮನೆಯು ನಿನ್ನದು ಯನ್ನ ತನುವು ನಿನ್ನುದು ಮುನ್ನ ಧನವು ನಿನ್ನದುಯನ್ನ ಘನವು ನಿನ್ನದು ರನ್ನ 2 ದರಹಸಿತಾನನ-ಸರಸಿಜನಯನ ವರದವಿಠಲ ಪುಲಿಗಿರಿವರಸದನ 3
--------------
ಸರಗೂರು ವೆಂಕಟವರದಾರ್ಯರು