ಅಜ್ಞರಿಗೆಯಿದುನೋಡೆ ಹಾಸ್ಯವಾಗುವುದು ಪ
ಜೀವ ಪರಮಾತ್ಮನಂ ತಿಳಿವದಡಕೆಲೆ ಶಾಸ್ತ್ರ
ದೇವಧರ್ಮವು ಬರುವುದೇ ನಿಶ್ವಿತಾರ್ಥ
ನಾವೆಂಬುವುದು ಬಿಡುವುದೆ ಭಾಜಾಭಜಂತ್ರಿಗಳು 1
ಗುರುಹಿರಿಯರಾಜ್ಞೆಯೆ ನಗನಾಣ್ಯಜವಳಿಗಳು
ಸರವರಿಗು ಮರಿಯಾದೆ ಸಭೆಯ ಪೂಜೆ
ದುರುಳನು ನಿಂದಿಪೋದು ಬೀಗತಿಯ ಹಾಡು 2
ಅಂತರ್ಮುಖತ್ವವೇ ಭೂಮದೂಟ
ತತ್ವಗಳ ಮರೆಯದಿರುವುದೆ ದಿವ್ಯತಾಂಬೂಲ
ಸತ್ವಗುಣ ವೃತ್ತಿಗಳೆ ನಿತ್ಯಸಂತೋಷ 3
ಕೊಬ್ಬಿದವರಿದು ಬಿಟ್ಟು ಹಣಕಾಸು ಕಳಕೊಂಡು
ಕೋರಿಕೆಗಳಿಂದ ಸತಿಯೊಡನೆ ಕಾದುವರು 4
ಮಹಾಗುರುವೆ ಪರಮಾತ್ಮ ಶಿಷ್ಯರು ಜೀವರಾಶಿ
ಅರಿತವರಿಗಿದರರ್ಥ ಅಮೃತಪಾನಕೆ ಸಮವು
ಗುರುರಾಮ ವಿಠಲನು ಮನದಿ ಹೊಳೆಯುವನು 5