ಒಟ್ಟು 13 ಕಡೆಗಳಲ್ಲಿ , 5 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ರೂರ ವರದ ವಿಠಲ | ಕಾಪಾಡೊ ಇವಳಾ ಪ ಶ್ರೀಕೃಷ್ಣ ನಿನದಾಸ್ಯ ಚೊಕ್ಕ ಪಾಲಿಸುತಾ ಅ.ಪ. ವಿನಯಾದಿ ಗುಣ ಭರಿತೆ ಜನನಿ ಜನಕರಪ್ರೀತೆಮನೊ ಮೈಲಿ ಕಳೆಯುತಲಿ ಮನೊಮಾನಿ ಒಡೆಯಾ ಗುಣ ಉಳ್ಳವಳ ಮಾಡಿ | ಜಾಣ್ಮೆಯಲಿ ಸಂಸಾರಅನುಸರಿಸುವಂತೆಸಗೊ | ಅನಿಲಾಂತರಾತ್ಮಾ 1 ಭಕುತರಾ ಸುರಧೇನು | ಭಕುತಿ ಜ್ಞಾನವನಿತ್ತುಮುಕುತಿ ಪಂಥದಿ ಹಾದಿ | ಯುಕುತಳೆನಿಸೋಕಕುಲಾತಿಯನೆ ಕಳೆದೂ | ಶಕುತಿ ಇದ್ದುದ ತಿಳಿಸಿಸುಕರ ಸತ್ಸಾಧನವ | ಪ್ರಕಟವನೆ ಮಾಡೋ 2 ಪತಿಸುತರು ಹಿರಿಯರಾ | ಸತ್ಸೇವೆ ಕೈಕೊಂಡುಅತುಳ ಹರಿ ಆವರಲ್ಲಿ | ಸ್ಥಿತನೆಂದು ತಿಳಿದೂಹಿತದಿಂದ ಸೇವಿಸಲು | ಗತಿಯ ಆಹುದೆಂದೆಂಬಮತಿಯನೇ | ಕರುಣಿಸುತ | ಕೃತ ಕೃತ್ಯಳೆನಿಸೋ 3 ಕಷ್ಠ ನಿಷ್ಠುರಗಳಲಿ | ಇಷ್ಟಸಂತುಷ್ಠಿಯಲಿದೃಷ್ಟಿ ಸಮತೆಯ ಕೊಟ್ಟು | ಕಾಪಾಡೊ ಹರಿಯೇಸೃಷ್ಠಿ ಕರ್ತನು ಹರಿಯು | ಶ್ರೇಷ್ಠ ದೇವತೆಯೆಂಬ ಸ್ಪಷ್ಟಮತಿ ಕರುಣಿಸುತ | ಪ್ರೇಕ್ಷ ನೀನಾಗೋ 4 ಗಾಮಲ್ಗಣಿ ವರದ | ನೀವೊಲಿಯದಿನ್ನಿಲ್ಲಭಾವದಲಿ ಮೈದೋರಿ | ಭವದ ಸುತ್ತರಿಸೋಈ ವಿಧದ ಭಿನ್ನಪವ | ನೀ ವೊಲಿದು ಸಲಿಸೋದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಅನಂತಗಿರಿವಿಠಲ | ಪಾಲಿಸೋ ಇವಳಾ ಪ ಗುಣಪೂರ್ಣ ಶ್ರೀಹರಿಯೆ | ಬೇಡುವೆನು ಧೊರೆಯೇ ಅ.ಪ. ಸಿದ್ಧಿಸುತ ಶಿಷ್ಯತ್ವ | ಶುದ್ಧ ಸ್ವಪ್ನದೊಳೀಕೆಉದ್ಧಾರಕೆಂದೆನುತ | ಪ್ರಾರ್ಥಿಸುತ್ತಿಹಳೋ |ಮಧ್ವರಮಣನೆ ದೇವ | ಸಿದ್ದಾಂತ ಸಾರವನುಬುದ್ದಿಗೇ ನಿಲುಕಿಸೋ | ಭದ್ರಮೂರುತಿಯೆ 1 ಪ್ರಾಚೀನ ದುಷ್ಕರ್ಮ | ಮೋಚನೆಗೆ ಮನಮಾಡೋವಾಚಾಮ ಗೋಚರನೆ | ಖಚರಾರಿ ವಂದ್ಯನೀಚೊಚ್ಚ ತರತಮವ | ವಾಚಿಸುತ ಕರ್ಮಗಳಪಾಚಿಯನೆ ಕಳೆಸವ್ಯ | ಸಾಚಿ ಸಖದೇವಾ 2 ಹರಿಪಾದ ರತಿ ಕೊಟ್ಟು | ಹರಿ ಗುರು ಸೇವೆಗಳನಿರುತಗೈಯುವ ಮನವೆ | ಪರಿಪಾಲಿಸ್ಹರಿಯೇಅರವಿಂದನಾಭಹರಿ ಸರ್ವ ಸತ್ಸಾಧನವನೆರವೇರಿಸೆಂದೆನುತ | ಪ್ರಾರ್ಥಿಸುವೆ ಹರಿಯೇ 3 ಜ್ಞಾನಾನು ಸಂಧಾನ | ಮಾಣದಲೆ ಇತ್ತಿವಳಧ್ಯಾನ ಮಾರ್ಗಕೆ ತಂದು | ಮೌನಿ ಜನ ವಂದ್ಯಾಸಾನುರಾಗದಿ ನಿನ್ನ | ಹೃದಯ ಗಹ್ವರದಲ್ಲಿಕಾಣುವ ಸುಸಾಧನವ | ನೀನೇ ಮಾಡಿಸೊ ಹರಿಯೇ 4 ಸರ್ವಾಂತರಾತ್ಮಕನೆ | ದುರ್ವಿ ಭಾವ್ಯನೆ ದೇವಸರ್ವಕರ್ಮದಿ ನಿನ್ನ | ಸಂಸ್ಕøತಿಯ ನಿತ್ತುದರ್ವಿಜೀವಿಯ ಕಾಯೋ ಸರ್ವೇಶ ಶ್ರೀಹರಿಯೆಶರ್ವನೊಡೆಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಗುರು ರಾಜ ಹರಿ ವಿಠಲ | ಪೊರೆಯ ಬೇಕಿವಳಾ ಪ ಗರುಡ ಗಮನನೆ ದೇವ | ಸರ್ವಾಂತರಾತ್ಮ ಅ.ಪ. ಪತಿಯೆ ಪರದೈವ ವೆಂ | ಬತಿಶಯದ ಮತಿಯಿತ್ತುರತಳೆನಿಸು ಗುರು ಹಿರಿಯ | ಹಿತಸೇವೆಯಲ್ಲೀಕೃತ ಕೃತ್ಯಳೆಂದೆನಿಸೊ | ಗೃಹ ಮೇಧಿ ಎಂಬಲ್ಲಿಕೃತಿ ರಮಣ ಪ್ರದ್ಯುಮ್ನ | ವಿತತ ಮಂಗಳನೇ 1 ಮಧ್ವಮತದನುಯಾಯಿ | ಶುದ್ಧ ಭಕುತಿ ಜ್ಞಾನ ಉದ್ಧರಿಸಿ ಇವಳಲ್ಲಿ | ಸಾಧನವ ಗೈಸೋಅಢ್ಯರೇಡ್ಯನೆ ಹರಿಯೆ | ಶ್ರದ್ಧಾಳು ತನದಲ್ಲಿಬುದ್ಧಿ ಓಡಲಿ ದೇವ | ಮಧ್ವಾಂತರಾತ್ಮಾ 2 ಸಾರ | ತರಳೆ ಬುದ್ಧಿಗೆ ನಿಲುಕಿಪರಮ ಸತ್ಸಾಧನವ | ಚರಿಸುವಂತೆಸಗೋಮೊರೆಯಿಡುವೆ ನಿನ್ನಲ್ಲಿ | ಕರುಣಿಸೀ ಬಿನ್ನಪವಗುರುವಂತರಾತ್ಮ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಪತಿ | ನೀನಿವನ ಕಾಯೋ ಪ ಮಂದ ಜನರುದ್ಧಾರಿ | ತಂದೆ ಮುದ್ದು ಮೋಹನ್ನನಂದನರ ದ್ವಾರದಿಂ | ಪೊಂದಿ ಅಂಕಿತವಾಅಂದ ಸತ್ಸಾಧನವು | ಮುಂದುವರಿವಲಿಕಾಂಕ್ಷೆ |ಯಿಂದ ಸತ್ಕಾರ್ಯ | ಪ್ರತಿಬಂಧ ಪರಿಹರಿಸೊ 1 ಪಾದ | ವನಜ ಆಶ್ರಿತಗೇ 2 ಭಾವಜಾರಿಯ ಮಿತ್ರ | ಭಾವುಕರ ಪರಿಪಾಲಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ |ಪಾವಮಾನಿಯ ಪ್ರೀಯ | ನೀ ವೊಲಿದು ಭಕ್ತನ್ನತೀವರುದ್ದರಿಸೆಂದು | ದೇವ ಬಿನ್ನವಿಪೇ 3
--------------
ಗುರುಗೋವಿಂದವಿಠಲರು
ಪಾರ್ವತಿ ದೇವಿ ಉಮಾ - ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ ಆಡೂವ ನುಡಿಗಳ - ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ - ರೂಢಿಗೊಡೆಯನ ತಡಮಾಡದೆ ತುತಿಪಂಥ - ಜೋಡಿಸು ಮನಾ 1 ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ 2 ಸತಿ - ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ - ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ - ಪಾಲಿಸೇ 3 ಪ್ರಾಣಂಗೆ ಪ್ರಾಣನ - ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ - ಪ್ರ - ದಾನ ಪುರೂಷನಮಾಣದೆನಗೆ ತೋರಿಸೇ 4 ಹಿಮಗಿರಿಸುತೆತವ - ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ 5
--------------
ಗುರುಗೋವಿಂದವಿಠಲರು
ಬಟ್ಟೆ ಪ ಕೆಟ್ಟವನೆಂಬಪಕೀರ್ತಿಯ ಪಡಿಯುವ ಅ.ಪ ಒಂದು ಹೊತ್ತಿಲ್ಲದಿರುಲು ತಾಳಲಾರೆ | ನಿನಗಾಗಿ ನೀಚ- ವೃಂದವÀ ಯಾಚಿಸಿ ನಾ ಬಳಲಲಾರೆ ತಂದೆ ತಾಯಿಗಳನ್ನಾದರೂ ವಂಚಿಸಿ ಮುಂದಾಗುವ ಕೇಡರಿಯದಿರುವ ಹಾಳು 1 ಹೆಚ್ಚು ಕೊಟ್ಟರು ಒಲ್ಲೆಯೆಂಬೆ | ಕಡಿಮೆಯಾದರೂ ಬಾಯಿ ತುಚ್ಛರ ಸೇವಿಸಿ ಅನ್ಯಾರ್ಜಿಸಿ ಹುಚ್ಚು ಹಿಡಿಸುವೆಯೇನೊ ನೀ ಕೊನೆಗೆ 2 ನಿನಗಾಗೀ ಸಕಲ ವಿದ್ಯಗಳರಿತು | ಸಭೆಯೊಳು ವಾದಿಸಿ ಮನಸು ಚಪಲ ಮಾಡಿ ತಹ ತಹ ಪಡಿಸುವ 3 ವ್ಯವಸಾಯಯೋಗ್ಯ ವ್ಯಾಪಾರಗಳು | ಯಾಚನೆಕಷ್ಟ ಭಾರವಾಹತ್ವ ಮೊದಲು ದಿವಸ ದಿವಸ ಮಾಡುತ ನಿನ್ನೊಲಿಸಲು ಜವನಾಳ್ಗಳ ಕೈಗೊಪ್ಪಿಸಿಸುವೆ ಕಡೆಗೆ 4 ಜ್ಞಾನ ನಿಷ್ಕಾಮ ಕರ್ಮದಾನ | ಸಂಧ್ಯಾಜಪತಪ ಸ್ನಾನಾನುಷ್ಠಾನ ಸತ್ಸಾಧನಾ ಏನು ನಡೆಯಲೀಸದೆ ದಿನದಿನದಲಿ ನಾನು ನನಗೆ ಎನ್ನಿಸಿ ಬಾಯಿಬಿಡಿಸುವ 5 ಮುಷ್ಕರದಿಂದ ನಿನ್ನ ನೋಯಿಸಲು | ಕರಗಿಯೆಲ್ಲ ನಿಷ್ಕಾರಣವಲ್ಲವು ನೀ ಜಗದೊಳು 6 ಕೊಟ್ಟಷ್ಟರಲ್ಲೆ ತೃಪ್ತಿಯ ಹೊಂದು | ಸಾಲದಿರಲು ಸಿಟ್ಟೇಕೆನ್ನೊಳು ದಯಮಾಡಿಂದು ಮುಟ್ಟಿ ಭಜಿಸೆ ಸಂತುಷ್ಟಿಯ ಪಡೆವೆ 7
--------------
ಗುರುರಾಮವಿಠಲ
ರಾಘವ ಹರಿ ವಿಠಲ | ಕಾಪಾಡೊ ಇವಳಾ ಪ ಅಘದೂರ ಶ್ರೀ ಹರಿಯೇ | ಪಾಪಘಗಳ ಕಳೆದೂ ಅ.ಪ. ಮುಕ್ತಿಗೇ ಸೋಪಾನ | ತಾರತಮ್ಯ ಜ್ಞಾನಮತ್ತೈದು ಭೇದಗಳ | ಅರಿವನೆ ಇತ್ತೂಪ್ರತ್ಯಹರ ತವನಾಮ | ಚಿತ್ತದಲಿ ನೆನೆವಂಥಉತ್ತಮದ ಸಂಸ್ಕøತಿಯ | ಕೊಟ್ಟು ಕಾಪಾಡೋ 1 ಪರಿ | ಇತ್ತಿಹೆನೊ ಅಂಕಿತವಚಿತ್ತದೊಲ್ಲಭ ಹರಿಯೆ | ಕರ್ತೃ ಕರ್ಮದಲೀವ್ಯಾಪ್ತ ನೀನಾಗಿದ್ದು | ಸತ್ಸಾಧನೆಯ ಗೈಸೀಎತ್ತು ಭವದಿಂದಿವಳ | ಉತ್ತಮೋತ್ತಮನೆ 2 ಇತ್ತು ವೈರಾಗ್ಯವನು | ಮತ್ತೆ ಜ್ಞಾನ ಸಂಪದಇತ್ತು ಕಾಪಾಡಿವಳ | ಕರ್ತೃ ರಾಮಚಂದ್ರಾ |ಉಕ್ತಿ ಎನ್ನದು ಇದೂ | ಮತ್ತನ್ಯ ನಾನೊಲ್ಲೆಮುಕ್ತಿ ದಾಯಕ ಗುರೂ | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಲೀಲಾ ಮನೋಹರ ವಿಠಲ | ಪಾಲಿಸೊ ಇವಳಾ ಪ ನೀಲ ಮೇಘ ಶ್ಯಾಮ | ಕಾಳಿಂದಿ ರಮಣಾಅ.ಪ. ಆಪನ್ನ ಪಾಲಾ |ನಿನ್ನವಾಳೆಂದೆನುತ | ಮನ್ನಿಸೀ ತಪ್ಪುಗಳಘನ್ನ ಮಹಿಮನೆ ಕಾಯೊ | ಕಾರುಣ್ಯ ಮೂರ್ತೇ1 ಸತ್ಸಂಗದಲಿ ಇಟ್ಟು | ಸತ್ಸಾಧನೆಯಗೈಸಿಮತ್ಸರಾದ್ಸರಿಗಳನ | ಕತ್ತರಿಸಿ ಹಾಕೀಉತ್ಸಹದಿ ಸಂಸಾರ | ಯಾತ್ರೆಗಳ ಚರಿಸಯ್ಯಮತ್ಸ್ಯ ಮೂರುತಿ ಹರಿ | ಸತ್ಯವ್ರತ ಪಾಲಾ 2 ತರತಮಾತ್ಮಕ ಜ್ಞಾನ | ಸದನದಲಿ ತಿಳಿ ಪಡಿಸಿಹರಿ ಭಕ್ತಿ ವೈರಾಗ್ಯ | ಎರಡು ಅನುಸರಿಸೀ |ಬರುವಂತೆ ಗೈದು ಉ | ದ್ಧರಿಸೊ ಹರಿ ಇವಳನ್ನನರಹರೀ ಮಾಧವನೆ | ಪರಿಪೂರ್ಣ ಕಾಮಾ 3 ಕಾಮ ಜನಕನೆ ದೇವ | ಕಾಮಿನಿಯ ಮನ ಬಯಕೆಪ್ರೇಮದಲಿ ನೀನಿತ್ತು | ಭೂಮ ಗುಣಧಾಮಾ |ಈ ಮಹಾ ಕಲಿಯುಗದಿ | ನಾಮ ಸ್ಮರಣೆಯ ಸುಖವಾನೇಮದಲಿ ನೀನಿತ್ತು | ಪಾಮರಳ ಉದ್ಧರಿಸೋ 4 ಕೈವಲ್ಯ ಪದದಾತಭಾವುಕಳ ಪೊರೆಯೆಂದು | ಭಾವದಲಿ ಬೇಡ್ವೇ |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನೆಭಾವದಲಿ ನೀ ತೋರಿ | ಹರುಷವನೆ ಪಡಿಸೋ 5
--------------
ಗುರುಗೋವಿಂದವಿಠಲರು
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಷಣ್ಮಹಿಷಿಯರು ನಗ್ನ ಜಿತು ನೃಪ ಭಗಿನಿ ತನುಜೆ ಕಾಯೇ |ಲಗ್ನ ಗೈಸೆನ್ನ ಮನ ದೋಷಘ್ನನಲ್ಲೀ ಪ ಮಿತ್ರಾಖ್ಯ ಹರಿಪ್ರಾಪ್ತಿ ನಿತ್ಯದಲಿ ಚಿಂತಿಸುತಮಿತ್ರವಿಂದಾಭಿಧೆಯು ನೀನು ಆಗೀ |ಎತ್ತ ನೋಡಿದರತ್ತ ಶ್ರವಣ ಭಕ್ತಿಗೆ ಮುಖ್ಯಪಾತ್ರವೆಂದರುಹುತ್ತ ಅಂತೆ ಆಚರಿಪೇ 1 ಹರಿಕಥಾಮೃತ ಸರಿತು ಹರಿಯದಿಹ ಸ್ಥಳವೇನುಹರಿ ಪದಾಶ್ರಿತರಹಿತ ಮತ್ತೆ ಉತ್ಸವವೂ |ವಿರಹಿತದ ಪಾತ್ರಗಳ ತ್ವರಿತದಲಿ ತ್ಯಜಿಸುತ್ತಸರಿಯುವುದೆ ಲೇಸೆಂದು ಭೋದಿಸಿಹೆ ದೇವಿ2 ಹರಿಕಥೆಯ ಕೇಳುವುದೆ ಕರ್ಣಕ್ಕೆ ಭೂಷಣವುಹರಿಕಥೆಯ ಪೇಳುವುದೆ ವಾಗ್ಭೂಷಣಾ |ಪರಿಪರಿಯ ಅಂಗಗಳ ಹರಿಪರವ ಗೈಯ್ಯುವುದೆಪರಮ ಸತ್ಸಾಧನವು ಎಂತೆಂದು ಪೇಳ್ದೇ 3 ಈ ಪರಿಯ ತಪದಿಂದ ಶ್ರೀ ಪತಿಯ ಮನ ಒಲಿಸಿಸಾಪರೋಕ್ಷಿತೆಯಾಗಿ ಶ್ರವಣ ಭಕ್ತಿಯಲೀ |ಆ ಪರಮ ಪುರುಷನ್ನ ಕೈಪಿಡಿದು ಕೃತಕೃತ್ಯೆನೀ ಪರಮ ಕೃಪೆಯಿಂದ ಕಾಪಾಡು ಎಮ್ಮ 4 ಇಂದಿರಾ ರಮಣಂಗೆ ಎಂದೆಂದು ವೈರಿಗಳುವಿಂದಾನುವಿಂದರೆಂಬೀರ್ವ ಭ್ರಾತೃಗಳ |ಸಂದು ದುರ್ಯೋಧನಗೆ ನಿನ್ನನರ್ಪಿದ ಹದನಮಂದಿ ಎದುರಿಲಿ ಕೃಷ್ಣ ಭಗ್ನವನೆ ಗೈದ 5 ಶ್ರವಣ ಭಕ್ತ್ಯಭಿಮಾನಿ ಚಿತ್ತದಲಿ ನೀನಿದ್ದುಪವನ ಮತ ತತ್ವಗಳ ಶ್ರವಣ ಗೈಸೀ |ಭವವನಧಿ ಉತ್ತರಿಪ ಹವಣೆ ನೀ ತೋರಿ ತವಧವಗೆ ಭಿನ್ನೈಸುವುದು ಎಮ್ಮ ಹಂಬಲವ 6 ಸವನ ಮೂರಲಿ ಆಯು ವಿವಿಧ ಭವಣೆಗಳಿಂದಪ್ರವಹಿಸುತ ಸಾಧನೆಗೆ ವಿಘ್ನವಾಗಿಹುದುಪವನಾಂತರಾತ್ಮ ಗುರು ಗೋವಿಂದ ವಿಠಲನಪಾವನ್ನ ಪದಕಾಂಬ ಹವಣೆ ತಿಳಿಸಮ್ಮಾ 7
--------------
ಗುರುಗೋವಿಂದವಿಠಲರು
ಸಿರಿಜಾನಕೀಪತಿ ವಿಠಲ ನೀನಿವನ ಕಾಯೋಗರುಡ ಶೇಷಾದಿ ಮನೋ ಮಾನಿ ಪ್ರೇರಕನೆ ಹರಿಯೇ ಪ ಮಂದ ಜನರುದ್ಧಾರಿ | ತಂದೆ ಮುದ್ದು ಮೋಹನ್ನನಂದನರ ದ್ವಾರದಿಂ | ಪೊಂದಿ ಅಂಕಿತವಾ |ಅಂದ ಸತ್ಸಾಧನವ | ಮುಂದುವರಿಪಲಿಕಾಂಕ್ಷೆಯಿಂದ ಸತ್ಕಾರ್ಯ ಪ್ರತಿ | ಬಂಧ ಪರಿಹರಿಸೋ 1 ಪಾದ | ವನಜ ಆಶ್ರಿತಗೇ 2 ಭಾವಜಾರಿಯ ಮಿತ್ರ | ಭಾವುಕರ ಪರಿಪಾಲಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ |ಪಾವಮಾನಿಯ ಪ್ರೀಯ | ನೀವೊಲಿದು ಭಕ್ತನ್ನತೀವರುದ್ಧರಿಸೆಂದು | ದೇವ ಭಿನ್ನವಿಪೇ3
--------------
ಗುರುಗೋವಿಂದವಿಠಲರು
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
--------------
ಪ್ರಾಣೇಶದಾಸರು