ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾಪ.
ವರ ಫಣಿಗಿರಿ ಸುಸ್ಥಿರಮಂದಿರ ಶ್ರೀ
ಗುರು ಜನಾರ್ದನಾಮರಗಣ ಪಾಲಕಅ.ಪ.
ಅಪರಾಧಗಳಾಲೋಚಿಸುವರೆ ಸರೀ-
ಸೃಪರಾಜನಿಗಳವೆ
ಕೃಪೆಯಿಂದಲಿ ಸಂರಕ್ಷಿಸದಿದ್ದರೀ-
ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ 1
ಪುರಂದರ ಮುಖ್ಯ ದಾಸರಂತೆ
ಗುಣವೆನಗಿನಿತಿಲ್ಲ
ಜನರ ವಿಡಂಬನಕೆ ದಾಸನಾದರೂ
ಘನ ಕೃಪಾರ್ಣವನೆ ಕನಕಾಂಬರಧರ2
ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣ
ರಕ್ಷಾಮಣಿ ನೀನೆ
ಪಕ್ಷೀಂದ್ರವಾಹನ ಪಾಪವಿಮೋಚನ
ತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ 3