ಒಟ್ಟು 1038 ಕಡೆಗಳಲ್ಲಿ , 93 ದಾಸರು , 800 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷರ ಮಾಲಾ ಅದ್ವೈತ ಅಗಣಿತಆದ್ಯಂತ ರಹಿತಇಹ ಪರಕೆ ವರ್ಜಿತಈಶ್ವರಯ್ಯ |ಉದಯಾಸ್ತಗಳಿಲ್ಲಊ(ಉ)ಚ್ಚ ನೀಚಗಳಿಲ್ಲಋಷಿಯ ಮೂಲವ ಬಲ್ಲವರಾರಿಲ್ಲಲೃ ಚೇಕಗಳಿಲ್ಲಲñ ಗಳಿಲ್ಲಏಕಮೇವ ತಾನೆಲ್ಲಐಕ್ಯ ಮೊದಲಿಗಿಲ್ಲ ಸೌಖ್ಯಾನಂದಓದಲಿಕೆ ಅಳವಲ್ಲಔದಾಸೀನ ಶೀಲಅಂತ ತಿಳಿಯದು ಬಹಳಅ:(ಹ)ರ್ನಿಶಿಯಲಿ || ಹರ ಹರಾ ಮಹಾದೇವ ಶಿವ ಶಿವ ಮಹಾದೇವ ಶಂಕರಾ ಮಹಾದೇವ ದೇವ ದೇವಾ 1 ಕರುಣ ಸಾಗರ ಗುರುವೆಕಾರುಣ್ಯ ಮೂರ್ತಿ ನೀಕಿರಣ ಕೋಟಿ ಪ್ರಕಾಶ ಮಹಿಮ ಕೀರ್ತಿ ನಿಮ್ಮದು ಬಹಳಕುಳಿತಲ್ಲಿ ನಿಂತಲ್ಲಿಕೂ(ಖೂ)ನ ನಾ ತಿದ್ದದೆ ಕಾಲಿಲೊದ್ದುಕೇಳಿ ಬಂದೆನು ಮಹಿಮೆಕೈ ಮುಗಿದು ಶರಣೆಂಬೆಕೋಟಾಳ (ಕೋಟಲೆ) ನಮ್ಮದು ಬಿಡಿಸು ದೇವಾಕೌ (ಕವಿ)ದು ಕೊಂಡಿದೆ ಮಾಯೆಕಂಬನಿಯ ತೆರೆ ಗುಡಿದುಕಃ(ಷ)ಷ್ಟ ಕಷ್ಟ ಜನ್ಮ ಬಹಳ ಕಷ್ಟ || ಹರಹರಾ 2 ಖಳರ ಸಂಗತಿಯಿಂದಖಾತಿಗೆ ನಾ ಬಿದ್ದೆಖಿನ್ನನಾದೆ ಅಳುಕಿ ಭಿನ್ನನಾದೆ ಖೀ(ಕೀ) ಸುತಿದೆ ಬಲು ಬಯಕೆಖುರ ಖುರಿ ಗುಟ್ಟುತಲಿಖೂನ ತೋರಿಸಿ ನಮ್ಮ ಕಡೆದಾಟಿಸು ಖೇದವನು ಬಡಲಾರೆಖೈರದ ಮನೆಯಲಿಖೋಡಿತನ ನಮ್ಮದು ಬಿಡಿಸು ದೇವ ಖೌ(ಖವ)ಟ ಮನವನು ಬಿಡಿಸಿಖಂ ಮಗೆ (ಖಮಂಗ) ಮಾಡಯ್ಯಖಃಖಃ ಎನುತಲಿ ಕೆಮ್ಮಲಾರೆ || ಹರಹರಾ 3 ಗದ್ದಲ ಮನದಿಂದ ತಿದ್ದಲಾರದೆ ಹೋದೆಗಾವಿಲ ನಾನಾದೆ ಕರುಳನಾದೆಗಿರಿಜೇಶ ನೀ ಕೇಳು ಪ್ರಳಯಕ್ಕೆ ಒಳಗಾದೆ ಉಳಿದುಕೊಂಡರೆ ನಿಮ್ಮ ಮರೆಯೆನೆಂದು |ಗೀತ ಹಾಡಿದರೇನು ನಾಥನನು ಕೊಳಲಿಲ್ಲ ಪ್ರೀತಿಗಳು ನಡಲಿಲ್ಲ ಗುರುವಿನಲ್ಲಿ | ಗುಣಕರ್ಮಕಾಡುತಿದೆ ಗೂಳಿಯನೆ ಮಾಡುತಿದೆ ಗೆಲವ ಹಾದಿ ಬಯಲ ಜ್ಞಾನವಿಲ್ಲ |ಗೈಯಾಳ ತನದಿಂದ ಹೈಯಾಲಿಕೆಗೆ (ಹುಯಿಲಿಕೆಗೆ) ಬಿದ್ದು ಗೊಡ್ಡತನ ಎಷ್ಟೆಂತು ಹೇಳಲಯ್ಯಗೌಪ್ಯದ ಮನೆಯೊಳಗೆಗಂಭೀರತನ ಬಿಟ್ಟುಗಃ(ಗಾಹ)ಳ ಹರಿಸೊ ಬಹಳ ಕೃಪೆಯಿಂದಲಿ || ಹರಹರಾ 4 ಘ(ಗ)ಳಿಸಲಾರೆನು ಪರವುಘಾ(ಗಾ)ಳಿಯಾಗಿದೆ ಮನಸುಘಿಲಕೆಂದರೆ ಬೆದರಿಘೀರಿಡುತಲಿಘುಮ್ಮರಿ ಸಿಕ್ಕುತದಘೂ(ಗೂ)ಳಿ ಸೊಕ್ಕಿದ ಹಾಗೆ ಘುರಘೂರಿಯ ತಪ್ಪಿಸಿಹರವ ಮಾಡು ||ಘೇರಿ ಬಂದೆರಗಿತುಘೃರಿಸುವರಿನ್ನಾರುಘೋರದಲಿ ಮುಳುಗಿದೆ ತಾರಿಸಯ್ಯಘೌ(ಗೌ)ರವನು ಮಾಡೆನಗೆಘಂಮನೆ ವರವಿತ್ತುಘಃ(ಘಾ)ಸಿಯಾಗಿಸಬೇಡ ಯಮನ ಬಾಧೆಯಲಿ || ಹರಹರಾ 5 ಜ್ಞಾನದ ಹಾದಿಯಿಲ್ಲ ಅ-ಜ್ಞಾನಿ ನಾನಾದೆ ಸ್ವಾನುಭವವೆಂದರೆ ಏನೋ ಎಂತೋಜ್ಞಾನವೆಂದರೆ ದೀಪ ಬೆಳಕಿಲಿ ನೋಡಿಪ್ಪಜ್ಞಾನದ ಸ್ವರೂಪ ಸಾರ ಗುಹ್ಯ ಜ್ಞಾನಿ ಸಂಗದ ಗೋಷ್ಟಿಜ್ಞಾನಿಗೇ ಪರಿಪಾಟಿಜ್ಞಾನಿಯೆಂದರೆ ಕೋಟಿ ಕೋಟಿ ಪುಣ್ಯ ಜ್ಞಾನಕ್ಕೆ ಸರಿಯಿಲ್ಲಜ್ಞಾನಿಯಾದವ ಬಲ್ಲಜ್ಞಾನಿಯೆಂದರೆ ಕಲ್ಲು ಹಾಕುತಾರೆ || ಹರಹರಾ 6 ಚರಣವನು ಪಿಡಿಯಾದೆಚಾರ್ವಾಕ ನಾನಾದೆಚಿರಕಾಲ ಬದುಕುವಚೀ(ಚಿ)ಹ್ನ ವಿಲ್ಲ ಚುಲಕ ಬುದ್ಧಿಯ ಹಿಡಿದುಚೂಕ (ಚುಕಾ)ರಾದೆನು ಬಹಳಚೇರಿಗೇಡಿತನವನು ಬಿಡಿಸು ದೇವಾ |ಚೈತನ್ಯನೆಂಬವನು ಒಳ ಹೊರಗೆ ಐದಾನೆಚೋರತನವನು ಮಾಡಿ ಕದ್ದನನ್ನಚೌಖಂಡಿ ಒಡೆದನೊಚಂನಾಗಿ ಹಗಲವೆಚಃ(ಚಾ)ಡಿ ನೋಡುತಲಿದ್ದೆ ಉಲವಿಲ್ಲವು ಹರಹರಾ 7 ಛಲದ ಬುದ್ದಿಯ ಹಿಡಿದುಛಾನಸ ನಾನಾದೆಛಿಛೀ ಎಂದರು ಸಾಧು ಜನರುಛುಲಕತನಕೆಲ್ಲಛೂರಿಯನೆ ಹಾತುತಲಿಛೇದಿಸಲು ತಡವಿಲ್ಲಛೈ ತಾಳಿಸಿಛೋದವನು ಬಡುವರು ಭಕ್ತರಾದವರೆಲ್ಲಛೌಕಂಠ ನಮ್ಮಯ್ಯ ಕೂಡಿಕೊಂಡಛಂದಾಗಿ ಸಲಹಯ್ಯ ಆನಂದ ಪದವಿಯ ಕೊಟ್ಟುಛತ್ರವನು ಮೇಲಿಟ್ಟು ಛಃ(ಛಾ)ಯ ವಾಗೋ ಹರಹರಾ 8 ಜಪ ತಪಗಳ ನಾ ಮಾಡಿಜಾಗ್ರತ ನಾನಾದೆಜಿತೇಂದ್ರಿಯಾದೆನೊಜೀವದಿಂದ ಜುಗಳನೆಲ್ಲವನುಜೂಜನಾಡಿ ಗೆದ್ದೆಜೇನವನಿಕ್ಕಿದೆ ನೆಲಕಬ್ಬಿಗೆಜೈ ಜಯಾಕಾರವನು ಜಗವೆಲ್ಲ ಮಾಡುವರುಜೋಗುಳ ಹಾಡುವರು ಪ್ರೇಮದಿಂದಜೌನಾಗಳೆ (ಯೌವನಾಗಲೆ) ಹೋಗಿಜಂಬುಲಿಂಗನ ಕೂಡಿ ಜಃ(ಹ)ಜ ನಾಡಿ ಹರಹರಾ 9 ಝ(ಜ)ಳಕವನು ಮಾಡಿದೆಝಾರಿ ಬ್ರಹ್ಮನ ಕೈಯ ಉದಕವೇ ಉಷ್ಣವನು ಬಿಡಿಸಿತಲ್ಲಝಿಂಜ ಬೀಜ ಮಲ ತೊಳೆದುಝೀ ಎಂಬ ಖಣಿಯೊಳಗೆಝುಣಿಝೂಣಿಸುವನಾದಝೇಲಿಸಿಕೊಂಡಝೈಯ ರಾಗದ ಯೋಗಝೋತಿ ಮಾಡಲಿ ಬೇಕುಝೌಗರದ ಒಳ ಮೊಲಿಯ ಭಾರಿಡುತಲಿ ಝಂಮನೊದಗಿತು ಮೇಘ ಝಳಮಳ ಮಿಂಚೇರಿಝಃಗ ಝಗಿಸುವ ದಿವಾ ರಾತ್ರಿಯಲಿ ಹರಹರಾ 10 ಟಕಮಕನೆ ನೋಡ್ಯಾಡಿಟಾಳಿ ಬಲಿತು ಕೊಂಡ ಹೊತ್ತರು ಆತ್ಮಜ್ಞಾನಿಗಳು ಟೀಕು ಆಯಿತು ಹೀಗೆಟುಕಿಲಿ ತಿಳಕೊಳ್ಳಿಟೂಕ ಮಾಡಲಿ ದೇಹ ಮೋಕ್ಷವಿಲ್ಲ ಟೇಕದ ಮೇಲೇರಿ ಜಾರಿ ಬಿದ್ದರೆ ಕೇಡುಟೈಳತನದಲಿಟೊಂಕ ಮುರಿದುಕೊಂಡಟೌಕರಕ ಗತಿಗಾಣಟಂಮನೆ ಕೆಲಸಕ್ಕೆಟಃ(ಟಾ)ಹ ಬಡೆವವರಿಲ್ಲ ಹುಟ್ಟಮೂಕಗೆ ಹರಹರಾ 11 ಠಮಕದಲಿ ದಂಭಕಗಠಾವಿಕ್ಯಾಗಲು ಶಿವನುಠಿಸಳ ಮನದವನುಠೀವಿ ಹೊಕ್ಕ ಠುಮಠೂಮಿಗುಟ್ಟುತಲಿಠೇವೇನೆ ಕಳಕೊಂಡಠೈ(ತೈ)ಳ ಬುದ್ಧಿಯ ಲಂಡ ಸಾಕುಸಾಕುಠೊಂಬಿಯ ಮತದವನುಠೌಳಿಕಾವನು ಬದ್ಧಠಂಮೆಂದರೆ ನಮ್ಮರಸು ಸಿಕ್ಕಠಃ (ಠಾ)ವು ಬಲ್ಲಿದವನಲ್ಲ ಠಾಣೇ ಕುಳಿತವನಲ್ಲ ಠಾಕುರಾಯಿಕಾದು ಗೋವ ನಾದ ಹರಹರಾ 12 ಡಗಳ ಮುದ್ರಿಯ ಹಾಕಿಡಾಗಿನ ಪಶುವಾಗಿಡಿವರಿ ಎಂದರೆ ಖೋ ಎನುತಲಿ ಡೀಂಗರಿಗಲ್ಲದೆಡುರುಕು ಹಾಕುತಲಿದೆಡೂ(ಡು)ಳಿಕಿಸುತಲಿಹ ಸೊಕ್ಕಿನಲ್ಲಿ ಡೇಗಣಿ ಕಟ್ಟದೆಡೈಳತನ ಹೋಗದುಡೊಂಗ ತಟ್ಟಿದ ಬಳಿಕ ನೋಡು ಅಳುಕಡೌಲಿಸಿದ ಮಡವಿನಲಿ ನೀರ ಕುಡಿಯಲು ಹೋಗಿಡಂಕ ಮೊಸಳಿಯ ಕಂಡುಡಃ(ಡ)ಳಮಳಿಸಿತು ಹರಹರಾ 13 ಢಣಿಢಣಿಸುವ ಜ್ಯೋತಿಢಾಳಾಗಿ ತೋರುತದೆಢಿಳಿಗ್ಯಾತಕ ಹೋದಿ ಇಲ್ಲಿ ನೋಡು ಢೀಗು ಬಿದ್ದ ಮುನ್ನೆಢುಮಿಢೂಮಿಗುಟ್ಟುತಲಿಢೇಕರವ ಕೊಟ್ಟುಂಡು ತೃಪ್ತನಾಗೊ ಢೈಯಾಳಿತನದಿಂದಢೋಗರ ಬೀಳಲಿ ಬೇಡಢೌಳಿ (ಡೌಲು) ಮಾಡಲಿ ಬೇಡ ಸಾಧುರೊಳಗೆ ಢಂಮನಾಗಿರ ಬೇಡ ಅಹಂಕಾರ ತಲೆಗೇರಿಡಃ(ಢಾ)ಣಕ ನೀಗವಲ್ಲದೆ ಬಳಲುವಿ ಹರಹರಾ 14 ತವನಿಧಿಗಳ ನೋಡುತಾರಕ ಬ್ರಹ್ಮನ ಕೂಡುತಿಳಿದವನು ನೀ ನೋಡುತೀಂ(ತಿ)ತಿಣಿಯನು ತುಂಬಿ ಕೊಂಡಿದೆ ನೋಡುತೂ (ತು)ಳಕುವ ತೆರೆ ನೋಡುತೇಲಿ ಬರುತದೆ ನೋಡುತೈ ಧಾಂಗೆ (ತೆಯ್ಧಾಂಗೆ)ತೊಳೆದ ಮುತ್ತನು ನೋಡುತೌರಮನೆಯನು (ತವರಮನೆಯನು) ಕೂಡುತಂದೆ ಶಿವರಾಯನ ಆನಂದ ನೋಡುತಃ(ತಾಹ) ಕುಡುತದೆ ನೋಡು ಬಹಳ ಅಭ್ಯಾಸ ಮಾಡುದೇಹವಳಿದು ಆತ್ಮನೊಡಗೂಡು ಹರಹರಾ 15 ಥರ ಗೊಳಿಸುವ ಜ್ಞಾನಸ್ಥಾ(ಸ್ಥ)ಳವ ಶುದ್ಧ ಮಾಡುಸ್ಥಿರವಾದ ಮನಸಿನ ಸೂತ್ರವಿಡಿದುಸ್ಥೀ(ಸ್ಥಿ)ತಿ ಉತ್ಪತ್ತಿ ಪ್ರಲಯ ಮೀರಿದ ಮುಹೂರ್ತದಲಿಕೇಸರಗಳ ಹಾಕಿದರು ಯೋಗಿಗಳು ಉಪ್ಪಾರ ಈಶ್ವರಣ್ಣ ಬಡಿಗೇರಬೊಮ್ಮಣ್ಣ ಕಟ್ಟಲೀ ಜಾಣರು ಸೃಷ್ಟಿರಚನಾ ಮುಟ್ಟಿತು ಮುಗಿಲಿಗೆ ದಟ್ಟಿಸಿತು ಭೂಮಿಗೆಪಟ್ಟದರಸನು ನಮ್ಮ ಗುರುರಾಯನು ಹರಹರಾ 16 ದಗಿಯ ಬೀಳಲಿ ಬೇಡದಾ(ದ)ಯದ ಮನೆಯನು ಗಳಿಸುದಿನ ದಿನಕ ಭಕ್ತಿಯಿಂದೀರ್ಘವಾಗಿದುಗುಣಿಸಿದ ಪ್ರೇಮಗಳುದೂರ ಬೀಳದ ಹಾಗೆದೇವರಿಗೆ ಅರ್ಪಿಸಿದೈವ ಪಡೆಯೊ ದೊರಕೊಂಬ ತಡವೇನುದೌಲಿತನ ಹೋದರೆದಂಭವೆಂಬುದು ಎಲ್ಲದಃ(ಹ)ನವಾಗಿ ದಾವ ದರಶನದೊಳಗೆ ದೇವದರ್ಶನ ಮೇಲು ನೀನ್ಯಾಕ ಕೊಳವಲ್ಲಿ ಏನು ಬಂತೋ ಹರಹರಾ... 17 ಧನಕೆ ಹೆಣಗಲಿ ಬೇಡಧಾರುಣಿಗಂಜ ಬೇಡಧಿಗಿ ಧಿಗಿಗೊಳ ಬೇಡಧೀರನಾಗೊಧುಗಿ ಧುಗಿಸಲಿ ಬೇಡಧೂಳಿ ಕೂಡಲಿ ಬೇಡಧೇನು ಕರೆವುತಲಿದೆ ಸಂತರಲ್ಲಿಧೈರ್ಯವನು ಬಿಡಬೇಡ ಧೊ(ದೊ)ರೆಗೆ ಶರಣೋಗ ಬೇಡಧೌತ ರಂಗದ ಬಿರುದುಧಂಮ ಧಂಮಿಸುತಧಾ(ಧಃ)ಹಕಿಲ್ಲ ಮೃತ್ಯುವಿನ ಸೋಂಕಿಲ್ಲ ಜನ್ಮದ ಏಕಾಂತದಲಿರುತಿಹ ಶಿವಶರಣನು ಹರಹರಾ 18 ನರದೇಹಿ ಆದುದಕೆನಾಗಭೂಷಣನ ಭಜಿಸು ನಮ್ಮನಿª6Éಲ್ಲರಿಗೆ ಮೋಕ್ಷ ನೀರ ಮುಣುಗಲಿ ಯಾಕೆನುಡಿಯ ಬಂಧನವ್ಯಾಕೆನೂರಾರ ಶರಣ್ಯಾಕೆ ಬೆಂಡಾಗುತನೇಮ ಕೊಳಬೇಕ್ಯಾಕೆನೈಷ್ಠಿಯ ಕಟ್ಟಲ್ಯಾಕೆನೊಗನ ಹೊತ್ತಾನಂತ ನೆನಿಸಲ್ಯಾಕೆನೌಸರದ (ನವಸಿಗರ) ಪರಿಯಾಕೆನಂಮಯ್ಯನಗಲಲ್ಯಾಕೆನಃ(ನಾ)ನಾತ್ವವನಳಿದರೆ ಅಷ್ಟೇ ಸಾಕು ಹರಹರಾ 19 ಪರಮ ಗುರುವಿಗೆ ಶರಣುಪಾಪನಾಶನೆ ಶರಣುಪಿರಿದು ಪರಿಣಾಮದ ದೊರೆಗೆ ಶರಣು ಪೀಠದರಸನೆ ಶರಣುಪುಣ್ಯ ಪುರುಷನೆ ಶರಣುಪೂತ ಪಾವನ ಮೂರ್ತಿ ಶರಣು ಶರಣು ಪೇತು ಪತಿಗೆ ಶರಣುಪೈಜ ಗೆದ್ದವಗೆ ಶರಣುಪೊಡವಿ ಕೈಲಾಸದ ನಿಧಿಗೆ ಶರಣುಪೌರೋಹಿತನೆ ಶರಣುಪಂಥ ದುರಿತನೆ ಶರಣುಪಃ(ಪಾ)ರ್ವತಿ ಕಾಂತನ ಪಾದಕ್ಕೆ ಶರಣು ಹರಹರಾ 20 ಫಲವ ಬಯಸಲಿ ಬೇಡಫಾಸಿ (ಪಾಶದಿ) ಬೀಳಲಿ ಬೇಡಫಿರ್ಯಾದಿಗಳ ಹಳಿತಲ ಬೇಡಫೀ (ಫಿ)ತವಿ ಮಾಡಲಿ ಬೇಡಫುಗಸಾಟಿ ಕೆಡಲಿ ಬೇಡಫೂರಸೊತ್ತಿತೆನಬೇಡ ಶಿವ ಶಿವಗೆ ಫೇಡಿ ಮಾಡಲಿ ಬೇಡಫೈಣ್ಯ ಹೂಡಲಿ ಬೇಡಫೋಡಣಿ ಕೊಡಬೇಡ ಸಮುದ್ರಕೆಫೌಗೊಂಡ ಹೂವಿನಫಂಗಡಿಯನೆ ತಂದುಪಃ(ಫಾ)ರ ಪರಮಾತ್ಮಂಗೆ ಅರ್ಪಿಸಯ್ಯ ಹರಹರಾ 21 ಭರವಸವು ನಿನಗೇನುಭಾಗ್ಯ ಬಂದೀತೆಂದುಭಿಕ್ಷೆ ಬೇಡುವಗಿನ್ನುಭೀತಿಯಿಲ್ಲ ಭುವನದೊಳಗಿದಿರಿಲ್ಲಭೂತಾಳ ಕೆಳಗಿರಲಿಭೇದವಿಲ್ಲದೆಭೈರವನು ಕಾವ ಭೋಜನಂಗಿರುತಿಹನುಭೌತ್ಯ ವ್ಯಾಳೆ ಬಂದದಕೆಭಂಗ ಬಡಿಸಿಲಕಿಲ್ಲ ಸಂಗ ಸಿಲುಕಿ ಭಃ(ಭಾ)ಲ ಲೋಚನ ಚಂದ್ರಶೇಖರನ ಸ್ಮರಣೆಗೆ ಭಾರನಿಳುಹಿ ಭೂಮಿಯ ಹೊರಗಾಗಿ ಹರಹರಾ 22 ಮರಣ ಬರುತದೆ ಕೊಮಾರಗಳ ಹಾಕುತಲಿಮಿ (ಮೀ)ರಲಿಕ್ಕಲಿದುಮೀ(ಮಿ)ಥ್ಯಾವಲ್ಲ ಮುನಿಯು ಆದರೆ ಏನುಮೂರು ಕಣ್ಣಿರಲೇನುಮೇರು ಸಹಿತಾಗಿದು ನುಂಗುತದೆ ಮೈಯ ತಾಳಿದ ಬಳಿಕಮೋಕ್ಷ ಪಡೆಯಲು ಬೇಕುಮೌನವ ಹಿಡಿದಂಗೆ ದೇಶ ಭಂಗಮಃ(ಮ)ಹಾ ಪ್ರಲಯಕೆ ಹೊಂದದ ಮಹಾತ್ಮಂಗೆ ಭಯವೇನುಮಹಾದೇವನ ಮೈಯ ಕೂಡಿಕೊಂಡ ಹರಹರಾ 23 ಯದಿಯ (ಎದೆಯ) ಬಲ್ಲಿದನಾಗುಯಾತ್ಯಾತಕಂಜದೆಯಿ(ಈ) ತನೆಯೀ(ಈ)ಶ್ವರನು ಈಶ ಗುಣದಿ ಯುವತಿ ಇದ್ದರು ಏ£4ಯೂ(ಯು)ಗದ ಅಂಜಿಕೆ ಏನುಯೇ(ಏ)ಸೊಂದು ಗ್ರಹಗಳು ಬಂದರೇನುಯೈ(ಐ)ದಿಸಿ ಸಾಯೋಜ್ಯಯೋಗಿಯಾದ ಬಳಿಕಯೌವನಾಗಿರುತಿರಲಿ ಬಹು ವೃದ್ಧನುಯಂ(ಎಂ)ಮ ಬಸವನ ತಮ್ಮನಾಗಲಿಕೆ ಪರಬೊಮ್ಮಯಃಕಾಕಸಾರೆ ನಿಮ್ಮಯೇಕಾಕನಂದ ಹರಹರಾ 24 ರಮಣ ನಾಯಕತೆಯರುರಾಗವನೆ ಮಾಡುವರು ಸ-ರಿಗದಲಿ (ಸರಿಗಮದಲಿ) ಹಾಡುವರುರೀತಿಯಿಂದರುಣಿ ಝಣಿಸುವ ತಂತಿರೂಪದ ಮೃದಂಗರೇಖ್ಯಕೊಳಗಾಗದೆರೈಷಕೂಡಿರೋಮಾಂಚ ಗುಡಿಗಟ್ಟಿರೌದ್ರಾವತಾರದಲಿರಂಗ ದಾರಿಗೆ ಸಿಲುಕಿರಃ(ರಾ)ಹಣ ಒದಗಿ ರಾಯಪಂಚಾಕ್ಷರವ ಪರಶಿವನ ಕೊಂಡಾಡಿವರವ ಪಡೆದರು ಪ್ರತ್ಯಕ್ಷವಾಗಿ ಹರಹರಾ 25 ಲವಲವಿಕೆ ನನಗೆ ಹುಟ್ಟಿಲಾವಕೆ ಹೆಣಗಿದೆಲಿಂಗವನು ಗಳಿಸಿದೆಲೀಲೆ ಗಮನೆಲುಪ್ತವಾದೀತೆಂದುಲೂಟನೆ ಮಾಡಿದೆಲೇಸು ಲೇಸೆಂದರು ಭಕ್ತರೆಲ್ಲ ಲೈಕ್ಯದ ಹೆಸರೇನುಲೋಕದಂತಾಗದೆಲೌಸಡಿಯಿಲ್ಲದೆಲಂಭತನವೇ ಶಂಭುಶಂಕರ ನಿಮ್ಮಲಃ(ಲಾ)ಹಣೆವು ನರಗುಂಟು ಲೋಹ ಪರಿಸಕೆ ತಾಸೋಂಕಿದಂತೆ ಹರಹರಾ 26 ವಶವಾದ ಪರಬ್ರಹ್ಮವಾಸವಾಗಿರಲಿಕ್ಕೆವಿಷಯ ತಪ್ಪಿಸಿದೆನುವೀ(ವಿ)ಪರೀತ ಕೇಳಾ ವು(ಉ)ದಾಸವಿಲ್ಲದೆವೂ(ಉ)ಪರತಿಯ ಹೊಂದದೆವೇದವನು ಫುಂದದೆವೈದಿಕನೆ ಓದಿದ ಫಲವೇನುವೌಂ(ವಂ)ಶಿತ ನಾಗದೆವಂಮನವ ಬೀರದೆ ದೊಡ್ಡತನವೇ ವಃ(ವೋಹ)ಳ ಸೋಹಳವುಂಟು ತಾಮಕರ ದಾಮ ನಂಟುವಾಸುದೇವನ ಗಂಟು ಕಟ್ಟಿಕೊಳ್ಳಿ ಹರಹರಾ 27 ಶಮದಮಗಳಿಂದಶಾಶ್ವತ ಪದಕೇರಿಶಿವನ ಒಲಿಸಿಕೊಂಡಶೀಲಶುಂಡಶೂರ ನಿರ್ಧಾರ ಬಹು ಮೇಲುಳ್ಳವನುದಾರಶೇರಿ ಬಂದನುಶೈವ ಮಾರ್ಗ ಹೊಂದಿಶೋಭನದ ಮನೆಯಿಂದಶೌ(ಸೌ)ಭಾಗ್ಯವಾಯಿತುಶಂಭು ಶಂಕರ ಶರಣು ಸಹಸ್ರ ಶರಣುಶಃ(ಶ)ರಚಾಪವಿಲ್ಲದೆ ಕಾದಿ ಶರಣನು ಗೆದ್ದ ತಿಮಿರನಿದ್ರಿ ಕಣ್ಣು ತೆರೆದ ಹರಹರಾ 28 ಸಕಲ ಶಾಸ್ತ್ರವನೋದಿಸಾಕಾರ ತಿಳಿಯದು ನಿರಾಕಾರ ಎಂಬುದು ಬಹಳ ದೂರಸಿದ್ಧವಾಗಿದ್ದದ್ದುಸೀ(ಸಿ)ಕ್ಕದು ಕೈಯೊಳಗೆಸುಳವಿಲ್ಲ ಕಳವಿಲ್ಲಸೂಕ್ಷ ಘನವು ಸೇರಿ ಬಾರದ ನುಡಿಗೆಸೈರಾವೈರಾವೆಲ್ಲಸೊನೆ ಸೊನೆ........ಸನ್ನಿಹಿತನುಸೌರಸಾ(ಸುರಸ)ವಾದನುಸಂಮ್ಯಗ್ ಜ್ಞಾನವು ಬಲ್ಲಸಃ(ಸಹ)ಜಾನಂದ ತುಂಬನು ಲೌಕಿಕಕ್ಕೆ ಹರಹರಾ 29 ಹರ ಹರಾ ಎನುತಲಿ ಶಿವನಹಾಡಿಕೊಂಡೆಹಿತವು ತೋರಿತು ಘನಾಹೀ(ಹಿ)ತಕಾರಿಗೆಹುಗವರಿ ಕೇಳೊಲ್ಲಹೂ(ಹು)ಸಿಯ ತೀರ್ಥ3ಮಿಂದುಹೇತುವರ್ಜಿತನೆಂದು ಫಲವು ಕೊಂಡಹೈಯೆಂದು ನಿಂತಿತುಹೊಂಗಲ್ಲವಾ ಹಾಡುಗಳುಹಂಸ ಅರಿತುದಿಲ್ಲ ಬಲ್ಲ ತನವೇ ಹಮ್ಮು ನಡಿಯದು ಇಲ್ಲಿಹಃ(ಹಾಹಾ)ಕಾರ ಮಾಡಿದರೆ ಹಸಿದವನು ಉಣಬೇಕು ಬ್ರಹ್ಮರಸವ ಹರಹರಾ 30 ಕ್ಷಣ ಕ್ಷಣಕೆ ಶಿವನಿನ್ನಕ್ಷಾ (ಖ್ಯಾ)ತಿ ಕೊಂಡಾಡಿದಕ್ಷಿತಿಯ ಮೇಲಿಹುದುಕ್ಷೀರ ಉದಧಿಕ್ಷುದ್ರ ಕರ್ಮಿಗಳುಕ್ಷೂ(ಕ್ಷು)ದ್ರನೆ ಎನಿಸುವರುಕ್ಷೇಮ ಕಲ್ಯಾಣವ ಪಡೆಯರೆಂದೂಕ್ಷೈ(ಕ್ಷಯ) ವ್ಯಾಧಿ ಹೊಡೆದವನುಕ್ಷೋಭೆಯನು ಬಡುವನುಕ್ಷೌತಿಯನು ಕೂಡುತಿಹ ಜನ್ಮ ಜನ್ಮಕ್ಷಂ(ಕ್ಷೇ)ಮ ಸಾಯೋಜ್ಯಕ್ಕೆಕ್ಷಃ(ಕ್ಷಾ)ಳ ಸಕಲಪಾಪ ಪರಮಾತ್ಮ ಗತಿಗೆ ಕೋಪಪರಮ ಸಾಧು ಹರಹರಾ 31 ಗುರು ತ್ರಿಪುರಾಂತಕನಅರುವಿನ ಪದವಿದುಅರಿತವಗೆ ಅರಿದು ಅಕ್ಷರ ಮಾಲೆಕೊರತೆ ಆದ ಮಾತಿಗೆಹೊರತಾದ ಮಾತುಗಳಮುರುತಾದ ವೇದಗಳು ಗುರು ಗಮ್ಯವುಹಿರಿಯರಿಗೆ ಸಂಬಂಧಪರಕೆ ಪರಮಾನಂದಕರದ ಅಮೃತ ಬಿಂದು ಪ್ರಕಾಶ ತಾನು ಶರಣರಿಗೆ ಇದು ಬೇಕು ಚರಣ ಸಾರಿದ ಟೀಕುಪರಬ್ರಹ್ಮದಾ ತೂರು ತೂಗಿಕೊಳ್ಳಿ 32 ಹರಹರಾ ಮಹಾದೇವ ಶಿವ ಶಿವಾ ಮಹಾದೇವಶಂಕರಾ ಮಹಾದೇವ ದೇವ ದೇವಾ ||
--------------
ಸಿದ್ಧಗುರುತ್ರಿಪುರಾಂತಕ
ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ಸಿದ್ಧಗುರುತ್ರಿಪುರಾಂತಕ
ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ಪ ಪನ್ನಗಾಸನ ಧೊರೆಯೆ ಸನ್ನುತಾಂಘ್ರಿಯ ಹರಿಯೆ ಅ.ಪ. ಅವನಿಯೊಳು ಪುಟ್ಟಿಸುವ ಭವದೊಳಗೆ ನೂಕುವವಕಿವಿ ಮೂಗು ಕಣ್ಣಿವದನವ ತ್ವಚೇಂದ್ರಿಯದಿ ಅವಿತು ವ್ಯಾಪ್ತತನಾಗಿ ವ್ಯವಹರಿಸುವವ ನೀನೇಅವಸರದಿ ಕಾಯುವ ದೇವ ನೀನೆಯೊ 1 ತಿಳಿಯುವವ ನೀನೆಯೊ ತಿಳಿಸುವವ ನೀನೆಯೊಗಳಿಸುವವ ನೀನೆಯೊ ಬಳಸುವವ ನೀನೆಯೊಬೆಳಿಸುವವ ನೀನೆಯೊ ಕಳೆಯುವವ ನೀನೆಯೊಕೊಳುವವನು ನೀನೆಯೊ ಕಸಿಯುವವ ನೀನೆಯೊ 2 ಅಂತರಂಗದಿ ಅಡಗಿನಿಂತು ಪ್ರೇರಿಸುವನಂತದ್ವಂದ್ವದ ನಟನೆ ಸ್ವಂತತನವೆನಗೆಲ್ಲಿಸಂತರನು ಉದ್ಧರಿಸಲಿಂತು ಭೂಮಿಗೆ ಬಂದುನಿಂತ ಗದುಗಿನ ವೀರನಾರಾಯಣನು ನೀನೆ 3
--------------
ವೀರನಾರಾಯಣ
ಅಕ್ಕ ಕೇಳೆ ಪಾಪಮಾಡಿ ಲೆಕ್ಕವಿಲ್ಲದೆ ಯಮನ ಕೈಯ್ಯದುಃಖದಲ್ಲಿ ನರಕದೊಳಗೆ ಮುಳುಗುವವರ ಕಡೆ ಹಾಯ್ವುದೆಂತೋ ಪ ನೀರಗುಳ್ಳೆಯೆಂದು ತನುವ ನಿತ್ಯವಲ್ಲವೆಂದು ತಿಳಿಯರುಘೋರ ನೀಚತನವ ಮಾಡುವವರ ಕಡೆ ಹಾಯ್ವದೆಂತೋ1 ಹಿಂದೆ ಮುಂದೆ ನುಡಿಯುತಿಹರು ನಿಂದೆ ಮಾತನಾಡುತಿಹರುಸಂದೇಹಕ್ಕೆ ಒಳಗಾದವರು ಕಡೆ ಹಾಯ್ವದೆಂತೋ ಕೊಟ್ಟ ಸಾಲವನ್ನೇ ಕೊಡರು ಮತ್ತೆ ಆಣೆ ಎಂಬರಯ್ಯಹೆತ್ತ ಮಗನನು ದಾಟುವವರು ಕಡೆ ಹಾಯ್ವದೆಂತೋ 3 ತಂದೆ ತಾಯಿ ಹೊರಡಿಸುವರು ತಂದು ಒಳಗೊಳಗೇ ತಿನ್ನುವವರುಮಂದಿಗಳ ಬಯ್ಯುವವರು ಕಡೆ ಹಾಯ್ವದೆಂತೋ4 ವಿಧ ವಿಧದ ದೇವರನ್ನು ಮುದದಿ ಕಟ್ಟಿಕೊಂಡಿಹರುಚಿದಾನಂದ ಬಗಳೆಯ ಅರಿಯದವರು ಕಡೆ ಹಾಯ್ವದೆಂತೋ5
--------------
ಚಿದಾನಂದ ಅವಧೂತರು
ಎಂದಾದರೊಂದು ದಿನ ನಿಂದು ನೋಡುವೆ ನಿನ್ನ ಸುಂದರ ಪದಾಂಬುಜವ ಇಂದಿರೇಶ ಪ ಬಂದ ಸುಖ ದು:ಖಗಳ ಒಂದಾಗಿ ತಿಳಿಯುತಲಿ ತಂದೆ ಗೋವಿಂದ ಸಲಹೆಂದು ನಂಬಿರುವಾಗ ಅ.ಪ ಮಾ ಮನೋಹರಾ ನಿನ್ನ ನಾಮ ಭಜನೆಯ ಗೈದು ಕಾಮಿತಾರ್ಥಂಗಳನು ನಾ ಮರೆಯುತೇ ನಾಮಾಳ್ಪ ಕರ್ಮಗಳ ನೇಮದಿಂದಲಿ ಗೈದು ರಾಮಾರ್ಪಣಾ ಎಂದು ಪ್ರೇಮದಿಂದರ್ಪಿಸಲು 1 ಬಂದ ಅಭ್ಯಾಗತರಿಗೊಂದು ಪಿಡಿ ಅನ್ನವನು ಎಂದೀಯಲೀವೆಯೋ ಅಂದು ಹರಿದಿವಸ ಎಂದೀಯಲಾರೆಯೋ ಅಂದೆನಗುಪೋಷ್ಯವನು ಸಂದೇಹವಿಲ್ಲದೀಯೆಂದು ನಂಬಿರುವಾಗ2 ದೊರೆಯದಿಹ ವಸ್ತುಗಳು ಹರಿಸಮರ್ಪಣವೆಂಬೆ ದೊರೆತ ವಸ್ತುಗಳೆಲ್ಲ ಹರಿಕರುಣವೆಂಬೆ ಗರುಡವಾಹನ ನಿನ್ನ ಶರಣು ಹೊಕ್ಕಿರುವಾಗ ಕೊರತೆ ಏನಿಲ್ಲ ಮಾಂಗಿರಿ ರಂಗವಿಠಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎನ್ನ ಬಿನ್ನಪ ಕೇಳೊ ಘನ್ನ ಮಹಿಮನೆ ಭವ ಬನ್ನ ಬಡಿಸುತಲಿಹುದೋ ಸ್ವಾಮಿ ಪ ಇನ್ನು ನೀ ಪೊರೆಯೊ ಅಪನ್ನಜನರಾಪಾಲ ಮನ್ನಿಸಿ ಕಾಯೊ ಸ್ವಾಮೀ ಪ್ರೇಮೀ ಅ.ಪ ಆಗಾಮಿಸಂಚಿತಭೋಗಂಗಳು ಎನ್ನ ಯೋಗ ಮಾರ್ಗಕೆ ಪೋಗದಂತೆ ಹೇಗೆ ಮಾಡಿ ಙÁ್ಞನನೀಗೆ ನಿನ್ನಲಿ ಮನಸು ಯೋಗವನು ಮಾಡಗೊಡದೇ ಜಾಗುಮಾಡುತ ಪರಮಭಾಗವತರಲಿಸದಾ ಆಗಮಗಳ ತಿಳಿಯದೇ ಹೀಗಾಗಿ ನಾನು ಅಯೋಗ್ಯನೆನಿಸೀ ಜಗದಿ ಕಾಗಿಯಾಗಿ ತಿರುಗಿದೇ ಸ್ವಾಮಿ 1 ಹೆತ್ತ ಈ ಮೊದಲು ಮತ್ತಾರು ಜನರಿಲ್ಲ ಹೊತ್ತಿಗೇ ಕರೆದನ್ನವೀವರಿಲ್ಲಾ ಗೊತ್ತು ಸ್ಥಳಗಳು ಇಲ್ಲ ವೃತ್ತಿ ಸ್ವಾಸ್ಥ್ಯಗಳಿಲ್ಲ ಚಿÉತ್ತ ಶುದ್ಧಿಯು ಮೊದಲೆ ಇಲ್ಲಾ ಎತ್ತ ಪೋದರೆನ್ನ ಇತ್ತ ಬಾಯೆಂತೆಂದು ಹತ್ತಿರ ಕರೆವೊರಿಲ್ಲ ಎತ್ತ ಪೋದರೆನ್ನ ಮತ್ತೆ ಪಾಲಿಪರ್ಯಾರೊ ಉತ್ತಮನೆ ನೀನೆ ಕಾಯೋ ಸ್ವಾಮೀ 2 ಗರ್ಭವಾಸದಕಿಂತ ದುರ್ಭರಾಭವತಾಪ ನಿರ್ಭರಾವಾಗಿಹುದೋ ಅರ್ಭಕಾಮತಿಯಿಂದ ಅಭರ್Àಟಾ ಕಾರ್ಯವನು ನಿರ್ಭಯದಿ ಮಾಡಿದೆನೊ ಗರ್ಭ ನಾ ದೂತ ನೀ ನಿರ್ಭಯವ ಕೊಡದಿರಲು ಲಭ್ಯವೇ ಸರ್ವಕಾರ್ಯಾ ಲಭ್ಯ ಶ್ರೀಪತಿ ನೀನು ಲಭ್ಯನಾಗದಿರೆ ವೈ ದÀರ್ಭಿರಮಣಾ ಕಷ್ಟವೋ ಸ್ವಾಮಿ 3 ಉಡುವ ವಸ್ತ್ರಗಳಿಲ್ಲ ಒಡಲಿಗಶನವು ಇಲ್ಲ ಕೊಡುವ ಧನ ಮೊದಲೆ ಇಲ್ಲ ಪೊಡವಿಯೊಳು ನಾನತೀ ಬಡವನಲ್ಲದೆ ಮಹಾ ಕಡು ಪಾಪಿಯಾದೆನಲ್ಲೋ ತುಡುಗುತನದಲಿ ಪರರ ಮಡದಿಯರ ನಾ ಬಲು ದೃಢಮನಸಿನಿಂದ ಬಯಸಿ ಧೃಢ ಭಕುತಿಯಿಂದ ಅಡಿಗೆರಗದಲೆ ನಾನು ಪೊಡವಿಭಾರಾದೆನಲ್ಲೋ ಸ್ವಾಮೀ 4 ಓದಿ ಬರೆಯಾಲಿಲ್ಲ ವೇದ ಪಠಿಸಾಲಿಲ್ಲ ಮೋದತೀರ್ಥರ ಶಾಸ್ತ್ರ ತಿಳಿಯಲಿಲ್ಲಾ ವಾದಶಾಸ್ತ್ರಗಳಿಲ್ಲ ಭೇದಪಂಚಕವಿಲ್ಲ ಸಾಧನದ ಮಾರ್ಗವಿಲ್ಲ ಖೇದಗೊಳಿಸುವ ಭವದ ಹಾದಿ ತಿಳಿಯದೆ ನಾನು ಮೋದಕÀರವೆಂದು ಅಲ್ಲೀ ಸಾದರದಿ ಬಿದ್ದು ಆಮೋದಬಡುತಲಿ ದ್ವಿ ಪಾದಪಶು ನಾನಾದೆನಲ್ಲೋ ಸ್ವಾಮೀ 5 ಸತಿಸುತ ಮೊದಲಾದ ಅತಿಹಿತ ಜನರೆನ್ನ ಸತತ ಸಂತ್ಯಜಿಸಿಹರೋ ವಿತತವಾಗಿಹ ಮಹಾಪತಿತದಾರಿದ್ರ್ಯನ್ನ ಅತಿಬಾಧೆ ಬಡಿಸುತಿಹದೋ ಇತರ ಜನರೂ ಎನ್ನ ಅತಿದÀೂರದಲಿ ನೋಡಿ ಅತಿಹಾಸ್ಯ ಮಾಡುತಿಹರೋ ವ್ರತತಿಜಾಂಬಕÀ ನಿನ್ನ ನತಿಸಿ ಬೇಡಿಕೊಂಬೆ ಸತತ ನೀ ಪಾಲಿಸೆಂದೂ ಸ್ವಾಮೀ 6 ತಂದೆ ತಾಯಿಯೂ ನೀನೆ ಬಂಧು ಬಳಗವು ನೀನೆ ಇಂದು ಸಿಂಧು ಒಳಗೆ ಬಿದ್ದೆ ಮುಂದಕ್ಕೆ ಕರೆದು ಕಾಯೋ ಸುಂದರಾಂಗನೆ ಕೃಪಾಸಿಂಧು ನೀ ಬಿಡೆ ಎನ್ನ ನೊಂದದಲೆ ಸಲಹೊರ್ಯಾರೋ ಸ್ವಾಮಿ 7 ಹೊಟ್ಟೆಗಿಲ್ಲದೆ ನಾನು ಬಟ್ಟೆ ಹಾಸೀ ನರರಿ ಗ್ವಟ್ಟರಿಸಿ ಒದರುತಿಹೆನೋ ಪುಟ್ಟದಿರಲೂ ಅನ್ನ ಸಿಟ್ಟಿನಿಂದಾ ನಾಯಿ ಬೆಟ್ಟಕ್ಕೆ ಒದರಿ ತಾನೂ ಹೊಟ್ಟೆಯುಬ್ಬೀ ಕೊನೆಗೆ ಹೊರಳಿ ಹೊರಳಿ ತಾನು ಸುಟ್ಟ ಬೂದಿಲಿ ಬೀಳ್ವ ತೆರದೀ ಒಟ್ಟು ಮಾತಿದು ಕೃಪಾವಿಟ್ಟು ನೀ ಎನ್ನನು ಥsÀಟ್ಟನೇ ಕರಪಿಡಿದು ಕಾಯೋ ಸ್ವಾಮೀ 8 ನಿನ್ನ ದಾಸನು ಆಗಿ ಅನ್ಯರನ ಬೇಡಿದರೆ ಘನ್ನತೆಯು ನಿನಗುಂಟೇ ಘನ್ನ ಜನಪನ ತನುಜ ಇನ್ನು ದೈನ್ಯದಿ ತಾನೆ ಅನ್ಯರನು ಬೇಡುವುದು ಉಂಟೇ ಚೆನ್ನ ಸುಮನಸ ಧೇನು ಮುನ್ನ ಮನೆಯೊಳಿರೆ ಗೋ ವನ್ನು ಬಯಸುವರುಂಟೇ ಇನ್ನು ಪೇಳುವದೇನು ಎನ್ನಭವಣೇ ತಿಳಿದು ಇನ್ನು ಕಾಯಲಿ ಬೇಕೋ ಸ್ವಾಮೀ ಶುದ್ಧಮಾರ್ಗವ ಬಿಟ್ಟು ಬದ್ಧ ಭವಸಾಗರವೆ ಉದ್ಧಾರ ಮಾಳ್ಪದೆಂದೂ ಶಿದ್ಧಜನರಾ ಸೇವೆಗೆ ಬದ್ಧನಾಗದೆ ದುರಾ ರಾಧ್ಯ ಜನರನ್ನು ಭಜಿಸೀ ಉದ್ಧರಿಸುವೊ ಶ್ರೀ ಮಧ್ವಸಿದ್ಧಾಂತದ ಸೂ ಪದ್ಧತಿಯನ್ನೆ ಬಿಟ್ಟೂ ಸಿದ್ಧಮೂರುತಿ ಎನ್ನ ¥ದ್ಧಗಳ ಎಣಿಸದಲೆ ಉದ್ಧಾರಮಾಡೊ ಸ್ವಾಮೀ ಪ್ರೇಮೀ 10 ದಾತ ನೀನೇ ಎನ್ನ ಮಾತುಲಾಲಿಸಿ ಭವದ ರತಿಯನ್ನೇ ಬಿಡಿಸಿ ಕಾಯೋ ಪೊತನಲ್ಲವೆ ನಿನಗೆ ಆತುರದಿ ನಾನೀ ರೀತಿಯಿಂದಲಿ ಪೇಳಿದೆ ಯಾತರಾ ಮಾತೆಂದು ನೀ ಪ್ರೀತಮನಕೇ ತರದೆ ತಾತನೂಕೀ ಬಿಟ್ಟರೆನ್ನಾ ಸೋತುಬಂದಾ ನಿನಗೆ ಆತುರಾವ್ಯಾಕೆಂದು ನೀತವಾಗೀ ಕಾಯ್ವರಾರೋ ಸ್ವಾಮೀ 11 ಮಾತೆ ಮಕ್ಕಳಿಗೆ ವಿಷದಾತೆಯಾಗೇ ತಂದೆ ಪೋತರ ಮಾರಿದಾರೆ ದಾತನಾದಾ ರಾಜ ಆತುರಾದಿಂದಲಿ ನಿಜ ದೂತರರ್ಥಪಹಾರಮಾಡೆ ನೀತಸತಿಯು ತನ್ನ ನಾಥನಾಯು ತಾನೆ ಘಾತವನೆ ಮಾಡಿದಾರೆ ನೀತವೇ ನಿನಗಿದಕೆ ಯಾತರಾ ಚಿಂತೆ ಈ ಮಾತಿನಂತೆ ನಿನಗೆ ಪ್ರೀತೇ ಸ್ವಾಮೀ ಎಷ್ಟು ಪೇಳಲಿ ಎನ್ನ ಕಷ್ಟರಾಶಿಗಳೆಲ್ಲ ಶ್ರೇಷ್ಟವಾಗಿರುತಿಹವೊ ಸ್ವಾಮೀ ದುಷ್ಟನಾದರು vನ್ನ ಭ್ರಷ್ಟಮಗನನು ತಾಯಿ ಅಟ್ಟೀಸೂವಳೆ ಅಡವಿಗೆ ಎಷ್ಟು ಕೆಟ್ಟವ ನಾನಾರಿಷ್ಟನಾದರು ಕೃಪಾ ದೃಷ್ಟಿಯಿಂದಲಿ ನೋಳ್ಪಳೋ ನಷ್ಟದೈವ ನಾನರಿಷ್ಟ ಅಙÁ್ಞನಿ ಕರುಣಾ 13 ದೃಷ್ಟಿ ಯಿಂದಲಿ ನೋಡಿ ಸಲಹೋ ಸ್ವಾಮೀ ಕುಟಿಲ ಖಳಮತಿಯು ನಟಿನೆಮಾಡುತ ಭವಲಂ ಪಟದೊಳಗೆ ಬಿದ್ದಿಹೆನೂ ಸ್ವಾಮೀ ಶಠÀತರನು ನಾನತಿಕಠಿಣಮನಸೀನಿಂದ ಧಿಟಜ್ನಾನಿದ್ರೋಹಗೈದೆ ದಿಟರಿಲ್ಲ ಎನಗೆಂದು ನಟಿಸುತ್ತ ಸರ್ವದ ಅಟನೆಮಾಡಿದೆ ಸರ್ವರಲ್ಲಿ ಪಟುತರನು ನಾನೆಂದು ಧಿಟಗುರುಜಗನ್ನಾಥ ವಿಠಲ ದೇವಾ ನಿನ್ನ ಮರೆದೆ ಸ್ವಾಮೀ 14
--------------
ಗುರುಜಗನ್ನಾಥದಾಸರು
ಗೆಲಿಯಬಲ್ಲವರಾರು ಮೂಜಗದಿ ಪಣೆಯ ಬರಹ ಗೆಲಿಯಬಲ್ಲವರಾರು ಮೂಜಗದಿ ಪ ಗೆಲಿಯಬಲ್ಲವರಾರು ಮೂಜಗದೊಳಗೆ ಬಲ್ಲಿದರೆಂಬರೆಲ್ಲರು ಜಲಜಪೀಠನ ಲಿಪಿಗೆ ಸಿಲ್ಕಿ ತೊಳಲಿ ಬಲಳಿದರ್ಹಲವು ಪರಿಯಲಿ ಅ.ಪ ಒಂದೇ ಧರ್ಮದಿಗೂಡಿ ತಾ ನಡೆದ ವಿಕ್ರಮನೆಂಬುವ ಒಂದೆ ಕೊಡೆಲಿಡೀಭುವನವಾಳಿದ ಸದ್ಧರ್ಮ ತನದಿಂ ದೊಂದೆ ಆ ಸುಮರೂಪ ಪ್ರಜರ ಪಾಲಿಸಿದ ಉದ್ದಂಡನೆನಿಸಿದ ಒಂದು ಪಾಪಾಚರಣೆಗೈಯದೆ ಒಂದು ಬಿಡಿದಖಿಲ್ವಿದ್ಯವರಿದ ಒಂದು ಅರಿಯದೆ ತನ್ನ ಕೈಕಾಲು ಒಂದೇ ಮಾತಿಗೆ ಕಳೆದುಕೊಂಡ 1 ಎರಡುಹೊತ್ತು ಸತ್ಯಮಂ ಬಿಡದ ಸುಚಿಂತದಿರುವ ಎರಡನೇ ಗುಣ ಸ್ವಪ್ನದರಿಯದ ನಳಚಕ್ರವರ್ತಿ ಎರಡು ತಿಳಿಯದೆ ಜೂಜನಾಡಿದ ಮಹವಿಪಿನಕೈದಿದ ಎರಡು ಮಕ್ಕಳ ವನದಿ ಅಗಲಿದ ಎರಡನರಿಯದೆ ಮಲಗಿದರಸಿಯ ಎರಡನೆಬಗೆದಡವಿಯಲಿ ಬಿಟ್ಟು ಎರಡನೇರಾಯನಶ್ವ ತಿರುವಿದ 2 ಮೂರು ಜಗ ಅರೆಲವದಿ ತಿರುಗುವ ದಿನದಿನವುಬಿಡದೆ ಮೂರುಮೂರ್ತಿದರ್ಶನವ ಪಡೆಯುವ ಆ ಪರಮಪಾವನ ಮೂರು ಕಾಲದ ಜ್ಞಾನ ಬಲ್ಲವ ನಾರದನೆಂಬುವ ಮೂರುಮಂದಿ ಶಕ್ತಿಯರಿಗೆ ಮೂರು ಬಟ್ಟೆಯ ಸುದ್ದಿ ಪೇಳಿ ಮೂರು ಮೂರ್ತಿಗಳುಪಾಯನರಿಯದೆ ಮೂರಿಪ್ಪತ್ತು ಮಕ್ಕಳ್ಹಡದ 3 ನಾಲ್ಕುಯುಗ ಪ್ರಮಾಣಗಳ ತಿಳಿದ ಬ್ರಹ್ಮನುಬಿಡದೆ ನಾಲ್ಕುವೇದಗಳ್ಹಸ್ತದೋಳ್ಪಿಡಿದು ವಿಧವಿಧದಿ ಎಂಭತ್ತು ನಾಲ್ಕುಲಕ್ಷಜೀವರಾಶಿಗಳ ಬರಿದೆ ಉತ್ಪತ್ತಿಗೈದು ನಾಲ್ಕುಭುಜನ ಸುರನೆಂದೆನಿಸಿ ನಾಲ್ಕು ವಿಧ ಮತಿವಂತನಾದವ ನಾಲ್ಕು ಒಂದು ಮುಖ ಮೊದಲಿಗಿರ್ದನು ನಾಲ್ಕೆ ಮುಖದವನೆನಿಸಿಕೊಂಡು 4 ಐದುಬಾಣನಪಿತನಸಖನಾದ ಉರಿನೇತ್ರ ಬಿಟ್ಟು ಐದುಬಾಣನ ಭಸ್ಮ ಮಾಡಿದ ಅಪಾರ ಶಂಭೋ ಐದು ಒಂದು ಮುಖದವನ ತಾ ಪಡೆದ ಹರಿಕರುಣದಿಂದ ಐದು ಒಂದು ಮುಖದವನಿಂ ತಾರಕ ನೈದುವಂದುದಲ್ಲೆ ಸೀಳಿಸಿ ದೈದುತತ್ವಕಾಲಯೆನಿಸಿದ ಐದುಮುಖಸ್ಮಶಾನ ಸೇರಿದ 5 ಆರು ಎರಡೈಶ್ವರ್ಯಗಳಲೊಳ ವೈಕುಂಠನಾಯಕ ಆರು ಎಂಟುಲೋಕಗಳ ಪರಿಪಾಲ ಬಿಡದೇಳು ಇಪ್ಪತ್ತು ಆರುಕೋಟಿ ಅಮರಾದಿಗಳ ಮೂಲ ಮಹಮಂತ್ರ ಜಾಲ ಆರುನಾಲ್ಕು ಭುಜನ ಮೊರೆ ಕೇ ಳಾರುನಾಲ್ಕು ಶಿರನ ವಧಿಸಿದ ಆರುನಾಲ್ಕರಗಧಿಕನೆನಿಸಿ ಆರುನಾಲ್ಕವತಾರ ತಾಳಿದ 6 ಆರಿಗಾದರು ಬಿಡದೀ ಬರವಣಿಗೆ ಬಿದ್ದಂತೆ ಫಲಿಸಿತು ತೀರಲಿಲ್ಲದಂತಂಥ ಹಿರಿಯರಿಗೆ ಸಾಧ್ಯದಪ್ಪಿ ಮಹ ಘೋರ ಬಡಿಸಿತು ಸರ್ವ ಶಕ್ತರಿಗೆ ಬ್ರಹ್ಮನಸುಡಗಿ ವಾರಿಜನು ಬರೆದ ಬರೆಹ ಮೀರಿ ನಡೆದೇನೆಂದರಿನ್ನು ಸಾರಮೋಕ್ಷಕ್ಕಧಿಪ ನಮ್ಮ ಧೀರಪ್ರಭು ಶ್ರೀರಾಮ ಬಲ್ಲ 7
--------------
ರಾಮದಾಸರು
ತಿಳಿಯ ಬಲ್ಲೆನೆ ನಾನಿನ್ನ ವೆಂಕಟರಮಣ ಪ ತಿಳಿಯ ಬಲ್ಲೆನೆ ನಿನ್ನ ನಳಿನಭವಾದ್ಯರಿ ಗಳವಡಿಯದ ಪಾದ ಪಾದ ಭಜನೆ ಬೇಡಿದೆ ಕೃಪಾಸಿಂಧು ನಂಬಿದೆ ನಿನ್ನ ಸುಜನವಾರಿಧಿ ಶರದೇಂದು ಪಾಲಿಸು ಎನ್ನ ನಿಜವಾಗಿ ಪೇಳುವೆ ವೃಜಿ£ಮರ್ದನನೆಂದು 1 ಎಡಬಲದಲಿ ನಿನ್ನ ಮಡದೇರ ಒಡಗೂಡಿ ಒಡಲನಾಮಕವಾಗಿ ಒಡಲೊಳಿದ್ದನ್ನವ ವಡಬಾಗ್ನಿಯೊಳುನಿಂತು ಜಡÀಜಸಂಭವಸುರ ಗಡಣ ಕೆ ನೀಡುತ್ತಾ ಒಡೆಯನೆನಿಸಿ ಭವ ನಿತ್ಯ ಒಡೆಯ ಪುಷ್ಕÀರಣಿಕೂಲನಿಲಯ ಜಗ ದ್ವಡೆಯ ಎನ್ನನು ಪೊರೆ ತಡವ್ಯಾಕೊ ಸಿರಿಲೋಲ2 ಸಿದ್ಧರಾಮಶೆಟ್ಟಿ ಶುದ್ಧಸ್ವರೂಪನೆ ಮುದ್ದುಮೋಹನ ಮುಖಕೆ ತಿದ್ದಿತೀಡಿದನಾಮ ಶುದ್ಧ ಭಕ್ತರನ್ನೆಲ್ಲ ಮುದ್ದುಗೊಳಿಸುವಂಥ ಮುದ್ದಾದ ಮುಖದಲ್ಲಿ ಎದ್ದು ಕಾಣುವ ನಗೆ ಪೊದ್ದುಕೊಂಡಿಹ ನಾನಾ ಆಭರಣದಿಂದಲಿ ಎದ್ದು ಬರುವ ನಿನ್ನ ಪ್ರದ್ಯೊತನಿಭ ಮೂರ್ತಿ ವಾಸುದೇವ ಮದ್ಹøದಯಗತಬಿಂಬ ಸಿದ್ಧಗುರುಜಗನ್ನಾಥ ವಿಠಲರೇಯ 3
--------------
ಗುರುಜಗನ್ನಾಥದಾಸರು
ನಿತ್ಯ ನಿರಂಜನ ವಸ್ತುವಾದವ ಪ ಉತ್ತಮ ದೇಹದಿ ಬಂದೂ | ವಯೋವ್ಯರ್ಥವಾಯಿತು ಹಾಯೆಂದೂ ||ಮಿಥ್ಯಾ ವಿಷಯದಿ ಬೆಂದೂ |ನಿತ್ಯಾನಿತ್ಯ ವಿಚಾರಿಸಿ ತಿಳಿದವ 1 ವೇದೋಪನಿಷದಗಳಿಂದ ಬಹು |ಸಾಧಿಸಿ ತಿಳಿಯದರಿಂದ ||ಮೋದದಲ್ಲಿಹ ಸ್ವಾನಂದ |ತದ್ಬೋಧದಿ ಪರಮಾನಂದದಿ ರಮಿಪನು 2 ಜನ್ಮ ಮರಣ ಭಯ ನೀಗಿ |ಘನ ಉನ್ಮನಿ ಸ್ಥಾನದಿ ತೂಗಿ ||ತನ್ಮಯವೇ ತಾನಾಗಿ |ಚಿನ್ಮಯ ರಾಮನೊಳೈಕ್ಯವ ಪಡೆದವ 3
--------------
ಭೀಮಾಶಂಕರ
ಪಾಹಿ ಕೃಷ್ಣ ಮಹಿಪತಿ ಮಧುರೆಗೆ ಪೋಗೋದೇನೊ ಕಾರಣ ಯದುಕುಲನಾಥ ಪಾಹಿ ಕೃಷ್ಣ ಮಹಿಪತಿ ಪ ಮಧುವೈರಿ ತಾ ಬ್ಯಾಗ ಮಧುರಾಪಟ್ಟಣದಾರಿ ಹಿಡಿದಿರೆ1 ದಧಿ ಮಥನವ ಮಾಡಿ ಕದವ ತೆಗೆದು ಕಂಡರು ಬ್ಯಾಗ 2 ಮಿಂಚಿನಂತ್ಹೊಳೆವೊ ವಿರಿಂಚನಯ್ಯನ ರಥ ಚಂಚಲಾಕ್ಷಿಯರು ನೋಡುತಲಾಗ 3 ಬನ್ನಿರೆ ಬನ್ನಿರೇ ಪನ್ನಂಗಶಯನನ ಬೆನ್ನ್ಹತ್ತಿ ನಾವು ಹೋಗುವೊಣೀಗ 4 ಫುಲ್ಲನಾಭನೆ ಮತ್ತೆಲ್ಲಿಗೆ ಪಯಣವೊ ಎಲ್ಲ ವಾರ್ತೆಗಳ್ಹೇಳೊ ನಮಮುಂದೆ 5 ನಂದಗೋಪನ ಬುದ್ಧಿ ಮಂದವಾಯಿತೇನೊ ವೃಂದಾವನವ ಬಿಟ್ಟು ಕಳಿಸುವ 6 ಕೂಸೆಂದು ನಿನ್ನ ಮುದ್ದಿಸುವೊ ಮೋಹಗಳೆಲ್ಲ ಬ್ಯಾಸರಿಕ್ಯಾಯ್ತೇನೆಶೋದೆಗೆ 7 ಸಾಧುಗೋವ್ಗಳನೆಲ್ಲ ಕಾದುಕೊಂಡಿರುವೋದು ಶ್ರೀಧರ ನೀದಾರಿಗ್ಹೇಳಿದ್ಯೊ 8 ವತ್ಸಕಾಯ್ದುದು ಮನಕಿಚ್ಛಿಲ್ಲದಿರಲು ಶ್ರೀ- ವತ್ಸಧರನೆ ಸುಮ್ಮನಿರೊ ನೀನು 9 ನಮ್ಮನೆಯಲಿ ಪಾಲ್ ಬೆಣ್ಣೆ ಕದ್ದನೆಂದು ನಿಮ್ಮಮ್ಮನಲ್ಲಿ ದೂರಿದೆವೇನೊ 10 ಕ್ಷೀರಗಡಿಗೆ ಒಡೆದೋಡಿ ಪೋದನೆಂದು ದೂರಿಕೊಂಡವರಲ್ಲೋ ನಿನ್ನನು 11 ಊರೊಳಗೊಬ್ಬಳು ದೂರಿಕೊಂಡರೆ ನಾವು ಭಾರಿ ಶಿಕ್ಷೆಯ ಮಾಡಿ ಬಂದೆವೊ 12 ಎಂದಾದರೊಂ(ದು) ದಿನ ಅಂದ ಮಾತುಗಳೆಲ್ಲ ಇಂದೆ ತಪ್ಪಿ ್ಹಡಿಯದೆ ಕ್ಷಮಿಸಯ್ಯ 13 ಕದವ ತೆಗೆಯದ ಮುಂಚೆ ಸದನದ್ವಾರದಿ ಬಂದು ಯದುನಾಥ ಎದುರೆ ನಿಂತಿರುವ್ಯಲ್ಲೊ 14 ಕಂಗಳಿಂದಲಿ ನೋಡ್ಯಾಲಿಂಗನೆ ಮಾಡುತ ಸಂಗಸುಖದಿ ಬೆಳೆದಿದ್ದೇವೊ 15 ನಿನ್ನ ನೋಡದ ಕಂಗಳಿನ್ನ್ಯಾತಕಿರಲು ಕೇ(ಗೇ?) ರೆಣ್ಣೆಯ ತೀಡಿಕೊಂಬುವೋಣೇನೊ 16 ಮಾರನಾಟಕೆ ಮನಸೋತು ನಿನ್ನನೆ ನಾವು ಜಾರಪುರುಷನೆಂದು ತಿಳಿಯದೆ 17 ಇರುಳೇಯೆ ಮನೆಯಲ್ಲಿ ಕೊಳಲೂದೋ ಕಾಲಕ್ಕೆ ನಳಿನಾಕ್ಷ ನಾವ್ಹ್ಯಾಗೆ ಬಂದೆವೊ 18 ಕಾಲಿಗಿಡುವ ವಸ್ತು ಕರದಲಿಟ್ಟುಕೊಂಡು ವಾಲೆ ಮೂಗುತಿ ಹೆರಳಿಗೆ ಚುಚ್ಚಿ 19 ಹರಡಿ ಕಂಕಣ ಪಾದದ್ಹರಡಿನ ಮ್ಯಾಲಿಟ್ಟು ಮುಡಿವ ಮಲ್ಲಿಗೆ ಕಿವಿಯಲಿ ಸುತ್ತಿ 20 ಹಾರ ಪದಕವ ಟೊಂಕಕೆ ಕಟ್ಟಿ ನಾವು ಉಟ್ಟ ಸೀರೆ ಕುಪ್ಪುಸ ಪಾರವಿ(ಪರಿವೆಯಿ?)ಲ್ಲದೆ 21 ಗಂಡಮಕ್ಕಳಿಗುಣಬಡಿಸಿ ಮಂಡಿಯ ಮ್ಯಾಲೆ ಸಂಡಿಗ್ಹುಳಿಯನ್ಹಾಕಿ ಬಂದೆವೊ 22 ಎಲೆಯ ಮ್ಯಾಲ್ಹಾಕೋ ಪದಾರ್ಥವೆಚ್ಚರವಿಲ್ಲ ತಲೆಯ ಮ್ಯಾಲ್ಹಾಕಿ ಬಂದೆವು ನೋಡೊ 23 ಬೆಣ್ಣೆ ಚೆಟ್ಟಿಗೆಯ ಬೆಕ್ಕಿನ ಮುಂದೆ ಸರಿಸೇವೊ ಸಣ್ಣ ಕೂಸಿನ ನೆಲವಿನೊಳಿಟ್ಟು 24 ಅಳುವೊ ಮಕ್ಕಳನೆ ಆಕಳ ಕಣ್ಣಿಗೆ ಕಟ್ಟಿ ಕರು- ಗಳ ತೊಟ್ಟಿಲೊಳಗೆ ಇಟ್ಟು 25 ಬಂಗಾರದ್ಹಾರ ಪದಕನ್ಹಾಕಿ 26 ಅಚ್ಛದಿಂದೆತ್ತಿ ಮುದ್ದಿಡುತಿರೆ ನಮ ಗಲ್ಲ ಕಿ- ತ್ತಿ ಚಿವರಿಕೊಂಡ್ಹೋಯಿತು 27 ಬಂಗಾರ ಕಳಕೊಂಡು ಮಂಗನಂತಾದೆವೊ ಮಂಗಳಾಂಗನೆ ಇಷ್ಟು ಮರುಳಾಗಿ 28 ವ್ಯತ್ಯಾಸದಿಂದ್ವಸ್ತ್ರ ಇಟ್ಟು ಬಂದೆವೊ ನಾವು ಬಿಟ್ಟೊ ್ಹೀದನೆಂಬೊ ಸಿಟ್ಟಿಲ್ಲವೊ 29 ಅಡಅಡವಿಲಿ ನಿನ್ನ ಹುಡುಕುತ ತಿರುಗೇವೊ ಕಡಲಶಯನ ಕರುಣದಿ ಬಂದ್ಯೊ 30 ರಾಸಕ್ರೀಡೆ ಜಲಕ್ರೀಡೆನಾಡಿದ ವಾರ್ತೆ ರಾ(ರಹ?)ಸ್ಯ ಒಬ್ಬರಿಗೆ ನಾವ್ ತಿಳಿಸದೆ31 ಅತ್ತೆಮಾವಂದಿರೀ ವರ್ತಮಾನವ ಕೇಳಿ ನೆತ್ತಿಮ್ಯಾಲ್ಹೊಡದ್ಹೊರಗ್ಹಾಕೋರೊ 32 ಪತಿಗಳು ನಮ್ಮನ್ನು ಬಿಟ್ಟರೂ ಬಿಡಲೊ ಶ್ರೀ- ಪತಿ ನಿನ್ನ ಬಿಟ್ಟು ಪೋಗುವರಲ್ಲ 33 ಮನೆ ಧನ ಧಾನ್ಯ ಮಕ್ಕಳು ಪತಿಗಳು ಬ್ಯಾ- ಡ ನಮಗೊಂದು ಸ್ಥಾನ ತೋರಿಸೊ ನೀನು 34 ಕುಸುಮ ಮಲ್ಲಿಗೆ ಒಣಗಿದ ದಾರ ಮತ್ಯಾವ ಕೆಲಸಕ್ಕೆ ಬರುವುದೊ 35 ಎಲ್ಲಿ ಬಿಲ್ಲ ್ಹಬ್ಬ ಮತ್ತೆಲ್ಲಿ ಸೋದರಮಾವ ಎಲ್ಲಿಂದ ಕರೆಯ ಬಂದನು ಈತ 36 ಕ್ರೂರನೆನ್ನದಲೆ ಅಕ್ರೂರನೆಂಬುವೋ ಹೆ- ಸರ್ಯಾರಿಟ್ಟರ್ಹೇಳೊ ಈ ಪುರುಷಗೆ 37 ನಮ್ಮ ನಿಮ್ಮನು ಅಗಲಿಸುವೋನು ನಮ್ಮಂಥ ಹೆ- ಣ್ಣು ಮಕ್ಕುಳು ಇವಗಿಲ್ಲವೆ 38 ಇಳಿಯಿಳಿ ಇಳೆಯಲ್ಲೀಳಿಗೆಯ ಕೊಟ್ಟೇವೊ ನಮ್ಮ ಕೊ- ರಳ ಕೊಯ್ದು ಮುಂದಕ್ಹೋಗೋ ನೀ 39 ವಾಸುದೇವನೆ ನಿನ್ನ ರಥದ ಗಾಲಿಗೆ ನಾವು ಹಾಸಿಕ್ಯಾಗಿ ಅಡ್ಡಬಿದ್ದೆವೊ 40 ಮಧುರಾಪಟ್ಟಣದಲ್ಲಿ ಇದ್ದ ಸತಿಯರೆಲ್ಲ ಮದನಮೋಹನ ನಿನ್ನ ಬಿಡುವೋರೆ 41
--------------
ಹರಪನಹಳ್ಳಿಭೀಮವ್ವ
ಬಂದಿಯಾತಕೋ ಈ ಭವದೊಳು | ನೊಂದಿಯಾತಕೋ ನೀನೊಂದನರಿಯೆ || ಬಂದಿಯಾತನು ನೀ ಮತಿಮಂದನಾಗದೆ | ಗತಿ ಮುಂದೇನೆಂದು ತಿಳಿಯದಲೆ ಪ ನಾ ನಾ ಎನುತಲಿ ನಾನಾ ಯೋನಿಯೊಳು | ಜನಿಸಿ ಬಂದು ನೀ ಹೀನನೆನಿಸಿಕೊಂಡು || ಅಜ್ಞಾನದೊಳಗೆ ಬೆರೆತು ನೀ - | ನಾರೆಂಬದನರಿಯಲಿಲ್ಲವು ಗುರುತು | ಜ್ಞಾನಿ ಪುರುಷರ ಕೇಳುವದನೆ ಮರೆತು | ಇನ್ನು ಸದ್ಗತಿಗೆ ಆದಿಯೊ ಹೊರತು | ನೀ ಇದನರಿತು 1 ಆರರೊಳಗೆ ಬಿದ್ದು ಆರನು ನೋಡದೆ | ಆರು ಚಕ್ರದ ಮೇಲೆ ಏರಿ ಮ್ಯಾಲಕಿನ್ನು | ತೋರುತಿಹುದು ನೋಡು ರೂಪವಲ್ಲೀ | ಧಾರುಣಿಯೊಳಗೆಲ್ಲ ಅದರ ವ್ಯಾಪವು | ತೋರಿದಾಕ್ಷಣ ಅಳಿದ್ಹೋಯ್ತು ಪಾಪ | ಇದನು ಬಿಟ್ಟು ಮೂರ ನೆನಿಸಿ ಕೆಟ್ಟೀ | ಬಯಸಿ ನೊಂದೀ 2 ನರ ತನು ದೊರೆಕೋದು ಬರಿದೇನೊ | ಎರಡಿನ್ನು ಸರಿಯಾಗೊ ತನಕ | ಬರುವದೇನೊ ಸುಮ್ಮನೆ ಮರುಳಾಗ ಬ್ಯಾಡ || ಸರಿಸು ಅಸ್ಥಿರವೆಂದು ನೀ ಬೇಗದಲಿ | ಸಂಚಿತವೆಲ್ಲ ಕೂಡಿ ಬಂದಿತಿನ್ನೇನು | ಗುರು ಭವತಾರಕನ ಭಜಿಸು ನಿನ್ನ | ಮನಸಿನಿಂದಲಿ 3
--------------
ಭಾವತರಕರು
ಬಂದು ಮಧುರೆಗೆ ತಾ ಕೊಂದು ಮಾತುಳನ ಬಂಧನ ರಹಿತವಾಗಲು ಮಾತಾಪಿತರು 1 ಜರೆಯಸುತನ ಬಾಧೆಯು ಘನವಾಗುತಿರಲು ಜಲದೊಳು ದ್ವಾರಕಾಪುರವ ನಿರ್ಮಿಸಿದ 2 ಯದುನಂದನ ತನ್ನಗ್ರಜ ಬಲರಾಮನ ಕೂಡ ಮುದದಿಂದಾವಾಸ ಯಾದವರ ಸಹಿತಾಗಿ3 ಇರುತಿರೆ ರುಕುಮ ತನ್ನನುಜೆ ಸಹಿತಾಗಿ ಚೆಲುವ ಸುಂದರಿಗೆ ಬ್ಯಾಗ್ವಿವಾಹದುತ್ಸವವು 4 ಅಕ್ಕರದನುಜೆ ರುಕ್ಮಿಣೀದೇವಿಗಿನ್ನು ಚಿಕ್ಕ ಚೆನ್ನಿಗನಾದ ತಕ್ಕ ವರನ್ಯಾರು 5 ವಸುಧೆಪಾಲರ ಮಧ್ಯ ಶಿಶುಪಾಲನೀಗಧಿಕ ಕುಸುಮಗಂಧಿನಿಗೆ ನಿಶ್ಚಯವ ಮಾಡಿದರು 6 ಅಗ್ರಜನ್ವಾಕ್ಯವ ಕೇಳಿ ಮನದಲ್ಯೋಚಿಸುತ ಘನಮಹಿಮಗೆ ಓಲೆ ಬರೆದಳು ಲಿಖಿತ 7 ಹರಿ ನೀನೆ ಮುರವೈರಿ ಸರುವಾಂತರಯಾಮಿ ನಿನ್ನ ಸ್ಮರಣೆ ದರುಶನ ಮಾತ್ರಕೆ ಪರಮಲಾಭೆನಗೆ 8 ಎಂದೆಂದಿಗೆನ ಕೂಡಾನಂದವ ಬಟ್ಟು ಇಂದೆ ಕೈಬಿಟ್ಟು ದೂರಿಂದ ನೋಡುವರೆ 9 ಪ್ರಾಣಪತಿ ನೀ ಪಾಣಿಗ್ರಾಣ (ಗ್ರಹಣ?) ಮಾಡದಲೆ ಇರೆ ಪ್ರಾಣ ಉಳಿಯದು ಕೇಳೆನ್ನಾಸೆ ಹುಸಿಯಲ್ಲ 10 ಸರ್ವರ್ವಂದಿತ ನಿನ್ನ ಅರಮನೆದ್ವಾರ ಕಾದಿರುವೋ ಭೃತ್ಯರಿಗೊಪ್ಪಿಸಿಕೊಡದೆ ಕರುಣಾಳು 11 ದೇಶಕಾಲಕೆ ನಾ ನಿನ್ನ ಸಮಳ್ವಾಸುದೇವ ಗುಣಕಸಮಳೆಂದು ಉದಾಸೀನ ಮಾಡಬ್ಯಾಡ 12 ವಕ್ಷಸ್ಥಳದ ವಾಸಿಯ ತುಚ್ಛಮಾಡದಲೆ ಲಕ್ಷೀಲೆ ಕರೆದೊಯ್ಯೊ ಪಕ್ಷಿವಾಹನನೆ 13 ಎನ್ನ ಬಿನ್ನಪ ಕೇಳಿ ಮನ್ನಿಸೊ ಕೃಷ್ಣ ಪನ್ನಂಗಶಯನ ನಿನ್ನ ಪಾದಕ್ಕೆರಗುವೆನು 14 ಪಾದ ಉರಗ ಮೆಟ್ಟಿದ ಪಾದ ನಿನ್ನ ಧ್ವಜವಜ್ರಾಂಕುಶ ಪಾದಕ್ಕೆರಗಿ ನಮಿಸುವೆನು 15 ಬರೆದ ಓಲೆಗೆ ಹಚ್ಚಿ ಅರೆದರಿಷಿಣವ ಕರವ ಜೋಡಿಸಿ ಕೊಟ್ಟು ಕಳುಹೆ ದ್ವಾರಕೆಗೆ16 ಜಗದೀಶಗೆ ಪತ್ರವ ಜಾಣೆ ತಾ ಬರೆದು ದ್ವಿಜನ ಕೈಯಲಿ ಕೊಟ್ಟು ಕಳುಹೆ ದ್ವಾರಕೆಗೆ 17 ವ್ಯಾಳ್ಯ ಮೀರುವುದೆಂದು ಎದ್ದಾಗ ರುಕುಮ ಭೇರಿ ತಾಡನ ಮಾಡಿಸೆ ಭೋರೆಂಬೊ ರಭಸ 18 ಎರೆದು ಮುಡಿಯನ್ಹಿಕ್ಕಿ ಜಡೆಯಬಂಗಾರ ಚೌರಿ ರಾಗಟೆ ಗೊಂಡ್ಯ ಧರೆಗೆ ಮುಟ್ಟುತಿರೆ 19 ಅಚ್ಚ ಜರತಾರಿ ಹೊಳೆವಷ್ಟಪತ್ರಿಕೆಯು ಮ್ಯಾಲೊಪ್ಪುವೊ ಪಟ್ಟೀನೊಡ್ಯಾಣ ಸರಿಸಿಟ್ಟು 20 ಕಂಕಣ ಚೂಡ್ಯ ದ್ವಾರ್ಯ ್ಹರಡಿ ಕೈಕಟ್ಟು ಮ್ಯಾ- ಕಂಚುಕ ತೊಟ್ಟು 21 ಹರಳು ಮಾಣಿಕ್ಯದ್ವಾಲೆ ಬುಗುಡಿ ಬಾವುಲಿಯು ಹೊಳೆವೊ ಮುತ್ತಿನ ಮೂಗುತಿ ಥಳಥಳಸುತಲಿ 22 ಹಾರ ಪದಕದ ಮಧ್ಯ ಮೇಲಾದೇಕಾವಳಿಯು ತೋರ ಮುತ್ತಿನ ದಂಡೆ ಲೋಲ್ಯಾಡುತಿರಲು 23 ಕನ್ನಡ್ಯಂದದಿ ಗಲ್ಲ ಕಳೆಯ ಸುರಿಸುತಲಿ ಸಣ್ಣಮುತ್ತಿನ ಗೊಂಚಲು ಸರಗಳಲೆಯುತಲಿ 24 ಝಗಝಗಿಸುತ ಬಂದಳು ಜಗದ ಮೋಹಿನಿಯು ಮುಗುಳು ನಗೆಯಿಂದ ಮೂರ್ಜಗವ ಮೋಹಿಸುತ 25 25 ಗೆಜ್ಜೆ ಸರಪಳಿ ಅಂದಿಗೆ ಹೆಜ್ಜೆಸರಿಸಿಡುತ ನಿರ್ಜರೇಶನ ಮಾರ್ಗದ ನಿರೀಕ್ಷಣದಿಂದ 26 ಸುತ್ತ ಮುತ್ತೈದೇರು ಕತ್ತಿಕೈ ಭಟರು ತುತ್ತೂರಿ ವಾದ್ಯ ಭೇರಿ ತಮ್ಮಟೆ ಕಾ(ಕಹ?) ಳೆ 27 ನಡೆದು ರುಕ್ಮಿಣಿ ಹೊಕ್ಕಳು ಗುಡಿಯ ಮಹಾದ್ವಾರ ಮೃಡನರಸಿಯ ಪೂಜಿಸಿ ದೃಢಭಕ್ತಿಯಲಾಗ 28 ಹಿರಿಯ ಮುತ್ತೈದೇರಿಗೆ ಮರದ ಬಾಗಿನವ ಅರೆದರಿಷಿಣ ಕುಂಕುಮ ಕರದಲ್ಲಿ ಗಂಧ 29 ಕಡಲೆ ಕಬ್ಬು ಕಾಯಿ ಉಡಿಯ ತುಂಬುತಲಿ ಕಡಲಶಯನನ ಮಾರ್ಗವ ಬಿಡದೆ ನೋಡುತಲಿ 30 ಮಂಗಳಗೌರಿಯೆದುರಿಗೆ ಮುತ್ತೈದೇರು ಅಂಗನೆ ಭೈಷ್ಮಿ ಪೀಠದಲಿ ಕುಳ್ಳಿರಿಸಿ 31 ಮಂಗಳಾಂಗನು ನಿನ್ನ ಪತಿಯಾಗಲೆಂದು ಮಂಗಳಸೂತ್ರ ಬಂಧನ ಮಾಡಲು ನಗುತ 32 ಮಾರನಯ್ಯನ ಮೋರೆ ನೋಡಿದಾಕ್ಷಣದಿ ಮಹಾ- ದ್ವಾರದಿ ಮುತ್ತು ಸೂರ್ಯಾಡೇನೀಕ್ಷಣದಿ 33 ಹರನ್ವಲ್ಲಭೆ ತೋರೆ ಮುರಹರನ ಕರಿವರನ ಭಯ- ಹರನ ಶ್ರೀಧರನ ಕೊಡುವೆನೀ ದೇವರನು 34 ಮಚ್ಛಲೋಚನೆ ಧ್ಯಾನ ಅಚ್ಚ್ಯುತನಲ್ಲೇ ಇಡೆ ಭಕ್ತ- ವತ್ಸಲ ಬಂದನೆಂದೆಚ್ಚರಿಸಿದರು35 ಹತವಾದ ಪ್ರಾಣ ಬರಲತಿ ಹರುಷವ್ಹ್ಯಾಗೋ ರಥವ ಕಾಣುತ ರುಕ್ಮಿಣಿ ಕೃತಕೃತ್ಯಳಾಗ 36 ಸೃಗಾಲದ ಮಧ್ಯ ಒಂದು ಸಿಂಹ ಹೊಕ್ಕಂತೆ ಶ್ರೀನಾಥ ರುಕ್ಮಿಣಿಯ ಸ್ವೀಕಾರ ಮಾಡಿದನು 37 ರಥವು ಮುಂದಕೆ ಸಾಗೆ ಪಥವು ತೋರದಲೆ ಅಲೆ ಬಾಯ ಬಿಡುತ ಶ್ರೀಪತಿಯ ಬೆನ್ನ ್ಹತ್ತಿ 38 ಬಂದ ರುಕುಮನ ಗಡ್ಡ ಮಂಡಿ ಸವರುತಲಿ ಬಂಧನ ರಥಕೆ ಮಾಡಿದ ನಂದಸುತನು 39 ವಾರೆನೋಟದಿ ನೋಡಿ ಮೋರೆ ತಗ್ಗಿಸಿದ ನಾರಿ ರುಕ್ಮಿಣಿಯ ಮುಖ ನೋಡಿ ಶ್ರೀಕೃಷ್ಣ 40 ಕರುಣವಿರಲಿಕ್ಕೆ ನೀ ಬರೆದ್ಯಾತಕೆ ಓಲೆ ತಿಳಿಯಲಿಲ್ಲವೆ ಎಂದೀಪರಿ ಹಾಸ್ಯದಿ ನುಡಿದ41 ಒಡಹುಟ್ಟಿದವನಲ್ಲಿ ಕಡು ಮೋಹವಿನ್ನೂ ಹಿಡಿಯದೆನ್ನೊಳು ಕೋಪ ಬಿಡುರುಕ್ಮಿಣಿ ಎಂದ 42 <ಈಔಓಖಿ ಜಿಚಿಛಿe='ಓuಜ
--------------
ಹರಪನಹಳ್ಳಿಭೀಮವ್ವ
ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ | ಶೃಂಗಾರದಿಂದ ಗೋಪಾಂಗನೆಯ ಕೂಡ | ತುಂಗ ವಿಲಾಸ ತಾ ರಂಗ ಕೇಳಿಯಲಿ | ಸಂಗೀತ ಪಾಡುತ ಸಾಂಗೋಪಾಂಗದಿಂದಾ ಪ ಹೊಳಿಯ ಜನಕೋಕುಳಿಯ ಕಲಿಸಿ | ಗೆಳೆಯರೊಂದಾಗೆ ಕಳೆಯೆವೇರುತ್ತ | ಅಳಿಯ ಗರುಳಬಲಿಯರರಸಿ | ಇಳಿಯಾಳಗೋಕುಳಿ ವಸಂತವಾ | ಹಳೆಯ ಬೊಮ್ಮನ ಬಳಿಯವಿಡಿದು | ಪಳಿಯ ಚಲುವ ತಿಳಿಯಗೊಡದೆ 1 ಸಕ್ಕರೆದುಟಿ ಹೆಮ್ಮಕ್ಕಳು ಯೆಲ್ಲರು | ನಕ್ಕು ಕೈಯ ಹೊಯಿದ | ಕ್ಕರದಿಂದ ತಾ | ವರ್ಕರಾಗಿ ನಿಂದೂ ತೆಕ್ರ್ಕೊರಂಗಯೆಂದು | ಜಿರ್ಕೊಳವಿಲಿಂದಲಿಕ್ಕಿದರು | ಸೊಕ್ಕಿದಾ ನೆಡಸಿ ಹೊಕ್ಕು ಎರಗಿದಂ | ತೊಕ್ಕಟರಾಗಿ ದೇವಕ್ಕಿ ತನುಜನ ಸಿಕ್ಕಿಸಿಕೊಂಡರು | ಅಕ್ಕಟಾಬ್ಜಗಬ್ಧಿ ಉಕ್ಕಿದಂತೆ ಮನ | ಉಕ್ಕುತಲಿ 2 ನಾರಿಯರಿಂದ ಉತ್ತರವ ಲಾಲಿಸಿ | ತುಂಬಿ ಅ | ಪಾರನಾರಿ ಪರಿವಾರದವರ ಶರೀರವ ಮೇಲೆ | ವಿ | ಸ್ತಾರವಾಗಿ ಕಾರಿ ವಾರಿದನು ನೀರೆರದಂತಾಗೆ | ಆರೊಂದು ಬುದ್ಧಿಗೆ ಮೀರಿತಿದೊ ಎಂದು | ವಾರುಣಿಪತಿ ಪಂಕೇರುಹಾಭವ ಕಂ || ದರವ ಬಾಗಿಸಿ ಸಾರಿದರು 3 ಮೃಗ ಧ್ವನಿದೆಗೆದು ಪಾಡಲು | ನಗ ಬೆವರಿ ಪನ್ನಂಗ ನೋಡಾಗಲು | ಅಗಣಿತ ಮುನಿ ಚಿಗಿದು ಪಾಡಲು | ನಗ ಬೆವರಿ ಪನ್ನಂಗ ನೋಡಾಗಲು | ಅಗಣಿತ ಮುನಿ ಚಿಗಿದು ಪಾಡಲು ಪೊಗಳ ಬಗೆಯಿಂದ | ಮಣಿ ತಾರೆಗಳು ಚಂದ್ರ ನಗುತ ತಮ್ಮ ಪಥಗಳು ನಿಲಿಸಿ | ಮಂಗಳಕರವ ಮುಗಿದು ಸೋಜಿಗ ಜಗದೊಳಗಿದು ಮಿಗಿಲೆನುತಲಿ 4 ದುಂದುಭಿ ಮೊರಿಯೆ ಧಂ ಧಂ ಧಳಾ ಎಂದು | ವೃಂದಾರಕ ವೃಂದ ಚಂದದಿ ಪೂಮಳೆಯಂದುಗರಿಯಲು | ಚಂದಣಗಂದಿಯ ಒಂದಾಗಿ ನಿಂದರು ವಂದಿಸುತ | ಮಂದಹಾಸನಖ ದುಂದುಭಿ ಓಕಳಿಂದಲೆರಾರೈಪಾ ಸಿಂಧು ಮೆರೆದ ನಾರಂದವರದ ವಿಜಯವಿಠ್ಠಲ | ಪುರಂದರದಾಸರ ಮುಂದಾಡಿz ||5
--------------
ವಿಜಯದಾಸ
ಹರಿಯೆ ನಿನಗೆ ಮೊರೆಯನಿಡುವೇ ಪ. ದುರಿತ ಪರಿಹಾರ ನಿನ್ನ | ಸ್ಮರಣೆ ಎನಗೀಯೋ ಅ.ಪ. ಜ್ಞಾನ ಜ್ಞೇಯ ಜ್ಞಾತೃವೆಂಬಭಿಧಾನದಿಂದ ಕರೆಸುವಿಯೋನಾನು ನನ್ನದು ಎಂಬ ದುರಭಿ | ಮಾನವನ್ನೆ ಪರಿಹರಿಸೋ 1 ಮೂರ್ತಿ 2 ಆಳು ನಿನ್ನವನೆಂದು ತಿಳಿಯೋ | ಪಾಲಿಸೊಲಿಮೆ ನಿನ್ನ ಪದದಿಪಾಲ ಸಾಗರ ಶಯ್ಯ ಕೃ | ಪಾಲು ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಹೇಸಿಕಿಲ್ಲವೊ | ಎನಗೆ ಹೇಸಿಕಿಲ್ಲವೋ ಪ ಮೀಸಲೆನಿಸಿ ಮನವ ನಿನ್ನ | ಆಶೆಯಲ್ಲಿ ಇರಿಸದಾಲೆ ಅ.ಪ. ವೈರಿ ಕಾಡುತಿಹನು 1 ವಿಷಯದಾಶೆ ಪೋಗಲಿಲ್ಲ | ಹಸಿವು ತೃಷೆಯು ಮೀರಲಿಲ್ಲಕುಸಿಯುತಿದೆ ದೇಹವೆಲ್ಲ | ಎಸೆವ ವ್ರತವ ಚರಿಸಲಿಲ್ಲ 2 ನಾನು ನನ್ನದೆಂಬ ಮಮತೆ | ಹೀನವೆಂದು ತಿಳಿದು ತಿಳಿದುಗೇಣು ಎಂಟು ದೇಹಕಾಗಿ | ಹೀನ ವಿಷಯದಾಶೆ ಇಹುದು 3 ಸಂದು ಪೋದ ಜನ್ಮ ತಿಳಿಯೆ | ಮುಂದೆ ಬಾಹುದೆಂತೊ ಕಾಣೊಇಂದಿರೇಶ ನೀನೆ ಗತಿಯೊ | ಮಂದಹಾಸ ಬೀರಿ ಪೊರೆಯೊ 4 ನಿನ್ನ ಕಾಣಧಾಂಗೆ ದೇಹ | ಇನ್ನೂ ಪೋಗದಂತೆ ಮಾಡಿ |ಘನ್ನ ಮಹಿಮ ರೂಪ ತೋರೊ | ಚೆನ್ನ ಗುರು ಗೋವಿಂದ ವಿಠಲ5
--------------
ಗುರುಗೋವಿಂದವಿಠಲರು