ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಕೂಡು | ಸಾಯಾಸಗಳನೇ ಬಿಡು ಪ ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1 ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2 ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3 ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4 ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೊಸರ್ಬೇಕ್ ಮೊಸರು ಧೇಂಡಿಯ ಮೊಸರು ಪ ಕರಣೆಯೆಂದ್ಹೆಸರು ಕೇಳ್ಬೇಡಿ ಕೊಸರು ಅ.ಪ ಗೋಕುಲದಲಿ ಶ್ರೀಕೃಷ್ಣನು ತಾನೆ ಆಕಳಮಂದೆಯ ಹೊಂದಿರುತಾನೆ ಆ ಕರುಣಾನಿಧಿ ಕಳಿಸಿರುತಾನೆ ಬೇಕಾದರೆ ಬನ್ನಿ ನಾ ಇಕ್ಕುತ್ತೇನೆ 1 ಎಳಗಂದಿಯಲ್ಲವು ತಿಳಿಗಟ್ಟುವುದಿಲ್ಲ ಕೊಳೆಯಿಲ್ಲವು ಈ ಬಿಳಿಮೊಸರಿನಲಿ ತಿಳಿಯ ವೈರಾಗ್ಯ ಭಕ್ತಿಗಳುಳ್ಳ ಜನಕೆ ಗೆಳೆಯ ಶ್ರೀ ಕೃಷ್ಣನು ಕಳಸಿದನಮ್ಮ 2 ಬಿಂದು ಮಾತ್ರದಿ ನಿಜಾನಂದವ ಕೊಡುವುದು ಬಿಂದಿಗೆ ತಂಬಿಗೆ ತರಬೇಡಿರಮ್ಮ ಮಂದ ಜನರು ತಾವರಿಯರು ಇದನು ತಂದೆ ಪ್ರಸನ್ನನ ಪರಮ ಪ್ರಸಾದವ 3
--------------
ವಿದ್ಯಾಪ್ರಸನ್ನತೀರ್ಥರು