ಒಟ್ಟು 30 ಕಡೆಗಳಲ್ಲಿ , 24 ದಾಸರು , 30 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆಯ ಕೀರ್ತನೆಗಳು ಆತನೆಯನ್ನ ತಾತನು ಮೆರೆದಾತನೆಯನ್ನ ತಾತನು ಪ ತಂದಿನ ಅಗಲಿದ ಕಂದ ಕಾನನದೊಳು ಬಂದು ಅಂಗುಟ ಊರಿನಿಂದುತ್ವರಾ ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು 1 ದುರುಳತನಪರಿಹರಿಸ ಬೇಕೆನೆ ಮಾನವ ಪರಮಕರುಣಿ ಮುರಹರನೆ ತಡಿಯದಲೆ ಪೊರೆಯನೆ ತರುಣಿಯ ಮೊರೆ ಕೇಳಿದಂಥಾತನೆ 2 ಶಿರಿಗೋವಿಂದ ವಿಠಲ ವೇದ ವಂದಿತ ಪತಿ ಹರಿಪರನೆನ್ನುತ ಪರಮ ಭಕುತಿಯಿಂದ ಸ್ಮರಿಸುವವರ ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ 3
--------------
ಅಸ್ಕಿಹಾಳ ಗೋವಿಂದ
ಇದನೆ ಪಾಲಿಸೋ ಹನುಮಾ ಮಾಳ್ಪೆನೊ ಪದ ಪದುಮಯುಗಕೆ ಪ್ರಣಾಮಾ ಪ ಸದಯನೆ ನಾ ನಿನ್ನ ಇದನನು ಬೇಡಿದೆ ಪದುಮ ನಯನ ಶ್ರೀ ಮುದತೀರಥರಾಯಾಅ.ಪ ದಿವಸ ಪೋದವಲ್ಲಾ ಗುರುಗಳ ಅನುಭವಾಗಲಿಲ್ಲಾ ಪವನ ತನಯ ನೀ ಜವದಲಿ ಮಾಡಲು ಭುವನದೊಳಗೆ ಬೃಹಚsÀ್ಪøವನು ಎನಿಸುವೆನು 1 ಜನರು ಮೊದಲೆ ಇಲ್ಲಾ ಧನಪಸಖ ನನ ಜನಕನು ನೀನಿರೆ ಮನುಜರ ಬೇಡೋದು ಫನತಿ ಎ£ಗಲ್ಲಾ 2 ದಾತ ಇದನು ಪೂರ್ತಿ ಮಾಡೊ ಧಾತ ನಾ ಶರಣಾರ್ಥಿ ಯಾತಕೆ ಸುಮ್ಮನೆ ಈ ತೆರ ಇರುವುದು ತಾತನೆ ಗುರುಜಗನ್ನಾಥವಿಠಲದೂತ 3
--------------
ಗುರುಜಗನ್ನಾಥದಾಸರು
ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ಪ ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ ವರ್ತಿಯೆಂಬಾ ಬಿರುದನು ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು ಗುತ್ತಿರ್ದಡೇನು ಭಾಗ್ಯಾ ಮತ್ತದೆನಗಾರ್ಜಿತವೆ ಸತ್ತವರ ಸಂಪದವ- ನತ್ತಲೇ ಕಳುಹಿಕೊಡದೆ ಇತ್ತಪರೆ ನಿನ್ನ ದಾಸನುದಾಸರಿಗೆ ಸೇ ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1 ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ ಕಿರುನುಡಿಯ ಮೀರದಿರಲು ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು ಬಿರುದುಗಳು ಮೆರೆಯುತಿರಲೂ ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು ಪಿರಿಯರೆಲ್ಲರು ಪೊಗಳಲೂ ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2 ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ ಸಕರೆಯನು ನಾನೊಲ್ಲೆನೂ ಭಕತವತ್ಸಲನೆ ಭಾಗವತಲೋಲುಪನೆ ದುಃ ಖಕೆ ಕಾರಣವಿಲ್ಲವೆ ಅಕಳಂಕ ಚರಿತನೆ ಆದಿನಾರಾಯಣನೆ ಮಕರಧ್ವಜನ ತಾತನೆ ಸುಖವೀಯೊ ವೈಕುಂಠ ವೇಲಾಪುರಾಧೀಶ ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ಕಾಣೆ ಲೋಕದೊಳಗೆ ಮುಖ್ಯ ಪ ಪ್ರಾಣೋಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ ಅ.ಪ. ವಾಸವ ಕುಲಿಶದಿ ಘಾತಿಸೆ ಜೀವರ ಶ್ವಾಸ ನಿರೋಧಿಸಿದೆ ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ ಮುಖ್ಯ1 ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಪುಡುಕೆ ತಿಂಗಳು ಮೀರಲು ಕಂಗೆಡೆ ಕಪಿಗಳ ಜಂಗುಳಿ ಪಾಲಿಸಿದೆ ಮುಖ್ಯ 2 ನೀಲ ಸು ಗ್ರೀವ ಮುಖ್ಯರ ಬಿಗಿಯೆ ಸಾವಿರದೈವತ್ತು ಗಾವುದದಲ್ಲಿಹ ಸಂ ಜೀವನ ಜವದಿ ತಂದೆ ಮುಖ್ಯ 3 ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು ಕರಣ ನಿಯಾಮಕ ಸುರರಗುರುವೆ ನೀ ಕರುಣಿಸೆ ಕರುಣಿಸುವಾ 4 ಭೂತೇಂದ್ರಿಯದಧಿನಾಥ ನಿಯಾಮಕ ಆ ತೈಜಸಹರನಾ ತಾತನೆನಿಪ ಜಗನ್ನಾಥ ವಿಠಲನ ಪ್ರೀತಿ ಪಾತ್ರನಾದ ಮುಖ್ಯ 5
--------------
ಜಗನ್ನಾಥದಾಸರು
ಕಾಮನುಜ ಸುರಸೋಮ ಶತ್ರುವಿನಾಯಕ ಪರಿಪಾಲಿಸೊ ಪ ಕಾಲ ಎನಗೊಂದು ಕ್ವಾರಿ ಕರಿಮುಖ ತೋರಿದಿ ನೀಅ.ಪ. ಪಾದ ಹೊಂದಿಸಿ 1 ಭಾಸದಿಂದಲಿ ವಿಷ ಧರಿಸಿ ಆ-ಭಾಸತನದಲಿ ದಾಸನೆನಿಸಿ ಕಾಸು ಕಾಸಿಗೆ ಮೋಸಹೋಗಿ ವಿಶೇಷ ಮಮಕರ ಪಾಶ ಕ್ಷಳಿಸಿದೆ 2 ಚಾರು ಇಂದು ಪೊರೆಯೋಕಂಬುಕಂಧರ ಶಾಮಸುಂದರ ತಾತನೆನಿಸುವ ತಂದೆವರದಗೋಪಾಲವಿಠಲನ ಪ್ರೇಮ ಪಾತ್ರನೆ 3
--------------
ತಂದೆವರದಗೋಪಾಲವಿಠಲರು
ಕುದುರೆ ಕಂಡೀರ್ಯಾ ಬಿಳಿ ಕುದುರೆ ಕಂಡೀರ್ಯಾ ಚೆಲುವ ಕುದುರೆ ಕಂಡೀರ್ಯಾ ಮಧ್ವರಾಯರಿಗೊಲಿದ ಕುದುರೆ ವಾದಿರಾಜರ ಪೊರೆದ ಕುದುರೆ ಇಂದಿರಾ ದೇವಿಯನಪ್ಪಿದ ಕುದುರೆ ಬಂದರೆ ನರರು ಬೆದರದಂಥ ಕುದುರೆ 1 ಮಂದರಗಿರಿಯನ್ನೆತ್ತಿದ ಕುದುರೆ ಚಂದಿರನಂತೆ ಪೊಳೆಯುವ ಕುದುರೆ ಸೋದೆಯ ಪುರದೊಳಿರುವ ಕುದುರೆ ಮೋದದಿಂದ ಮೆರೆಯುವ ಕುದುರೆ 2 ನರನ ರಥವನು ಏರಿದ ಕುದುರೆ ಸ್ಮರನ ತಾತನೆನಿಪ ಕುದುರೆ ಸುರತರುವನೆ ಭೂಮಿಗೆ ತಂದ ಕುದುರೆ 3 ಕಡಲೆ ಹೂರಣ ಮೆಲುವ ಕುದುರೆ ಪಂಡರಪುರದಿ ಮೇದ ಕುದುರೆ ಪುಂಡರೀಕನಿಗೆ ಒಲಿದಿಹ ಕುದುರೆ ಪಾಂಡವರನೆ ಪೊರೆದ ಕುದುರೆ 4 ರಾಜನಾಥನೆನಿಪ ಕುದುರೆ ವಾಜಿವದನ ತಾನೆನಿಪ ಕುದುರೆ ಕಂಜಸುತಗೆ ಶ್ರುತಿಯನ್ನಿತ್ತ ಕುದುರೆ ಕಂಜನಾಭನೆನಿಪ ಕುದುರೆ 5
--------------
ವಿಶ್ವೇಂದ್ರತೀರ್ಥ
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸಪ. ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತಅ.ಪ. ಮಾಧವ ನಿನ್ನಯ ಮಹಿಮೆ ತಿಳಿಯದಪ- ರಾಧವ ಮಾಡಿದೆ ದಾರಿದ್ರ್ಯದ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ1 ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ2 ಮಂದವಾರದಿಕ್ಕೊಂದೂಟವ ಸತ್ತ್ವ ದಿಂದಿರುವಾಗ ನಾ ನೇಮಗೈದೆ ಮಂದಭಾಗ್ಯ ಜ್ವರದಿಂದ ಪೀಡಿತನಾದ- ರಿಂದೆರಡೂಟವನೂ ಮಾಡಿದೆ ನಾನು3 ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ ಮಿನುಗುವ ಡಬ್ಬಿಯ ನಾ ಮಾಡಿದೆ ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು4 ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ ಗುಡ್ಡೆಯ ಮೇಲಿರುವ ಮಹಾನುಭಾವ5 ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು ಮಂಡೆಯೊಳುರಿವುದು ಖಂಡಿತದಿ ಪುಂಡರೀಕಾಕ್ಷನೆ ಕರುಣಾಮೃತರಸ ಕುಂಡದೊಳ್ ಮೀಯಿಸಯ್ಯ ವೆಂಕಟರಾಯ6 ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ7
--------------
ತುಪಾಕಿ ವೆಂಕಟರಮಣಾಚಾರ್ಯ
ತಾತ್ವಿಕ ಹಿನ್ನೆಲೆ ಕರ್ತನೆಂಬೋದು ಖರೆ ಖರೆ ಪ ಇಪ್ಪನೆಂಬೋದು ಖರೆ ಖರೆ 1 ಜಗವು ಇಪ್ಪದೆಂಬೋದು ಖರೆ ಮೃಗ ಖರೆ 2 ಇಂಬಾಗಿಹನೆಂಬೋದು ಖರೆ ತುಂಬಿ ಇಪ್ಪನೆಂಬೋದು ಖರೆ3 ಸ್ಥಳ ಇಲ್ಲೆಂಬೋದು ಖರೆ ಖರೆ 4 ಇಲ್ಲೆಂಬೋದು ಖರೆ ವಿಲ್ಲವೆಂಬೋದುಖರೆ 5 ವೇದತಂದು ವೇದನಿಗಿತ್ತಾತನೆ ಭೂಧರನೆಂಬೋದು ಖರೆ ಖರೆ 6 ಬದ್ಧರೂಪನೆಂಬೋದು ಖರೆ ಖರೆ 7 ಮಾಳ್ಪನೆಂಬೋದು ಖರೆ ಖರೆ 8 ಎನಿಸಿದನೆಂಬೋದು ಖರೆ ಖರೆ 9 ಪೊರೆವನೆಂಬೋದು ಖರೆ ಖರೆ 10 ತಲಿಹ ವೆಂಬೋದು ಖರೆ ಖರೆ 11 ಯಂಬೋದು ಖರೆ ಭವ ಖರೆ 12 ಹುದೆಂಬೋದು ಖರೆ ಖರೆ 13 ಮಗನೆಂಬೋದು ಖರೆ ಖರೆ 14 ಕೇಳ್ವನೆಂಬೋದು ಖರೆ ಖರೆ 15 ಬಂದನೆಂಬೋದು ಖರೆ ಖರೆ 16 ಪರಿಶುದ್ಧವಾದುದೆಂಬೋದು ಖರೆ ಖರೆ 17 ಹರಿನಾಮಕೆ ಹರಿಯದ ಪಾಪಿಗಳೀಧರೆಯೊಳಿ- ಲ್ಲವೆಂಬೋದು ಖರೆ ಖರೆ 18 ಕರ್ಮ ಹರಿಸೇವೆಯನಿಪವೆಂಬೋದು ಖರೆ ಖರೆ 19 ನಿಜದ್ವಿಜರಹುದೆಂಬೋದು ಖರೆ ಖರೆ 20 ಬುಧರಿಗಿಲ್ಲವೆಂಬೋದು ಖರೆ ಖರೆ 21 ವರವೆಂಬೋದು ಖರೆ ಯುಕ್ತಿಯ ವಚನಗಳಲ್ಲವು ಇವು ವೇದೋಕ್ತಿಗಳ- ಖರೆ 22 ಸದ್ಗುರುವರಬೇಕೆಂಬೋದು ಖರೆ ಪರಮಸೌಖ್ಯವೆಂಬೋದುಖರೆ 23 ಖರೆ ಖರೆ ಖರೆ ಖರೆ 24 ಖರೆ ಖರೆ ಖರೆ 25
--------------
ಅಸ್ಕಿಹಾಳ ಗೋವಿಂದ
ದಯಮಾಡೊ ಕಾಶಿ ಬಿಂದುಮಾಧವಮಾಡದಿರೆನಗೆ ತಂದೆ ಭೇಧವ ಪ. ಪಾಪನಾಶನ ಪಾಲಿಸೊ ಎನ್ನಸರ್ಪಭೂಷಣನತಾತನೆಂದೆನಿಸುವ ತವ ನಾಮಸ್ಮರಣೆಪಾರ್ವತಿಪತಿಯ ಧ್ಯಾನದೊಳಿರಿಸೊ 1 ಮೋಕ್ಷÀದಾಯಕ ಪಾಲಿಸೊ ಎನ್ನಲಕ್ಷ್ಮೀನಾಯಕಕುಕ್ಷಿಯೊಳೀರೇಳುಭುವನ ತಾಳಿದವನೆಭಿಕ್ಷಾಪಾತ್ರ ಶಿವನಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ್ವರಗೆ ವಿಷ್ಣುಪಾದವೆ ಗತಿಮೇದಿನಿಯೊಳು ಸೋದೆಪುರದಿ ನೆಲೆಸಿವಾದಿರಾಜವರದನೆ ಬಂದೆ ಹಯವದನನೆ 3
--------------
ವಾದಿರಾಜ
ದಾತನೀತ ಯತಿನಾಥ ನಿಜಪದ ದೂತಜನರ ಪೊರೆವಾ ಪ ಧಾತನಾಂಡದೊಳತಿ ಖ್ಯಾತನಾಗಿ ಶಿರಿ ನಾಥ ನೊಲಿಸಿ ಮೆರೆವಾ ನೀತಮನದಿ ತನ ಮಾತು ಮೀರಿದಿಹ - ಗೀತೆರದಿ ತಾನೆ ಒಲಿವಾ ತಾತನೆ ಮನೋಗತ ಭೀತಿಯ ಬಿಡಿಸೆನೆ ಪ್ರೀತಿ ಮನದಿ ತಾ ಬರುವಾ ಅ.ಪ ರಾಮ ಕೃಷ್ಣ ನರಹರ್ಯಂಘ್ರಿಯ ಪ್ರೇಮಮನದಿ ಭಜಿಪಾ ನೇಮದಿ ತನ್ನನು ಕಾಮಿಪ ಜನರಿಗೆ ಕಾಮಿತ ಫಲರೂಪಾ ಈ ಮಹಾ ಮಹಿಮೆಯ ನೇಮದಿ ತೋರುವ ಭೂವಿ ಸುರರ ಭೂಪಾ ತಾಮಸ ಮತಿ ನಿರ್ಧೂಮ ಗೈಸುವ ಧೂಮಕೇತುನೆನಿಪಾ 1 ಮಂದ ಜನರಿಗೆ ಎಂದಿಗಲಭ್ಯನ - ಪೊಂದಿದ ಜನರಾ ಕುಂದೆÀಣಿಸದೆ ತಾ ನಂದ ಕೊಡವೊ ಮಹಾರಾಯಾ ವಂದಿಪ ಜನರಘ - ವೃಂದವ ದರುಶನ - ದಿಂದ ತರಿವೊ ಜೀಯಾ ಸುಂದರತರ ವೃಂದಾವನ ನಿಜ ಮಂದಿರ ಗತ ಧ್ಯೇಯಾ 2 ದಾತಗುರು ಜಗನ್ನಾಥ ವಿಠಲನತಿ ಪ್ರೀತಿಯಿಂದ ಭಜಿಪಾ ದೂತ ಜನರು ಬಲು ಆತುರದಲಿ ಕರಿಯೆ ಪ್ರೀತ ಮನದಿ ತಾ ಬಪ್ಪ ಮಾತೆಯತೆರ ನಿಜ ದೂತರÀ ಮನಸಿನ ಮಾತು ನಡೆಸುವ ನೀಭೂಪಾ ಈತಗೆ ಸರಿಯತಿನಾಥ ಕಾಣೆನೊ ಭೂತಳೇಶರಧಿಪಾ 3
--------------
ಗುರುಜಗನ್ನಾಥದಾಸರು
ದೀನಪಾಲನ ನಾರಿಮಾನರಕ್ಷಣ ಸಿರಿ ಪ್ರಾಣರಮಣ ಹರಿ ನಾರಾಯಣ ಪ ಸೋಮಕಾಸುರಹರ ಕಾಮಿತ ಪರಿಹರ ಭೂಮಿಜೆಜನಕಜಯ ಜನಾರ್ದನ ಸ್ವಾಮಿ ಗೋವಿಂದ ಮೇಘಶ್ಯಾಮ ಮುಕ್ಕುಂದ ಭಕ್ತ ಪ್ರೇಮ ಆನಂದ ಹರಿ ನಾರಾಯಣ 1 ಪಾಷಾಣಪಾವನ ದೋಷನಿವಾರಣ ನಾಶರಹಿತ ಸುಪ್ರಕಾಶನೆ ಶೇಷಶಯನ ಗಿರಿವಾಸ ದಾಸರ ಪ್ರಾಣೇಶ ಕೇಶವ ಹರಿ ನಾರಾಯಣ 2 ವಾರಿಧಿಮಥನ ನಾರದವಂದನ ಕಾರುಣ್ಯನಿಧಿ ಕರುಣಾಂತರ್ಗತ ನಾರಸಿಂಹ ದಿವ್ಯಾಪಾರಮಹಿಮ ಸುರ ಘೋರನಿವಾರ ಹರಿ ನಾರಾಯಣ 3 ಶಾಂತ ಶಾಂತಾಕಾರ ಶಾಂತಜನಾಧಾರ ಶಾಂತಿ ಸದ್ಗುಣಧಾಮ ಶುಕ್ಲಾಂಬರ ಶಾಂತಮೂರುತಿ ಭೂಕಾಂತ ಪರಮವೇ ದಾಂತಾತೀತ ಹರಿ ನಾರಾಯಣ 4 ನಾಥ ಜಾನಕೀಪ್ರಾಣ ಭೂತಳಪಾವನ ದಾಥ ಜಗನ್ನಾಥ ವಿಶ್ವಾಂಬರ ಪಾತಕಹರ ವಿಧಿತಾತನೆ ನಿಜಸುಖ ದಾತ ಶ್ರೀರಾಮ ಹರಿ ನಾರಾಯಣ 5
--------------
ರಾಮದಾಸರು
ದೇವ ಬೆಳಗಾಯಿತೋ ಎನ್ನಯ ಸೇವಾ ಪ ಸ್ವೀಕರಿಸೋ ಮಹಾನುಭಾವ ದೇವ ಅ.ಪ ಮಧುರ ಗಾನವೇ ಗಂಗಾಸ್ನಾನ ಹೃದಯ ಶುದ್ಧಿಯೇ ಬದರಿಸ್ನಾನ ಬದಿಯಲಿರುವ ಭಕುತರ ಸಹವಾಸವೇ ನದಿನದಗಳವಗಾಹನ ಸ್ನಾನವೋ 1 ಹಾಲಿಗೆ ಕರದಲಿ ಥಾಲಿಯ ಪಿಡಿದು ಕೋಲಾಹಲ ಕಲಭಾಷಣ ಮಾಡುವ ಬಾಲರ ನಗುಮೊಗ ನೋಡಲು ಕೃಷ್ಣನ ಲೀಲೆಯ ಸಂದರ್ಶನಾನಂದವೋ 2 ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಕುಸುಮ ರಾಶಿಯ ಚಿಲ್ಲೆ ಪಲ್ಲೆಗಳ ಬಹುರೂಪದಿ ಶ್ರೀ ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ 3 ತಾತನೆಂದು ಮೊರೆಯಿಡುವರು ನೀ ಅನ್ನ ದಾತನೆಂದು ಮೊರೆಯುತಿಹರೋ ತಾತನ ಕಿವಿಗೀ ಮಾತನು ತಿಳಿಸಲು ದೂತನು ನಾ ಕಾದಿಹೆನೊ ಪ್ರಸನ್ನನೇ 4
--------------
ವಿದ್ಯಾಪ್ರಸನ್ನತೀರ್ಥರು
ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ ನಮೋ ಬಾದರಾಯಣ ನರನ ಪ್ರಾಣ ಪ ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ ಶಿವನೊಳಗೆ ಏರಿದೆ ಶಿವನಿಗೊಲಿದೆ ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ ಶಿವನ ಮಗನಾ ಪಡೆದೆ ಶಿವನ ಕಾಯ್ದೆ1 ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ ಶಿವನ ಧನುವನು ಮುರಿದೆ ಶಿವನೊಲಿಸಿದೆ ಶಿವನ ಜಡ ಮಾಡಿದೆ ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ 2 ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ ಶಿವನ ಕೂಡಲಿ ಕಾದಿದವನ ಭಾವ ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ ಶಿವನ ಶೈಲವನೆತ್ತಿದವನ ವೈರಿ3 ಶಿವ ನುಂಗಿದದ ನುಂಗಿದವನ ಒಡನಾಡುವ ಶಿವ ಪರಾಶಿವ ನಿನ್ನ ಶಿವ ಬಲ್ಲನೇ ಯವೆ ಇಡುವನಿತರೊಳಗೆ ಧವಳ ಹಾಸಾ4 ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ ಶಿವನೊಳಗಿಳಿದ ಶಿಷ್ಯನಿವ ಹರಾತೀ ತಲ್ಪ ಶಿವ ಸಮಾನಿಕ ರೂಢ ಶಿವನ ಮನೆ ತೊಲಗಿಸುವ ಶಿವ ಬಾಂಧವಾ 5 ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು ಶಿವಮಣಿ ಎನಿಸುವ ಸ್ತವ ಪ್ರಿಯನೇ ವಾಹನ ವೈರ ಶಿರವ ತರಿಸಿದೆ ದೇವ ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ6 ಶಿವನ ಸೋಲಿಸಿದವನ ಜವಗೆಡಿಸಿದೆ ಶಿವನು ಕುದರಿಯ ಹೆರವ ಅವನು ಕಾಯಿದ ಗೋವ ಶಿವನವತಾರ ಶಸ್ತ್ರವನು ಹಳಿದೆ 7 ಶಿವನಧರ್Àನಾಗಿ ದಾನವನು ಕೊಂದ ಮಹಿಮಾ ಶಿವಋಷಿ ಪೇಳಿದ ಯುವತಿ ರಮಣಾ ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ ಅವರ ಬೆಂಬಲವೇ ಯಾದವಕುಲೇಶಾ 8 ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ ದಿವಿಚಾರಿಗಳ ತಮಸಿಗೆ ಹಾಕುವೆ ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ ಶಿವನಾಳು ಮಾಡಿ ಆಳುವ ದೈವವೇ9
--------------
ವಿಜಯದಾಸ
ಪಿಳ್ಳಂಕೇರಿಯ ವಾಸ ದಾಸ | ಕಾಯೊಮಲ್ಲಾರಿ ಮಹಿದಾಸ ದಾಸಾ ಪ ಎಲ್ಲ ಸಚರಾಚರದಿ ವ್ಯಾಪ್ತನು | ನಲ್ಲ ಕೃಷ್ಣನ ಸೇವೆ ಬಹಳದ ಸಲ್ಲಿಸಲು ಬಹುರೂಪ ತಾಳ್ದ ಪ್ರ | ಪುಲ್ಲ ವದನಾಂ ಭೋಜ ಹನುಮ ಅ.ಪ. ದಕ್ಷಿಣಾಕ್ಷಿಯ ವತ್ಸರೂಪಾ | ಸುರತ್ರ್ಯಕ್ಷಾದಿ ಸಂಸೇವ್ಯ ಭೂಪಾ |ಕ್ಷೋಭ್ಯತೀರ್ಥ ಶ್ರೀ ಯತಿಪಾ | ಗೊಲಿದುಅಕ್ಷಾರಿ ತೋರ್ದೆ ಈ ರೂಪಾ |ಕುಕ್ಷಿಯಲಿ ಪಾಪಾತ್ಮ ಪುರುಷನ | ಶಿಕ್ಷಿಸುತ ಶೋಭಿಸುತ ನಿತ್ಯಪಕ್ಷಿವಾಹನನಂಘ್ರಿ ಕಮಲವ | ಈಕ್ಷಿಸಲು ಸಹಕರಿಪ ಪ್ರಾಣಾ 1 ದುರುಳ ಅವನನ್ವಯದ | ಸಹಜಾತರನು ವಧಿಸಿ ಮೆರೆದ ಸ 2 ಸಾರ ಸಜ್ಜನರನ್ನು ಪೊರೆದ 3 ಹಂಸನಾಮಕ ಹರಿ ದ್ವಂದ್ವಾ | ಪಾದಪಾಂಸುವ ಧರಿಸಿ ಮೆರೆಯುವಾ |ಹಂಸಾಖ್ಯ ಜಪ ದಿನ ದಿನವಾ | ಪಟ್ಯತವಿಂಶತ್ಯೇಕ ಸಾಸಿರವಾ |ಹಂಸವಾಹನ ತಾತನೆನಿಸುವ | ಕಂಸಮರ್ದನ ಚರಣಕರ್ಪಿಸಿಸ್ವಾಂಶರೂಪವನಂತ ಧರಿಸುತ | ಶಂಸಿಸುವೆ ವೇದೋಕ್ತ ಅನುಕ್ತದಿ 4 ದೇವ ದೇವರ ದೇವ ದೇವಾ | ಗುರುಗೋವಿಂದ ವಿಠ್ಠಲ್ಲ ದೇವಾ |ಕಾವ ಕೊಲ್ಲುವ ಸ್ಥಿರ ಚರವಾ | ನಂಬುದಾವ ಬಲ್ಲನಿವನ ಮಹಿಮವಾ |ಭಾವಿ ಬೊಮ್ಮನೆ ರಮೆಯ ಮುಖದಿಂ | ಶ್ರೀವರನ ಮಹಿಮೆಗಳ ತಿಳಿದುಭಾವ ಶುದ್ಧಿಯ ಗೈದು ಸುಜನರ | ಸ್ವಾವಲಂಬಿಗಳೆನಿಸಿ ಪೊರೆವ 5
--------------
ಗುರುಗೋವಿಂದವಿಠಲರು