ಒಟ್ಟು 8 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವರೆವೆ ಧನ್ಯರಲ್ಲವೆ ಈ ಶರಣರು | ಈ ಶರಣರು | ಇವರೆವೆ ಧನ್ಯರಲ್ಲವೆ ಅವನಿಲಿ ಶರಣರು ಪ ಕರುಣಾನಂದವ ಪಡೆದು | ತರಣೋಪಾಯವನರಿದು | ಜರಿವನ್ಯ ಹಂಬಲವ ಬೆರೆದು | ಭಕ್ತಿರಸದೊಳು | ನಿರಪೇಕ್ಷ ವೃತ್ತಿಯಿಂದಾ | ಚರರಿಸುತಿಹ ಶರಣರು 1 ಭವ ಕಾನನವನೆ ತೊರೆವಾ | ನಿತ್ಯ ತಾನಾರೆಂಬುದು ನರಿವಾ | ಸ್ವಾನಂದಬೋಧವನು ಮಾನ | ನೀಗಿ ಶ್ರವಣದಿ | ಸಾನುರಾಗದಲಿಂದ ತಾನುಂಬ ಶರಣರು 2 ಹರಿಯಲ್ಲರೊಳಗರಿದು | ಶರೀರ ಭಾವನೆ ಮರೆದು | ಹರುಷದ ಗುಡಿಗಟ್ಟಿಬರುವ | ನಯನೋದಕದಿ | ಗುರುಮಹಿಪತಿಸ್ವಾಮಿ ಚರಣದ ಶರಣರು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಬೇಕೆನ್ನ ನೀ ಸದ್ಗುರು ರನ್ನಾ ಕಾಯೋ ನಂಬಿದೆ ನಾನು ಪ ಮರಹು ಮುನಿಯನು ಸೇರಿದೇ ನಾ ನನ್ನೊಳಗ ಅರವಪಥಜರಿದೇ ಕರುಣಾ ಸಾಗರ ನೆಂದು ಮೊರೆಯ ಹೊಕ್ಕೆನುಬಂದು ತರಣೋಪಾಯವೆನ್ನೊಳು ಸಾರಿ ಉದಾರೀ ದಯ ಬೀರಿ 1 ಆರರಿಗಳ ಕಾಟದೀ ಅವರಾಕೂಡೀ ಮೀರಲಾರೆನೋ ನಾನು ಶ್ರೀರಮಣನ ದಯದೊಲವಾ ನಿಶ್ಚಲವಾ ಕಳವಳವಾಗಳವಾ 2 ಮೀರಿದ ತೂರ್ಯಾಗಾರವ ಸುಖದಿಂದಲಿ ಸಾರುವಂದದಿ ಮತಿ ಬೀರೊ ಶ್ರೀಮಹಿಪತಿ ತಾರಿಸೋ ಕೊಟ್ಟು ನಿನ್ನೆಚ್ಚರವೆ ಘನ ಬೆರುವೆ ನಿಜದರುವೇ ಸುರತರುವೆ ಗುರುವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಭಕ್ತನೆವೆ ಧನ್ಯನು ಬಲು ಮಾನ್ಯನು ಪ ಗುರುದಯ ಸಂಗಡಿಯನು ಹಿಡಿದಿಹನು | ತರಣೋಪಾಯವ ಕೂಡಿದಾ ನಲಿದಾಡಿದಾ 1 ಅನ್ಯ ಮಾರ್ಗವ ನೋಡನು ತಾ ಕೂಡನು | ತನ್ನ ನಿಷ್ಠೆಯೊಳಾಡುವಾ ಗತಿ ಬೇಡುವಾ 2 ಗುರು ಮಾತೇ ಮಂತ್ರ ವೆಂಬನು | ಸವಿ ದುಂಬನು | ಗುರು ಸೇವೆಯಲಿ ಬಾಳುವಾ ಅದೇ ಕೇಳುವಾ 3 ಪುಂಡಲೀಕನ ಭಕ್ತಿಯಾ | ಆಸಕ್ತಿಯಾ | ಕಂಡು ತಾನೆವೆ ಬಂದನು ಮುಕುಂದನು 4 ಸಾರಥಿ | ನೆರೆ ಭಕ್ತಿ ಕೀಲ ಬೋಧನಾ ಹೇಳಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯ ನಂಘ್ರಿಯಾ ಹಿಡಿ ಹಿಡಿ ಹಿಡಿ ಪರಮ ಸದ್ಭಾವನೆ ಜಡಿ ಜಡಿ ಜಡಿ ಪ ಎರವಿನಾ ಮನೆಯೊಳು ಸ್ಥಿರವೆಂದು ಮೈಯ್ಯವ | ಮರೆವರೇ ಹರಿನಾಮಾ ನುಡಿ ನುಡಿ ನುಡಿ 1 ಕರವ ಮುಗಿದು ಬಾಗಿ ತರಣೋಪಾಯವ ನಿನ್ನ | ಅರಿತು ಸ್ವಹಿತದಲಿ ನಡಿ ನಡಿ ನಡಿ2 ತಂದೆ ಮಹಿಪತಿ ಕಂದಗೆಚ್ಚರಿಸಿದಾ | ಪಡಿ ಪಡಿ ಪಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿಗೆರಗೀ ತರಣೋಪಾಯವನರಿಯಲಿಲ್ಲಾ ಮನವೇ | ಮರುಳನೋ ತರಳನೋ ಬಲು ದುರುಳನು ನಾನರಿಯೇ ಪ ಶ್ರೀನಾಥನಂಘ್ರಿ ಕಮಲಾ ಧ್ಯಾನವಿಲ್ಲ ಮನವೇ | ಮಾನವನಫ ದಾನವನೋ ನೀದನವೇನೋ ನಾನರಿಯೇ 1 ರತಿಯ ಬಿಟ್ಟು ವಿಷಯದಲ್ಲಿ ಗತಿಯಾ ಜರದೀ ಮನವೇ | ಹಿತವೇನೋ ಮಿತವೇನೋ ಉನ್ಮತವೇನೋ ನಾನರಿಯೇ 2 ಪೊಡವಿಯೊಳು ನರದೇಹವ ವಿಡಿದು ಬಂದೆ ಮನವೇ | ನಡಿದೇನೋ ನುಡಿದೇನೋ ಸುಖಪಡಿದೇನೋ ನಾನರಿಯೆ 3 ಭಕ್ತಿ ಜ್ಞಾನಾ ಬಲಿವಾ ಸುವಿರಕ್ತಿ ಇಲ್ಲಾ ಮನವೇ | ಸಕ್ತನೋ ಯುಕ್ತನೋ ಆಯುಕ್ತನೋ ನಾನರಿಯೆ 4 ಗುರು ಮಹಿಪತಿ ಪ್ರಭು ಶರಣರ ಕಾಯ್ದಾ ಮನವೇ | ನರವರನೋ ಸುರವರನೋ ಕಲ್ಪತರು ವರನೋ ನಾನರಿಯೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರನಾದ ಮ್ಯಾಲ ಹರಿನಾಮ ಜಿವ್ಹೆದಲಿರಬೇಕು ಪ ಗುರುವಿನ ಬರಣಕ ನಂಬಿರಬೇಕು| ತರಣೋಪಾಯವನರಿಯಲಿ ಬೇಕು| ವಿರತಿಯ ಮಾರ್ಗದಿ ನಡೆಬೇಕು 1 ಪರ ಬೇಕು| ಪಾತಕ ತನವನು ಜರಿಯಲಿಬೇಕು| ಮಾತು ಮಾತಿಗೆ ಹರಿಯೆನಬೇಕು 2 ಶಾಂತಿಯ ಶಮೆದಮೆ ಹಿಡಿಯಲಿಬೇಕು| ಭ್ರಾಂತಿಯ ಕ್ರೋಧವ ನಳಿಯಲಿಬೇಕು| ಸಂತರ ಸಂಗದಲಿರಬೇಕು 3 ತಂದೆ ಮಹಿಪತಿ ದಯ ಪಡಿಬೇಕು| ಬಂದದನುಂಡು ಸುಖದಿರಬೇಕು| ಎಂದೆಂದು ಭಕ್ತಿ ಬಲಿಬೇಕು4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬನ್ನ ಬಡಿಸುವುದು:ಖನೀಗುವಂತೆ ಸಿರಿ ಮನ್ನಣೆಯ ಪಡಿಯ ಕಂಡ್ಯಾಮನವೆ ಪ ಘನ್ನವಿದ್ಯದಮಬ್ಬಿಲಿನ್ನ ಖಳಜಗದ ಜೀ ವನ್ನ ಮಲಗಿದೆರೊಳಗ ಮುನ್ನ ಮಾಡಿದ ಸುಕೃತ ಪುಣ್ಯ ತಂಗಾಳಿ ಸಂಪನ್ನ ಗುರು ಕರುಣೋದಯ ದುನ್ನತೆಯ ಬೆಳಗು ಕಂಡು ಸನ್ನುತುದಯರಾಗಸ್ತವನ್ನು ಪಡುತಜ್ಞಾನ ಚನ್ನ ನದಿಯೊಳುಮಿಂದು ತನ್ನ ಸಂಚಿತದ ತ್ರೈಯ ಘ್ರ್ಯನ್ನೆರದು ಮೆರುವುತಿಹ ನಿನ್ನ ಸಿರಿಕರ ನೋಡು ಇನ್ನು ನಾಚಿಕೆ ಬಾರದೇ 1 ಬಂದು ನರದೇಹದಲಿ ನಿಂದಾಗ್ರ ಜನ್ಮದಲಿ ಹೊಂದುಪಥವನೆ ಬಿಟ್ಟು ಛಂದ ಹೊಲಬದಿ ಕೆಟ್ಟು ಮಂದಮತ ತನವೆರಿಸಿ ಮಂದಿಯೊಳಗಲ್ಲೆನಿಸಿ ಪರಿ ಪರಿಯ ಬಯಸೀ ಬೆಂದ ವಡಲನೆ ಹೊರೆದಿ ಕುಂದದಾಟಕೆ ಬೆರೆದಿ ತಂದಾಯುಷವ ಹೊತ್ತು ಇರದಯೇರಿತು ಬೆರೆತು ಮುಂದ ನಿನ್ನಯ ಗತಿಯ ಯಂದು ಘಳಿಸುವೆ ಸ್ಥಿತಿಯಾ ಇಂದಿರೇಶನ ವಲುಮೆಯಾ 2 ಮರಹು ಮುಸುಕವ ತೆಗೆದು ಅರಹುನಯನವ ತೆರೆದು ಪರಮ ಭಾವನೆ ಬಲಿದು ವರ ಭಕುತಿಗಳ ಜಡಿದು ತರಣೋಪಾಯವ ಕೂಡು ಹರಿಯ ಸೇವೆಯ ಮಾಡು ನೆರೆ ಸಾಧು ಸಂಗ ಬೇಡು ಸುರಸ ಬೋಧವ ಕೇಳು ಸರಕುಮಾತನೆ ಕೀಳು ಧರಿಯೊಳಗ ಸಾರ್ಥಕಲಿ ಪರಿಬಾಳುತಲಿರಲಿ ಗುರು ಮಹಿಪತಿಸ್ವಾಮಿ ಹೊರೆವದಯದಲಿ ನೇಮಿ ಶರಣ ಜನರಂತರ್ಯಾಮೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಶ್ರೀ ರಾಘವೇಂದ್ರತೀರ್ಥರು ಆನೆಂತು ತುತಿಪೆ ನಿನ್ನ - ಮಂಚಾಲಿ ರನ್ನ ಪ ಆನೆಂತು ತುತಿಪೆ ನಾ - ಮಾನಮೇಯದಿನಿಪುಣಗಾನ ವಿಶಾರದ - ಶ್ರೀನಿವಾಸನ ದೂತ ಅ.ಪ. ಕೃತಯುಗದಲಿ ನೀನು | ದಿತಿಜ ವಂಶದಿ ಬಂದುವಿತತ ವಿಶ್ವಾಧಾರ | ಕೃತಿಪತಿಯ ತುತಿಸಿ ಮುಕುತಿ ಪಥಕೆ ಸತ್ತರ ತಮ ಪಂಚಭೇದಮತಿಯೆ ಸಾರ್ಥಕವೆಂದು | ಹಿತದಿಂದ ಸಾಧಿಸೆಮತಿಭ್ರಾಂತನಾದಂಥ | ದಿತಿಜ ಗುರುವು ತಾನುಖತಿಯಿಂದ ನೋಡುತ್ತಲೀ || ಬಾಲಕರೆಲ್ಲಹತಭಾಗ್ಯರೆನ್ನುತ್ತಲೀ | ನೃಪಗೆ ಪೇಳೆಖತಿ ನಿನ್ನೋಳ್ ತೋರುತ್ತಲೀ | ದಂಡಿಸೆ ನಿನ್ನಪಿತಗೆ ಬುದ್ಧಿಯ ಪೇಳ್ದ | ಅತುಳ ಪರಾಕ್ರಮೀ 1 ಕಡು ವೇಗದಲಿ ಬಂದ | ಶಂಡ ಮರ್ಕನ ಕಳುಹಿಒಡ ಹುಟ್ಟಿದವನನ | ದಾಡೆದಂತಗಳಿಂದಬಿಡದೆ ಶೀಳಿದ ಹರಿಯ | ದೃಢದಿ ಪೂಜಿಪೆ ನೀನುಬಿಡು ಬಿಡು ಈ ಮತಿ | ಮೃಡನೆ ನಮ್ಮಯ ದೇವಪುಡುಕಿ ಆ ಹರಿಯನ್ನೆ | ಖಡುಗದಿಂದಲಿ ಅವನಕಡಿದು ಹಾಕುವೆನೆನ್ನುತ್ತ || ಕರೆದು ನಿನ್ನಕಡು ಭಾಗ್ಯ ಕೋ ಎನ್ನುತ್ತ | ಪೇಳಲು ನೀನುಮಿಡುಕದೆ ಬೇಡೆನ್ನುತ್ತ | ಬುದ್ದಿಯ ಮಾತದೃಢದಿ ಪಿತಗೆ ಪೇಳ್ದೆ | ಬಿಡೆನು ಹರಿಯ ಎನ್ನುತ್ತ 2 ಸಹೋದರಿ | ವರಲಕ್ಷ್ಮಿ ಮಾತೆಯಸ್ಮರಿಸಿ ಜೀವಿಸೆ ಅವನೂ || ರಕ್ಕಸ ನೋಡಿಭರದಿ ಖಡ್ಗವ ಸೆಳೆದೂ | ತೋರೊ ಕಂಬದಿಹರಿಯ ಎಂದು ಒದೆದೂ | ನಿಲ್ಲಲು ಪಿತಗೆನರಹರಿ ರೂಪವ ತೋರ್ದೆ | ಕ್ರೂರನ ಜರಿದೂ 3 ದಿಟ್ಟ ತರಳನ ಸಲಹೆ | ಗಟ್ಟಿ ಕಂಬದಿ ಬರೆಛಟ ಛಟ ಶಬ್ದಾ | ಜಾಂಡ ಕಟಹ ಬಿಚ್ಚೆಕಠಿಣ ಖಳನ ಪಿಡಿದು | ಜಠರವ ಭೇದಿಸಿಹಠದಿ ಕರುಳಿನ ಮಾಲೆ | ಕಂಠದಿ ಧರಿಸುತ್ತತೃಟಿಯು ಬಿಡದೆ ತನ್ನ | ಹಠದಿ ಭಜಿಪನಿನ್ನಸ್ಫುಟದಿ ಕರದೋಳತ್ತಿದ || ಮುದ್ದಿಸಿ ಬಲುದಿಟ ಭಟ ಎನೆ ಎನಿಸೀದ | ಮಗನ ಮಾತುದಿಟವ ಜಗಕೆ ತೋರಿದ | ವೆಂಕಟನ್ನಪಟುತರ ವ್ಯಾಪ್ತಿಯ | ಮಹಿಮೆ ಸ್ಫುಟದಿ ತೋರ್ದ 4 ದಶಶಿರ | ದೂತ ಹನುಮನ್ನವ್ಯಥೆಯ ಪಡಿಸೆ ಪೋಗಲೂ || ಖತಿಯಲಿ ಲಂಕೆಹುತವಹನಿಗೆ ಈಯಲೂ | ವಾತನ ನೀಪ್ರೀತಿಯಲ್ಲಾಶ್ರಯಿಸಲೂ | ಲಂಕೆಯ ಪುರನೀತಿಯಿಂದಲಿ ಆಳ್ದ | ಖ್ಯಾತ ದೂತನೆನಿಸಲೂ 5 ಪಾದ ಭಜಿಸಿದಿ 6 ಶೇಷಾವೇಶದಿ ಪುಟ್ಟಿ | ವ್ಯಾಸ ತೀರ್ಥರಾಗಿಮೀಸಲಾದ ಮತ | ದಾಶಯಗಳನೆಲ್ಲಸೂಸಿ ಪೇಳುತ್ತಲಿ | ಶೇಷಾಚಲದಿ ಶ್ರೀನಿವಾಸನ ದ್ವಾದಶ | ವರ್ಷ ಸೇವಿಸಿ ನೃಪತೀಶನ ಕುಹುಯೋಗ | ಲೇಸಾಗಿ ಕಳೆಯುತಆಶುಗತಿಯ ತತ್ವ ಮತವ || ಸ್ಥಾಪಿಸಿ ಬಲುಮೀಸಲು ತರ್ಕತಾಂಡವ | ನ್ಯಾಯಾಮೃತಭೂಸುರರ್ಗಿತ್ತು ನಾಯಕರ | ಪುರಂದರದಾಸರಾಯರ ಮಾಡ್ದ | ದಾಸ ಪಂಥೋದ್ಧಾರ 7 ವಿಹಂಗ ವಾಹನ ಶ್ರೇಷ್ಠನೂ || ಎಂದೆನಿಸುತ್ತತುಂಗ ತೀರದಲಿ ನೀನೂ | ರಾಮರ ಪಾದಭೃಂಗನೆಂದೆನಿಸಿ ಇನ್ನೂ | ವ್ಯಾಖ್ಯಾನದಿಶೃಂಗರಿಸಿದೆ ನಿನ್ನ | ಬಿಂಬ ಮೂರುತಿಯನ್ನೂ 8 ಮಾಸ ಭವ ವನಧಿಯತರಣೋಪಾಯವ ತೋರುತ್ತ | ಪವನಾಂತಸ್ಥಗುರುಗೋವಿಂದ ವಿಠಲನೆಂಬಾತ | ಗುಣ ಪೂರ್ಣಸರ್ವೋತ್ತಮನೆನ್ನುತ್ತ | ಕೀರ್ತಿಪೆ ನೀನು ನಿರುತ9
--------------
ಗುರುಗೋವಿಂದವಿಠಲರು