ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವೀಕರಿಸೈ ವೀಳ್ಯಮಿದನು ಶ್ರೀಕರಾಬ್ಜಪಾಣಿಯಿಂ ಪ. ಲೋಕನಾಥ ಪಾಲಿಸೆನ್ನ ಶ್ರೀಕಟಾಕ್ಷದಿಂದಲೆ ಅ.ಪ. ಪಚ್ಚಕರ್ಪೂರಯಾಲದಿಂದ ಹೆಚ್ಚು ವಾಸನೆಯನುತಳೆದ ಅಚ್ಯುತನೆ ವೀಳ್ಯಮಿದನು ಮೆಚ್ಚಿ ನೀಡುತಿರುವೆನು 1 ತಟ್ಟೆಯನ್ನು ಪಿಡಿದು ಎನ್ನ ರಟ್ಟೆಗಳಿದು ನೊಂದವೈ ಸಿಟ್ಟುಮಾಡದೀಗ ದಯದಿ ದಿಟ್ಟಿಸೈ ಮದೀಶನೇ 2 ಲಲಿತಗಾತ್ರ ಎನ್ನೊಳಿಂತು ಚಲಮಿದೊಳ್ಳಿತೇನೆಲೈ ಜಲಜನೇತ್ರ ಶೇಷಶೈಲನಿಲಯ ನಿನ್ನ ನಮಿಪೆನೈ 3
--------------
ನಂಜನಗೂಡು ತಿರುಮಲಾಂಬಾ