ಕರುಣ ಪಡೆಯಬೇಕು ಮನುಜ ಗುರುಗಳಾ ಪ.
ಕರುಣ ಪಡೆಯಿರೊ ಗುರು ಮಧ್ವರಾಯರ
ಹರುಷದಿ ಹರಿಯನು ನಿರುತದಿ ಸ್ಮರಿಸುವ ಗುರು ಅ.ಪ.
ಸ್ಮರಿಸಿದ ಮಾತ್ರದಿ ಶರಧಿಯ ದಾಟುತ
ವರಪ್ರದ ರಾಮನ ತÀರುಣಿಗುಂಗುರವಿತ್ತು
ಹರಿ ಕರುಣಾಮೃತವೆರಡು ರಾಮರ
ಚರಣ ಸ್ಮರಣೆಯನು ನಿರುತ ಕೊಡುವ ಗುರು 1
ಕಂತುಜನಕನ ಅಂತರವರಿತು
ನಿಂತು ಕೌರವ ಕುಲ ಸವರುತಲೆ
ಅಂತಕಗಿತ್ತಾ ಕಾಂತೆ ದ್ರೌಪದಿಯ
ಪಂಥವ ಸಲಿಶಿದ ಕುಂತಿತನುಜ ಗುರು 2
ಮಧ್ವ ಮುನಿಗಳಾಧ್ವರ ಪಾಲಕ
ಮುದ್ದು ಕೃಷ್ಣನ ಹೃದ್ಗಮಲದೊಳಿಟ್ಟ
ಅದ್ವೈತಿಗಳ ಸುವಾದಿಸಿ ಗೆದ್ದು
ಶುದ್ಧ ಶ್ರೀ ಶ್ರೀನಿವಾಸನ ಭಕ್ತರ ಗುರು 3