ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಪ ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಅ.ಪ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಈ ಮನಸ್ಸು ಇಟ್ಟು 1 ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2 ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3 ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4 ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ | ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
--------------
ವಿಜಯದಾಸ
ವರ್ಣಿಸಲು ಸಾಧ್ಯವೇ ಧರೆಯೊಳಿನ್ನ ವರದೇಂದ್ರಗುರು ನಿನ್ನವರ ಮಹಿಮೆಯ ಪ ದಶಪ್ರಮತಿ ಸುಮತಾಖ್ಯ | ಬಿಸಜನಿಧಿಗೆ ಉಡುನಾಥ ವಸುಧಿ ಸುಮನಸವ್ರಾತ | ನಮಿತ ಖಾತ | ವಸುಧೀಂದ್ರ ಕರಜಾತ | ಸುಶರಣರ ಸುಖದಾತ | ವಸುಧೀಶ ಪಸರಿಸಿದ | ಅಸಮ ತವ ಚರಿತೆಯನು 1 ಸಾರ ಕನ್ನಡದಲಿ ನೀರಚಿಸುತಲಿ ತಂತ್ರ | ಸಾರ ಮಂತ್ರವ ಪರಮ ಕಾರುಣ್ಯದಿ || ಶ್ರೀರಂಗನೋಲಿಸಿದ ಧಾರುಣಿಪ ದಾಸರಿಗೆ ಸಾರಿ ಪೇಳಿದ ಪರಮೋಧಾರ ಜಿತಮಾರ 2 ಗುಣನಿಧಿ ಪ್ರಾಣೇಶದಾಸಾರ್ಯರ ಮನೆಯ ಹಿತ್ತಲದೊಳಗೆ ಬಣವಿ ಬುಡದಲಿ ಬಂದು ಘನ ತುಲಸಿ ರೂಪದಲಿ ಜನಕೆ ತೋರಿಸಿ ಚಿತ್ರ 3 ವಾದದಲಿ ರಾಮಾಖ್ಯ ವಾದಿಯಪ ಜಯ ಪೊಂದಿ ಗಜ ಭೂಷಣಾದಿಗಳನು || ಮೋದ ಬಡಿಸಿ ನಿನ್ನ ಔದಾರ್ಯ ಗುಣವ 4 ಶಾಮಸುಂದರ ಮೂಲ ರಾಮಚಂದ್ರನ ಚರಣ ತಾಮರಸ ಷಡ್ಜಪರಮ ಸುಗಣ ಧೀಮಂತ ಶ್ರೀಮಂತ್ರಧಾಮ ನಿಲಯರ ಪೂರ್ಣ ಪ್ರೆಮ ಸತ್ವಾತ್ರ ಮಮ ಸ್ವಾಮಿ ಸುಚರಿತ್ರ 5
--------------
ಶಾಮಸುಂದರ ವಿಠಲ