ಒಟ್ಟು 11 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ನಾಲ್ಕು ಮೃಗಯಾಯೈ ಹಯಾರೂಢಂ ಗಹನೆ ಹಸ್ತಿನಾಹೃತಂ ಪದ್ಮಾವತೀ ಕಟಾಕ್ಷೇಷು ತಾಡಿತಂ ನËಮಿ ಶ್ರೀಪತಂ ವಚನ ಅಂದಿಗಾವೇಂಕಟನು ಇಂದು ಪೋಗಲಿಬೇಕೆಂದು ಸ್ಮರಿಸಿದ ಆ ಕ್ಷಣದಿ ಚೆಂದಾದ ಮೈ ಬಣ್ಣದಿಂದ ಇರುವುದು ಸ್ವರ್ಣ ಬಿಂದುಗಳು ಅಲ್ಲಲ್ಲೆ ಮೇಲ್ಗರಿಯಂ ಒಂದೊಂದು ಚಂದದರÀಳಲೆಯು ದೂರದಿಂದ ಹೊಳೆಯುವುದು 1 ಮತ್ತೆ ಸರಗಳನೆಲ್ಲ ಮತ್ತೆ ಪರಿಮಿತಿಯಿಲ್ಲ ಉತ್ತಮಾಶ್ವವ ತಾನು ಮತ್ತೆ ಮೇಲೆ ಸುತ್ತಿದನು ಕೌಸ್ತುಭ ಶಕ್ತವಸ್ತ್ರಾ2 ಊಧ್ರ್ವಪುಂಡ್ರಾಂಕಿತನು ಆಗಿ ಅಕಳಂಕಕೇಸರ ಕುಂಕುಮಾಂಕಿತ ಶ್ರೀಗಂಧ ಪೊಂಕದಲ್ಲಿ ಪಂಕಜಗಳಿಗೆ ಟೊಂಕದಲಿ ಏಲೆ ಅಡಿಕೆಸಣ್ಣ ಕೊಂಕು ಇಲ್ಲದ ಕನ್ನಡಿ ಕಟ್ಟಿದನು ವಸ್ತ್ರಾದಿಂದÀ 3 ಕಂಠದಲಿ ಇಟ್ಟು ಜರತಾರಿ ಒಂಟಿ ಚಾದರವನ್ನು ಕಂಠದಲಿ ಚಲ್ಲರಿಪುಕಂಟ- ಕಾಗಿರುವಂಥ ಒಂಟಿ ಬಂಟನಾಗಿ ಅಂಟರಾ ಬಿಗಿದು ನೂರೆಂಟು ವೈಕುಂಠನಾಥನು ಎಂಬ ಬಂಟನ ಕುದುರೆ ಹೊರಗ್ಹೊಂಟಿತಾಗ 4 ವೇಂಕಟನು ವನದಲ್ಲಿ ಘನವಾದ ಮದ್ದಾನೆಯನು ಹತ್ತಿ ನಡೆದ ವನಜ ಓಡುತ್ತ ಮುಂದೆ ಸಮ್ಮುಖವಾಗಿ ವಿನಯದಿಂದಲಿ ಸೊಂಡೆಯನು ಮೇಲೆತ್ತಿ ಗರ್ಜನವ ಮಾಡುತಲೆ 5 ಕಂಡು ಗಡಬಡಿಸಿದರು ಮುಗ್ಗುತಲೆ ಒಡಗೂಡಿ ಅಡಗಿದರು ಬೇಗ ದೃಢಭಕ್ತಿ ನಡೆದು ಅಲ್ಲಿಂದ ಹಣಹಣಿಕೆ ನೋಡ್ಯಡಗಿದರು ನಡೆಸಿದನು ಕುದರೆ 6 ಒದರಿದಳು ಅಮ್ಮಯ್ಯ ಏರಿ ನಮ್ಮೆದುರಿಗೆ ಚದುರನಾಗಿ ಮಧುರ ಹೆದರೆ ಬೇಡಿರಿ ನೀವು ಚದುರ ವೃತ್ತಾಂತವನು ಕೆದರಿ ಕೇಳಿರಿ ಅವನ ಇದರಿಗ್ಹೋಗಿ 7 ಬಂದು ಪುರುಷನ ನೋಡಿ ಇಂದು ಇಲ್ಲಿಗೆ ನೀನು ಬಂದ ಗಮನ ತಂದೆತಾಯಿಗಳ್ಯಾರು ಬಂಧು ಮಂದಿ ಎಲ್ಲರು ಏನೆಂದು ಕರೆವರು ನಿನಗೆ ಚಂದಾಗಿ ಕುಲಗೋತ್ರ ಒಂದು ಬಿಡದಲೆ ನಮ್ಮ ಮುಂದೆ ನೀಪೇಳು 8 ಇಂದು ನಮ್ಮ ಮುಂದೆ ಕೇಳಿರಿ ನಮ್ಮ ಕ್ರಮದಿಂದ ಹೇಳುವೆನು ಬಂಧು ತಾ ಬಲರಾಮ ಇಂದು ಸುಭದ್ರೆಯೆಂದೆನಿಸುವಳು ತಂಗಿ ಸುಂದರಾರ್ಜುನ ನಮ್ಮ ಹೊಂದಿರ್ದ ಬೀಗ 9 ಕೃಷ್ಣ ಪಕ್ಷದಲ್ಲಿ ನಾ ಕರೆವರು ಯೆನಗೆ ಕಿವಿಯಲ್ಲಿ ಇಟ್ಟು ಬಹುಸಂತೋಷ ಪೇಳಿರಿ ಎನಲು ಥಟ್ಟನೆ ನುಡಿದಳು ದಿಟ್ಟಪದ್ಮಾವತಿಯು ಸ್ಪಷ್ಟತಾನೆ 10 ಸುವಿವೇಕದ ವೃತ್ತಾಂತ ಶ್ರೀಕರಾತ್ರಿಯ ಗೋತ್ರ ಧರಣೀ ದೇವಿ ವಸುಧಾನ ತಾ ಖೂನ ಪದ್ಮಾವತಿಯು ನೀ ಕೇಳಿ ಆಕೆಯಮೇಲೆ ಸ್ವಲ್ಪ ಪುತ್ರಿ ತಾ ಕೋಪವನು ಎಂದಳಾ ಕಾಲದಲಿ ಹರಿ ವಿವೇಕದಲಿನುಡಿದ11 ಧ್ವನಿ ರಾಗ :ಶಂಕರಾಭರಣ ಭಿಲಂದಿತಾಳ ಇಷ್ಟು ಎನ್ನ ಮೇಲೆ ಏಕೆ ಸಿಟ್ಟು ಮಾಡುವಿ ಬಟ್ಟ ಕುಚದ ಬಾಲೆ ಬಹಳ ನಿಷ್ಠುರಾಡುವಿ 1 ಧಿಟ್ಟ ಪುರುಷ ನೀನು ನಡತೆಗೆಟ್ಟು ಇರುವರೆ ಖೊಟ್ಟಿ ಕುದುರೆಯೇರಿ ಮೈಯ ಮುಟ್ಟ ಬರುವರೆ 2 ಮೆಚ್ಚಿ ಬಂದೆ ನಿನಗೆ ನಾನು ಹೆಚ್ಚಿನ್ಹೆಂಗಳೆ ಇಚ್ಛೆ ಪೂರ್ಣಮಾಡು ನೀನು ಮಚ್ಚಕಂಗಳೆ 3 ಹೆಚ್ಚು ಕಡಿಮೆ ಆಡದೀರು ಹೆಚ್ಚಿನಾತನೆ ಎಚ್ಚರಿಲ್ಲ ಮೈಯ ಮೇಲೆ ಹುಚ್ಚು ಪುರಷನೆ4 ಏನು ಹೆಚ್ಚು ಕಡಿಮೆ ಆಡಿದೇನು ಅನುಚಿತ ನೀನು ಕನ್ಯಾ ನಾನು ವರನು ಏನು ಅನುಚಿತ 5 ಮೂಢನೀನು ಇಂಥ ಮಾತು ಆಡೋದುಚಿತವೆ ಬೇಡ ಅರಸಗ್ಹೇಳಿ ನಿನಗೆ ಬೇಡಿ ಬಿಗಿಸುವೆ 6 ಮಡದಿ ನಿನ್ನ ಕಡೆಯುಗಣ್ಣು ಕುಡಿಯ ಹುಬ್ಬುಗಳ್ ಕಡಿಯದಂಥ ಬೇಡಿ ಎನಗೆ ಕಡೆಗೆ ಅಲ್ಲವೆ 7 ಇಂದು ಪ್ರಾಣವ ತಂದೆ ಕಂಡರೀಗ ನಿನ್ನ ಕೊಂದು ಹಾಕುವ 8 ಜಾಣೆ ನಿನ್ನ ಬಿಡೆನು ಎನ್ನ ಪ್ರಾಣ ಹೋದರೂ ಪ್ರಾಣದರಸಿ ಎನಿಸು ಪಟ್ಟರಾಣಿಯಾಗಿರು 9 ಇಂದು ವ್ಯರ್ಥವು ಹಂದಿನಾಯಿ ಹದ್ದು ಕಾಗೆ ತಿಂದು ಬಿಡುವವು 10 ಎನ್ನ ಫಣಿಯಲ್ಲಿದ್ದ ಲಿಖಿತ ಮುನ್ನ ತಪ್ಪದು ಚನ್ನವಾಗಿ ನಿನ್ನಕೂಡಿ ಇನ್ನು ಇರುವುದು11 ಸೊಲ್ಲ ಕೇಳಿ ಸಿಟ್ಟಿನಿಂದ ನಿಲ್ಲೋ ಎಂದಳು ಎಲ್ಲ ಗೆಳತೆರಿಂದ ಕೂಡಿಕಲ್ಲು ಒಗೆದಳು 12 ಕಲ್ಲು ತಾಗಿ ಕುದುರೆ ಭೂಮಿಯಲ್ಲಿ ಬಿದ್ದಿತು ಬಲ್ಲಿ ದಾನಂತಾದ್ರೀಶನಲ್ಲಿ ಸ್ಮರಿಸಿತು 13 ವಚನ ಆ ಕುದುರೆಯನು ಆಗುತ ವಿವೇಕದಲಿ ಪರಿ ಆಯಿತೀಕಾಲದಲ್ಲೀ ಲೋಕದಲಿ ಕಾಲಬೀಳದಲೆ ಆಕಾಲ ದಲಿ ಹೊರಟೆ ಆ ಕಾರಣದಿಂದೆನಗೆ ಸಂಕಟವು ಸೋಕಿತಿ ಮಾಡಿದ ಕರ್ಮಫಲ ದೊರೆಯದಿರದು 1 ಗಿರಿಯೇರುತಲೆ ತಾನು ಮೂಕತನದಲಿ ಶೇಷಾಯಿಯಂತೆ ಮುಂದಕೆ ಅನೇಕ ಕರೆದು ಕೊಡುವವನ ಶ್ರೀ ಕರುಣದಿ ಆಯಿತು ನಾಲ್ಕು ಅಧ್ಯಾಯ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ಜನ್ಮನಾಕಾಶನಂದಾ ವಸುಧಾನಾಗ್ರಜಾ ನಿಜಾನ್ ಪದ್ಮಾವತೀ ಪದ್ಮಭವಾ ವನಕ್ರೀಡಾರತ್ಯಾವತಾತ್ ವಚನ ಸಂದರ್ಶನಾದದ್ದು ತಂದೆಯ ಕಥೆಸ್ಮøತಿಗೆ ತಂದು ಅದು ವಿಸ್ತಾರದಿಂದ ಪೇಳುವೆನು ಸುಧರ್ಮನೆಂದು ಇರವನು ಅವಗೆ ಮುಂದೆ ಇಬ್ಬರು ಸುತರು ಚಂದದಲಿ ಆಕಾಶನೆಂದು ತೊಂಡಮಾನಸೆನಿಸುವನು 1 ವ್ಯಾಕುಲದಿ ಹೀಗೆ ಇಲ್ಲೆಂದು ಶೋಕದಲಿ ಕಣ್ಣೀರು ಹಾಕಿ ಸ್ಮರಿಸಿದ ದೇವಲೋಕ ಗುರುವ ಯಾಕೆ ಸ್ಮರಿಸಿದೆ ಎನ್ನನೀಕಾಲದಲಿ ಏನುಬೇಕು ಬೇಡಲೋನೀನು ನಾ ಶೋಕವನು ನುಡಿದಾ2 ಪಾಪಿಷ್ಠ ಏನು ಇದ್ದೇನು ನಾನು ಮಾಡಿದ ಪೇಳೋ ಹೀನಬುದ್ಧಿ ಕೊಲಿಸಿದೆನೇನು ಏನು ಕಾರಣ ಸಂತಾನ ಕಣ್ಣಿಲಿ ಕಾಣೆ ನಾನು ಅಯ್ಯಯ್ಯೊ 3 ಮಕ್ಕಳಾಡಿದರೆ ಬಹಳಕ್ಕರತೆ ಜೀವಕ್ಕೆ ಮಕ್ಕಳಿಲ್ಲದೆ ಮತ್ತೆ ಮಿಕ್ಕರಸ ಮಕ್ಕಳಿÀಂದಲೆ ಹಬ್ಬ ಹುಣ್ಣಿಮೆಯು ಉಲ್ಲಾಸ ಮಕ್ಕಳಿಂದಲೆ ಮುಂಜಿ ಮದುವೆಯ ಧರೆಯೊಳಗಿಲ್ಲ ಮಕ್ಕಳಿಂದಲೆ ಇಹವು ಮಕ್ಕಳಿಂದಲೆ ಪರವು ಮಕ್ಕಳಿಲ್ಲೆನ್ನ ಭಾಗ್ಯಕ್ಕೆ ಅಯ್ಯಯ್ಯ 4 ನೋಡಿಲ್ಲ ಮಕ್ಕಳಾಡಿದ ಮಾತು ನಕ್ಕು ಕೇಳಿಲ್ಲ ನಾ ಮಕ್ಕಳಿಂದಲೆ ಕೂಡಿ ಅಕ್ಕರದಿ ಉಣಲಿಲ್ಲ ಮಕ್ಕಳನು ಎತ್ತಿ ಮುದ್ದಿಕ್ಕಿದವನಲ್ಲ ಮಕ್ಕಳಿಲ್ಲದ ಮನುಜ ಲೆಕ್ಕದಾವದರೊಳಗೆ ಬೆಕ್ಕು ಮೊದಲಾದಂಥ ಮಿಕ್ಕ ಪ್ರಾಣಿಗಳೆಲ್ಲ ಮಕ್ಕಳಾಡಿದ ಬಹಳ ಚಕ್ಕಂದವನು ನೋಡಿ ಸೌಖ್ಯ ಪಡುತಿಹದಯ್ಯ ಧಿಕ್ಕರಿಸು ಎನ ಜನ್ಮ ಅದಕ್ಕಿಂತ ವ್ಯರ್ಥ 5 ಮುನ್ನ ನಮ್ಮೊಳಗಾರು ಉಣ್ಣದಲೆ ಈ ಬದುಕು ಮಣ್ಣು ಪಾಲಾಗುವದು ಘನ್ನ ಈ ಚಿಂತಿಯಲಿ ಬಣ್ಣಗೆಟ್ಟೆನು ಕುದ್ದು ಸುಣ್ಣಾದೆನಯ್ಯ ಉಭಯಕುಲ ತಾರಿಸುವಂಥ ನಾನು ಅಣ್ಣತಮ್ಮರ ಒಳಗೆ ಪುಣ್ಯ ಇಲ್ಲೊಬ್ಬನಲಿ ಪುಣ್ಯಗುರುವೆ 6 ರಾಗ:ಶಂಕರಾಭರಣ ಆದಿತಾಳ ಇಂಥ ಮಾತಿಗೆ ಜೀಯ ಹೀಗಂತ ನುಡಿದನು ಚಿಂತೆ ಮಾಡಬೇಡ ಭೂಕಾಂತ ಎಂದನು 1 ಪುತ್ರ ಕಾಮೇಷ್ಟಿಮಾಡು ಭಕ್ತಿಯಿಂದಲಿ ಪುತ್ರನಾಗುವನು ನಿಮಗೆ ಸತ್ಯ ನೀ ತಿಳಿ 2 ಗುರುವಿನ ಮಾತುಕೇಳಿ ಪರಮ ಹರುಷದಿಂದಲಿ ಅರಸ ಬ್ರಾಹ್ಮಣರನೆಲ್ಲ ಕರೆಸಿದಾಗಲೇ 3 ಮುಂದೆ ಯಜ್ಞ ಮಾಡಬೇಕು ಎಂದÀು ತ್ವರದಲಿ ಒಂದು ಭೂಮಿ ಶೋಧಿಸಿದನು ಚಂದದಲಿ 4 ಚಲುವ ನೇಗಿಲ ಜಗ್ಗಿ ಎಳೆವ ಕಾಲಕೆ ಹೊಳೆವ ಪದ್ಮ ಬಂತು ಅಲ್ಲಿ ಸುಳಿದು ಮೇಲಕೆ 5 ಇರುವಳೊಬ್ಬಳಲ್ಲಿ ಮತ್ತೆ ಪರಮಸುಂದರಿ ಅರಸನೋಡಿ ಬೆರಗಿನಿಂತ ಸ್ಮರಿಸಿ ಪರಿಪರಿ 6 ಕಾಣಿಸಿದಲೆ ಗಗನದಲಿ ವಾಣಿಯಾಯಿತು ಕಾಣದಿದ್ದರೂ ಈಗ ಸಕಲಪ್ರಾಣಿ ಕೇಳಿತೊ 7 ಇನ್ನು ಚಿಂತೆ ಮಾಡಬೇಡ ಧನ್ಯ ಅರಸ ನೀ ನಿನ್ನ ಮಗಳು ಎಂದು ಚೆನ್ನಾಗಿ ತಿಳಿಯೋ ನೀ8 ಕ್ಲೇಶ ಹಿಂದೆ ಬಿಡುವಿಯೊ ಮುಂದೆ ಮುಂದಕಿನ್ನು ಆನಂದ ಬಡವಿಯೊ9 ಗಗನ ವಾಣಿಯನ್ನು ಕೇಳಿ ಅರಸ ಬಗೆಯಲಿ ಮಗಳ ನೆತ್ತಿಕೊಂಡನಾಗ ಮುಗಳು ನಗೆಯಲಿ 10 ತಂದೆ ಮಗಳ ಜನ್ಮ ಪದ್ಮದಿಂದ ತಿಳಿದನು ಮುಂದೆ ಪದ್ಮಾವತಿಯೆಂದು ಕರೆದನು11 ಮಗಳಕಾಲಗುಣದಿ ಮುಂದೆ ಮಗನು ಆದನು ಅವನ ಕರೆದ ವಸುಧಾನನೆಂದು ಗಗನರಾಜನು 12 ತಕ್ಕವಾಗಿ ಅರಸಗ್ಹೀಗೆ ಮಕ್ಕಳಾದರು ಸೌಖ್ಯದಿಂದ ಮುಂದೆ ದಿನದಿನಕ್ಕೆ ಬೆಳೆದರು13 ಬಂತು ಯೌವನವು ಭೂಕಾಂತ ಪುತ್ರಿಗೆ ಬಂತು ಆಗ ಮತ್ತೆ ಬಹಳ ಚಿಂತೆ ಅರಸಗೆ 14 ಇಂಥ ಮಗಳಿಗಿನ್ನು ತಕ್ಕಂಥ ಪುರುಷನು ಪ್ರಾಂತದೊಳಗೆ ಇಲ್ಲದಿವ್ಯ ಕಾಂತಿ ಮಂತನು 15 ಎಂತು ನೋಡಲಿನ್ನು ಹುಡುಕಿ ಶ್ರಾಂತನಾದೆನು ಚಿಂತೆಯೊಳಗೆ ಬಿದ್ದು ಮುಂದೆ ಪ್ರಾಂತಗಾಣೇನು 16 ಅಂತರಂಗದೊಳಗೆ ಹೀಗಂತ ಅನುದಿನ ಚಿಂತಿಸಿದನು ಮರೆತು ಅನಂತಾದ್ರೀಶನ17 ವಚನ ಚಂದಾದ ಕುಸುಮಗಳ ಕೂಡಿ ಮುಂದೆ ಇಂದು ಮುಖಿಯು ನೋಡುತಲೆ ಮುಂದೆ ತೆಗೆದು ತ್ವರದಿಂದ ಆಭರಣಗಳ ಮುಂದೆ ತರಿಸಿದಳು1 ಕೆತ್ತಿಸಿದ ರಾಗುಟಿಯ ಒತ್ತಿ ಮೊದಲ್ಹಾಕಿ ಹತ್ತೊತ್ತಿದಳು ಸಾಲ್ಹಿಡಿದು ಇತ್ತಿತ್ತು ಮತ್ತೆ ತುದಿಗೆ ಅತ್ತಿತ್ತ ಮತ್ತ ಮೇಲರಿಸಿನವ ಚಿತ್ತಗೊಟ್ಟಚ್ಚಿದಳು ಚಿತ್ತಾರ ಬರೆದಂತೆ ಮತ್ತ ಗಜಗಮನೆ 2 ಥಳಥಳನೆ ಜಾತಿಯಿಂದ್ಹೊಳೆವ ಮುತ್ತಿನ ಭವ್ಯ ಎಳೆಯ ಇಮ್ಮಡಿ ಮಾಡಿ ನಳಿನಾಕ್ಷಿ ಬೈತಲಗೆ ಅಳತೆಯಿಂದ್ಹಾಕಿದಳು ತಳಪಿನಲಿ ಎಡಬಲಕೆ ಎಳೆದು ಕಟ್ಟಿದಳ್ಹಿಂದೆ ಹೆರಳಿಗ್ಹಾಕಿ ತೊಳೆದ ಮುತ್ತಿನ ಬುಗಡಿ ಪೊಳೆವ ಮೀನ್ಬಾವಲಿಯು ಝಳಿ ಝಳಿತವಾಗಿರುವ ಗಿಳಿಗಂಟಿ ಚಳತುಂಬುಗಳ ನಿಟ್ಟು ಕರ್ಣದಲಿ ಉಳಿದ ದ್ರಾಕ್ಷಾಲತೆಯ ಎಳೆದು ಬಿಗಿದಳು ಮೇಲೆ ಸುಳಿಗುರಳಿನಲ್ಲಿ 3 ಇದ್ದ ಮುತ್ತುಗಳ್ಹಚ್ಚಿ ತಿದ್ದಿ ಮಾಡಿದ ನತ್ತು ಉದ್ರೇಕದಿಂದಿಡಲು ಮುದ್ದು ಸುರಿವುತ ಮುಂಚೆ ಇದ್ದ ಮುಖ ಮತ್ತೆ ಎದ್ದು ಕಾಣಿಸಿತು ಪ್ರದ್ಯುಮ್ನ ಚಾಪದಂತೆರಡÀು ಹುಬ್ಬುಗಳ ಮಧ್ಯೆ ನೊಸಲಿನ ಮೇಲೆ ಶುದ್ಧ ಕಸ್ತೂರಿಯನ್ನು ತಿದ್ದಿ ತಿಲಕವನಿಟ್ಟು ತಿದ್ದಿದಳು ಕಾಡಿಗೆಯ ಪದ್ಮಲೋಚನಗಳಿಗೆ ಪದ್ಮಜಾತೆ 4 ಚಂದ್ರಗಾವಿಯನ್ನುಟ್ಟು ಚಂದಾದ ಕುಪ್ಪಸವ ಮುಂದೆ ಬಿಗಿ ಬಿಗಿತೊಟ್ಟು ಮುಂದಲೆಗೆ ಶೋಭಿಸುವ ಚಂದ್ರಸೂರ್ಯರನಿಟ್ಟು ಚೆಂದಾಗಿ ಬೈತಲೆಗೆ ಚಂದಿರವ ಸುರಿದಳು ಚಂದ್ರಮುಖಿಯು ಪರಿ ಗೀರು ಗಂಧವನು ಕೈಗ್ಹಚ್ಚಿ ಮುಂದೆ ಕೊರಳಿಗೆ ಒರಿಸಿ ಚಂದ್ರಸರ ಮುಂದೆ ಹಾಕಿದಳು 5 ಮೇಲಿಟ್ಟು ಚಿಂತಾಕವನು ಕಟ್ಟಿ ತಾಯತ ಬಟ್ಟಕುಚಗಳ ಏಕಾವಳಿಯ ಇಟ್ಟು ಪುತ್ಥಳಿ ಸರವು ಅಷ್ಟು ಸರಗಳನೆಲ್ಲ ಮೆಟ್ಟಿ ಮೇಲ್ಮೆರೆವಂಥ ಶ್ರೇಷ್ಠ ಸರಿಗಿಯತರಿಸಿ ಇಟ್ಟಳಾಕೆ6 ಟೊಂಕದಲಿ ಒಡ್ಯಾಣ ಮುಂದಲಂಕರಿಸಿದಳು ಪೊಂಕದಿಂದಿಟ್ಟು ಅಕಳಂಕ ಕೊಂಕವನು ಮಾಡುತಲೆÉ ಕಿಂಕಿಣಿಪೈಜಣ ಇಟ್ಟಳಾಕೆ7 ಪಿಲ್ಲೆ ಮೇಲಾದ ಮುಸುಕಿಕ್ಕಿ ಬಹು ಬಾಲೆಯರು ಕೊಟ್ಟ ಕೂಡಿ ಭಾಳ ಹರುಷದಿ ಹೊರಟಳಾಕಾಲದಲ್ಲಿ. 8 ವಚನ ಪರಿ ಗಜಗಮನದಿಂದಾ ವನ ಮದನ ಸತಿಯಂತಿಪ್ಪ ತರುಣಿರೂಪವ ತಾಳಿ ವನಮಧ್ಯದಲ್ಲಿ ತಾಂ ಬೆಸಗೊಂಡಳು ಯಾರಲೆ ಬಾಲೆ ನೀ ಬಾಲಚಂದ್ರ ಲಲಾಟೆ ಕಾಳಾಹಿ ವೇಣೀ ನೀ ಜಾತೆಯರ ಕೂಡಿ ಬಳಗವು ಕಾಂತನ್ಯಾರು ಪೇಳೆಂದು 1 ಧ್ವನಿ ಕೇಳೆ ಕುಸುಮಕ್ಕೆ ನಾ ಬಂದೆ ತಿಳಿಯೆ ಮಾತಿನರಗಿಳಿಯೆ 1 ಅಸಮ ತೋಂಡಮಾನನೆಂಬುವನು ನಮ್ಮ ಕಕ್ಕನು 2 ನಾ ಖೂನವನು ಪೇಳಿದೆ ಸಾರಿ ಪೇಳಿದೆ &ಟಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಓಂಕಾರ ಪ್ರತಿಪಾದ್ಯ ಶಂಖಚಕ್ರಾಭಯಕರ ಬಿಂಕದಿಂದ ಬಾಕು ಟೊಂಕದಿ ಕಟ್ಟಿ ಮೆರೆವ ದೇವ 1 ಇಷ್ಟು ಜನರ ರೋಗ ತೊಟ್ಟಿ ತೀರ್ಥದಿಂದ ಕಳೆವ ಕಷ್ಟದ ಕಂಕಣ ಕಟ್ಟಿ ಮೆರೆವ ದೇವಾ 2 ದೇಶದೇಶದಿ ಬರುವ ದಾಸ ಜನರ ಅರ್ಥಿ ಕಾಸುವೀಸಕೆ ಕೊಟ್ಟು ಲೇಸಾಗಿರುವಿಯಿಲ್ಲಿ 3 ನಾಮ ತೀರ್ಥ ಪ್ರಸಾದ ಕಾಮಿಸೆ ವಿಕ್ರಯಿಸುವ ನೇಮಗಳನೆ ಕೊಟ್ಟು ತ್ರಿಧಾಮ ನಿಲಯನೆ 4 ಮಂಗಳ ಮಹಿಮನೆ ಗಂಗಾಜನಕನೆ ಅಂಗಜನಯ್ಯನೆ ವೆಂಕಟರಮಣನೆ 5 ತಾಳ ತಂಬೂರಿ ದಮ್ಮಡಿ ಮೇಳದೊಳು ದಾಸರು ವೇಳೆ ವೇಳೆಗೆ ಸೇವಿಸೆ ಕಾಳ ದೋಷವ ಕಳೆವ 6 ರಮಾ ಸೇವಿತÀ ವಿಜಯ ರಾಮಚಂದ್ರವಿಠಲ ನಿತ್ಯ ನಿನ್ನ ನಾಮಗಳನೆ ನುಡಿಸೊ 7
--------------
ವಿಜಯ ರಾಮಚಂದ್ರವಿಠಲ
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತ 'ಠ್ಠಲನ ಕಂಡು 1ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ 'ಠಲನಾದ 2ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ 'ಠಲನಾದ 3ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ 'ಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿ'ಠಲಗೆ 5ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ
--------------
ಭೂಪತಿ ವಿಠಲರು
ನೋಡಿದೆ ವೇಂಕಟ ನಿನ್ನ ಪ ಕೊಂಡಾಡಿ ಬೇಡಿದೆ ವರವನ್ನ ಆಹಾ ರೂಢಿಯೊಳಗೆ ನಿನಗೆ ಈಡುಗಾಣೆನೊ ದೇವ ನಾಡುದೈವಗಳೆಲ್ಲ ಒಡಿಪೋದವೊ ಸ್ವಾಮಿ ಅ.ಪ ಮಣಿಗಣಮಯದ ಕಿರೀಟ, ಕಪ್ಪುವ ರಣಕುಂತಲದ ಲೋಲ್ಯಾಟ, ಯುಗತ ರಣಕುಂಡಲ ಬಹು ಮಾಟ ಅರ ಗಿಣಿ ಶÀಶಿಪೋಲ್ವ ಲಲಾಟ ಆಹಾ ಎಣೆಗಾಣೆ ಕಸ್ತೂರಿ ಮಣಿರ್ದಿಪ ಭ್ರೂಯುಗ ಕುಣಿಯುತ ಸ್ಮರಧನು ಗಣಿಸದೊ ಎಲೋದೇವಾ 1 ವಾರಿಜಯುಗಸಮನಯನ, ನಾಸ ಚಾರುಚಂಪಕ ತೆನೆ, ವದನದೊಳು ತೋರುವ ಸುಂದರರದನ ಪಂಕ್ತಿ ಸಾರಿದಾಧರ ಬಹು ಅರುಣ, ಆಹಾ ಸಾರಸಮುಖದೊಳು ಸೇರಿ ಶೋಭಿಪ ಚುಬಕ ಕೂರುಮಯುಗಕದಪು ಸಾರಕಟಾಕ್ಷವ 2 ಕಂಧರಾಂಕಿತ ಸತ್ರಿರೇಖಾ, ಕಂಠ ಪೊಂದಿಪ್ಪೊದ್ವರ್ತುಲ ಕ್ರಮುಕ, ಕೊರಳ ಸುಂದರಕೌಸ್ತುಭಪದಕ, ಬಹು ಬಂಧುರ ಚೆÉೈತ್ರ ಸುರೇಖ ಆಹಾ ಹಿಂದೆ ಸಿಂಹÀದ ಹೆÉಗಲಿನಂದದಲೊಪ್ಪಿದ ಸ್ಕಂಧದಿ ಶೋಭಿಪ ಒಂದು ಸರಿಗೆಯನ್ನು 3 ಸ್ವನ್ನ ಏಕಾವಳಿಹಾರಾ, ಬಾ ಪುತ್ಥಳಿ ಸಿರಿಯಾಕಾರ, ಬಹು ಚನ್ನವಾಗಿಹ ನಾನಾಹಾರ, ಶುಭ್ರ ವರ್ಣ ಶೋಭಿಪ ಜನಿವಾರ ಆಹಾ ಇನ್ನು ಗುಂಡಿನಮಾಲೆ, ಘನ್ನ ಜಲಸರಪಳಿ ಉನ್ನತದಾನಘ್ರ್ಯ ರನ್ನ ಜಯಂತಿಯಾ 4 ಶಿರಿವತ್ಸಲಾಂಛನಹೃದಯ, ಸುರ ಕರಿಕರತೆರಬಾಹು ಶಿರಿಯಾ, ನಾಲ್ಕು ಕರಗಳೊಪ್ಪವವೀಪರಿಯ, ಮೇಲಿ ನ್ನೆರಡು ಹಸ್ತದಿ ಶಂಖ ಅರಿಯ ಆಹಾ ವರರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ ಕರತೋಡ ಕಡಗಕ್ಕೆ ಸರಿಗಾಣೆ ಧರೆಯೊಳು 5 ಪರಮವೈಕುಂಠದಕಿಂತ ಈ ಧರಿತಳವದಿಕವೆನ್ನು ತಾ ಬಲ ಕರದಿಂದ ಜನಕೆ ತೋರುತಾ ಬಾಹು ಎರಡು ಆಜಾನುಪೂರಿತಾ ಆಹಾ ಸ್ವರಣರತ್ನ ಖಚಿತ ವರನಾಗಭೂಷಣ ಧರಿಸಿ ಟೊಂಕದಿ ವಾಮಕರವಿಟ್ಟು ಮೆರೆವೋದು 6 ಹಸ್ತಯುಗದಿ ತೋಡ್ಯ ಕಡಗ, ಪ್ರ ಶಸ್ತ ರತ್ನದ್ಹರಳಸಂಘ ರಚಿತ ಸಿಸ್ತಾದÀ ಉಂಗುರ ಬೆಡಗ, ಬಹು ವಿಸ್ತರಾಂತರ ಭುಜಯುಗ ಆಹಾ ಹಸ್ತಿವರದ ಸಮಸ್ತಲೋಕಕೆ ಸುಖ ವಿಸ್ತಾರ ನೀಡುತ ಸಿಸ್ತಾದ ದೇವನ 7 ಉದರ ತ್ರಿರೇಖ ರೋಮಾಳಿನಾಭಿ ಪದುಮ ಶೋಭಿಪ ಗುಂಭಸುಳಿ ಮೇಲೆ ಉದಯಾರ್ಕ ಪೋಲುವ ಕಲೆ ಇಂದ ಸದಮಲಾಂಬರಪಟಾವಳಿ ಆಹಾ ಬಿದುರಶೋಭಿüತ ಮಹಾಚÀದುರದೊಡ್ಯಾಣವು ಪದಕ ಮುತ್ತಿನ ತುದಿ ವಿಧವಿಧ ಪೊಳೆವೋದು 8 ರಂಭೆ ಪೋಲುವ ಊರುಸ್ತಂಭ, ಇಂದು ಡಿಂಬ ಭಕ್ತ ಕ ದಂಬ ಮೋಹಿಪ ವಿಡಂಬ ಆಹಾ ಅಂಬುಜಾಸನಪಿತನ ತುಂಬಿದ ಮೀನ್ಜಂಘ ನಂಬಿದ ಜನರನ್ನ ಇಂಬಾಗಿ ಸಲಹೋನಾ 9 ಪರಡೆರಡು ಮಾಣಿಕ್ಯಾವರಣ, ಪೊಳೆವ ಕಿರುಗೆಜ್ಜೆನೂಪುರಾಭರಣ ಇಟ್ಟು ಮೆರೆವೊ ಗಂಗೆಯ ಪೆತ್ತ ಚರಣ ಯುಗ ನಿರುತ ಭಜಿಪರೊಳತಿ ಕರುಣ ಆಹಾ ಮರೆಯದೆ ಮಾಡುತ ಪರಿಪರಿ ಸೌಖ್ಯವ ಕರೆದುನೀಡುವನಹಿಗಿರಿವಾಸ ಶ್ರೀಶÀನ್ನ 10 ಪೋತೇಂದು ನಖಯುತ ಬೆರಳ ಸಾಲು ದೂತತತಿಗೆ ಸುಖಗಳನಿತ್ತು ನೀತಙÁ್ಞನ ಭಕ್ತಿಗಳ ನಿತ್ಯ ಪ್ರೀತಿಪಡೆಯೆ ಮುಕ್ತಿಗಳ ಆಹಾ ವಾತಗುರುಜಗನ್ನಾಥವಿಠಲನತಿ ನಿತ್ಯ 11
--------------
ಗುರುಜಗನ್ನಾಥದಾಸರು
ಪಂಢರಪುರವಾಸ ಪಾಲಿಸೊ ಶ್ರೀಶ ಪ ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ ಗಟ್ಯಾಗಿ ನಿಂತಿದ್ದ ವಿಠೋಬ ದಯಮಾಡೊ 1 ಪಾಂಡುರಾಯನ ಸುತ ಗಾಂಡೀವರ್ಜುನ ದೂತ ಬಂಡಿ ನಡೆಸಿದಾತ ಪುಂಡರೀಕ್ವರದನೀತ2 ಮುಕುತಿದಾಯಕ ಮುದ್ದು ರುಕುಮಿಯ ರಮಣನೆ ಭಕುತ ವತ್ಸಲಯೆನಗೆ ಸಕಲಾಭೀಷ್ಟವ ನೀಡೊ 3 ಬುಕ್ಕಿ ್ಹಟ್ಟು ತುಳಸಿಮಾಲೆ ಕಟ್ಟಿ ಕೊರಳಿಗೆ ಹಾಕಿ ದಾತ 4 ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲ್ಲಿಟ್ಟಿ 5 ಸೃಷ್ಟಿಸ್ಥಿತಿಯು ಜನಸಂರಕ್ಷಣೆ ಮಾಡಿ ನಿನ್ನ ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ 6 ಕಂಬದೊಳಗೆ ನಿಂತ ಪುರಂದರದಾಸರು ವಂದನೆಮಾಡೆ ಇವರೆ ನಾರಂದರೆಂದು ನಾ ತಿಳಿದೆ 7 ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ 8 ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ ಭೀಮೇಶಕೃಷ್ಣನ ಧ್ಯಾನ ಮಾಡುವೋದ್ವೈಕುಂಠಸ್ಥಾನ 9
--------------
ಹರಪನಹಳ್ಳಿಭೀಮವ್ವ
ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ. ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1 ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2 ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3 ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4 ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5 ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6 ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7
--------------
ವಾದಿರಾಜ
ಬಾ ಹರಿ ಬಾ ಹರಿ ಬಾ ಹರಿ ಬೇಗ ಶೌರಿ ಮುರಾರಿಯೆ ಬೇಗ ಪ ಅಂದಿಗೆ ಕಿರುಗೆಜ್ಜೆಗಳೊಲಿಯುತಲಿ ಚಂದದಿಂದಲಿ ನಲಿದಾಡುತ ಬಾರೈ 1 ಗುರುಳು ಕೂದಲು ಮುಖಹೊಳೆವೊ ಮುರಾರಿ ಪÀಣೆಯೊಳು ತಿಲುಕದ ಹೊಳೆವ ಶೃಂಗಾರಿ2 ಥಳಥಳಿಸುವ ಪೀತಾಂಬರ ಧಾರಿ ಎಳೆತುಳಸಿಯ ವನಮಾಲೆಯ ಶೌರೀ 3 ಕರ ಭೂಷಣಗಳು ಹೊಳೆಯೆ ಟೊಂಕದಿ ಕರಗಳನಿಡುತಲಿ ಬಾರೈ 4 ಕಾಮನಪಿತ ಕೊಳಲೂದುವ ಸೊಬಗು ಕಮಲನಾಭ ವಿಠ್ಠಲ ಬಲು ಬೆಡಗು5
--------------
ನಿಡಗುರುಕಿ ಜೀವೂಬಾಯಿ
ಲಕುಮಿ ರಮಣನು ಹೆಜ್ಜೆನಿಕ್ಕಲುಕಿಂಕಿಣಿ ಕಿಂಕಿಣಿ ಎಂದಿವೆ ಟೊಂಕದ ಗೆಜ್ಜೆ ಪ. ಲೆಕ್ಕವಿಲ್ಲದ ಹಗ್ಗ ತಂದುಚಕ್ಕನೆ ಕಟ್ಟೋಳು ಬಂದುಚಿಕ್ಕಟೊಂಕಲಿಂತೆಂದುಅಕ್ಕಜ ಬಟ್ಟಳಾಕೆ ಬಂದು1 ಧಿಟ್ಟನು ವರಳೆಳದು ತಂದುಥಟ್ಟನೆ ಮರ ಮುರಿದು ಬಂದುಸ್ಪಷ್ಟವಾದರೊ ಸೂರ್ಯರೆಂದುಕೊಟ್ಟ ಕೃಷ್ಣ ಅಭಯವೆಂದು2 ತೊಡೆಯ ನೇರುವಳೆ ಬಂದುನಡವ ವರ್ಣಿಸೆವೆÉಂದುನುಡಿಯಲಾರೆವಿತಂಡನುಡಿದಳುರಮೆ ಬಂದು 3
--------------
ಗಲಗಲಿಅವ್ವನವರು
ಶ್ರೀ ಪಾಂಡುರಂಗ ಪ್ರಾರ್ಥನೆ ಪಾದ ಅಮಿತ ನೀಲಮೇಘಶ್ಯಾಮ ವಿಠಲನ್ನ 1 ಶಿಲೆಯನುದ್ಧರಿಸಿರ್ಪ ಪಾದಕೆ ಬಲಿಯ ಮೆಚ್ಚಿದ ಪಾದಕಮಲಕೆ ನಲಿವಿನಿಂದಲಿ ನಮಿಸಿ ಪೊಗಳುವೆಕಲಿಮಲಂಗಳನೆಲ್ಲ ತರಿಯುತತಲೆಯೊಳಾಶೀರ್ವಾದವೀಯಲು ಬಿದ್ದು ಬೇಡುವೆನು 2 ಕ್ರೂರ ರಕ್ಕಸರುಪಟಳಂಗಳ ವೀರತನದಿಂ ಚಕ್ರದಡಗಿಸಿ ಮಾರಪಿತ ಭವದೂರ ಕಂಸರಲಿ ದಣಿಯುತಲಿ ಯಾರ ಗೊಡವೆ ನಮಗೇನು ಎನ್ನುತ ಶ್ರೀ ರಮಾವರ ದೇವಿ ಸಹಿತೀ ದಾರಿಯೋಳ್ಮಿಜ ಭಕ್ತಗಾಶ್ರಯನಾಗಿ ನಿಂತಿಹನೆ 3 ಕಾಯ ಧರಿಸಿದ ಭಕ್ತವರ್ಯನ ಮಾಯೆಯಿಂದಲಿ ನೋಡಿ ನಲಿಯಲು ಬಂದ ವಿಠ್ಠಲನೆತೋಯಜಾಕ್ಷಿಯಳಾದ ಲಕುಮಿಯರಾಯ ಶ್ರೀಹರಿ ನಿನಗೆ ಇಟ್ಟಿಗೆ ಯಾಯಿತೇ ಬಲು ಸಂಖ್ಯದಂಸನ ನಿಂತುಕೊಳ್ಳಿಲ್ಕೆ 4 ತಾತನಂಘ್ರಿಯ ಸೇವೆಗೆಯ್ದಿರು-ವಾತ ಬರ¯ಂದನಿಮಿಷಾಗ್ರಣಿ ತಾತ ನಿಂತೆಯ ಸೊಂಟದ ಮೇಲೆ ಕೈಯಿಟ್ಟುಮಾತೆಯಾದವರು ಹಾಗೆ ಸಂಗಡ ಪ್ರೀತಿಯಿಂದಲೆ ನಿಂತುಕೊಂಡಳು ಖ್ಯಾತಿಯಾಯಿತು ಪಾಂಡುರಂಗನ ಲೀಲೆ ಭಕ್ತರಲಿ 5 ಸತ್ತು ಹುಟ್ಟುವ ಬಾಧೆಯಿಲ್ಲದಸತ್ಯವಂತನೆ ಕೊಟ್ಟ ಇಟ್ಟಿಗೆ ಮೆತ್ತಗಿಹುದೆÉೀನಷ್ಟು ದಿವಸವು ನಿಂತುಕೊಂಡಿರುವೆಮತ್ತೆ ಪೇಳುವುದೇನು ದೇವನೆ ಸುತ್ತು ಮುತ್ತಿನ ಜಗಕೆ ಆಸರವಿತ್ತೆ ನಿನಗಾಸರವು ಯಾವುದು ಭಕ್ತವತ್ಸಲನೆ 6 ಹೇ ದಯಾನಿಧೆ ಯಾದವಾಗ್ರಣಿ ಮಂದವಾಖ್ಯನೆ ಭೀಮತಡೆಯೊಳು ಆದರಮ್ಮಿಗೆ ತೋರಿ ಕರೆದನೆ ನಿಮ್ಮನೀರ್ವರನು ಬಾಧೆಬಡುತೀ ನಿಂತ ಕಾಲಿಗೆಹಾದಿನೋಡುವವೆಷ್ಟೊ ಬೆಳೆಯುಚೋದ್ಯವಲ್ಲವೆ ನಿನ್ನ ಲೀಲೆಯು ದಿವ್ಯವಿಗ್ರಹನೇ 7 ಆದಿಮೂರುತಿ ನಿನ್ನ ಹುಡುಕಲುವೇದ ಶಾಸ್ತ್ರ ಪುರಾಣವೆಂಬವು ಹಾದಿ ಕಾಣದೆ ನಿಂತವಲ್ಲೈ ನೀನೆ ಬಂದೀಗಮೇದಿನೀ ತಳದಲ್ಲಿ ಭಕ್ತರಹಾದಿ ನೋಡುತ ನಿಂತುಕೊಂಡಿರೆಹೋದವೆಷ್ಟೋ ದಿವಸ ಶ್ರೀಹರಿ ನಿನ್ನ ಲೀಲೆಯಲಿ 8 ನೀಲಮೇಘ ಶ್ಯಾಮ ಕೀರ್ತಿಯ ಜಾಲವನ್ನುರೆ ಭಜನೆ ಮಾಡುತತಾಳಹಾಕುತ ಸಂತಮಂಡಳಿ ಕುಣಿದು ಬರುತಿರಲುಧೂಳವೇಳುವದನ್ನು ಕಣ್ಣಲಿವೇಳೆಗಳೆಯದೆ ನೋಡಿ ನಲಿವುದುಲೀಲೆಯಲ್ಲವೆ ಪಾಂಡುರಂಗನೆ ವಿಶ್ವಚಾಲಕನೆ9 ಸರಸಿಜಾಕ್ಷನೆ ಕರಗಳೆರಡನುಇರಿಸಿ ಟೊಂಕದೊಳೇನು ನೋಡುವಿಪರಮ ಭಕುತನ ತಂದೆ ತಾಯ್ಗಳ ಸೇವೆ ಮಾಡುವುದುದೊರೆಯಲಾರದೆ ಕಲಿಯ ಕಾಲದೆ ದುರಿತ ನೀಗಿಸಿಕೊಂಡನಲ್ಲವೆ ಆರುಗಿಯಾದರು ನೋಡಲೊಲ್ಲನು ಭಕ್ತಿಬಲದಿಂದ 10 ಚಿನ್ನದರಸನೆÉ ನಿನ್ನ ಕೈಯನುಘನ್ನ ಟೊಂಕದ ಮೇಲೆ ಇರಿಸುತನನ್ನಿಯಿಂ ಭರವಸೆಯ ಕೊಡುವಿಯೊ ಭವದ ಸಾಗರವುತನ್ನ ನಂಬುತ ದಾಟಿ ಹೋಗುವಸನ್ನುತಾತ್ಮರಿಗಿಷ್ಟಯೆಂಬುದ ಚೆನ್ನವಾಗಿಯೆ ತಿಳಿಸಲೋಸುಗ ಹೀಗೆ ನಿಂತಿಹೆಯಾ 11 ನಾನು ನಿನ್ನನು ಕರೆಯದಿದ್ದರು ನೀನೆ ಬಂದಿಲ್ಲೇಕೆ ನಿಂತೆಯೊ ದೀನಪಾಲಕನೆಂಬ ಬಿರುದನೆ ಕಾಯಲೋಸುಗವೇಶಾನೆ ಸಂಪದವಿದ್ದ ದ್ವಾರಕೆ ಯಾನೆ ಕುದುರೆಗಳಿಂದ ಶೋಭಿಪ ದಾನವಾಂತಕ ಕೃಷ್ಣರಾಯನೆ ಈಗ ಪಂಡರದೀ 12 ಕರ್ಮ ಮುಗಿದಿಹುದೇಮಿಕ್ಕಿದವರೇನನ್ಯಯ ಪುತ್ರರೆ ತಕ್ಕ ಯೋಚನೆಗೆಯ್ದು ನಂತರತೆಕ್ಕೆಯೋಳ್ಸಲಹುವದು ಲೇಸೈ ಭಕ್ತವತ್ಸಲನೆ 13 ಹಾಲು ಮೊಸರಾ ಬೆಣ್ಣೆಯುಂಡೆಯ |ಲೀಲೆಯಿಂದಲೆ ಕದ್ದ ಕಳ್ಳನೆಚ್ಯಾಳಿಬಲಿತಾ ಬಳಿಕ ಬಿಡುವೆಯಾ ಭಕ್ತರಂತಹರಗಾಳಿ ಸೋಂಕಿದ ನೆವ ಮಾತ್ರಕೆಜಾಲಬೀಸುತ ಕದ್ದು ಕೊಳ್ಳುವಿಹೇಳಲೇನೈ ಹಿಂದಿನೆಷ್ಟೊ ಜನ್ಮದಘನಿದನಾ 14 ನಿನ್ನನೇ ನೆರೆ ನಂಬಿ ಭಜಿಸುವಪುಣ್ಯವಂತರ ಹೃದಯಮಂದಿರ-ವನ್ನೆಮಾಡಿದ ಪಾಂಡುರಂಗನೆ ನೀನು ಜಗದೊಳಗೆಘನ್ನ ಪಾಪದಿ ಬಳಲುತಿರುವವ-ರನ್ನುಸಲುಹಲು ಬಂದೆಯೇನೈಸನ್ನುತಾಂಗನೆ ಭಜನಿಗೊಲೆಯುವ ದಿವ್ಯ ವಿಠ್ಠಲನೆ 15 ವೇದಗಳ್ಳನ ಸದೆದು ಬ್ರಹ್ಮಗೆ ಮೋದದಿಂದಲಿ ಕೊಟ್ಟ ಮತ್ಸ್ಯನೆಆದಿಕೂರ್ಮನೆಯಾಗಿ ಮಂದರನೆಗಹಿ ನಿಂದವನೇಬಾಧೆÉ ಬಿಡಿಸುವ ಕ್ರೂರ ರಕ್ಕಸಭೇದಿಯಾಗುತ ಧರಣಿ ಮಂಡಲಸೇದಿ ತಂದನ ನೀನೆಯಲ್ಲದೆ ದಿವ್ಯ ವಿಠ್ಠಲನೆ 16 ಒಂದೆ ಮನದೊಳು ನೆನೆದ ಕುವರಗೆಬಂದೆ ಕಂಬದೆ ನಾರಸಿಂಹನೆನಿಂದ ಮಾತ್ರಕೆ ಮೂರು ಪಾದದ ಭೂಮಿದಾನದಲೀತಂದು ಪಾತಾಳದಲಿ ಬಲಿಯನುಚಂದದಿಂದಲಿ ಇಟ್ಟ ವಾಮನತಂದೆಯಾಡಿದ ನುಡಿಯ ನಡಿಸಿದ ಭಾರ್ಗವತ್ತೀ 17 ಸೀತೆಗೋಸುಗ ರಾಮನಾಗುತಖ್ಯಾತಿಗೋಸುಗ ಕೃಷ್ಣನಾದೆಯಲೇಪ್ರೀತಿಗೋಸುಗ ಬಾಧ್ಯನಾಗುತ ಜಗವ ಪಾಲಿಸಿದ್ಯಾಜಾತಿಯಶ್ವವನೇರಿ ರಿಪುಗಳÁತ ಮಾಡಿದ ಕಲ್ಕ್ಯರೂಪನೇಯಾತಕೀಪರಿ ಚಂದ್ರಭಾಗದಿ ನಿಂತೆ ಬೆರಗಾಗಿ 18 ನಿನ್ನ ನಾಮಗಳಮಿತವಿದ್ದರುನನ್ನ ನಾಲಿಗೆಗಷ್ಟು ಬರುವವೆ ?ಸನ್ನುತಾಂಗನೆ ಪಾಂಡುರಂಗನೆ ದಿವ್ಯ ವಿಠ್ಠಲನೆನ್ನುತಿಷ್ಟೇ ನಾಮಗರೆವೆನುಚಿನ್ನದರಸನೆ ಭಕ್ತಸಂಘದೊಳೆನ್ನ ಕೂಡಿಸಿ ಕಾಯಬೇಕೈ ಪರಮ ಭಗವಂತಾ 19 ಕಾಲಕಾಲಕೆ ನೇಮನಿತ್ಯಗ-ಳಾಲಯಂಗಳ ಮಧ್ಯದೆಸಗದೆಜಾಲಿಯಂತೇಗೆಲ್ಲ ಜನರಿಗೆ ಬೆಳೆದೆ ಬಾಧಿಸುತಬಾಲ ಯೌವನ ವಾರ್ಧಿಕತ್ವದೆಕಾಲಪೋಯಿತು ನಿನ್ನ ನೆನೆಯದೇ ಹೇಳಲೇನೈ ಕಾಲನೆಳೆಯುವನು 20 ಕಂತು ಜನಕನೆ ನಿನ್ನ ನಾಮದಮಂತ್ರವೆನಗಿನ್ನೆಲ್ಲಿ ಬರುವುದು ಶುದ್ಧ ಪಶುವಾದೇಅಂತರಾತ್ಮನೆ ನೀನು ಈ ತೆರನಿಂತುಕೊಂಡರೆ ನನ್ನ ಗತಿಯೇ-ನೆಂತ ಹೇಳಲಿ ಸಂತೆ ತೀರಿತು ಸಲಹೊ ವಿಠ್ಠಲನೇ 21 ಕಾಲ ಬಂದಿದೆಸದ್ಯಕಾರೂ ಕಾವರಿಲ್ಲವುದ್ಧಪಾಶದಿ ಬಿಡಿಸಬಾರೈ ದೀನ ಬಾಂಧವನೇ 22 ಕಾಯಕಿರುವದ ಬಂಧು ಬಳಗವು ಹೇಯ ದುಡ್ಡನೆ ಶಳಯಲೋಸುಗಜೀಯ ನಿನ್ನಂತಾರು ಇಲ್ಲವು ಜೀವಕನು ಸರಿಸೀತಾಯ ತಂದೆಯ ಜಗಕೆ ಲಕ್ಷ್ಮೀರಾಯ ನೀನೇ ಅಲ್ಲವೇನೈ ಬಾಯ ಬಿಡುವೆ ಅಜ್ಞಬಾಲರ ಕಾಯೊ ವಿಠ್ಠಲನೇ 23 ಅಣ್ಣನಾಗುತ ದ್ರುಪದ ಸುತೆಗಾಬಣ್ಣದಂಚಿನ ಸೀರೆ ಉಡಿಸಿದೆನಿನ್ನ ಬಾಲ್ಯದ ಸುಖ ಸುಧಾಮಗೆ ಕೊಟ್ಟಿಯ್ಯೆಸಿರಿಯಹಣ್ಣಿನಾಶೆಗೆ ಶಬರಿ....ಗೊಲಿದೈಬೆಣ್ಣೆಯಾಶೆಗೆ ಗೋಪಿಗೊಲಿದೈಮಣ್ಣಿನಾಶೆಗೆ ಬಲಿಯ ಬಾಗಿಲ ಕಾಯ್ದ ವಿಠ್ಠಲನೇ 24 ನಿನ್ನ ನೆಂದು ಕಾಣದಿದ್ದವಕುನ್ನಿ ಪಾಮರನಣ್ಣನೆಂಬೆನೆಹಣ್ಣು ಹಂಪಲವೆನಗೆ ಸಾಲವು ನಿನಗೆ ಕೊಡಬಹುದೇನನ್ನ ತೆರದಾಚಾರ ಹೀನರೆಇನ್ನು ಗೆಳೆಯರು ನನಗೆ ಆದರುಮುನ್ನ ಮಾಡಿದ ಪಾಪ ಬಹಳಿದೆ ಕೊಳ್ಳೊ ನೀನದನೂ 25 ಹಿರಿಯರೆಸಗಿದ ಪುಣ್ಯದಿಂದಲೆದೊರಕಿತಲ್ಲವೆ ನಿನ್ನ ನೆನೆವುದುಪರಮ ಸುಂದರ ಪಾಂಡುರಂಗನೆ ಬಾರೊ ಮಾನಸದೀತರಳರಾಟದಿ ತನ್ನ ತಾಯಿಯಮರೆತ ತೆರದಿಂ ಬಿಟ್ಟು ಕೆಟ್ಟೆನುಕರಗದೇನೈ ನನ್ನ ಮನವದು ನಿನ್ನ ದೆಶೆಯಿಂದ 26 ಕೂಸು ಆಟದೊಳಿದ್ದರೇನೈಹೇಸಿ ಕೆಲಸಹೊಳಿದ್ದರೇನೈದೋಷಗಳೆಯುತ ಪೊರೆವಳಲ್ಲಿದೆ ಪಡೆದ ತಾಯವ್ವಶ್ರೀಶ ವಿಠ್ಠಲ ಪಾಂಡುರಂಗನೆಘಾಸಿಗೊಳಿಸುವ ಮುನ್ನಯವನರುಪಾಶ ಬಿಡಿಸೈ ಭಕ್ತವತ್ಸಲ ದಿವ್ಯ ವಿಠ್ಠಲನೇ 27 ಕಾಮನಯ್ಯ ಸುಧಾಮ ಸಖ ಶ್ರೀರಾಮ ವಿಠ್ಠಲ ದಿವ್ಯ ರೂಪನೆಪ್ರೇಮವೆನ್ನಲ್ಲಿಟ್ಟು ಸಲಹೊ ಪುಣ್ಯವರ್ಜಿತನೆತಾಮಸತ್ವದ ಕೆಲಸವೆಲ್ಲವನೇಮದಿಂದಲೆ ಮಾಡಿ ನಾ ನಿ-ಸ್ಸೀಮನಾಗಿಹೆ ಕಾಯೆಯೊ ವಿಶ್ವವ್ಯಾಪಿ ವಿಠ್ಠಲನೇ 28 ನಾನು ಹೇಳುವುದೇನು ದೇವನೆನೀನೆ ತಿಳಕೊಂಡಿರ್ಪೆ ಎನ್ನಯಮಾನಕುಚಿತಪ್ಪಂತೆ ಸತ್ಫಲ ಕೊಡು ದಯಾಂಬುಧಿಯೇನೀನು ನಿಂvಡೆÉಗೆನ್ನ ಜಗ್ಗುತಸಾನುರಾಗದೆ ಪೊರೆಯೊ ವಿಠ್ಠಲನೀನೆಯಾದರು ಬಾರೊ ಭಕ್ತರ ಹೃದಯ ಮಂದಿರಕೆ 29 ಮಂಗಳಂ ಮಧುಕೈಟಭಾರಿಗೆಮಂಗಳಂ ಶ್ರೀವತ್ಸಧಾರಿಗೆಮಂಗಳಂ ಬ್ರಹ್ಮಾಂಡ ಪಾಲಕ ಪಾಂಡುರಂಗನಿಗೆಮಂಗಳಂ ಶ್ರೀ ಲಕುಮಿದೇವಿಗೆಮಂಗಳಂ ಭೀಮಾತಟಾಕಿಗೆಮಂಗಳಂ ಸದ್ಭಕ್ತ ಮಂಡಳಿಗೆಗಳ ಭೂತಳಕೆ 30
--------------
ಪಾಂಡುರಂಗ