ನಂಬು ಮನವೆ ರಾಮಚಂದ್ರನಾ ದ |
ಯಾಂಬು ನಿಧಿ ಸದ್ಗುಣ ಸಾಂದ್ರನಾ||
ನಂಬಿದ ಭಕ್ತ ಕುಟುಂಬಿಯೆನಿಸುವ|
ಅಂಬುಜನಾಭನ ಹಂಬಲವಿಡಿದು ಪ
ದಶರಥ ಕೌಸಲ್ಯ ಬಸುರಿಲಿ ಬಂದು|
ಋಷಿಮಖ ರಕ್ಷಿಸಿ ಶರದಿ||
ಅಸುರೆಯ ಭಂಗಿರಿಸಿ ನಡೆಯಲಿ|ಮುನಿ|
ಅಸಿಯಳುದ್ದರಿಸಿ ಉಂಗುಟದಲಿ|
ಅಸಮ ಧನುವೆತ್ತಿ ವಸುಧಿಯ ಮಗಳ ವ
ರಿಸಿಕೊಂಡು ಬಂದನು ಕುಶಲವಿಕ್ರಮನಾ1
ಜನಕನ ವಚನಕ ಮನ್ನಿಸಿ|ಸತಿ|
ಅನುಜನೊಡನೆ ವಿಹರಿಸಿ|
ವನಚರ ಭೂಚರ ನೆರಹಿಸಿ|ದಾಟಿ|
ವನಧಿಯೊಳಗ ಗಿರಿಬಂಧಿಸಿ||
ಮುನಿದು ಮರ್ದಿಸಿ ದಶಾನನ ಮುಖ್ಯ|
ದನುಜರಾ ವನಸಿರಿ ಪದವಿ ವಿಭೀಷಣಗ ನೀಡಿದಾ2
ಸುರರಿಗೆ ನೀಡಿದಾನಂದನು|ಸೀತೆ|
ವರಿಸಿ ಅಯೋಧ್ಯಕ ಬಂದನು|
ಧರಿಸಿ ಸಾಮ್ರಾಜ್ಯದಿ ಹೊರೆದನು|ಗುರು|
ವರ ಮಹಿಪತಿ ನಂದನೊಡೆಯನು||
ಅರಿತು ಸದ್ಬಾವತಿ ಸರಿಸಲಿ ಸದ್ಗತಿ|
ಶೆರೆವಿಡಿದೆಳೆತಹದರಿಯಲೋ ನಾಮಾ3