ಪಾದ | ಸೋಕಿದ ಕೊನೆಧೂಳಿ ಪ
ತಾಕಿದ ಮನುಜರಿಗೆ ಕಾಕುಬುದ್ಧಿಗಳೆಲ್ಲ ಪರಿಹಾರವಾಗುವವೊ |
ಬೇಕಾದ ಪದವಿಯ ಕೊಡುವನು ಶ್ರೀ ಹರಿ ಅ.ಪ
ಮಧ್ವಮತವೆಂಬ ಅಬ್ಧಿಯೊಳಗೆ ಪೂರ್ಣ |
ಉದ್ಭವಿಸಿದ ಚಂದ್ರನಾ ಗುಣಪೂರ್ಣನಾ ||
ಅದ್ವೈತಮತÀ ತಮನಿಧಿ ನಿಶಿಕುಠಾರ |
ವಿದ್ಯಾರಣ್ಯವ ಗರುವಕೆ ಪರಿಹಾರ 1
ತತ್ವ ವಾರಿಧಿಗಳ ತತ್ವಸುಧೆಯ ಭಾಷ್ಯ |
ವಿಸ್ತರಿಸಿ ಇರಲು ಬೇಗದಲಿ ||
ಚಿತ್ರವಲ್ಲಭನÀ ಸೇವೆಯ ಮಾಡಿ ಟೀಕಂಗಳ ||
ಸುತ್ತೇಳು ಲೋಕಕ್ಕೆ ಪ್ರಕಟಿಸಿ ಮೆರೆವರ 2
ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |
ಬಿಂದು ಮಾತ್ರದಿ ನೆನೆಯೆ ||
ಮಂದ ಮತಿಯಾದರೂ ಅಜ್ಞಾನನಾಶವು |
ಸುಂದೇಹÀವಿಲ್ಲವು ಅವಾವ ಕಾಲಕ್ಕೆ 3
ಜ ಎಂದು ಪೊಗಳಲು ಜಯಶೀಲನಾಗುವ |
ಯ ಎನ್ನೆ ಯುಮರಾಯನಂಜುವನು ||
ತೀ ಎಂದು ಪೊಗಳಲು ತೀವ್ರ ಪದವಿ ಉಂಟು |
ರ್ಥ ಎಂದು ಪೊಗಳಲು ತಾಪತ್ರಯುಪಶಮನ 4
ಯೋಗಿ ಅಕ್ಷೋಭ್ಯತೀರ್ಥರ ಕರಕಮಲಸಂಜಾತ |
ಭಾಗವತರ ಸುಪ್ರೇಮ ||
ಕಾಗಿಣಿ ತೀರದ ಮಳಖೇಡ ನಿವಾಸಾ |
ಶ್ರೀ ಗುರು ವಿಜಯವಿಠ್ಠಲ ಸೇವಕ ಭಕ್ತಾ 5