ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓದಲೇಕೋ ಬರಿದೆ ಓದಲ್ಯಾಕೋ ಪ ಆದಿ ಮಧ್ಯ ಅಂತ್ಯವೆಂಬೊ ನಾದಬಿಂದು ಕಳೆಯನು ಅರಿಯದೆ ಅ.ಪ ಏಳಬೇಕೋ ನಾರಿಯಾಳಬೇಕೋ ಏಳು ಎಂಟು ಆತ್ಮವಿಚಾರ ತಾಳಿ ತತ್ವ ಜ್ಞಾನವನ್ನು ನೀಲಜ್ಯೋತಿಯನ್ನು ಕಾಣದೆ ಜಾಲಾಮಾನಿನಿಯರೊಳು ಬೆರೆದೂ 1 ಓದಬೇಕೋ ಓದದ್ದೋದಬೇಕೊ ಓದಿತಾವೊಂದಕ್ಷರವನ್ನು ಪಾದಸೇವೆಯನ್ನು ಕೊಟ್ಟಾ ಭೋಧಾಚಾರ್ಯನೆಂಬೊ ತುಲಸೀ ಆದಿಪ್ರಣವವನ್ನು ಬಿಟ್ಟುವೋದಲೇಕೊ 2
--------------
ಚನ್ನಪಟ್ಟಣದ ಅಹೋಬಲದಾಸರು
ಭವಗಳನು ಖಂಡಿಸೆಂದು ಬಂದು ಬೇಡಿದೆ ಪ ಅರುಹಿನೊಳಗೆ ಇರಿಸಿಯೆನ್ನ ಮರವೆಯನ್ನು ಅಳಿಸೊಮುನ್ನಾ ಪರಮ ನೀನೆಯಾಗಿಯಾ ನಿಜದರುಹ ತೋರಿಸೈ 1 ಅಣುವಿನೊಳಗೆ ಅಣುವೆಯಾದ ಪ್ರಣವ ಜ್ಯೋತಿಯನ್ನು ತೋರೊ ತ್ರಿಣೆಯ ನೀನೆಯಾದಡೆ ನಾಂ ಪ್ರಣಿತನಾಗುವೇ 2 ಮೂರು ಐದರಿವುಗಳನ್ನು ಮೀರಿಹೋಗುವಂಥ ಮನವಾ ನಾರಿಕೈಯೊಳ್ ಕೋಟ್ಯಾತಕಿಂತು ನಟಿಸುತಿರುವಿಯೋ 3 ಪಾರುಗಾಣಿಸಯ್ಯ ನೀ ಸಂಸಾರ ಶರಧಿಯನ್ನು ಶಂಭು ಕೋರಿಕೆ ಈಡೇರಿಸಯ್ಯ ಅಪಾರಲಿಂಗವೇ 4 ಪರಮ ತತ್ವೋಕ್ತಾಧಿಕಾರಿ ಸುರಮುನೀಂದ್ರಾಕಾಶಪತಿ ಗುರುವು ತುಲಶಿರಾಮನೆ ತ್ವಚ್ಚರಣ ಶರಣಯ್ಯ5
--------------
ಚನ್ನಪಟ್ಟಣದ ಅಹೋಬಲದಾಸರು