(ಶೇಣಿಯ ಗೋಪಾಲಕೃಷ್ಣನನ್ನು ನೆನೆದು)
ತಾಪವ ಬಿಡಿಸು ದಯಾಪರ ಶ್ರೀ
ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ.
ಲೋಕನಾಯಕ ನಿನ್ನ ಕರುಣವಂದಿದ್ದರೆ
ಸಾಕೆಂಬೆ ಜ್ಞಾನಾನಂದಕರ
ಪಾಕಶಾಸನ ಸುತಗೊಲಿದಾತನ ಭಂಡಿ
ನೂಕಿ ನಡೆಸಿದ ಕೃಪಾಕರ ಮೂರುತಿ 1
ನಡೆವುದು ನುಡಿವುದು ಕೊಡುವುದು ಕೊಂಬುದು
ಮಡದಿ ಮಂದಿರ ಮಮತಾಸ್ಪದದ
ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ-
ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ2
ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ-
ಸನ್ನ ಮುಖಾಂಬುಜ ಪಾಲಿಸೆಂದು
ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ
ಪನ್ನಗಾಚಲವಾಸ ಪರಮ ದಯಾಳೊ 3