ನೋಡಿರೋ ನೋಡಿರೋ ನಾಡಿನೊಳಗೆ ಮಹ
ಗೂಢದಿ ಹೊಳೆಯುವ ಶ್ರೀಗಳ ಚರಣಪ
ಪಾಡಿ ಬೇಡಿ ಹುಡುಕಾಡಿ ಪಡೆಯಿರೋ ವರ
ಗಾಢ ಜ್ಞಾನದಿಗೂಡಿದ ಯತಿಗಳ ಅ.ಪ
ಮಾಧವತೀರ್ಥರ ಮತದೊಳುದಿಸಿ
ಬಾಧಕರೂಪಿನ ಭವಭಯಛೇದಿಸಿ
ವೇದಸುಸ್ವಾದವ ಬೋಧಿಸಿ ನಿಜದ
ಬೋಧ ಶ್ರೀಗುರುಗಳ 1
ಭಕ್ತರ ಕೂಡಿಸಿ ಮತ್ತು ಮಮತೆಯನೆ
ನಿತ್ಯ ಸತ್ಯವ ಸಾಧಿಸಿ
ಚಿತ್ತನಿಲಿಸಿ ಪುರುಷೋತ್ತಮನೊಳು ಬಿಡ
ದತ್ಯಾನಂದಿಪ ಮುಕ್ತಿಗೆ ಮೂಲರ 2
ಆಶಾಪಾಶ ಮಾಯಮೋಸವ ಗೆಲಿದು
ನಾಶ ಪ್ರಪಂಚದ ವಾಸನೆ ಅಳಿದು
ಶ್ರೀಶ ಶ್ರೀರಾಮನ ಲೀಲದಿ ಬಿಡದನು
ಮೇಷದಾಡುವ ಮಹ ಪಾವನಶೀಲರ 3