ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತ ಅನಂತ ಗೋವಿಂದಾಯ ಕಾಯ ಪೂಜಾ ಪ ದ್ವಾದಶನಾಮದ ನಾರಾಯಣಾರ್ಚನೆ ದ್ವಾದಶಬಾಧೆಯ ಕಳೆಯುವ ಕೀರ್ತನೆ ಅ.ಪ ಕೇಶವಾಯ ನಮಃ ಓಂ ಕೇಶವಾಯ ನಮಃ ಕ್ಲೇಶವು ಕರಗಿ ಈಶನು ಮನದಲಿ ನಿಲ್ಲುವನು 1 ಮಾಧವಾಯನಮಃ ಓಂ ಮಾಧವನೆನೆ ಕ್ರೋಧವು ಅಳಿದು ಮೋದದಿ ಮನ ಮಿಡಿಯುವುದು 2 ವಿಷ್ಣುವೇನ್ನಮಃ ಓಂ ವಿಷ್ಣುವೆನ್ನಿರಿ ಸ- ಕಾಯ ಕರ್ಮನಿಷ್ಠೆಯಲಿ 3 ಮಧುಸೂದನಾಯನಮಃ ಓಂ ಮಧುಸೂಧನಾಯ ಮದಗಳೆಂದೂ ಮಥಿಸೋಡುವವು ತಿಳಿಯ 4 ತ್ರಿವಿಕ್ರಮಾಯನಮಃ ಓಂ ತ್ರಿವಿಕ್ರಮನೆನಲು ಭವಿಯುಕಾಮಮೋಹತೊಲಗಿ ಕೋಮಲನಾಗುವನು 5 ಶ್ರೀಧರಾಯನಮಃ ಓಂ ಶ್ರೀಧರಾಯವೆನ್ನಿ ಸೋದರತ್ವಮೂಡಿ ಮತ್ಸರ ಮರೆಯುವುದು 6 ಹೃಷಿಕೇಶಾಯನಮಃ ಓಂ ಹೃಷಿಕೇಶನೆನು ಹುಸಿಯನಾಡದ ಲೋಭರಹಿತ ತನುವೀಯುವನು 7 ಪದ್ಮನಾಭಾಯನಮಃ ಓಂ ಪದ್ಮನಾಭನೆನಲು ಛದ್ಮವೇಶನ ದ್ವಾದಶಾಪೇಕ್ಷೆಗಳೀಡಾಡುವವು 8 ದಾಮೋದರಾಯ ನಮ:ಓಂ ದಾಮೋದರೆಂದರೆ ಆಮೋದದಿ ಮನ ಶ್ರೀಹರಿಪದಕೆರಗುವುದು9 ವಾಮನಾಯನಮ:ಓಂ ವಾಮನನೆಂದರೆ ಅಮಮ! ನಿಲ್ಲುವ ಕಣ್ಮುಂದೆ ನೆಲಮುಗಿಲೊಂದಾಗಿ 10 ಆಳ್ವಾರಾಚಾರ್ಯರಾದಿ ಗುರುಗಳು ಪೇಳಿದ ಈ ಮಂತ್ರ ಸೂತ್ರ 11 ಅನುದಿನ ಬಿಡದೆ ಮನದಲಂದರು ಸಾಕು ಸನುಮತದಲಿ ಕಾಯ್ವ ನಮ್ಮ ಜಾಜಿಕೇಶವ 12
--------------
ನಾರಾಯಣಶರ್ಮರು
ಸರಸ್ವತಿ-ಭಾರತಿ ನಿತ್ಯ ಕಾವುದೆಮ್ಮನು ಪ ನಿತ್ಯ ಪಾವಿತರನ್ನ ಮಾಡುವಿ ನೋವ ಕೊಡದಲೆ ಕಾಯೇ ಅ.ಪ ಪದ್ಮನಾಭನ ನಾಭಿ ಪದ್ಮಜನ ಸಹ ಹೃ ತ್ಪದ್ಮದೊಳಗೆ ನೆಲಸಿ ಛದ್ಮವ ಕಳೆಯೆ ನಿರುತ 1 ಮಾರಮಣನ ದಿವ್ಯ ಚರಣ ಸರೋಜವ ತೋರಿ ಕರುಣವ ಮಾಡೆ ವಾರಿಜಾಸನನ ರಾಣಿ2 ಲಕುಮೀ ನಾರಾಯಣನ ಸುಕುಮಾರ ಚತುರ್ಮುಖ ನ್ವಾಕಿಗಾಗಿ ಬ್ರಾಹ್ಮೀ ಎನಿಸಿ ಸಾಕುವಿ ಲೋಕವ ಕಾಯೆ 3 ವಾಸುದೇವ ಕಾಲ ಪುರುಷರ್ಗೆ ಗಾಯಿತ್ರಿ ಸಾವಿತ್ರಿಯಾಗಿ ತೋಯಜಾಸನ ವಿಹಾರಿ 4 ಸನ್ನುತ ಜಯಾ ಸಂಕರುಷಣನ್ನ ಪಾದ ಕಿಂಕರನ್ನ ಮಾಡಿ ಎನ್ನ ಸಂಕಟ ಪರಿಹಾರ ಮಾಡೆ 5 ಕೃತಿಪತಿ ಪ್ರದ್ಯುಮ್ನನ ಸುತೆ ನುತಿಪೆನು ಸದಾ ಖ್ಯಾತಿಯನ್ನಿತ್ತನ್ಯಥಾ ಖ್ಯಾತಿಯ ಕಳೆಯೆ ಮಾತೆ 6 ಶಾಂತಿಪತಿ ಅನಿರುದ್ಧನಾಂತುದಿಸಿ ವಿರಂಚಿ ದುರಿತ ತರಿದು ಶಾಂತ ಮನಸನು ಕೊಡೆ7 ವಾಣಿ ವೀಣಾಪಾಣಿಯೇ ಕಾಣಿಸನುದಿನವೆನಗೆ ಮೃಡ ಇಂದ್ರಮುಖ ಗಣರಾರಾಧಿತಳೇ ತಾಯೆ 8 ಹೀನಗುಣವೆಣಿಸದೆ ಜ್ಞಾನ ಭಕ್ತಿ ವೈರಾಗ್ಯವ ಸಾನುರಾಗದಲಿ ಇತ್ತು ಶ್ರೀ ನರಹರಿಯ ತೋರೆ 9
--------------
ಪ್ರದ್ಯುಮ್ನತೀರ್ಥರು