ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಂದ ಕಂದ ಮುಕ್ಕುಂದನಾ| ಬಂದು ವದಗಿಹ ಬಹಳ ಪುಣ್ಯದಿ ಛಂದವಾಯಿತು ಚಲುವನಂಘ್ರಿಯ ಪ ಬಲಿಗೆ ಭೂಮಿಯ ಬೇಡಿ ಹೆಜ್ಜೆಯಾ| ಅಳತೆಯರಡಲಿ ಅಡಗಿಸಿ| ನಳಿನ ಜಾಂಡಕ ಸಖವ ಸೋಂಕಿಸಿ| ಸುರನದಿ ಪಡೆದ ನಂಘ್ರಿಯಾ 1 ಶಿಲೆಯು ಆಗಿರೆ ಶಾಪದಲಿ ಸೋಂ| ಕಲು ನಿಜಾಂಗದ ಕಾಣಿಸಿ| ನಲಿದು ಕಾಳೀಂದಿಯೊಳುರುಗನಾ| ತಲೆಯಳಾಟದಿ ತುಳಿದ ನಂಘ್ರಿಯಾ 2 ಮುನಿಜನ ಹೃದಯ ಮನೆಯ ದೀಪವು| ಯನಿಪ ಶ್ರೀದೇವಿ ಯರಸನಾ| ಮನದಿಗುರುವರ ಮಹಿಪತಿ ಪ್ರಭು| ನೆನೆವವರೊಳಗೆ ನೆಲೆಸಿಹನ ಪದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದಾನಲ್ಲೆವೆ ಮನೆಗಿಂದು ಕೇಳವ್ವಾ ರಂಗ ಪ ಬಂದಾ ಮನೆಗಿಂದು|ಮುಕುಂದ ದಯಾಸಿಂಧು|ಆ ನಂದವನೆ ತಂದು|ಸಂಧಿಸಿಕೊಟ್ಟಾ ದೀನಬಂಧು 1 ನಂಬಿದವರ ಕಾವಾ|ಅಂಬುಜಾಕ್ಷದೇವಾ| ನೆಂಬ ಬಿರದವಾ|ರಂಬಿ ತೋರಿದಾ ಜೀವರಜೀವಾ2 ತಂದೆ ಮಹಿಪತಿ|ನಂದನ ಸಾರಥಿ| ಬಂದು ನೆರದಾರಥಿ|ಛಂದವಾಯಿತು ಜನ್ಮಕಥೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು