ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶ ಭಾಗವತ ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ 1 ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 2 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ 3 ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ4 ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ 5 ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 6 ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ 7 ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ8 ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 9
--------------
ಇಂದಿರೇಶರು
ಚಾರು ನವರತುನ ಮಣಿ ಮಂಟಪಕೆ ಪ ನೀರಜಾಕ್ಷ ಆ ರುಕುಮಣಿ ಭಾ ಮೆಯರೊಡಗೂಡಿ ಅ.ಪ ಹೇಮದ ತಂಬಿಗೆ ಬಿಂದಿಗೆಗಳಲಿ ನೇಮದಿ ಉದಕವ ತುಂಬಿಹರೊ ಕೋಮಲ ತುಳಸೀ ಮಲ್ಲಿಗೆ ಸಂಪಿಗೆ ಪೂಮಳೆಗರೆಯಲು ತಂದಿಹರೊ ಸ್ವಾಮಿ ನಿನಗೆ ಪರಿಮಳ ದ್ರವ್ಯಗಳನು ಪ್ರೇಮದಿಂದಲರ್ಪಿಸಲಿಹರೊ ಚಾಮರ ಸೇವೆಯ ಅರ್ಪಿಸುವರು ಹರಿ ನಾಮ ಹಾಡಿ ಸ್ವಾಗತ ಬಯಸುವರೊ 1 ಮೇಳದ ಮಂಗಳವಾದನ ಒಂದೆಡೆ ಕಹಳೆ ಶಂಖ ದುಂದುಬಿ ಧ್ವನಿಯು ತಾಳ ತಂಬೂರಿ ಮೃದಂಗದ ಶೃತಿಗಳ ಮೇಳನದಲಿ ದಾಸರ ಗಾನ ಶೀಲರಿವರು ಸುಸ್ಸರದಲಿ ವೇದವ ಪೇಳಲು ಕಾಲಕೆ ಕಾದಿಹರೊ ಬಾಲರು ಸಂಭ್ರಮದಲಿ ಝಾಂಗಟೆ ಕೈ ತಾಳಗಳನು ಕರದಲಿ ಪಿಡಿದಿಹರೊ 2 ಲಾಡು ಜಿಲೇಬಿಯ ರಾಶಿಗಳನು ಹೊಸ ಗೂಡೆಗಳಲಿ ತುಂಬಿಟ್ಟಿಹರೊ ನೋಡಲೆ ದಣಿಸುವ ತೆರದಲಿ ಚತುರರು ಮಾಡಿದರೋ ಪಕ್ವಾನ್ನಗಳ ಜೋಡಿಸಿ ಕರಗಳ ಕಾದಿರುವರೋ ಬಲು ನಾಡುನಾಡುಗಳ ಮಂದಿಗಳು ಈಡೇರಿಸುವದು ಭಕುತ ಮನೋರಥ ರೂಢಿಯು ನಿನ್ನದು ಶರಣ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ತಾಯಿತಂದೆಯರಿಗೆ ನಮನ (ವಾರ್ಧಕ ಷಟ್ಪದಿ) ಆನಮಿಪೆ ಮಾತೆ ಪಿತರರ್ಗೆ ಪ ಆನಮಿಸಿ ಈರ್ವರಿಗೆ | ಜ್ಞಾನ ಸಾಧನ ದೇಹದಾನ ಮಾಡ್ದದಕವರ | ಧೇನಿಸುತ ಪದವನಜಗಾನ ಮಾಡುವೆ ವಂಶದ ಅಕ್ಷೀಣ ವಾರ್ತೆಗಳ ಕೇಳ ಬಯಸುವರಾಲಿಸಿ ಅ.ಪ. ವಿಸ್ತರದ ಕೀರ್ತಿಯುತ | ಚಿತ್ತೂರು ಕೃಷ್ಣಾಖ್ಯರಿತ್ತ ಮಹಿ ಶೂರೊಳಗೆ | ನೆಲೆಸುತ್ತ ತಮ ಧರ್ಮಪತ್ನಿಯಲಿ ಚತುರ ಕುವ | ರರ ಪಡೆದು ಚತುರರಂಗೆಅಯ್ಯುತಿರೆ ವಿಧಿವಶದಲಿ |ಪೆತ್ತ ಪಿತ ಪರಪುರಕಡರೆ ಮಾತೆ ಕಡೆ ಕುವರಗೆತ್ತಣದು ವಿದ್ಯೆ ಎಂ | ದೆನ್ನಿಸದೆ ಸಲಹುತ್ತಉತ್ತಮರು ಬಕ್ಷಿತಿರು | ಮಲರ ವಂಶೋದ್ಭೂತ ಸುಬ್ಬರಾಯರ ಕುವರಿಯ 1 ಕಾಲ ಕಳೆಯುತಿರಲು 2 ಪತಿ ವಿಯೋಗವು ಆಯ್ತುಮಾರಿ ಕೋಪದ್ರವದಿ | ಮಾರಿ ಕಣಿವೆಲಿ ಪ್ರಥಮ ಅಪಮೃತ್ಯು ಸಂಭವಿಸಲು |ತಾರುಣ್ಯ ಉರುತರ | ವ್ಯಸನದಿಂ ನೂಕುತ್ತಪೋರನಭಿವೃದ್ಧಿಗಿ | ನ್ನೇನುಗತಿ ಎಂದೆನುತನಾರಾಯಣ ಸ್ಮರಣೆ | ಪರಿಪರಿಯಗೈಯ್ಸುತ್ತ ನಿಟ್ಟುಸಿರ ಬಿಡುತ್ತಿದ್ದಳು 3 ನಾಲ್ಕಾರು ವರುಷಗಳು | ದಾಯಾದ್ಯರೊಳು ದುಡಿದುನಾಲ್ಕೆಂಟು ಕಡುಕ್ರೂರ | ವಾಕ್ಕುಗಳ ಸಹಿಸುತ್ತಪ್ರಾಕ್ಕು ಕರ್ಮದ ಫಲವ | ಮುಕ್ಕಲೇಬೇಕೆಂಬ ವಾಕ್ಕುಗಳ ಮನ್ನಿಸುತಲಿ ||ನೂಕುತಿರೆ ಕೆಲಕಾಲ | ತೋಕಗಾಯ್ತುಪನಯನಕಾಕು ಮಾತುಗಳಾಡಿ | ನೂಕಲೂ ಗೃಹದಿಂದಆ ಕುಮಾರ ಧೃವನ | ನೂಕಿದಾಪರಿಯಾಯ್ತು ಎಂದೆನುತ ಹೊರ ಹೊರಡಲು 4 ಭವ ತರಣ | ಧವಣೆಯಲಿ ಕುವರಂಗೆ ವೈವಾಹ ತಾವಿರಚಿಸಿ 5 ಭಾಗವತ ವತ್ಸರ ವಸಿತ ದ್ವಿತಿಯ ತೃತಿಯ ತಿಥಿ ಹರಿ ಸ್ಮøತಿಲಿತನು ವಪ್ಪಿಸಿದಳು 6 ಭಾರತೀಶ ಪ್ರಿಯಗಭಿನ್ನಾತ್ಮನಮೊ ಗುರು ಗೋವಿಂದ ವಿಠ್ಠಲನ ದಾಸ ದಾಸಿಯರಿಗೇ ನಮೊ ಎಂಬೆನು 7
--------------
ಗುರುಗೋವಿಂದವಿಠಲರು
ನೆಚ್ಚಬೇಡಿ ಪತಿತನಾರಿಯ | ಕಚ್ಚುವ ಹಾವಿನ ಸಂಗವೆನ್ನಿ || ಪ ಮೆಚ್ಚುಗೊಳಿಪಳು ಗುಣಿಸಿ ನೋಡಿ ನಿಚ್ಚದಲಿ ಚಿತ್ತ ಚಂಚಲಳಾಗಿ ಅ.ಪ ಪರಿಯಂತ | ಯಾವದನಿತು ಮೊಗವನೆತ್ತದಲೆ || ಎವೆ ತೆಗೆದು ದಿಕ್ಕುಗಳು ನೋಡದೆ | ಅವನಿಗೆ ಬಾಗಿ ನಡೆಯುತ || ತವರು ಮನೆಯವರನು ಹಳಿದು | ನವÀನವ ಪ್ರಾವರ್ತನವನು ತೋರುತ || ಅವಗುಣಂಗಳಿಲ್ಲ ದೋಷಾದಲಿ | ಲವಕಾಲವನು ಕಳೆವ ನಾರಿಯ 1 ಪ್ರಾಯಾವಸ್ಥೆ ಬಂದು ಪ್ರಾಪ್ತವಾಗಲು | ಆಯುತಾಕ್ಷಿಗಳ ತಿರುಹಿ ಮೆಲ್ಲನೆ || ಬಾಯಲ್ಲಿ ಒಂದೊಂದು ಕ್ರಮಾಸಾರದಿ | ನೋಯ ನೋಯದಂತೆ ವಚನವ || ದಾಯಿಗಳಂತೆ ಮತ್ಸರಿಸಿ ಬಯ್ಯದೆ | ಮಾಯಾವಿ ಕಲ್ಪಿಸಿ ಮುಸಿಮುಸಿ ನಗೆ || ಆಯಕೆ ತಗಲಿ ಕಂಡ ಜನರಿಗೆ | ಘಾಯ ಕಾಣಿಸದಂತೆ ಮಾಳ್ಪಳ 2 ಅತ್ತೆ ಮಾವಗೆ ಅತ್ಯಂತವಾಗಿ ತಾನು | ಪ್ರತಿ ಉತ್ತರ ಪೇಳಲು ಅಂಜಿ ಅಂಜಿದಂತೆ || ಉತ್ತಮರ ಮನೋರಥವ ಕೆಡಿಸಿ | ಅತ್ತಿಗಿ ನಾದುನಿ ಮಿಗಿಲಾದವರೆಲ್ಲ || ಕತ್ತೆ ನಾಯಿ ನರಿಯೆಂಬೊ ಸೊಲ್ಲಲ್ಲಾದೆ | ಎತ್ತಲಾದರು ವಂಚಿಸಿ ಗಂಡನ್ನ || ತನ್ನಂತೆ ಮಾಡಿಕೊಂಡು ಹಗಲಿರುಳು ಥೈ- | ತಥ್ಥಾ ಎಂದಾಡಿಸಿ ಕುಣಿಸುವ ಸತಿಯಳ 3 ಕೊಂಡ ತೆರದಿ | ಪತಿಯ ಸಮಯ ನೋಡದೆ ತಾನು || ಸಥೆಯಿಂದಲಿ ಸಂಸಾರದೊಳಗಿದ್ದು | ಸುತರ ಪಡೆದು ಹಮ್ಮಿಲಿ || ಕಥನವೆಬ್ಬಿಸಿ ಗಂಡನ್ನ ಅಡವಿ | ಪಥವ ಹಿಡಿಸಿ ಹಣದಗೋಸುಗ || ಸತತ ಮನೆಯೊಳಗಿದ್ದ ಬದುಕು | ಮಿತಿಯಿಲ್ಲದೆ ಭಕ್ಷಿಸುವ ನಾರಿಯ 4 ಒಲಿಪಗೆ ನೀವು ಮೋಸಗೊಂಡು | ಒಲಿಯದಿರಿ ಸ್ತ್ರೀಯರಿಗೆ ಸೋತು || ಕಲಿಗೆ ಪ್ರಥಮ ಪಟ್ಟದ ಗದ್ದಿಗೆ | ಸುಲಭವಲ್ಲವೋ ಸುಖವಿಲ್ಲಾ || ಕೆಲಕಾಲ ಮಹಾ ಕಾತರದಿಂದಲಿ | ವಳಗಾಗದಿರು ಒಳಿತು ಪೇಳುವೆ || ಜಲಜಾಕ್ಷ ವಿಜಯವಿಠ್ಠಲನ್ನ ನಂಬಿರೋ | ನಂಬಿರೋ ನಂಬಿರೋ ಚತುರರು 5
--------------
ವಿಜಯದಾಸ
ವಿಠ್ಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ ಶ್ರೀಲೋಲ ಪ ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಅಪ ಯದುವಂಶೋದ್ಭವ ಕೇಶವ ಹೇ ಏಕಮೇವ ಮಧುವೈರಿ ಮಹಾವೈಭವ ಸದಮರಾನಂದ ಸ್ವಭಾವ ಮತ್ಕುಲ ದೈವ ಇನ ಬಾಂಧವ ವಿಧಿನದಿಪಿತ ನಾರದ ಮುನಿ ಸನ್ನುತ ವೈರಿ ಸದಮಲಗಾತುರ ಪದೆ ಪದೆಗೆ ಸಂಪದವಿಯ ಬಯಸುವ ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ1 ನಿತ್ಯ ಪ್ರಭಾವ ಪತಿತಪಾವನ ಸುರ ಜೀವ ಅತಿಶಯ ಲೀಲಾಮಾನವ ನರಕಂಠೀರವ ಚ್ಯುತಿ ಪೂರಾನಾದಿ ಗುರುಗೋವ ರತಿಪತಿಪಿತ ಶತಕ್ರತು ಸುತ ಸಾರಥಿ ಪಥ ಹಿತವಾಗಿ ತೋರೊ ಮಾ- ರುತ ಮತ ಶ್ರಿತಜನ ಚತುರರ ಸತತ ಸಂ - ದಿತಿಸುತ ಮಥನ 2 ಶರಣು ಶರಣು ಸರ್ವೇಶ ಇಟ್ಟಿಗೆವಾಸ ದುರುಳರ ಸಂಗ ವಿನಾಶ ಪರಮ ಪುರುಷ ವಿಲಾಸ ನಿರವಕಾಶ ವರಪ್ರದ ಪೂರ್ಣಪ್ರಕಾಶ ಮೊರೆಹೊಕ್ಕೆನೊ ನಿನ್ನ ಚರಣ ಸರಸಿಜವ ಹರಿಯನ್ನೊಳಗಿಪ್ಪ ಮರಪೆ ಕಳೆದು ನಿನ್ನ ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡುಧೊರೆ ವಿಜಯವಿಠ್ಠಲ ಪುರಂದರಪ್ರಿಯ 3
--------------
ವಿಜಯದಾಸ
ಶ್ರೀ ವ್ಯಾಸರಾಯರು ನೋಡಿದೇ ನಾ ನೋಡಿದೆ ಪ ನೋಡಿದೆನೊ ಗುರು ವ್ಯಾಸರಾಯರ ನೋಡಿದೆನೊ ಶುಭಕಾಯರಾ ಮಾಡಿದೆ ಶಿರಬಾಗಿ ನಮನವ ಬೇಡಿದರ್ಥವ ಕೊಡುವ ವಡೆಯರ ಅ.ಪ ಭಿದುರಮಯವಾದ ವೇದಿಕಾಗ್ರದಿ ಚದುರದಿಕ್ಕಿಲಿ ಶೋಭಿಸುವ ಶುಭ ತ್ರಿದಿಶವರ ಮುಖ ದಿವಿಜರೈವರು ಮುದದಿ ಇರುತಿಹರಿವರ ಮಧ್ಯದಿ ಪದುಮನಾಭನ ಚತುರರೂಪವÀ ಹೃದಯ ಮಂದಿರದಲ್ಲಿ ಭಜಿಸುವ ಪದುಮನಾಭನ ಪ್ರೀತಿಪಾತ್ರರ ಸದಮಲಾಗುರು ವ್ಯಾಸರಾಯರ 1 ಶ್ರೀನಿವಾಸನು ಶಿರಸಿನೊಳಗಿಹ ಆನನಾಗ್ರದಿ ಬಾದರಾಯಣ ಙÁ್ಞನಮಯ ಶಿರಿ ಹಂಸ ಅಚ್ಯುತ ಮೌನಿ ಕಪಿಲಾನಂತ ಭಾರ್ಗವ ಮಾನನಿಧಿ ಹಯಗ್ರೀವ ಹಂಸನು ದಾನವಾಂತಕ ರಾಮಚಂದ್ರ ಸ - ದಾನುರಾಗದಿ ತೆನೆಗಳಲ್ಲಿ ಭಾನುನಂದದಿ ಪೊಳೆವ ಬಗೆಯನು 2 ಮಧ್ಯಭಾಗದಿ ಕೃಷ್ಣದೇವನು ಇದ್ದು ಇವರನು ಸೇವೆ ಮಾಳ್ಪರ ಶುದ್ಧ ಮಾಡÀ್ಯವರರ್ಥ ಸರ್ವದ ಶಿದ್ಧಿಮಾಡಿ ಇವರನತಿ ಪ್ರ ಶಿದ್ಧಮಾಡಿವರಲ್ಲಿ ಪ್ರತ್ಯಕ್ಷ ಸಿದ್ಧನಾಗಿರುತಿಹನು ನಮ್ಮ ಗುರು ಮಧ್ವಗುರುಜಗನ್ನಾಥವಿಠಲನ ಮಧ್ಯಹೃದಯದಿ ಭಜಿಪ ಗುರುಗಳ 3
--------------
ಗುರುಜಗನ್ನಾಥದಾಸರು
ರಸಿಕರವರ ಪ್ರಿಯರಸ ಕಾವನು ಭಕ್ತಿಕುಶಲನಿಗಿಹಪರಕುಶಲಾಘ ದೂರ ಪ.ಪಥಮನೆ ವನದಿ ಶ್ರೀಪತಿ ಮಹಿಮೆ ಘೋಷಿಸಿಪ್ರಥಮ ಯಾಮದಿ ಹರಿಪ್ರತಿ ಮುದವೇರಿಸ್ತುತಿಸಿ ತಾರತಮ್ಯದ ಸ್ಥಿತಿ ಸನ್ಮತದೊಳಿದ್ದುಸತಿತನುಜಸೌರಂಭ ಸತತ ಹರಿಯದೆಂಬ1ಹಿತಾಹಿತವರಿದು ವಿಹಿತಹೇತು ಬಲಿದು ವಿರತಿಭಕ್ತಿ ಜ್ಞಾನ ನಿರುತ ಭೇದ ನಿರತನಾಗಿ ಕುಜನವಾರತೆಯ ಕೇಳದಿರುವಚತುರರಸುಕೃತಸಂಚಿತದಿರವೇ ಲೇಸು2ವಿಷಮೀರೈದಿಂದ್ರಿಯ ವಶಮಾಡಿ ಮನೋರಿಯೋಲ್ಸುಸುಖಾವಿಡಿದುಕೊಂಬಾ ಸುಸುಖಾವುಂಬಭೈಷಜ್ಯ ಭವರೋಗ ಭೇಷಜನೆನಿಪ ಜಗಪ್ರಸನ್ನ ವೆಂಕಟೇಶಾಂಘ್ರಿ ಸ್ಪøಶ್ಯನಾದಾರೋಗ್ಯ 3
--------------
ಪ್ರಸನ್ನವೆಂಕಟದಾಸರು