ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ | ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ಪ ಅಜನನಂದನೆ ಚಂದ್ರವದಗೆ | ಚತುರಮಯೆ | ಸುಜನರಿಗಾನಂದ ಸದಗೆ | ಧವಳಕಾಯೆ | ಭಜಿಸಿ ಬೇಡುವೆ ನಿನಗಿದನೆ | ಸೃಜಿಸಿ ಕೊಡುವುದು | ತ್ರಿಜಗದೊಳಗೆ ಹರಿ | ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ | ಹಜ ಮತಿಯನುದಿನ | ಕುಜನ ನಿವಾರೆ 1 ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ | ಕಲಕಾಲಾ ಸುಜ್ಞಾನಾಂಬುಧಿಯೆ | ತಲೆವಾಗಿ ನಮಿಸುವೆ | ಹಲವು ಜನ್ಮಂಗಳ | ಒಳಗೊಳಗೆ ಬಿದ್ದು | ಹಲಬುತಿಪ್ಪ ವ್ಯಾ | ಕುಲವನು ಕಳೆದು ನಿ | ಶ್ಚಲ ಮತದೊಳಗಿಡು 2 ನಿತ್ಯ ಉತ್ತಮ ಗುಣಸಮುದ್ರೇ | ಸಿಂಹಜೆ ಮಾರುದೃತೆ ಎನಿಪ ಲೋಪಾಮುದ್ರೆ | ಕವೇರಕನ್ಯೆ ......ಗಿತ್ತ ಪೊಳೆವ ಸೂಭದ್ರೆ | ಸತ್ಯ ಸಂಕಲ್ಪ ಶ್ರೀ ವಿಜಯವಿಠ್ಠಲನ್ನ ಭೃತ್ಯನೆನೆಸಿಕೊಂಡು ಸ್ರೌತ್ಯದಿಂದಲಿ ಬಲು | ನೃತ್ಯಮಾಡುವ ಸಂ |ಪತ್ತನೆ ಕರುಣಿಸು 3
--------------
ವಿಜಯದಾಸ