ತಾರಕುಪದೇಶವೆಂಬ ಸಾರಣಿಯ ಕೊಟ್ಟು
ಪೂರ್ವ ಕರ್ಮಗಳೆಂಬ ಕಿಲ್ಮಿಷಗಳ ತೊಳೆದು ಧ್ರುವ
ನಿಜ ಬೋಧವೆಂಬ ಚೂರ್ಣ ಕೊಟ್ಟು
ಭವಬೀಜವೆಂಬ ವ್ಯಾದಿಯ ಮೂಲನೆ ಸುಟ್ಟು
ಙÁ್ಞನಾಮೃತವೆಂಬ ಕಷಾಯದಲಿ
ಉತ್ಪತ್ತಿ ಸ್ಥಿತಿ ಲಯವೆಂಬ ತ್ರಿದೋಷವನು ಪರಿಹರಿಸಿದ
ನಮ್ಮ ಗುರು ಭವರೋಗವೈದ್ಯ 1
ಕಾಯವೆ ಕೋವಿಯನೆ ಮಾಡಿ ಭಾವನೆಯ ಮದ್ದನೆ ತುಂಬಿ
ಸೋಹ್ಯ ಸೊನ್ನೆಯ ರಂಜನಸಿಕ್ಕಿ
ಲಯಲಕ್ಷವೆಂಬ ಗುಂಡಿನಲಿ
ಭವಪಾಶವೆಂಬ ಗುರಿಯ ಕೆಡಹಿದ
ನಮ್ಮ ಗುರುನಾಥ ಮಹಿಪತಿಯ 2