ನರಿತು ಅರ್ಚಿಸಲು ಲಿಂಗೈಕ್ಯಕೆ ಯೋಗ್ಯ ಪ
ವೈರಿ ಸಂಸಾರ ಮಾಯಾ
ವನಿತೆ ಇಕ್ಕಿದ ಮದ್ದು ದುಃಖದಾಕಾರಾ
ಮನವೆ ಶುದ್ಧಾತ್ಮವಿಚಾರಾ ನೀನು
ನೆನೆದು ಮರೆಯದಿರು ಗುರು ಉಪಕಾರಾ 1
ನಗಿಸಿ ಅಳಿಸುವುದು ಕುಂದು ಭಕ್ತ
ರಘವ ನಿವಾರಿಸಿ ಸಲಹಬೇಕೆಂದು
ಮೃಗಧರ ರೂಪಿಲಿ ಬಂದು ಸ್ವಾಮಿ
ಸೊಗಸಾಗಿ ಶ್ರೀ ಗುರುಚಿತ್ತಕೆ ತಂದು 2
ಜೋಡಿಲ್ಲದೈಶ್ವರ್ಯದಿಂದಾ ಹೋ
ಗಾಡಿಸೋ ಘೋರಸಂಸಾರದ ಬಂಧಾ
ನೋಡೋ ನಿತ್ಯಾತ್ಮನ ಚಂದಾ ನಲಿ
ದಾಡೋ ಎನ್ನನು ಗುರು ವಿಮಲಾನಂದಾ 3