ಚಿಂತೆಯ ನೀಗಿದೆನೊ ಸಂತಸವಹಿಸಿದೆ
ಕಂತುಪಿತ ನಿಮ್ಮ ಮಹಿಮಾಂತರಂಗದಿ ಅರಿತು ಪ
ಭಾರ ನಿನ್ನಂದೆಂಬೊ ತರಳ ಪ್ರಹ್ಲಾದನ
ಘೋರಸಂಕಟ ನಿವಾರಿಸಿದನ ಪಾದ
ವಾರಿಜ ನಂಬಿದೆ ಆರಂಜಿಕೇನೆಂದು 1
ಕುರುಪನ ಸಭೆಯೊಳು ತರುಣೀಮಣಿಯು ತಾ
ಚರಣಭಜಿಸಲಿನ್ನು ದುರಿತವ್ಯಾತದರೆಂದು 2
ಶಂಖಪಾಣಿಯಪಾದಪಂಕಜ ಧ್ಯಾನ ನಿ:
ಶಂಕೆಯಿಂ ಗೈವರ ಸಂಕಟಹರ ನಿಜ
ವೆಂಕಟ ಶ್ರೀರಾಮ ಕಿಂಕರರೊಡೆಯನೆಂದು 3