ಸಂದು ಹೋಯಿತೀ ಕಾಲವು ವ್ಯರ್ಥಾ
ಒಂದು ಬಾರಿ ಗೋವಿಂದ ಎನದÉ
ಮಂದನಾಗಿ ಅತಿಮಾತಿಗೆ ಒಳಗಾಗಿ ಪ
ಹುಟ್ಟಿದ ಮೊದಲು ----ಬಹು
ಭ್ರಷ್ಟರ ಸಂಗದಿ ಬೆರೆದಾಡುತ
ಸೃಷ್ಟಿಗೊಡೆಯ ಶ್ರೀಕೃಷ್ಣನ ಪಾದವ
ಮುಟ್ಟಿ ಭಜಿಪರ ಮರದಾಡುತಾ
ಕೆಟ್ಟ ಬುದ್ಧಿಯ ಗುರುಹಿರಿಯರ ಕಂಡು
ಬೆಟ್ಟನಾಗಿ ಬಹು ಜಗಳಾಡುತಾ
ನಿಷ್ಠರ ಕಂಡರೆ ನಿಂದೆಗೆ ಒಳಗಾಗಿ
ಕಟ್ಟಕಡೆಗೆ ನರಕ ಘೋರವೇ ಸಿದ್ಧವಾಗಿ 1
ಹರಿಶರಣರ ಕೂಡನುದಿನ ಮನದಲಿ
ದುರುಳ ಮಾತಿನಲಿ ದೂಷಿಸುತಾ
ಪರಮಾತ್ಮನ ಕೃಪೆ ಪಡೆದ ಸುಜನರಾ
ಪಾದಕೆ ಶಿರವೆರಗದೆ ಇರುತಾ
ಶರಣರ ದ್ರೋಹದೊಳಿರುಳು ಹಗಲು
ಇದು ಶಿಷ್ಟನು ನಾನೆಂದು ಹೇಳಿಕೊಳುತಾ
ಗರುವತನದಿ------ ಹೀನನು ಆಗಿ
----------ರತನಾಗಿ ಇನ್ನೂ 2
ಅಂಡಜವಾಹನ ಪುಂಡರಿಕಾಕ್ಷನ
ಕೊಂಡಾಡುವರನ ಕು-----ಡಿ
ಕಂಡ ಕಂಡ------ನ ಮಹಾಮಹಿಮರನ
ಪುಂಡನಾಗಿ ಇನ್ನು ಹೋಗಲಾಡಿ
ಮಂಡಲದೊಡೆಯ 'ಶ್ರೀಮಹಾಹೆನ್ನೆವಿಠ್ಠಲನ’
ಕಂಡು ಪೂಜಿಸು----ಒಡನಾಡಿ
ಗುಂಡತನದಿ-------ಕಾಲನ
ದಂಡನೆಗೊಳಗಾಗಿ----ರಾರಿಯ ಮುಖ----ಗಿ 3