ನಿನ್ನ ಧ್ಯಾನವ ಕೊಡು ಎನ್ನ ಧನ್ಯನ ಮಾಡು
ಚೆನ್ನ ಶ್ರೀ ಶೇಷಾದ್ರಿ ಸನ್ನಿವಾಸಾ ಪ
ಭೀಷಣವಾಗಿಹ ಭವಸಾಗರದೊಳು
ನಾಶಗೊಳಿಪುವರು ನೆಗಳಿಗಳು
ಬೀಸುವವನುದಿನ ಮೂರು ಘಾಳಿಗಳು
ಈ ಸಂಖ್ಹ್ಯಾಂಗ ಕೈಪಿಡಿಯೋ ಕೃಪಾಳು1
ಭವವೆಂಬ ಕಿಚ್ಚನ್ನ ಸಹಿಸುವ ಪರಿಯೇನೋ
ಯುವತೀ ವಿಷಯ ಸುಖಲುಬ್ಧನಾಗಿಹೆನೋ
ಹವ್ಯವಾಹನನೆನ್ನನಾಡು ಮಾಡಿದೆಯೇನೋ
ಪವನನೈಯಾತ್ವತ್ಪದಾಪದ್ಮ ಭೃಂಗನೋ2
ಪರಿಪರಿ ದುರಿತಂಗಳಿಂದ ಮನದೆಡೆಯೊಳು
ಹರಿಸೇವಾರ್ಚನೆಗಳಿಗೆ ಅನುವಿಲ್ಲವು
ಪರಮ ಭಾಗವತರ ಜರೆವ ಖಳ ಜನರಾ
ನೆರೆಯಿರದಂತೆ ಮಾಡೊ ನರಸಿಂಹವಿಠ್ಠಲಾ 3