ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಸಲಹೋ ಚರಣವನ್ನು ದೋರಿ ಪರಮ| ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ ಶರಣ ಜನ ಮಾನ ರಕ್ಷಕನೇ ವರಕಮಲ ಕರಕಮಲ ಪದವಿಮಲ ಮಹಿಮನೇ ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ| ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ ಭಕ್ತರ ವಸರಕೊದಗುವೆ ನೀ ಪರೋಪರಿ| ಸುಕಲ್ಪತರು ದನುಜ ಕುಲಸಂಹಾರ ಸರ್ವದುರಿತ ನಿವಾರಾ 1 ಅಖಿಳ ಶೃತಿ ಸ್ಮøತಿ ನಿಕರಲಿಂದ ನುತಿಸಿಕೊಂಬೆ| ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ ಪ್ರಕಟದೊಳೊದಗಿ ಬಂದೆ ಸರಸೀರುಹ ನಯನ ಜಗದ ತಂದೇ| ಸಿರಿನಂದ ನಂದನ ಪರಮುದಾರೇ| ಸುರವೃಂದ ರಕ್ಷಕ ವರ ಮುರಾರೇ 2 ಶರಣಾಗತ ಜನರ ಪಾಲಾ| ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ| ಶೌರಿ ನರಸಹಕಾರಿ ಗಿರಿಧರನೇ| ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ| ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ3 ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ| ಪರಮಾನಂದ ಜೀವದೊರಿಯೇ| ಭವ ವಿನುತ ಮತಿ ಚರಿತಾ ಸಿಂಧೂರ| ನವನೀತ ಚೋರ ಜಗದೀಶ ಹರಿಯೇ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು