ತತ್ವವ ಬೋಧಿಸಿದಾ ಶ್ರೀ ಗುರುರಾಯಾ ತತ್ವವ ಬೋಧಿಸಿದಾ
ತತ್ವವ ಬೋಧಿಸಿ ತತ್ವ ಕರುಣಿಸಿ
ಉತ್ತಮ ಜೀವಿಸಿ ಉತ್ತಮ ಗತಿಯೆಂದು ತತ್ವವ ಬೋಧಿಸಿದಾ ಪ
ಹಿಂದೆಯಾದರು ಸರಿ ಇಂದಾದರೂ ಸರಿ ಗೋ-
ಸಂದೇಹವಿಲ್ಲದೆ ಮುಂದೆ ಆನಂದಾತ್ಮಾ ಎಂದು
ತಂದೆಯೇ ಮುಕುತಿಗೆ ಸಾಧನವೆಂದು 1
ಕನಸು ಮನಸಿನಲಿ ಅನುಗಾಲ ಧ್ಯಾನದಿಂದಲಿ
ಘನಹರಿಯ ನೆನೆಯುತಲಿ
ಮನಕಾನಂದವನೀವನವನಿದಿರಲಿ
ಅನುಮಾನವಿನಿತು ಬಾರಲಾಗದೆನುತಲಿ 2
ನರಸಿಂಹವಿಠಲನ ಶರಣರ ಸಂಗವು
ಹರಿವಾಯು ಕರುಣಕೆ ಕಾರಣವು
ಮರೆಯದೆ ಹರಿನಾಮ ಸ್ಮರಣೆಯ ಮಾಡಲು
ಹರಿಯೇ ಒಲಿದು ಕರಪಿಡಿವನು ಎಂದು 3