ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಧರನ ಸಖನಛಂದಾಗಿ ಭಜಿಪ ದೇ | ವಾಂಶ ಸಂಭೂತನೆ ಅ.ಪ. ದಣಿಸುವರ್ದನುಜರೆಲ್ಲಾ | ನೀನರೆ ಎನ್ನಮನಕಭಿಮಾನಿ ಎನಿಸೀ ||ಘನವೇನೊ ನಿನಗಿದು | ದನುಜ ದಲ್ಲಣನೆನಿಸಿಮನದ ಡೊಂಕನು ತಿದ್ದಿ | ಮನುಜ ನೆನಿಸೊಯೆನ್ನ 1 ಮುಕುತಿ ಮಾರ್ಗಕೆ ಸಾಧನಾ | ಎನಿಸಿ ಮೆರೆವ ಭಕುತಿ ವಿರಕುತಿ ಸುಜ್ಞಾನ ||ಸುಖ ತೀರ್ಥ ಮತದೊಳು | ಸುಖಿಸುವ ಸೌಭಾಗ್ಯಸುಖವ ನೀ ಪಾಲಿಸೊ | ಕಕುಲಾತಿಯನೆ ಹರಿಸೀ 2 ಪಂಕಜ ಧ್ಯಾನನಿರುತದಿ ಮಾಳ್ಪನೆ | ಕರಿಗಿರಿ ವಾಸನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ ಘನ್ನ ಭೂ ಭಾರನವ ಭವನಮಿತ್ರ ಪ ಬನ್ನಬಟ್ಟೆನೊ ಬಹಳ ಬಲುಹೀನ ವೃತ್ತಿಯಲಿ ಮಾನ್ಯರಲಿ ತಲೆಯೆತ್ತಿ ಇರುವಂತೆ ಎಂದಿಡುವಿ ಅ.ಪ. ಏನು ಕೊಟ್ಟರು ಕೊಡು ದಾನವಂತಕ ಎನ್ನ ಜ್ಞಾನದಲಿ ನೀನಿತ್ಯ ನೆಲಸಿ ನಲಿಯೊ ಧೇನುವತ್ಸದ ತೆರದಿ ನೀನೆನಗೆ ಹಿತತೋರು ನಾನೊಲ್ಲೆ ಸುರಲೋಕ ನಿನ್ನೊಲಿಮೆ ಇಲ್ಲದಿರೆ 1 ಮರುವೆಂಬ ಮಾರಿಯನು ಪರಿಹರಿಸು ಪರಿಪೂರ್ಣ ಸುರಿ ನಿನ್ನ ಕರುಣರಸ ಪ್ರಾಣನಾಥ ಸರ್ವೇಶ ನೀನೆಂದು ಪರತಂತ್ರ ನಾ ಸತತ ಶರಣನ್ನ ದಣಿಸುವದು ಘನವೇನೊ ಹರಿಯೆ 2 ಕೋಟಿಕಾಲ ನರಕವಾಸಿಯಾದರು ಎನಗೆ ನೀಟುಗತಿ ದೊರೆವುದೇ ನೀನೊಲಿಯದಿರಲು ಸಾಟಿಯಿಲ್ಲದ ದೈವ ಜಯೇಶವಿಠಲ ನಾಟಿ ಹಿರಿಯರ ಕರುಣ ನೀನಾಗಿ ಕೃಪೆಮಾಡು 3
--------------
ಜಯೇಶವಿಠಲ