(ನಾವೂರ ಅಗ್ರಹಾರದ ಕಟ್ಟೆ ಮುಖ್ಯಪ್ರಾಣ)
ಕರವ ಪಿಡಿಯೋ ಜಾಣ
ಘಟ್ಯಾಗಿರಲಿ ಕರುಣಾ
ದುಷ್ಟ ಭಾವನೆಯನ್ನು ದೂರವೋಡಿಸಿ ಮನೋ-
ಭೀಷ್ಟವ ದಯಮಾಡು ದುರಿತಾಬ್ಧಿ ಕಾರಣ ಪ.
ಕೋಳಾಲ ಜನರಮೇಲ್ಕರುಣಾ ಕಟಾಕ್ಷಧಿ
ಕೋಳಾಲ ಕರಯುಗದಿ ಪಿಡಿದು ಬಂದು
ನೀಲ ಮೇಘನ ತೆರದಿ ಶೋಭಿಸುತಾಗ್ರ-
ಮಾಲೆಯ ಶಿಖರದಲಿ ರಾಜಿಸುವ ಕೃಷ್ಣನ
ಲೀಲೆಗಳಿಗನುಕೂಲನಾಗಿ ಸುಲೋಲ ನೇತ್ರಾವತಿ ಸರಿದ್ವರ ಕ-
ಪಿಲದೊಳು ಪುಟ್ಟಾಲಯದೊಳನುಗಾಲ ನಿಂತ ಕೃಪಾಲವಾಲಾ 1
ಪ್ರಾಚೀನ ಯುಗದಿ ಮಾರೀಚ ವೈರಿಯ ಸೇರಿ
ನೀಚ ರಕ್ಕಸರ ಗೆದ್ದೆ ದ್ವಾಪರದಲ್ಲಿ
ಕೀಚಕ ಕುಲವ ಗೆದ್ದೆ ಕ್ಷಮೆಯೊಳು ತಿದ್ದೆ
ಸೂಚಿಸಿದ ದೇವೋತ್ತಮರ ಬಲು
ಸೂಚನೆಯ ಕೈಗೊಂಡು ಕಲಿಮಲ
ಮೋಚನೆಯಗೊಳಿಸಿಲ್ಲಿ ನಿಂದು ನಿ-
ರೋಚನಾತ್ಮಜ ವರದನೊಲಿಸುವ 2
ಕಾಯ ವಾಕ್ಕøತಾನಂತಾ ಪರಧಾಮ-
ನೇನೊಂದನೆಣಿಸದಿರು ಕೃಪಾಪಾತ್ರ
ನಾನೆಂದು ನೆನೆಸುತಿರು ಅಭಿಮಾನ ತೋರು
ಪಾದ ಪಂಕಜ
ಮಾನಿ ಕರುಣಿಸಹೀಂದ್ರ ಗಿರಿವರ
ಶ್ರೀನಿವಾಸನ ಮುಖ್ಯಮಂತ್ರಿಯ 3