ಮಂಗಳಾರತಿಯ ಮಾಡಿರೊ ಶ್ರೀನಿವಾಸಗೆ ಪ.
ಸಂಗಸುಖದ ಭಂಗವೆಲ್ಲ
ಹಿಂಗಿತೆಂದು ಹೊಂಗಿ ಮನದಿ ಅ.ಪ.
ಘಟ್ಟಿಹೃದಯ ತಟ್ಟೆಯಲ್ಲಿ
ಕೆಟ್ಟ ವಿಷಯ ಬತ್ತಿ ಮಾಡಿ
ಶ್ರೇಷ್ಠ ಜ್ಞಾನ ತೈಲವೆರೆದು
ವಿಷ್ಣುನಾಮ ಬೆಂಕಿ ಉರಿಸಿ 1
ಶ್ರದ್ಧೆಯಿಂದ ಎತ್ತಿ ಮನದ
ಬುದ್ಧಿಪ್ರಕಾಶಗಳು ತೋರಿ
ಎದ್ದ ಕಾಮಕ್ರೋಧಗಳನು
ಅದ್ದಿ ಪಾಪಗೆದ್ದು ಮನದಿ 2
ತತ್ತ್ವಪ್ರಕಾಶಗಳ ತೋರಿ
ಚಿತ್ತಮಾಯಕತ್ತಲೆಯನು
ಕಿತ್ತುಹಾಕಿ ಹರಿಯ ಮೂರ್ತಿ
ಸ್ವಸ್ಥ ಚಿತ್ತದಿಂದ ನೋಡಿ 3