ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಘಟಿತ ಘಟನಾ ಅದ್ಭುತ ಕಥನಾ ಮಗುವಿನ ನುಡಿ ಕೇಳು ಮದಮುರಮಥನಾ ಪ. ಸಾಲದೆರಡು ಮೂರು ಮೂಲಸಹಿತ ತೋರು ಮೇಲಿನ ಫಲವನ್ನು ಮರೆಯದೆ ಮುಚ್ಚಿಟ್ಟಿರು 1 ಗುಮ್ಮನ ಕಡೆಯಿಂದ ಗೂಬೆಗಳ್ಬರದಂದ ಅಮ್ಮನ ತೊಡೆಯ ಮೇಲಿರಿಸೆನ್ನ ಪೂರ್ಣಾನಂದ 2 ಅಷ್ಟ ನೀನೆನಗಿರೆ ವಪ್ಪದನ್ಯರ ಮೊರೆ ತಪ್ಪಿಸು ಕರಕರೆ ಸರ್ಪಗಿರಿಯ ದೊರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಘಟಿತ ಘಟನಾತ್ಮ ಶಕ್ತಿಯ ನಂಬಿದ ರಘುಕುಲವೇನಿರದು ಮಗುವನು ಮಾತೆ ಮಮತೆಯಿಂದ ಪೊರೆವಂತೆ ನಗುತ ರಕ್ಷಿಪ ಬಿರಿದು ಪ. ಶಕ್ರನ ಸಲಹ ಬೇಕೆಂದು ವಾಮನವಾಗಿ ಶುಕ್ರ ಶಿಷ್ಯನ ಯಜ್ಞದಿ ವಕ್ರಮತಿಯ ದಾನವರನೆಲ್ಲ ಸದೆದ ತ್ರಿವಿಕ್ರಮಾಹ್ವಯನೀವನು ಚಕ್ರ ಶಂಕ ಖಡ್ಗ ಗದೆಯ ಧರಿಸಿ ರಿಪು ಚಕ್ರ ಕತ್ತರಿಸುವನು 1 ಪಂಚಪಂಚದ ಮೇಲಿನ್ನೆರಡು ವರುಷ ವನ ಸಂಚರಿಸಿದ ಬಳಿಕ ಪಂಚ ಪಾಂಡವರಿಗೆ ಪಂಚಗ್ರಾಮವನೀವ ಹಂಚಿಕೆ ಸರಿಯೆನುತ ಪಂಚಪಾತಕಿ ಕೌರವೇಂದ್ರನ ಸಭೆಯಲಿ ಪಂಚಾಯಿತನಾಗುತ ವಂಚಿಸಿ ಭಾವಿ ವಿರಿಂಚಗೆ ಸಕಲ ಪ್ರಪಂಚಾಧಿಪತ್ಯವಿತ್ತ 2 ಅನುಗಾಲ ನಿಜಪಾದ ವನಜವೆ ಗತಿಯೆಂಬ ಜನರ ಮನೋರಥವ ಮನಸಿಜಪಿತ ತಾನೆ ನೆನೆಸಿಕೊಂಡಿವುದಕನುಮಾನಿಸನು ಸತತ ಸನಕಾದಿ ವಂದ್ಯ ಶೇಷಾದ್ರಿ ಶಿಖರವಾಸ ಮನೆಗಧಿಪತಿಯೆನುತ ಮನ ವಚನಗಳಿಂದ ಮಾಧವಗರ್ಪಿಸಲನುಕೂಲಿಸುವ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ ನಂಬದೆ ಕೆಡುವುರುಂಟೋ ಪ ನಂಬಿದ ಜನರಿಗೆ - ಬೆಂಬಲ ತಾನಾಗಿ ತುಂಬಿ ಕೊಡುವರನ್ನ ಅ.ಪ ಜಲಧರ ದ್ವಿಜವರಗೆ ತಾನೇ ಒಲಿದು ಸುಲಭದಿ ಮುಕುತಿಯನಿತ್ತ ಚಲುವ ಸುತನ ಪಡೆದಲಲನೆಗೆ ತ್ವರದಿಂದ ಪುಲಿನ ಗರ್ತದಿ ದಿವ್ಯ - ಜಲವ ನಿತ್ತವರನ್ನ 1 ಮೃತ್ಯುದೂತರು ತನ್ನನು ಪೊಂದಿದ ನಿಜ ಭೃತ್ಯನ ಕರೆದೊಯ್ಯಲು ಸತ್ತ ದ್ವಿಜನ ತಾನು - ಮತ್ತು ಧsರೆಗೆ ತಂದು ಮೃತ್ಯು ಬಿಡಿಸಿ ಸುಖ - ವಿತ್ತು ಪೊರೆದಿಹರನ್ನಾ 2 ಧಿಟ ಗುರುಜಗನ್ನಾಥ ವಿಠಲನೊಲಿಮೆ ಘಟನವಾದುದರಿಂದ ಘಟನಾಘಟನ ಕಾರ್ಯ - ಘಟನಾ ಮಾಡುವ ನಮ್ಮ ಪಟು ಗುರುವರ ಹೃ - ತ್ಪುಟ ದಿರುವೋರನ್ನ 3
--------------
ಗುರುಜಗನ್ನಾಥದಾಸರು
ನಾಟಕ ರಂಗದಲಿ ನಟಶಿರೋಮಣಿಯೊಬ್ಬ ಪಟುತನದಿ ವಿಧವಿಧನ ನಟನೆಗಳ ತೋರುವನು ಪ ಅಘಟನಾಘಟನ ಶಕ್ತನ ಕಪಟನಾಟಕವು ಘಟಕರಲ್ಲದ ಜನಕೆ ಎಟುಕದಾನೋಟ ಅ.ಪ ಮುಖ್ಯಪಾತ್ರವು ನಮ್ಮ ರುಕ್ಮಿಣಿ ರಮಣನದು ಮುಖ್ಯತಾರೆಯು ಲೋಕ ಜನನಿ ಲಕುಮಿ ಇಕ್ಕಿದನು ಗೋರೂಪ ಚತುರಾನನನು ಮುದದಿ ಮುಖ್ಯಪ್ರಾಣನೆ ತುರಗ ಮುಕ್ಕಣ್ಣ ಕರುವಾದ 1 ಸುಖಸಾರನನು ಪಡೆದು ಧನ್ಯಳಾದ ಯಶೋದೆ ಬಕುಳೆಯೆ ತಾನಾದಳೀ ನಾಟಕದಲಿ ಅಕಳಂಕ ಮಹಿಮನನು ಅಗಲದಿದ್ದ ಸತಿಯು ಮುಖನೋಡಿ ಕೋಪದಲಿ ಕಲ್ಲುಗಳನೆಸೆದಳು 2 ಸರ್ವತ್ರ ವ್ಯಾಪ್ತನಿಗೆ ಇರಲು ಜಗವು ಸಿಗದೆ ಕಿರಿದ ತಾ ಹಲ್ಲುಗಳ ವರಹನಲ್ಲಿ ಹರನ ತಾತನು ತಾನು ಸ್ಮರನ ಬಾಣದಿ ನೊಂದ ಸುರಮೋಹಿನಿಯು ಇಂಥ ಕೊರವಂಜಿಯಾದಳು3 ಹುಟ್ಟಿಸುವ ಬೊಮ್ಮನನು ಪುಟ್ಟಶಿಶುವನೆ ಮಾಡಿ ಹೊಟ್ಟೆಗಿಲ್ಲದೆ ಬಹಳ ಬಾಡಿ ಇರಲು ಮೃಷ್ಟಾನ್ನವನು ಚಿನ್ನ ತಟ್ಟೆಯಲಿ ತಂದಿಡಲು ಶ್ರೇಷ್ಠವಿದು ಜನನಿಗೆನ್ನುತ ತಿಂದು ತೇಗಿದಳು 4 ಬಡುಕನೆದೆಗೊದೆಯಲವನಡಿಗಳಿಗೆ ಶರಣೆಂದ ಕಡು ಕೋಪಿ ಗೋವಳನ ಕೊಡಲಿಗೊಡ್ಡಿದ ಶಿರವ ಹಿಡಿ ಮಣ್ಣು ಪಿಂಡಗಳನಿತ್ತ ಚಂಡಾಲನಿಗೆ ಸಡಗರದಿ ಲಕುಮಿಯನೇ ಕರದಲಿತ್ತ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ಪಾದ ನಿತ್ಯ 1 ವಾಸುದೇವ ನಿನಗೆ ಒಲಿವ ತಾ ಭಾಸುರ ಕೀರ್ತಿ ತರುವ ಬೇಸರಿಸದೆ ಭಾಸಿ ಪಂಥದಿ ವಾಸುದೇವದಾಸರ ಸೇವಿಸು 2 ಕರುಣ ತೋರಿ ಸಲಹುವಂಥ ಗರುಡಗಮನನಿರಲು ನೀನು ಅರಿಯದಂತೆ ಇರಲು ನಿನ್ನ ಮರುಳು ಮನವೆ ಕಾರಣಿದಕೆ 3 ಕೂಡು ಸಜ್ಜನ ಸಂಗ ತವಕದಿ ಜಾಡುಕೋರ್ವ ಹರಿಭಕ್ತರ ನೋಡು ನಿನ್ನಕ್ಷಿ ತೆರೆದು ಮನುಜ 4 ಜಗಜನ್ಮಾದಿ ಕಾರಣ ಅಘಟನಘಟನಾದ ಹರಿಯ ಮಿಗೆ ಧ್ಯಾನವಿಟ್ಟು ಮನವೆ 5 ಸಲ್ಲ ದುರ್ಜನರಾಸಂಗವು ಸಜ್ಜನರಿಗೆ ಅಲ್ಲ ತಿಂದ ತಿಮ್ಮನಂದದಿ ಬೆಲ್ಲ ಬೇವಿನಂತೀ ಸಂಸಾರದಲ್ಲಿ ಸಿಲುಕಬೇಡ ಮನವೆ 6 ಹರುಷದಿಂದ ಜಡದೇಹದೊಳಗಿಹ ಶ್ರೀ ಹರಿ ಎಂದರಿದು ಪರರ ವಾರ್ತೆ ಆಡದೆ ಪರಮಪುರುಷ ಹರಿಯ ನೆನೆ ಮನುಜ 7 ಹದಿನಾಲ್ಕು ಲೋಕದೊಡೆಯ ಒದಗಿರಲು ನಿನ್ನ ಸಾಕೆ ಬರಿದೆ ಚಿಂತೆ ಮಾಡಬೇಡ ಸ್ಮರಿಸು ಹರಿಯ ಚರಣವನ್ನು8 ಸ್ವಕಾರ್ಯ ಸ್ವಾಮಿಕಾರ್ಯ ನಿನ್ನ ಅಖಿಲ ಕಾರ್ಯಾಂಗತನು ಹರಿಯು ಸಖನಂತೆ ಸಲಹುತಿರಲು ಸುಖಿಸು ಅವನ ದಾಸನೆಂದು 9 ಪಾದ ನಿತ್ಯ ಸಂಗ 10 ಸಕಲರಲ್ಲು ಅವನೇ ನಿಂತು ಸಲಹುವನೆಂದರಿತು ನೀ 11 ನಿತ್ಯ ಅಜ್ಞಾನವನ್ನು ಪರಿಹರಿಸುತ ನಿತ್ಯ ವಂದಿಸು ಮನದಿ 12 ಪಾದ ಧ್ಯಾಸದಿಂದ ಅರಿತೆನಲದೆ ಎಂದರಿತು 13 ಪ್ರಾಣನಾಥನೊ ಹರಿ ಶ್ರೀ ರಾಮಚಂದ್ರನೆಂದು ಅರುಹಿಕೊಟ್ಟು ಸಲಹುವರ 14 ತ್ರಿವಿಧ ಜೀವರಿಗೆ ಹರಿಪರದೈವನೆಂದರುಹಿದ ಪರಮಗುರು ಮತವ ಬಿಟ್ಟು 15
--------------
ಸರಸ್ವತಿ ಬಾಯಿ