ಬಿಡು ಬಿಡು ಮನುಜಾ ಜಡದಭಿಮಾನ
ಪಡೆ ಗುರುವಿನಲಿ ಸ್ವಾತ್ಮದ ಜ್ಞಾನಾ ಪ
ಈ ಸುಖದುಃಖದ ಬಡಿದಾಟದಲಿ
ಗಾಸಿಯಾಗುತಲಿ ಸಾಯುವದೇ ದಿಟ
ಕ್ಲೇಶವ ನೀಗುವಿ ನಿನ್ನ ನೀ ತಿಳಿವೊಡೆ 1
ಮರಳಿ ದೇಹ ಪಡೆಯದ ದಿವ್ಯ ಬೋಧ
ಪರಮಶಾಂತಿ ದೊರಕಿಸುವ ಪ್ರಮೋದ
ದುರುಳಸಂಸ್ಕøತಿಯ ಪಾಶದ ಛೇದ
ಮರೆಯದೆ ಮಾಳ್ಪುದು ಸ್ವಾತ್ಮದ ಶೋಧ 2
ಘಟ ಮರಣಕೆ ಶಿಲುಕಿದಾದರೂ
ಈ ಘಟದಲಿ ನೀ ಅಮರನೆ ಇರುವೀ
ಬೇಗನೆ ಜೀವನ್ಮುಕುತಿಯ ಪಡೆಯೈ
ಯೋಗಿ ಶಂಕರನ ಸದ್ಬೋಧದಲಿ 3