(ರುದ್ರದೇವರಿಗೆ ಮೊರೆ)
ನೀಗಿದೆನು ಸಂಸಾರ ಧನ್ಯಾಳಾದೆ
ಮೂಗಣ್ಣ ತಾನೆ ಎನ್ನ ಕೈಯ ಪಿಡಿದಾ ಪ
ರೋಗ ಪರಿದಿತು ಎನಗೆ ಈಗ್ಯಾಕೆ ಔಷಧವು
ಜಾಗು ಮಾಡದೆ ಕಾವೋ ದೇವನಿರಲು
ಭವ ಸಾಗರವ ದಾಟಿಸಿ
ಈಗಲಿಯ ಭೂಮಿಗೆನ್ನಾಮ ಹಮನ [?] ತಪ್ಪಿಸಲಿ 1
ಬಳಲಿದೆನು ಸಂಸಾರದಳವು ಕಾಣದೆ ನಾನು
ಭವ ದುಃಖ ಶರಧಿಯೊಳಗೆ
ಉಳುಹುವರ ದಾರಿಗಣದೆ ಹರನ ಮೊರೆಯಾಗಲು
ನೆಲಸಿದನು ಕರುಣಾಳು ಎನ್ನಯ ಮನದೀ 2
ನೀಲಕಂಠಗೆ ಜಯ ಫಾಲನೇತ್ರನೆ ಜಯ
ಮಾಲತೀಧವ ಜಯ ವಂದಿಸುವೆ ಶಿರವಾ
ಮೇಲು ನರಸಿಂಹವಿಠಲನಾಣೆ ಬೇಡುವೆ
ವ್ಯಾಲ ಭೂಷಣ ಮನ್ಮನಾಲಯದಿ ನಿ ನೆಲಸು 3