ಒಟ್ಟು 17 ಕಡೆಗಳಲ್ಲಿ , 12 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಸ್ತುತಿ ಗಜವದನ ಪಾವನ ವಿಘ್ನನಾಶನ ಪ. ವರ ಪಾಶಾಂಕುಶಧರ ಪರಮದಯಾಳೊಕರುಣಾಪೂರಿತ ಗೌರೀವರಕುಮಾರನೆ 1 ಸುಂದರವದನಾರವಿಂದನಯನ ಘನ-ಸುಂದರಿ ಕಂದನೆ ಬಂದು ರಕ್ಷಿಸೊ 2 ಗೋಪಾಲವಿಠಲನ ಅಪಾರ ಭಜಕನೆಶಾಪಾನುಗ್ರಹಶಕ್ತಾನೇಕ ಮಹಿಮಾ 3
--------------
ಗೋಪಾಲದಾಸರು
ಗೌರೀವರನೇ ಪಾಲಿಸೋ - ನಿನ್ನ ಶ್ರೀಪಾದವಾರಿಜವ ತೋರಿಸೋ ಪ ಭವ ವಾರಿಧಿ ಯೊಳು ನಾಪಾರವ ಕಾಣದೆ ಧೀರನೆ ಶರಣು ಅ.ಪ. ಸದನ ಅಧ್ವರ ಭಂಜನ 1 ಪಕ್ಷಿವಾಹನ ಮಿತ್ರಾ - ಸುಚರಿತ್ರಾ ಯಕ್ಷಪತಿ ಧನಪ ಮಿತ್ರಾ ||ದಕ್ಷಿಣಾಕ್ಷಿ ಅಧ್ಯಕ್ಷ ಸೇವಕ ಗೋ-ವತ್ಸ ಭಕ್ತಿ ದಯದೀಕ್ಷೆಸೆನ್ನ ಶಿವನೇ |ಮರುತ ಸುತಾ ಜಿಷ್ಣು ಹಿತಾಪಾಶುಪತಾ ವರ ಅಸ್ತ್ರಸುದಾತಾ 2 ಮಹದೇವ ಮೋಹ ಶಾಸ್ತ್ರಾ - ಸುಕರ್ತಾಅಹಿಶಯ್ಯ ಪ್ರೀತಿ ಪಾತ್ರ ||ಅಹಿ ಪದಕೆ ಯೋಗ್ಯ | ಮಹ ಮಹಿಮ ಹೃ-ದ್ಗುಹದಿ ಗುರು | ಗೋವಿಂದ ವಿಠಲನತೋರೆಂಬೆ - ಗುರುವೆಂಬೆ - ದಯ ಉಂಬೆತವದಯದಿ ಹರಿ ಕಾಂಬೆ 3
--------------
ಗುರುಗೋವಿಂದವಿಠಲರು
ಪಾಲಿಸು ಪರಮೇಶ | ಪಾಪ ವಿನಾಶ ಪ ಫಾಲನಯನ ತ್ರಿಶೂಲಧರ ಕರು ಣಾಲವಾಲ ವಿಶಾಲ ಮಹಿಮನೆ ಕಾಲಕಾಲ ಕಪಾಲಧರ ಸುರ ಜಾಲನುತ ಪದ ಶೈಲಜಾವರ ಅ.ಪ. ಶಂಕರ ಶಶಿಶೇಖರ | ಸದಾಶಿವ ಸಂಕಟಹರ ಈಶ್ವರ | ವರದಾನ ಶೂರ ಶಂಕೆಯಿಲ್ಲದೆ ತ್ವತದಾಂಬುಜ ಪಂಕ ಕಳೆವ ಅಕ ಳಂಕ ಮತಿಯನು ಕರುಣಿಸುವ ಮೀ ನಾಂಕ ಮದಹರ ಮೃಡಸುರೇಶ್ವರ 1 ಗಜ ಚರ್ಮಾಂಬರಧರನೆ | ಗೌರೀವರನೆ ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ ನಿಜಪದಾಂಬುಜ ಪೂಜೆ ಮಾಡುವ ಸುಜನ ಮನ ಅಂಬುಜ ದಿವಾಕರ ಭಂಜನ ಭುಜಗಭೂಷಣ ನಿಜ ಚರಣ ಪಂಕಜವ ತೋರಿಸಿ..... 2 ಹರಿನೀಲನಿಭಕಂಧರ | ಮುಪ್ಪುರಹರ ಶರಣಜನ ಮಂದಾರ | ಕೈಲಾಸಮಂದಿರ ವರ ವಿನಾಯಕ ಜನಕ ಜಾಹ್ನವಿ ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ..... 3
--------------
ವರಾವಾಣಿರಾಮರಾಯದಾಸರು
ಮನವೇ ಚಿಂತಿಸು ಹರಿಯ-ಮುರಾರಿಯ ಪ ಮಾಯಾ ಯುಗಳನು-ಮನವೇ ಅ.ಪ. ಸ್ಮರವಿರಿಂಚಿನಯ ಪಿತನ-ಗೌರೀವರ-ಪುರಹೂತರಿಗೆ ತಾತನೆ ರತಿದೇವಿ-ಸರಸತಿಯರ ಮಾವನ-ಶ್ರೀರಮಣನ ಸರಸಿಜಾಸನಿಗೆ ಕರುಣೀಸುವೇದವ ಗಿರಿಯ ನೆಗೆಹಿ ವಿಶ್ವಂಭರೆಯ ದಾಡೆಯೊಳೆತ್ತಿ ತರಳಗಭಯವನಿತ್ತು ಮೂರಡಿ ಧರೆಯ ಬೇಡುತ ದುರುಳ ರಾವಣಹರಣ ನೀಲಾಂ- ಬರನ ಯದುವರ ತುರಗವಾಹನ1 ನಿಗಮಾಂತ ಗೋಚರನ-ನಿತ್ಯಾನಂದ-ಸುಗುಣಗಣಾರ್ಣವನ ಸಜ್ಜರಿಗೆ-ಸುಗತಿಯಪಾಲಿಪನ ಸುರಪಾಲನ ನಿಗಮಚೋರನ ಕೊಂದು ನಗವ ಬೆನ್ನೊಳು ಪೊತ್ತು ಜಗವನುದ್ಧರಿಸಿ ನರಮೃಗದರೂಪವ ತಾಳಿ ಜಗವ ನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲ ನೇಗಿಲನು ಪಿಡಿದುಗುರು ಕೊನೆಯಿಂ ನಗುವನೆ ನೆಗಹಿದ-ನಿಗಮನುತ ಕಲಿಯುಗದ ವೈರಿಯ 2 ಪೂಜೆಯಕೊಂಬನ ಕುಂಭಜ ಶಾಪ-ಕಲುಷವ ಕಳೆದನ-ವ್ಯಾಘ್ರಾಚಲ ದಲಿನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನ ಮನೋನಿಲಯ ಶ್ರೀನಿವಾಸನ ಜಲಜಬಾಂಧವ ಕುಲಪವಿತ್ರನ ಜಲಜನೇತ್ರನ ಜಲಜ ಗಾತ್ರನ ವಿಲಸಿತಾಂಬುಜ ಮಾಲಭಕ್ತರಿಗೊಲಿವ ಶ್ರೀವರದಾರ್ಯ ವಿಠಲನ 3
--------------
ಸರಗೂರು ವೆಂಕಟವರದಾರ್ಯರು
ಮಾಂ ಪಾಲಯಾಶು ಗಂಗಾಧರ ಚಂದ್ರಶೇಖರ ಗೌರೀವರ ಪ ನೀಲಾಂಬರ ಕೇಶಪಾಶಹರ ಶಿವಶಂಕರ ಕರುಣಾಕರ ಅ.ಪ ಚರ್ಮಾಂಬರ ಪರಮೇಶ್ವರಾ ದಾನವೇಶ್ವರಕುಲಕುಠಾರ ಧೀರ ದಿವಿಜೋಪಕಾರ ಶರಚಾಪಧರ ಮನಸಿಜಸಂಹಾರ ಮಾಂಗಿರೀ ವಿಹಾರಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಕ್ಷಿಸೋ ಗೌರೀವರ | ತ್ರಿಪುರದಶಿಕ್ಷಕ ದ್ರೋಣ ಕುವರ ಪ ಅಕ್ಷಿ ರಕ್ತ ರೇಖ ಮಾನಿ | ಯಕ್ಷೇಶ ಪ್ರಿಯ ಮಿತ್ರದಕ್ಷಾಧ್ವರಘ್ನ ರುದ್ರ | ತ್ರ್ಯಕ್ಷನೆ ಲೋಕಾಧ್ಯಕ್ಷಅ.ಪ. ವಿಭೂತಿ ಭಸ್ಮಾರ್ಚಿತ ||ಸು ಭಗಣೀಧೀಶ ಶಿರ | ನಭಕೀಶ ನಿನ್ನ ಸುತೆವಿಭವಾ ಪೊಗಳಲಳವೆ | ಕುಭವ ಪರೀಹರ 1 ಹಿಂಡು ನಖ ಮೃ | ಕಂಡ ಪರಿಪಾಲಕೊಂಡೆನ್ನ ಭಿನ್ನಪವ | ದಂಡಿಸೊ ದುಷ್ಟ ಮನ 2 ಗೋವುಗಳ್ಪರಿ ಪಾಲಕ5ಗೋಪೇರ | ದಾವಾಗ್ನಿಯಿಂ ರಕ್ಷ5ಭಾವ ಜನಯ್ಯ ಗುರು | ಗೋವಿಂದ ವಿಠಲನಭಾವದೊಳಗೆ ಕಾಂಬ ಭಾವವನೀವುದು 3
--------------
ಗುರುಗೋವಿಂದವಿಠಲರು
ರಾಮ ರಾಮ ರಾಮ ಹರೇ ರಘೂ ಪ ರಾಮ ಜಾನಕಿ ಪ್ರೇಮ ಕೃಪಾಂಬುಧಿ ಸ್ವಾಮಿ ಪರಂಧಾಮ ಸಾರುಚಿವರದಾ ಅ.ಪ ಪತಿತಪಾವನದೇವಾ ಸದ್ಭಕ್ತರ ಸತತ ಬಿಡದೆ ಕಾಯುವಾ ಮಹಾನುಭಾವ- ನತಿಶಯದಲಿ ಮನಹಿತದಲಿ ಅನುದಿನ ಸ್ತುತಿಯನು ಮಾಡುವರಿಗೆ ಗತಿ ಕಾಣಿಸುವಂಥ 1 ಅಂಡಜವಾಹನನೆ ಅನೇಕ ಭೂ ಮಂಡಲ ನಾಳುವನೆ ಮಣಿಯ ಮುಕುಟಧರನೆ ಉದ್ದಂಡ ರಕ್ಕಸರಳಿದ ಚಂಡಪರಾಕ್ರಮಿ2 ಪನ್ನಗಾದ್ರಿಯವಾಸಾ ಭಜಕರ ಪೋಷಾ ಶ್ರೀ ಹೆನ್ನವಿಠ್ಠಲ ವೇಶಾ ಪರಮೋಲ್ಹಾಸಾ ಚಿನ್ಮಯ ಮೂರುತಿ ಶ್ರೀ ಗೌರೀವರಪ್ರಿಯ ಮದನ ಜನಕ ಹರೆ 3
--------------
ಹೆನ್ನೆರಂಗದಾಸರು
ಲಿಂಗಾ ಅಂಗಜಹ - ಮಂಗಳ | ಗಂಗಾಧರ ಕಾಯೊತುಂಗಾ ಘರಣ್ಯ ಅನಳಾ ಪ ತಿಂಗಳ ಧರ ಹರ | ಅಂಗಜ ಪಿತ ಸಖಮಂಗಳಾಂಗ ಕೃ | ಪಾಂಗ ದಯಾಳೊಅ.ಪ. ಭವ | ಭೀಮ ಮಹಾಘನಕೋಮಲಾಂಗಿ ತವ | ವಾಮಾಂಗನೆಗೆಆ ಮಹ ಮಂತ್ರವ | ರಾಮತಾರಕವನೇಮದಿ ಪೇಳ್ದ ಸು | ತ್ರಾಮ ವಂದಿತನೆ 1 ಭುಜಗ ಭೂಷಣನೆಸುಜನ ಸುರದ್ರುಮ | ಗಜವರದ ಪ್ರಿಯನಿಜಪತಿ ಪವನನ | ಭಜಿಸಿ ಬಹು ವಿಧದಿಅಜಗರ ಪದವಿಯ | ನಿಜವಾಗಿ ಪಡದೆ 2 ಭೂತೇಶ | ಭಸುಮ ಭೂಷವರ ವ್ಯೋಮಕೇಶ ಉಗ್ರೇಶ ||ಶರಣರ ತೋಷ | ವಿಶ್ವೇಶ | ಕಾಶಿ ಪುರೀಶಸರಿತ್ಕಪಿಲ ತಟದಿ ವಾಸ ||ವರ ಗೌರೀವರ | ಪರಮ ದಯಾನಿಧೆಚರಣಾಂಬುಜಗಳಿ | ಗೆರಗಿ ಬೇಡುವೆನೊಗುರು ಗೋವಿಂದ ವಿಠಲನ | ಚರಣ ನೀರೇರುಹನಿರುತ ಸ್ಮರಿಸುವಂಥ | ವರ ಮತಿ ಪಾಲಿಸು 3
--------------
ಗುರುಗೋವಿಂದವಿಠಲರು
ವಾಸವನುತಾಬ್ಜ ಪಾದಾ | ಪ್ರಮ | ಥೇಶ ಭಕ್ತ ವರದಾ ಪ ಮೀಸಲಹುದು ಶೇಷ ಪದಾ | ಈಶ ಎನ್ನ ಪೊರೆಯೊ ಸದಾ ಅ.ಪ. ದುರಿತ ಸಾರಥಿ ಅಜ | ಮೇರುವೆ ಧ್ವಜ | ಧಾರುಣಿ ಧರ ಥೋರಾ ಧನು |ಶ್ರೀ ಹರಿ ಶರ | ಮೂರೂರುಗಳ್ | ದಾರಿತ ಹರ 1 ವ್ಯೋಮಕೇಶ | ಪ್ರಮಥ ಪೋಷ | ಭೀಮ ನಾ5 | ಮಶಣವಾಸಸ್ವಾಮಿ ತೀರ್ಥ ವಾಸ ದಾಸ | ಕಾಮಿತಾರ್ಥ ಸಲಿಸೊ ಈಶ ||ಭೂಮಿಜೆ ಪತಿನಾಮಮೃತ ಪ್ರೇಮದಸವಿ ನೆ5ುವು ತವಭೌಮನ ಹರ | ಭುಮ5 ಹರಿ | ನಾಮ ಸ್ಕøತಿ ನೇಮವಕೊಡು || ಮೋದ | ಕರುಣಿಸೂವುದು ಭಕ್ತವರದ |ನರಮೃಗ ಹರಿ | ಚರಣಾಬ್ಜವ | ನಿರಂತರ | ಸ್ಮರಿಸುತ್ತಿಹಗೌರೀವರ | ಚರಣಂಗಳಿ | ಗೆರಗುವೆನು | ಪಾಲಿಸು ಹರ 3
--------------
ಗುರುಗೋವಿಂದವಿಠಲರು
ಶಂಕರ ಗುರುವರ ಮಹದೇವ ಭವ- ಸಂಕಟ ಪರಿಹರಿಸಯ್ಯ ಶಿವ ಪ. ಸಂಕಲ್ಪ ವಿಕಲ್ಪಮನೋನಿಯಾಮಕ ಕಿಂಕರಜನಸಂಜೀವ ಅ.ಪ. ಭಾಗವತರರಸ ಭಾಗೀರಥೀಧರ ಬಾಗುವೆ ಶಿರ ಶರಣಾಗುವೆ ಹರ ಶ್ರೀ ಗೌರೀವರ ಯೋಗಿಜನೋದ್ಧರ ಸಾಗರಗುಣಗಂಭೀರ 1 ರಾಯ ಲಕ್ಷ್ಮೀನಾರಾಯಣ ಭಕ್ತಿಪ- ರಾಯಣ ತ್ರಿನಯನ ಪುರಹನ ಕಾಯಜಮಥನ ಮುನೀಂದ್ರ ಸಿದ್ಧಜನ- ಗೇಯಸ್ವರೂಪೇಶಾನ 2
--------------
ತುಪಾಕಿ ವೆಂಕಟರಮಣಾಚಾರ್ಯ
ಶಶಿಕಲಾ ಭೂಷಣನೆ ಶಂಕರನೆ ಪ ಗಂಗಾಧರನೆ ಗೌರೀವರನೆ ಅಂಗಜಮದಹರನೇ ಶಂಕರನೇ 1 ಮೃತ್ಯುಂಜಯನೆ ಮುಪ್ಪುರ ಹರನೆ ಭಕ್ತರ ಪೊರೆಯುವನೆ ಶಂಕರನೆ 2 ಶ್ರೀಕಾಂತ ಹಿತಸಖ ಏಕಾಂತ ಹೃದಯ ನೀ ಕರುಣಿಸೊ ಸದಯಾ ಶಂಕರನೆ 3
--------------
ಲಕ್ಷ್ಮೀನಾರಯಣರಾಯರು
ಶ್ರೀ ಗೌರೀವರೇಂದ್ರನೇ ನಮೋ ನಮೋ ನಮೋ ಯೋಗಮಯನೆ ಭೋಗದಯನೆ ನಾಗಾಭರಣನೆ ಭೋಗೀ ಭೂಷಣ ವ್ಯಾಘ್ರವಸನನೆ ಪ ವಾಸುದೇವ ಪ್ರಿಯನೇ ಸದಾ ಶಿವಾ ಶಿವಾ ಶಶಾಂಕಧರನೇ ಕ್ಲೇಷಹಾರನೇ ದೋಷನಾಶನೇ ಭಾಸುರ ಪ್ರಕಾಶಾ ತೋಷದಾತನೇ 1 ಪಂಚ ಪ್ರಾಣಧಾರನೇ ಪರಾತ್ಪರಾವರಾ ಸಂಚಿತ ಅಘದೋಷಹರಣ ಸರ್ವಸುಖಕರಾ ಪಂಚವದನಾ ಪಂಚಶರಹರಾ 2 ಜ್ಞಾನಮಯ ಸುಚೇತನಾ ಕೃತಾಘನಾವನಾ ಸ್ವಾನುಭವ ಸ್ವಶಾಂತಿದಾತ ಧ್ಯಾನಿಪಾಜನಾ ದೀನೋದ್ಧಾರಕಾ ವಿಜ್ಞಾನಮಯನೇ 3
--------------
ಶಾಂತಿಬಾಯಿ
ಗೌರೀವರಶಿವ ನಮೋ ನಮೋ | ಶಿವ |ಗೌರೀವರ ಶಿವ ನಮೋ ನಮೋ |ಈಶಪರಾತ್ಪರದೋಷನಿವಾರ |ಕಾಶೀಪುರವರವಾಸ ವಿಶ್ವೇಶ್ವರ 1ಕರಿಚರ್ಮಾಂಬರ ಕರುಣಾಕರ |ಸ್ಮರಿಸಲು ಸರ್ವರದುರಿತನಿವಾರ 2ಭಸ್ಮಾಲೇಪನ ಶಶಿಶೇಖರವೃಷಭವಾಹನ ಸ್ಮಶಾನ ಸಂಚಾರ 3ಸುರ ಗಂಗಾಧರ | ನರರುಂಡಮಾಲಾ |ಕರದಿ ತ್ರಿಶೂಲವು ಉರಗಕುಂಡಲ 4ಜಟಾಮಕುಟ ನೀಲಕಂಠೇಶ್ವರಾ |ಅಡವಿಯೊಳ್ಕೈರಾತನಟನ ಶಂಕರ 5ಷಣ್ಮುಖ ಭೈರವ ಭೃಂಗಿ ಪ್ರಮಥ |ಗಣನಾಥ ವೀರಭದ್ರ | ನಂದಿವಂ ದಿತ 6ಮಂದರಧರಗೋವಿಂದನ ಸಖನೆ |ವಂದಿಪೆದಾಸನ ಪಾಲಿಸು ಶಿವನೆ 7
--------------
ಗೋವಿಂದದಾಸ
ಶಂಕರ ಗುರುವರ ಮಹದೇವ ಭವ-ಸಂಕಟ ಪರಿಹರಿಸಯ್ಯ ಶಿವ ಪ.ಸಂಕಲ್ಪ ವಿಕಲ್ಪಮನೋನಿಯಾಮಕಕಿಂಕರಜನಸಂಜೀವ ಅ.ಪ.ಭಾಗವತರರಸ ಭಾಗೀರಥೀಧರಬಾಗುವೆ ಶಿರ ಶರಣಾಗುವೆ ಹರಶ್ರೀ ಗೌರೀವರ ಯೋಗಿಜನೋದ್ಧರಸಾಗರಗುಣಗಂಭೀರ 1ರಾಯ ಲಕ್ಷ್ಮೀನಾರಾಯಣ ಭಕ್ತಿಪ-ರಾಯಣ ತ್ರಿನಯನ ಪುರಹನಕಾಯಜಮಥನ ಮುನೀಂದ್ರ ಸಿದ್ಧಜನ-ಗೇಯಸ್ವರೂಪೇಶಾನ 2
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಿವ ಮಹಾಗುರು ಸಹಜಾನಂದಭವಹರಮೃಡಬ್ರಹ್ಮಾನಂದ|xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭವಮೃಡಸಾಂಬಶಿವಾನಂದ | ದಶಭುಜ ಪಂಚವದನನೇತ್ರ |ದಳಪಂಚಕ ಮಂಗಳಗಾತ್ರ| ಭಸಿತವಿಲೇಪಸುಜನಸ್ತೋತ್ರ |ಪಶುಪತಿಬಿಸಜಾಕ್ಷನಮಿತ್ರ1ಸುರನದಿಶಿರದಲಿಟ್ಟಿಹನು | ಸ್ಮರನ ಉರಿಗಣ್ಣಿಲಿಸುಟ್ಟಿಹನು |ಉರಗಭೂಷಣ ಕುಂಡಲದ್ವಯನ |ಪರಮಪುರಷ ಗೌರೀವರನ2ಅಮರೇಂದ್ರಾದಿ ಪದಾರ್ಚಿತನು ಡಮರುತ್ರೀಶೂಲ ಮೃಗಾಯುಧನು | ಶಮನ ಮಹಾ ಭಯಸಂಹರನು | ಸುಮನ ಸುಭಕ್ತರ ಪೊರೆವವನು3ಗಜಚರ್ಮಾಂಬರಧರ ಯತಿ | ರಜನೀಪತಿ ಶೇಖರಗೋಪತಿಭಜಕ ಜನಗಳಾಂತರ ಸ್ಫೂರ್ತಿ |ಅಜಸುರನುತ ಸಚ್ಚಿನ್ಮೂರ್ತಿ4ಸಿದ್ಧರ ಮಡುವಿನೊಳಗೆ ವಾಸಾ |ಬದ್ಧಜೀವಂಗಳುದ್ಧರಿಪ ಈಶಾ |ಶುದ್ಧ ಲಕ್ಷಕೆ ಉಪದೇಶ | ಅದ್ವಯಗುರುಶಂಕರ ವೇಷಾ5
--------------
ಜಕ್ಕಪ್ಪಯ್ಯನವರು