ಭಜಿಸುವೆ ನಾ ಯಶೋದೆ ಬಾಲನ ಪ
ವಶಮಾಡಿಕೊಂಡು ರಾಧೆ
ಕುಸುಮನಾಭ ಅಸಮಲೀಲನ
ಎಸೆವ ಮೊಗದೋಳ್ಮೊಗವಿಟ್ಟು
ಅಸಮಸುಖವ ಪಡೆದಳೆಂದು 1
ಭಾವಜನಯ್ಯ ಭಕುತೋದ್ಧಾರ
ದೇವ ದಿವ್ಯಮಹಿಮನ
ಗೋವಳರೆಲ್ಲ ಒಲಿಸಿ ಬಿಡದೆ
ಗೋವುಕಾಯಿಸಿಕೊಂಡರೆಂದು 2
ದೀನನಾಥ ಕುಜನ ಕುಠಾರ
ಗಾನಲೋಲ ವೇಣುಗೋಪಾಲ
ಪ್ರಾಣೇಶ ಶ್ರೀರಾಮ ತನ್ನ
ಧ್ಯಾನದಾಸರರಸನೆಂದು 3