ದೇವ ತನದ ಮಹಿಮೆಯಗಳೆದೇ
ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ
ಕುಂಡ ಗೋಳಕರರ ಸನ ಮನಿಯಲಿ ಜನ
ಉಂಡ ವೆಂಜಲ ಬಳಿದು
ಹಿಂಡ ರಾಯರ ಮುಂದ ಕುದುರೆಯ ತೊಳೆವುತ
ಭಂಡಿಯ ಹೊಡೆವುತ ಪಾರ್ಥನವಶವಾಗಿ1
ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು
ನಿಲ್ಲದೇ ಮಾರ್ಗದಿ ಬರುತಿರಲು
ಮುಳ್ಳು ಮುರಿಯವಳ ಕಾಲವ ಹಿಡಿವುತ
ಸಂತೈಸಿ ಕಳುಹಿದ 2
ಜಾರ ಚೋರನೆನಿಸಿ
ನಿರುತ ಗೋವಳರುಂಡನ್ನ ಸವಿದು
ಗುರುವರ ಮಹಿಪತಿ ಪ್ರಭು ಜನ್ಮರಹಿತನವ
ತರಿಸಿ ಯಶೋಧೆಯ ಮೊಲೆ ಪಾಲವನುಂಡು3