ಒಟ್ಟು 104 ಕಡೆಗಳಲ್ಲಿ , 37 ದಾಸರು , 93 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರಪುಣ್ಯಬೇಡುವೆನಾಂ ಗುರುವರ್ಯನ ಚರಣ ಪಿಡಿದು ಮುಕ್ತಿಯಪಥದೊಳ್ ಪರಿಕಿಸಿ ಶೀಘ್ರದಿಘನತರ ಪರತತ್ವಪಡೆದು ಮರಣ ಜನನವ ತೊರೆವೇಂ ಕಂದ ಸನ್ನುತಗುರುವರತತ್ವ ಬೋಧಿಸಿ- ಮಂಗಳಾಶಾಸನಗೈಯುತಲೀ ಪ ಎನ್ನನೆ ಯಜಿಸುತ ಸುಮ್ಮನೆಯಿದ್ದರೆ- ಬೇಡಿದವರಗಳ ಕೊಡುವೆನುತ ಅ.ಪ ಕೊಟ್ಟರು ದ್ರವ್ಯವ ನಿನ್ನಪರಾಧವ ಕೊಡದಿದ್ದರು ನಾ ಮನ್ನಿಸುವೆ ನಿಷ್ಠೆಯೊಳ್ಪರಮನ ಸನಿಯದೊಳಿದ್ದರೆ ಬಿಟ್ಟೆನೆಯೆಂದಿಗು ನಂಬೆನುತ 1 ಸಾಧಿಸಿ ವಿರತಿಯ ಸಂಶಯಗೈಯದೆ- ಭೇದವ ಛೇದಿಸಿ ನಿರ್ಮಲದಿ ನಾದವ ಕೇಳುತ ಚಿತ್ಕಳೆ ನೋಡುತ ಮೋದದಿ ಶ್ರೀಹರಿ ನೀನೆನುತ 2 ಮೌನವ ಧರಿಸಿರಲು ಕರೆದು ಲೋಕಸಾರಂಗಮುನಿಗಳಂ- ಕಳುಹಿಸಿಕರುಣದಿ ಪೊರೆದಂತ 3 ಬೇಡಿಕೊ ಎನ್ನಲು ನಿನ್ನಂತ ಕುಕ್ಷಿಯೊಳ್ಪುಟ್ಟಿದೆ ಮನ್ನಿಸುತ 4 ಅಂತರಂಗದಿಂ ಧ್ಯಾನಿಸಲು ಇಷ್ಟದಿ ಸೀರೆಯ ಕೊಟ್ಟಂತ 5 ನಿತ್ಯವು ಕೃಪೆಯನು ತೋರುತಲಿ ಅರ್ಥಿಲಿ ರಂಗನ ಪಿಡಿದಂತ 6
--------------
ರಂಗದಾಸರು
(ಶ್ರೀ ವಾದಿರಾಜರು) ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ 1 ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ 2 ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ3 ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ4 ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ 5 ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ 6 ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ7 ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ 8 ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ 9 ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ 10 ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ 11 ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ 12 ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ 13 ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ14 ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ 15 ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ16 ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ 17 ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ 18 ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ 19 ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ 20 ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ 21
--------------
ತಂದೆವರದಗೋಪಾಲವಿಠಲರು
4. ಧನ್ವಂತರಿ ಶ್ರೀಪತಿಯೆ ಧನ್ವಂತರಿಯ ರೂಪವಾಂತೆ ತಾಪತ್ರಯವ ಹರಿಸೆ ಭಕ್ತರ್ಗೆ ನೋಂತೆ ಪ ಸುರರು ದಾನವರೆಲ್ಲ ಕ್ಷೀರ ಸಾಗರವನ್ನು ವರಗಿರಿ ಮಂದರವ ಕಡೆಗೋಲ ಮಾಡಿ ಧರಣಿಧರ ವಾಸುಕಿಯ ಹಗ್ಗಗೈಯುತ ಮಥಿಸೆ ಸಿರಿರತ್ನ ಧೇನು ತರು ಲಕ್ಷ್ಮಿಯರು ಬರಲು 1 ಶ್ರೀರಮಣಿ ಕೌಸ್ತುಭಗಳನ್ನು ನೀಧರಿಸುತ್ತ ಕಾರುಣ್ಯದಿಂ ಕಾಮಧೇನುವಂ ಮುನಿಗಳಿಗೆ ಪಾರಿಜಾತಸ್ವರ್ಗ ಸಂಪಾದವಗೈಯುತ್ತ ಸಾರಸೌಖ್ಯದ ಸುಧಾರಕನಾಗಿ ತೋರ್ದೆ 2 ಅಮರರಿಗೆ ನೀನೊಲಿಯತಮೃತವನು ಕರೆದಿತ್ತು ಕಮಲ ಸರಸಲಿಹೆ ಆಯುರ್ವೇದವನ್ನೊರೆದೆ ಕಮಲಲೋಚನ ಕೃಪೆಯೊಳಾರೋಗ್ಯಗಳ ನಮಗೀಯುತಾಬಾಲವೃದ್ಧರಂ ಸಲಹೊ 3 ದೇವ ನೂತನಪುರಿಯ ದೇವ ಶ್ರೀಮೂರುತಿಯ ಭಾವದಿಂ ಸನ್ನಿಧಿಯೊಳಾನಿನ್ನನುತಿಸೀ ಕಾವುದೆನುತಲಿ ಸತತ ಶ್ರೀದ ನಮಿಸುವೆ ಮಹಿತ ಜೀವ ಜೀವರಿಗೆಲ್ಲ ಸಿರಿಯೀವನಲ್ಲ 4 ಜಯಮಕ್ಕೆ ವೈದ್ಯೇಶನಾಮಾಯಕೆ ಜಯವುತಾನಾಗಲೀ ಓಷಧೀಲತೆಗಳಿಗೆ ಜಯ ಜಯವು ಗೋಗಳಿಗೆ ವೈದ್ಯವೃಂದಕ್ಕೆ 5
--------------
ಶಾಮಶರ್ಮರು
ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಭಿಮಾನ ಕಳೆವಂಥ | ಸುಲಭ ಮಾರ್ಗವನೇ |ಪ್ರಭುವೆ ಹರಿ ನಿನ್ನ ಸ್ಮøತಿ | ಸರ್ಬದಲಿ ಈಯೋ ಪ ಕರ್ಮ | ಸೃಷ್ಟಿ ನಡೆಸುವಲಿ |ಇಷ್ಟು ತತ್ವೇಶರನು | ಸುಷ್ಠು ಕರ್ಮವ ನಡೆಸೆಭ್ರಷ್ಟ ಎನ್ನಿಂದೆಂಬ | ಕರ್ತೃತ್ವದಲ್ಲಿರುವಾ 1 ಕರ್ಮ ಕರ್ಮ ನಾಮಕನೇ 2 ತನುನಿಷ್ಠ ತತ್ವೇಶರ | ಗಣಿತದ ಕರ್ಮಗಳತನು ತಮ್ಮ ಇಂದ್ರಿಯದಿ | ಅನುನಯದಿ ಗೈಯ್ಯೋ |ಎನ ತನುವು ಇಂದ್ರಿಯವೆ | ಕಾರಣವು ಎಂಬಂಥಹೀನ ಕಾರಕ ಸ್ವಾಮ್ಯ | ಮಾನವೆಂಬಂಥಾ 3 ಹಲವು ತತ್ವರು ದೇಹ | ದಲಿ ನಿಂತು ಕರ್ಮಗಳಹಲವು ಗೈಯುತ ಹರಿಗೆ | ಒಲಿದು ಅರ್ಪಿಸುತಿರೇ |ಫಲವು ಹಂಚಿಪ ಹರಿಯ | ಫಲಸ್ವಾಮ್ಯ ತಿಳಿಯದಿಹತಿಳಿಗೇಡಿ ಯೆನ್ನ ಭ್ರಮ | ಒಲಿದು ನೀ ಕಳೆಯೋ 4 ಅಹಿಕ ಪಾರತ್ರಿಕವು | ವಿಹಿತ ಸುಖವೆರಡರಲಿಅಹಿಕ ದುಃಖದ ವಿರಲು | ಬಹುದು ಮೋಕ್ಷೆರಿ ಬಾ |ಅಹಿತ ಮತಿ ಕಳೆಯುತ | ಶ್ರೀಹರಿಯೆ ನಿನ್ವೊಲಿಮೆಮಹಿತ ಮೋಕ್ಷದವೆಂಬ | ವಿಹಿತ ಮತಿ ಈ ಯೋ 5 ವಿಷಯದಲಿ ಮೈ ಮೆರೆತು | ವಿಷಯೋಪ ಭೋಗಗಳೆಅಸಮ ಪುರುಷಾರ್ಥಗಳ | ಲೇಸು ಪ್ರದವೆಂಬಾ |ವಿಷಯಾಭಿಮಾನಗಳು | ನಶಿಪಂತೆ ನೀ ಮಾಡಿವಿಷಯಾದಿಗಳಿಗೆಲ್ಲ | ಈಶ ನೀವೆನೆ ತಿಳಿಸೋ 6 ಕಕ್ಕಸದ ಅಭಿಮಾನ | ಷಟ್ಕಗಳ ನೀ ಕಳೆದುಅಕ್ಕರದಿ ತಾಯ್ತನ್ನ | ಮಕ್ಕಳನು ಪೊರೆವಂತೇ |ಲೆಕ್ಕಿಸದಲೆನ್ನಯ | ಲಕ್ಷ ಅಪರಾಧಗಳ ಕ್ಷಮಿಸಿಚೊಕ್ಕ ಗುರು ಗೋವಿಂದ | ವಿಠ್ಠಲನೆ ಸಲಹೋ 7
--------------
ಗುರುಗೋವಿಂದವಿಠಲರು
ಇಂಥಾ ಬಾಲನೆಲ್ಲು ಕಾಣೆನೊ ಪ ಉದಿಸಿದೇಳನೆ ದಿನದಿ ತ್ರಿದಶರೊಡನೆ ಕೂಡಿ ಮದಮುಖತಾರಕ | ಸದನವನೇರಿ ಕದನವಗೈಯುತ | ಹದವಿಹ ಶಸ್ತ್ರದಿ ಅಧಮ ದೈತ್ಯನ ಯಮ | ಸದನಕಟ್ಟಿರುವಂಥ 1 ಅಸಿತನ ಶಾಪದಿ | ಅಸುರೆಯಾದದಿತಿಯು ನಿಶಿಚರ ತಮನ ವರಿಸಿಕೊಂಡು ಇರಲು | ಅಸುರ ಹರನು ಖಳ | ನನು ಸೆಳೆಯಲಿಕೆನು-ತಿಸುವದಿತಿಗೆ ಪೂರ್ವ | ದೆಸೆಯನಿತ್ತಿರುವಂತಾ 2 ದುರುಳ ರಕ್ಕಸನಾಶಿ | ಧರಣಿಯೊಳ್ತೊಳಲುವ ದೊರೆ ಸುಧರ್ಮನ ಶಾಪ | ಪರಿಹರಿಸುತಲೇ | ನಿರತ ತನ್ನಯನಾಮ | ಸ್ಮರಿಪ ದಾಸರ ಸದಾ ಪೊರೆಯೆ ಪಾವಂಜೆಯೊಳು | ಸ್ಥಿರವಾಗಿನಿಂತ ತಾ 3
--------------
ಬೆಳ್ಳೆ ದಾಸಪ್ಪಯ್ಯ
ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ ಕಂತುಪಿತ ತನ್ನ ಕಾಂತೇಯರೊಡಗೂಡಿ | ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ ನಂದಾವ್ರಜದಿ ಇಂದ್ರನೂ | ಕುಪಿತನಾಗಿ | ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ | ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ | ಚೆಂದಾದಿಂದಲೆ ಪೊರೆಯೆ | ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ | ತಂದಿಂದಿರೆಯರಸಗೆ | ಮಿಂದು ಮಧುರಕ್ಷೀರಧಾರೆಯ ಕರೆಯಲು | ನಂದಕುವರಾನಂದವ ಬೀರಿದ 1 ಕಿರಿಯರೊಡನೆ ಕೂಡುತ | ಗೋಪಾಲನು | ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ | ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ | ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು | ಯದುವರನಾಲೈಸುತ ಬರುವರ ಸುಳಿವನು | ಸರಸದಿ ಕಂಡಾಕ್ಷಣದಿಂದೋಡಲು | ಸುರಿದುದು ಶಿರದಲಿ ದಧೀಘೃತಧಾರೆಯು 2 ಕರುಣಾಸಾಗರ ಹರಿಯು | ಮೋಹದಿ ವರ | ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು | ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ | ಹರುಷದಿ ಸುರಿಸಲು ಸುರ ಸಂದೋಹವು | ಪರಿ 3 ಅಂಗಳದೊಳು ಆಡುತ | ಮಂಗಳಮೂರ್ತಿ | ಸಂಗಡಿಗರ ಸೇರುತಾ | ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ | ಗೋಪಿ ರಂಗನ್ನಪ್ಪಿದಳು ಮುದದೀ || ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4 ಸುರನದೀ ಜನಕ ತಾನೂ | ಕುಂಜವನದಿ | ಸರಸಿಜಾಕ್ಷೇರ ಕೂಡುತ | ಸರಸವಾಡುತಲಿರೇ | ಪರಮ ಸಂತೋಷದಿ | ತರುಲತೆಗಳು ಹರಿಯ ಚರಣ ಸೇವೆಯಗೈಯ್ದು | ಕದಳಿಗಳುದುರಿಸೆ | ಗಳಿತ ಫಲಂಗಳು | ಸರಸಿಜನಾಭನು ಕರುಣಿಸಿ ಭಕುತರ | ಶಿರಿಯಾಳಪುರದೊಳು ಮೆರೆದನು ವಿಭವದಿ 5 ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ ಭವ | ಪರಿಪರಿ ನರಳುವ ದಾಸರ ಸಲಹಲಿನ್ನು | ಸಾಸಿರ ಶಂಖದಿ ಪೂಜೆಯಗೊಳುತಿರೆ | ದೇಶದೇಶದ ಜನರಾಲಿಸಿ ಬರುತಿರೆ | ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
--------------
ಶ್ರೀಶ ಕೇಶವದಾಸರು
ಎದುರ್ಯಾರೋ ಗುರುವೇ ಸಮರ್ಯಾರೋ ಪ ವಿಧಿ ಪದ ಅರ್ಹನೆ | ಮಧುಸೂದನ ಸುತ ||ಅ. ಪ|| ಕೇಸರಿಯ ಸತಿಯಲಿ ಉದಿಸಿದ ವೀರ | ರವಿಜಗೊಲಿದಧೀರದಾಶರಥಿ - ಚರಣಕೆ ಮಣಿದ ಗಂಭೀರ | ವಾಲಿಯ ಸಂಹಾರ ||ಸಾಸಿರ ದೈವತ್ತು | ಗಾವುದ ಸಾಗರಗೋಷ್ಪದ ಗೈಯುತ | ವಸುಧಿಜೆಗೆರಗಿದ 1 ಹರಿಯ - ಸೇವಕತನ ಮಾದರಿಯ | ತೋರಿದ ಹೊಸ ಪರಿಯಅರಿಯಾ - ಲಂಕೆಯ ದಹಿಸಿದ ಪರಿಯ | ಸೇತು ಬಂಧನ ದೊರೆಯಾ ||ಅರಿ ಕುಲ ಸವರಿ ಸಂ | ಜೀವನ ಗಿರಿ ತಂದುಧುರವ ಜಯಿಸಿ ಹರಿ | ಮಡದಿಯ ತಂದಗೆ 2 ಪ್ರಥಮಾಂಗನು ಕುಂತಿಯ ಸುತನೆನಿಸೀ | ದೃಪದಾತ್ಮಜೆ ವರಿಸೀಅತಿಖ್ಯಾತ ಜರೆಸುತನನ ವಧಿಸೀ | ಕೌರವರನು ಅಳಿಸೀ ||ತತುವ ಮತವ ಸಂ | ಸ್ಥಾಪಿಸುತವನಲಿವಿತತ ಮಹಿಮ ಹರಿ | ರತಿಯನೆ ಪಡೆದಗೆ 3 ಅರಿ ಉರವನೆ ಬಗಿದೂನಾರೀಯ - ತುರಬನು ಬಿಗಿದೂ | ನರ ಮೃಗನಂತೆಸೆದೊ ||ನೀರೊಳು ಅಡಗಿದ | ಕೌರವ ಮೇಲ್ಬರೆಊರು ತಾಡನದಿಂದ | ಮಾರಕನಾದಗೆ 4 ಕಲಿಯೂ ಹೆಚ್ಚಿದ ಕಲಿಯುಗದಲ್ಲಿ | ಮಣಿಮಾನನು ಇಲ್ಲಿಮಲಿನವ ಮಾಡಲು ಬಲು ವೇದದಲೀ | ಕಲುಷಿತ ತರ್ಕದಲೀ||ಅಲವ ಬೋಧರಾಗಿ | ಹುಲುಮತವಳಿಯುತಕಲುಷಹ ಗುರು ಗೋ | ವಿಂದನೆ ಪರನೆಂದೆ 5
--------------
ಗುರುಗೋವಿಂದವಿಠಲರು
ಎಷ್ಟು ಸಾಹಸವಂತ ನೀನೆ ಬಲವಂತದಿಟ್ಟಮೂರುತಿ ಭಳಭಳಿರೆ ಹನುಮಂತ ಪ. ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ಅ.ಪ. ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿಈ ಮಹಿಯೊಳು ನಿನಗಾರೈ ಸಾಟಿ1 ದೂರದಿಂದಸುರನ ಪುರವ[ನ್ನು] ನೋಡಿಭರದಿ ಶ್ರೀರಾಮರ ಸ್ಮರಣೆಯನು ಮಾಡಿಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನುವಾರಿಜಮುಖಿಯನು ಕಂಡು ಮಾತಾಡಿ 2 ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರೆನೊಪ್ಪಿಸಿಪ್ರೇಮದಿಂ ಜಾನಕಿ ಕುರುಹನು ಕೊಡಲಾಗಆ ಮಹಾ ವನದೊಳು ಫಲವನು ಬೇಡಿ 3 ಕಣ್ಣ್ಣಿಗೆ ಪ್ರಿಯವಾದ ಹಣ್ಣ[ನು] ಕೊಯ್ದುಹಣ್ಣಿನ ನೆವದಲಿ ಅಸುರರ ಹೊಯ್ದುಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತಬಣ್ಣಿಸಿ ಅಸುರರ ಬಲವನು ಮುರಿದು4 ಶೃಂಗಾರವನದೊಳಗಿದ್ದ ರಾಕ್ಷಸರಅಂಗವನಳಿಸಿದೆ ಅತಿರಣಶೂರನುಂಗಿ ಅಸ್ತ್ರಗಳ ಅಕ್ಷಯಕುವರನಭಂಗಿಸಿ ಬಿಸುಟಿಯೊ ಬಂದ ರಕ್ಕಸರ 5 ದೂರ ಪೇಳಿದರೆಲ್ಲ ರಾವಣನೊಡನೆಚೀರುತ್ತ ಕರೆಸಿದ ಇಂದ್ರಜಿತುವನೆಚೋರಕಪಿಯನು ನೀ ಹಿಡಿತಹುದೆನ್ನುತಶೂರರ ಕಳುಹಿದ ನಿಜಸುತನೊಡನೆ 6 ಪಿಡಿದನು ಇಂದ್ರಜಿತು ಕಡುಕೋಪದಿಂದಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದಗುಡುಗುಡುಗುಟ್ಟುತ ಕಿಡಿಕಿಡಿಯಾಗುತನಡೆದನು ಲಂಕೆಯ ಒಡೆಯನಿದ್ದೆಡೆಗೆ 7 ಕಂಡನು ರಾವಣನುದ್ದಂಡ ಕಪಿಯನುಮಂಡೆಯ ತೂಗುತ್ತ ಮಾತಾಡಿಸಿದನುಭಂಡುಮಾಡದೆ ಬಿಡೆನೋಡು ಕಪಿಯೆನೆಗಂಡುಗಲಿಯು ದುರಿದುರಿಸಿ ನೋಡಿದನು 8 ಬಂಟ ಬಂದಿಹೆನೊಹಲವು ಮಾತ್ಯಾಕೊ ಹನುಮನು ನಾನೆ 9 ಖುಲ್ಲ ರಕ್ಕಸನೆತೊಡೆವೆನೊ ನಿನ್ನ ಪಣೆಯ ಅಕ್ಷರವ 10 ನಿನ್ನಂಥ ದೂತರು ರಾಮನ ಬಳಿಯೊಳುಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾನನ್ನಂಥ ದೂತರು ನಿನ್ನಂಥ ಪ್ರೇತರುಇನ್ನೂರು ಮುನ್ನೂರು ಕೋಟಿ ಕೇಳರಿಯಾ11 ಕಡುಕೋಪದಿಂದಲಿ ಖೂಳರಾವಣನು ಸುಡಿರೆಂದ ಬಾಲವ ಸುತ್ತಿ ವಸನವನುಒಡೆಯನ ಮಾತಿಗೆ ತಡೆಬಡೆಯಿಲ್ಲದೆಒಡನೆಮುತ್ತಿದರು ಗಡಿಮನೆಯವರು 12 ತÀಂದರು ವಸನವ ತಂಡತÀಂಡದಲಿಒಂದೊಂದು ಮೂಟೆ ಎಂಬತ್ತು ಕೋಟಿಯಲಿಚಂದದಿ ಹರಳಿನ ತೈಲದೊಳದ್ದಿಸೆನಿಂದ ಹನುಮನು ಬಾಲವ ಬೆಳೆಸುತ 13 ಶಾಲು ಸಕಲಾತ್ಯಾಯಿತು ಸಾಲದೆಯಿರಲುಬಾಲೆರ ವಸ್ತ್ರವ ಸೆಳೆದುತಾರೆನಲುಬಾಲವ ನಿಲ್ಲಿಸೆ ಬೆಂಕಿಯನಿಡುತಲಿಕಾಲಮೃತ್ಯುವ ಕೆಣಕಿದರಲ್ಲಿ14 ಕುಣಿಕುಣಿದಾಡುತ ಕೂಗಿ ಬೊಬ್ಬಿಡುತಇಣಿಕಿನೋಡುತ ಅಸುರರನಣಕಿಸುತಝಣಝಣಝಣರೆನೆ ಬಾಲದಗಂಟೆಯುಮನದಿ ಶ್ರೀರಾಮರ ಪಾದವ ನೆನೆಯುತ 15 ಮಂಗಳಂ ಶ್ರೀರಾಮಚಂದ್ರ ಮೂರುತಿಗೆಮಂಗಳಂ ಸೀತಾದೇವಿ ಚರಣಂಗಳಿಗೆಮಂಗಳವೆನುತ ಲಂಕೆಯ ಸುಟ್ಟುಲಂಘಿಸಿ ಅಸುರನ ಗಡ್ಡಕೆ ಹಿಡಿದ 16 ಹತ್ತಿತು ಅಸುರನ ಗಡ್ಡಮೀಸೆಗಳುಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳುಚಿತ್ತದಿ ರಾಮರು ಕೋಪಿಸುವರು ಎಂದುಚಿತ್ರದಿ ನಡೆದನು ಅರಸನಿದ್ದೆಡೆಗೆ 17 ಸೀತೆಯಕ್ಷೇಮವ ರಾಮರಿಗ್ಹೇಳಿಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿಸೇತುವೆ ಕಟ್ಟಿ ಚತುರಂಗ ಬಲಸಹಮುತ್ತಿತು ಲಂಕೆಯ ಸೂರೆಗೈಯುತಲಿ 18 ವೆಗ್ಗಳವಾಯಿತು ರಾಮರ ದಂಡುಮುತ್ತಿತು ಲಂಕೆಯ ಕೋಟೆಯ ಕಂಡುಹೆಗ್ಗದ ಕಾಯ್ವರ ನುಗ್ಗುಮಾಡುತಿರೆಝಗ್ಗನೆ ಪೇಳ್ದರು ರಾವಣಗಂದು 19 ರಾವಣಮೊದಲಾದ ರಾಕ್ಷಸರ ಕೊಂದುಭಾವಶುದ್ಧದಲಿ ವಿಭೀಷಣ ಬಾಳೆಂದುದೇವಿ ಸೀತೆಯನೊಡಗೊಂಡಯೋಧ್ಯದಿದೇವ ಶ್ರೀರಾಮರು ರಾಜ್ಯವಾಳಿದರು 20 ಶಂಖದೈತ್ಯನ ಕೊಂದೆ ಶರಣು ಶರಣಯ್ಯಶಂಖಗಿರಿಯಲಿ ನಿಂದೆ ಹನಮಂತರಾಯಪಂಕಜಾಕ್ಷ ಹಯವದನನ ಕಟಾಕ್ಷದಿಬಿಂಕದಿ ಪಡೆದೆಯೊ ಅಜನಪದವಿಯ21
--------------
ವಾದಿರಾಜ
ಏನು ಕರುಣವೊ ಕೃಷ್ಣ ಎಮ್ಮ ಮೇಲೆ ಪ ನಾನಾಪತ್ತುಗಳ ಕಳೆದು ಸಲಹಿದೆಯೊ ಅಕಳಂಕ ಅ.ಪ. ಕೌರವ ಕೊಟ್ಟ ಪರಿಪರಿಯ ಕಷ್ಟಗಳ ಪರಿಹರಿಸಿ ನೀ ಕಾಯ್ದೆ ಪರಮ ಕರುಣಿ ಅರಗಿನ ಮನೆಯಲಿ ಉರಿದುಪೋಗದ ತೆರದಿ ಭರದಿಂದ ರಕ್ಷಿಸದೆ ಭೀಮನೊಳು ನೀನಿದ್ದು 1 ಕಾನನದಿ ನಾವ್ ನಿದ್ರೆಗೈಯುತಿರೆ ಕಡುಘೋರ ದಾನವ ಹಿಡಿಂಬಕನು ಕೊಲ್ಲ ಬರಲು ಪ್ರಾಣಸುತ ನಮ್ಮ ಈ ಭೀಮನಿಗೆ ಬಲಕೊಟ್ಟು ಹೀನಖಳನನು ಸೋಲಿಸಿ ಕಾಯ್ದೆ ಸ್ವಾಮಿ 2 ಲೋಕಕಂಟಕನಾದ ಭೀಕರ ಬಕಾಸುರನ ನೀ ಕೊಂದು ಈ ವೃಕೋದರನಲಿ ನಿಂದು ಏಕಚಕ್ರಪುರದ ಲೋಕವನು ನೀ ಕಳೆದೆ ಏಕಮೇವಾದ್ವಿತೀಯ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ ನಸುಗೆಂಪಾಗಿ ತಾರಕಿಗಳಡುಗುತಿದೆ ಬೊಂಪು ಹರಿದೋಡುತಿದೆಕೋ ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1 ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2 ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು ರಕ್ಕಸಾಂತರನೆವಳು ಮನೆಮನೆ ಬಿಡದೆ ಅಮ್ಮಿಯನು ಹುಡುಕುತಿವೆ ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3 ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು ದಧಿ ಮಥಕನುವಾಗಿ ಕುಳಿತು ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ ನೀನು ಉಪ್ಪವಡಿಸ 4 ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ ಗೆದೆಯ ಧೈರ್ಯಗುಂದುವ ಸಮಯ ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ ಮುದ್ದು ಗೋಪಾಲಕೃಷ್ಣ 5 ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ ಸನಕ ದೂರ್ವಾಸ ಕೌಶಿಕ ಕಪಿಲರು ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ ಈ ಸಮಸ್ತಾದಿ ಹರಿಯೇ || ಸ್ವಾಮಿ || 6 ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7 ಗಂಗೆ ಗೋದಾವರಿಯ ಭೀಮರತಿವರದೆ ವರ ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು ಅಂಗನೆಯರೆಲ್ಲರೂ ಕೂಡಿ ರಂಗು ಮಾಣಿಕದ ಆಭರಣಗಳಲಂಕರಿಸಿ ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು ಮಂಗಳಭಿಷೇಕಕೆಂದು ಸ್ವಾಮಿ 8 ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು ವರ ಪಾಂಡುರಂಗ ವಿಠಲ ಹರಿಸುತನ ಹಯವರೂಥವ ಹರಿಸಿದವನೆ ಏಳು ಹರಿಸುತನ ಸುತನ ಸುತನ ಕಾಯ್ದವನೆ ಏಳು ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ ನೀನು ಉಪ್ಪವಡಿಸಾ ||ಕೃಷ್ಣ || 9
--------------
ಕವಿ ಪರಮದೇವದಾಸರು
ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದು ಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ 4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದುಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಕಂಡುದನು ಪೇಳ್ವೆ ಬ್ರಹ್ಮಾಂಡ ನಾಯಕನೆ | ಕೊಂಡೆಯವಿದಲ್ಲ ಗ್ರಹಕುಂಡಲವ ಶೋಧಿಸುತ ಪ ಮಕರ ಸತಿ ಲಗ್ನದಲ್ಲಿರ್ಪ ಜಲ ತಾರಕೇಂದು ದಶೆ ಯಲಿ ನಿನಗೆ ಜಲದೊಳಾವಾಸವಾಯಿತು ಹರಿಯೆ 1 ಮನುಮಥನ ತಾತ ಕೇಳಿನಸುತನು ನಾಲ್ಕನೆಯ ಮನೆಯೊಳಿರುವನು ಲಗ್ನಕಧಿಪನೆನಿಸಿ ಮನದಿ ಯೋಚಿಸಲಿಕಾ ಶನಿದಶೆಯೊಳಾ ಕುಧರ ವನು ಪೊತ್ತು ದಣಿದೆನೀವ ನಿಧಿಯೊಳು ಹರಿಯೆ2 ಮಂಗಳನೆ ಸುಖಕಧಿಪ ಮಂಗಳನು ಸಿಂಗರದಿ ಸಿಂಗರಾಶಿಯೊಳು ತಾ ಕಂಗೊಳಿಸುತ ತುಂಗವಿಕ್ರಮನವನೆ ಸಂಘಟಿಸಿದನು ವನದಿ ಹಿಂಗದೆ ಬೇರು ಮೆಲುವಂಗವನು ಹರಿಯೆ 3 ವಾರಿಜಾಸನ ಪಿತನೆ ಕ್ರೂರಕ್ಷೇತ್ರದಿ ರಾಹು ಸಾರಿರ್ಪ ರಾಶಿ ವೃಶ್ಚಿಕವೆನಿಸಲು | ಕಾರುಣಿಕನವನ ದಶೆಯಾರಂಭದಲಿ ನಿನಗೆ ಘೋರ ರೂಪವ ತಾಳಲಾಯ್ತು ನರಹರಿಯೆ 4 ಮಂದರೋದ್ಧರ ಕೇಳು ಚಂದಿರನ ರಾಶಿಗಾ ನಂದದಧಿಪತಿ ಸೂರ್ಯನಂದನನು ತಾ ನಿಂದು ಮೇಷದೊಳತ್ರಿಕಂದನ ನಿರೀಕ್ಷಿಸಲು ಬಂದುದೈ ಭಿಕ್ಷೆಯದರಿಂದ ನಿನಗೆಲೆ ಹರಿಯೆ 5 ಅಂಬುಜಾನನ ಕೇಳು ಒಂಭತ್ತರಧಿಪ ಶಶಿ- ಸಂಭವನು ಪಾಪದಿಂ ತುಂಬಿರ್ಪನು | ಸಂಭವಿಸಲವನ ದಶೆಯಿಂದ ನೀ ಕ್ಷತ್ರಿಯ ಕ-ದಂಬ ಮರ್ದಿಸಿ ಧರ್ಮಮಂ ಬಿಟ್ಟೆ ಹರಿಯೆ 6 ದುರಿತ ಸ್ಥಾನಾಧಿಪತಿ ಗುರುವೇಳನೆಯ ಮನೆಯೊಳಿರುವನದರಿಂ | ಹಿರಿಯರುಪದೇಶದಿಂದಿರದೆ ಭಾರ್ಯೆಯನಗಲಿ ಚರಿಸಿದೆಯರಣ್ಯದೊಳಗಿರುತ ನೀ ಹರಿಯೆ 7 ಘೋರಪಾಪವಿನಾಶ ನಾರಿರಾಶಿಯ ನವಮ-ಕಾ ರವಿಯು ಸಾರಿ ನಿಂದಿರ್ಪನದರಿಂ | ಚೋರವ್ಯಾಪಾರ ಪರನಾರಿಯರ ಕೂಡೆ ವ್ಯಭಿ-ಚಾರ ನಿನಗಾಯಿತು ರಮಾರಮಣ ಹರಿಯೇ 8 ಕೈವಲ್ಯ ತಾರಕನಾಥನು | ಪೂತ ಬುದ್ಧಿಸ್ಥಾನ ವಾದನದರಿಂಲಿಂ ಭೂತಲದಿ ಸ್ಥಾಪಿಸಿದೆ ನೂತನ ಮತವ ಹರಿಯೇ 9 ಪಾರವರ್ಜಿತ ಕವಿಯು ಸಾರಿರ್ದ ದಶಮದೊಳ್-ಗಾರವ ನೆನೆಯುಂಟು ಧೀರನೆನಿಸಿ | ಭೂರಿಮ್ಲೇಂಛರನು ಸಂಹಾರ ಗೈಯುತ ತೇಜಿಯೇರಿ ಮೆರೆಯುತ್ತಿರುವ ನಾರಾಯಣ ಹರಿಯೆ 10
--------------
ಅನ್ಯದಾಸರು