ಒಟ್ಟು 12 ಕಡೆಗಳಲ್ಲಿ , 8 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟೇಕೆ ನಿರ್ದಯ ಶ್ರೀಹರಿಯೇ ಸೃಷ್ಟೀಪತಿಯೆ ಪ. ಮುಟ್ಟಿ ಭಜಿಪರ ನಿಟ್ಟಿಸಿ ನೋಡದೆ ನಿಷ್ಠುರವಾಗಿಹುದಿಷ್ಟವೆ ನಿನಗಿದು ಅ.ಪ. ಸಣ್ಣ ಮಾತುಗಳಾಡಿದೆನೇನೊ ದೆನ್ನ ತಲೆಯ ಮೇಲಿನ್ನೊಗೆಯದಿರು 1 ಕೋರೆಯ ತೋರುತ ಕೊಸರುವುದೇಕೋ ಶ್ರೀಹರಿ ನೀ ನೀರೀತಿ ಮಾಡುವ ಬಗೆಯಿನ್ನೇಕೋ ನೀರಜಭವಪಿತ ನೀನೇನಗೈದರು ಸೇರಿದೆ ನಿನ್ನನು ಸಾರೆನದಾರನು 2 ಸಿಂಗನ್ನ ಪೋಲುವ ಮುಖ ಧರಿಸಿ ಕಂಗೆಡೆ ಭಯದಿ ಜಗಂಗಳ ನಡುಗಿಪ ನುಂಗಲು ಬರುವಾಸಿಂಗನ ಬಗೆ ಸಾಕೋ 3 ಮುನ್ನಾ ಶುಕ್ರನ ಕಣ್ಣನು ತಿವಿದಾ ಪುಲ್ಲಿನತುದಿಯಿಂ ಎನ್ನೀ ಕಣ್ಣನ್ನು ತಿವಿಯದಿರಣ್ಣಾ ನಿನ್ನೀಕರದೊಳಿಹ ಘನ ಕೊಡಲಿಗೆ ನೀ ನಿನ್ನಾರನು ಗುರಿಗೈಯದಿರೆಂಬೆನು 4 ಶಿಲೆಯಾಗಿದ್ದವಳ ಕಲುಷವ ಕಳೆದು ಪಾವನೆಯೆನಿ ಕಾಳಿಂಗನ ಫಣೆಯೊಳು ಕುಣಿಕುಣಿದೇ ಭಳಿರೆನೆ ಬಾಲ ಗೋಕುಲ ಬಾಲೆಯರೆಲ್ಲರ ಜಾಲವಿದ್ಯೆಯಿಂ ಮರುಳುಗೊಳಿಸಿದೆ 5 ತುರುಗವನೇರುತ ತರುಬಲು ಬೇಡೈ ಧರೆಯೊಳು ನೀನೆತ್ತಿದ ಪರಿಪರಿ ರೂಪವ ಸ್ಮರಿಸಿ ಸ್ಮರಿಸಿ ಮನಬೆರಗಾಗಿದೆ ಹರಿ6 ಶರಣಾಭರಣನೇ ನೀನೆಂದು ಮನದೆಂದು ಮರೆಬೇಡುವೆನೈ ಬಳಿಸಂದು ವರಶೇಷಗಿರಿ ದೊರೆನೀನಿಂದು 7
--------------
ನಂಜನಗೂಡು ತಿರುಮಲಾಂಬಾ
ಎಲ್ಲಾಪರಾಧವೈಯ್ಯಾ ಹರಿಪ್ರೀತಿ ಯಿಲ್ಲದಿಹ ಕರ್ಮಗಳು ಝಲ್ಲರಿಯ ಛಾಯಾ ಪ. ಸಾಧುಲಿಂಗವ ಧರಿಸಿ ವೇದ ವೇದಾಂತ ಸ- ದ್ಬೋಧೆಯನು ಕೇಳಿದರು ಪೇಳಿದರು ಸುಪವಿತ್ರ ಮೇದಿನಿಯ ಸರ್ವತೀರ್ಥಸ್ನಾನ ಮಾಡಿದರು ಓದಿದರು ಸರ್ವಶಾಸ್ತ್ರ ಸಾಧಿಸುತ ಕಾಮ ಕ್ರೋಧಾದಿಗಳ ಜೈಸಿ ವನ ಕೈದಿ ತಪಗೈದರು ಮಹಾದಾನಿಯಾದರು ವಿ- ರಾಧವಧ ಪಂಡಿತನ ಪಾದಕರ್ಪಣ ವಿನಹ ಬಾಧಿಸದೆ ಬಿಡದು ಜನ್ಮ 1 ಹರಿಯೆ ಸರ್ವೋತ್ತಮ ಚರಚರಾತ್ಮಕ ಜಗ- ದ್ಗುರುತಮ ಮಹಾಮಹಿಮ ಕರುಣಾರ್ಣವನ ನಾಮ ಸ್ಮರಣೆಯಿಲ್ಲದೆ ಮಾಳ್ಪ ಪರಿಪರಿಯ ಕರ್ಮಗಳು ನರಕ ಸ್ವರ್ಗದ ಭ್ರಮಣವು ಸ್ಥಿರವೆಂದು ನಂಬಿ ದುಸ್ತರ ಭವಾರ್ಣವದಿ ಮುಳುಗಿ ತಿರುತಿರುಗಿ ಜನ್ಮಮಂ ಧರಿಸಿ ಬಹುದುಃಖ ಸಾ ಗರದಿ ತೇಲಾಡುವುದನರಿಯದತಿ ದುರ್ಮೋಹ ಸೆರೆಯೊಳಗೆ ಬಿದ್ದ ಮೇಲೆ 2 ಸರ್ವತಂತ್ರಸ್ವತಂತ್ರ ಸರ್ವತ್ರ ವ್ಯಾಪ್ತ ಸುರ ಸಾರ್ವಭೌಮಸುನಾಮ ಸಾಮಗಾನಪ್ರೇಮ ದೂರ್ವಾದಳಶ್ಯಾಮ ದುರ್ಗಾರಮಣ ಜಗವ ಗರ್ವದಿಂ ತಾ ಕರ್ತುವೆಂದಹಂಕರಿಸಿ ಜಗ ಕೊರ್ವನೆ ಹೃಷೀಕೇಶ ಕೇಶವ ದೈತ್ಯ ಪೂರ್ವಕವೆ ನಿರಪರಾಧ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಾಪರಾಧವೈಯ್ಯಾ ಹರಿಪ್ರೀತಿ ಯಿಲ್ಲದಿಹ ಕರ್ಮಗಳು ಝಲ್ಲರಿಯ ಛಾಯಾಪ. ಸಾಧುಲಿಂಗವ ಧರಿಸಿ ವೇದ ವೇದಾಂತ ಸ- ದ್ಬೋಧೆಯನು ಕೇಳಿದರು ಪೇಳಿದರು ಸುಪವಿತ್ರ ಮೇದಿನಿಯ ಸರ್ವತೀರ್ಥಸ್ನಾನ ಮಾಡಿದರು ಓದಿದರು ಸರ್ವಶಾಸ್ತ್ರ ಸಾಧಿಸುತ ಕಾಮ ಕ್ರೋಧಾದಿಗಳ ಜೈಸಿ ವನ ಕೈದಿ ತಪಗೈದರು ಮಹಾದಾನಿಯಾದರು ವಿ- ರಾಧವಧ ಪಂಡಿತನ ಪಾದಕರ್ಪಣ ವಿನಹ ಬಾಧಿಸದೆ ಬಿಡದು ಜನ್ಮ 1 ಹರಿಯೆ ಸರ್ವೋತ್ತಮ ಚರಚರಾತ್ಮಕ ಜಗ- ದ್ಗುರುತಮ ಮಹಾಮಹಿಮ ಕರುಣಾರ್ಣವನ ನಾಮ ಸ್ಮರಣೆಯಿಲ್ಲದೆ ಮಾಳ್ಪ ಪರಿಪರಿಯ ಕರ್ಮಗಳು ನರಕ ಸ್ವರ್ಗದ ಭ್ರಮಣವು ಸ್ಥಿರವೆಂದು ನಂಬಿ ದುಸ್ತರ ಭವಾರ್ಣವದಿ ಮುಳುಗಿ ತಿರುತಿರುಗಿ ಜನ್ಮಮಂ ಧರಿಸಿ ಬಹುದುಃಖ ಸಾ ಗರದಿ ತೇಲಾಡುವುದನರಿಯದತಿ ದುರ್ಮೋಹ ಸೆರೆಯೊಳಗೆ ಬಿದ್ದ ಮೇಲೆ 2 ಸರ್ವತಂತ್ರಸ್ವತಂತ್ರ ಸರ್ವತ್ರ ವ್ಯಾಪ್ತ ಸುರ ಸಾರ್ವಭೌಮಸುನಾಮ ಸಾಮಗಾನಪ್ರೇಮ ದೂರ್ವಾದಳಶ್ಯಾಮ ದುರ್ಗಾರಮಣ ಜಗವ ಗರ್ವದಿಂ ತಾ ಕರ್ತುವೆಂದಹಂಕರಿಸಿ ಜಗ ಕೊರ್ವನೆ ಹೃಷೀಕೇಶ ಕೇಶವ ದೈತ್ಯ ಪೂರ್ವಕವೆ ನಿರಪರಾಧ 3
--------------
ತುಪಾಕಿ ವೆಂಕಟರಮಣಾಚಾರ್ಯ
ಒಬ್ಬನೆ ದಾಸ ಹುಟ್ಟಿದವನಿವ | ನೊಬ್ಬನೆದಾಸ ಪ ಸೂರಿ ತಾಯಿತಂದೆಗಳಿಂದಾಯಿತು ಅ.ಪ ನಾಲ್ಕು ವರ್ಷದವರೆವಿಗೂ ಮಾತಾಪಿತರು ಪಾಲನೆಗೈದರು ಬಳಿಕ ಕಾಲಾಧೀನವನೈದಿದರವರಾ ಮೇಲೆ ನಡೆದ ಕಥೆಯನು ಬಿನ್ನೈಸುವೆ 1 ದ್ವಾದಶ ವರುಷ ಪರಿಯಂತವು ಮಾತುಳನ ಗೃಹದಿ ಬೆಳೆದು ಪಾದವೂರದೆ ದೇಶವÀ ತಿರುಗುತ- ಲಾದುದು ಇಪ್ಪತ್ತುನಾಲ್ಕು ವರುಷವು 2 ಶ್ರೀರಮಣ ಗುರುದ್ವಾರದಲಿ ಇಪ್ಪತ್ತು ಮೂರನೆಯ ವರುಷದಲಿ ಸಾರವ ತಿಳುಹಿಸಿ ಅನುಗ್ರಹಿಸಿದನ- ಪಾರ ಸುಗುಣನಿಧಿ ಕೈಪಿಡಿದೆನ್ನನು 3 ಹರಿನಾಮಬಲದಿಂದಲಿಪ್ಪತ್ತೈದು ವರುಷದ ಮೊದಲು ಸುಕೃತದಿಂ ಹರಿಸೇವೆಗಳಿಂ ನೆರೆದ್ರವ್ಯಗಳಿಸಿ ನಲವತ್ತು ವರುಷವಾಯಿತು 4 ನಲವತ್ತೊಂದನೆ ವರ್ಷಮೊ- ದಲು ಬಲು ಜನಗಳ ಬೇಡಿ ಕಳೆದಿತು ಐವತ್ತಾರು ವರ್ಷಗಳು 5 ಮಧ್ವರಾಯರೆ ನಮ್ಮ ತಂದೆಯು ಮಧ್ವರಾಯರೆ ನಮಗೆ ಗುರು ಮಧ್ವರಾಯರೆ ಉದ್ಧಾರಕರ್ತರು ಪದ್ಮನಾಭಗತಿ ಪ್ರೀತ್ಯಾಸ್ಪದರು 6 ಬೆಂಡಾಗಿರುವುದು ಶರೀರ- ಧರ್ಮವು ಬೇರೊಬ್ಬರ ಕಾಣೆ ಉಂಡುಟ್ಟು ತೆಗೆಯುವ ವಿಷಯದಿ ಊರಿನವರ ದೂರುವುದಿನ್ಯಾಕೆ 7 ಹರಿನಾಮದ ಬಲದಿಂದ ಗಳಿಸಿದುದು ಹರಿಗೆ ಪ್ರೀತಿಯಾಯಿತು ಪರರು ವ್ಯರ್ಥವಾಗಸೂಯೆ ಪಟ್ಟರೆ ದುರಿತವ ಪ್ರಯೋಜನವು ಸತ್ಯವಿದು 8 ಏನು ಕೋರುವುದು ಸಾಕು ಸೀತಾಪತಿ ಗುರುರಾಮವಿಠ್ಠ- ಲನ ಸೀಮೆ ಈಗಲು ಮುಂದಕು ಇರಬೇಕು9
--------------
ಗುರುರಾಮವಿಠಲ
ನಡತೆ ನನ್ನದು ಕೇಳಿರಯ್ಯ ಪ ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ. ಒಡವೆ ತರದಿಹನೆಂದು ಕೋಪ ಮಡದಿನಟಿಸುತ ಹೆದರೀ ಒಡನೆ ಸ್ನಾನವ ಮಾಡಿತಂದು ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು ಭೂರಿ ನೋಡುವೆನೆಂತೆಂಬೆ 1 ಒರಿಸೆ ಸಾಲಿಗ್ರಾಮ ಗೃಹದಿ ಅರಿವೆ ಹರಕು ಸಹ ಇಲ್ಲವೆನ್ನೇ ತರುವೆನೆನುತ ತಿಂಗಳಾರು ಕಾಲ ಬರಿದೇ ಆಹಾ ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2 ಹರಿಗೆ ದೀಪವ ಹಚ್ಚೆ ತೈಲ ಇರದು ತಾರೆನೆ ಹಡೆದ ತಾಯಿ ಬರಲಿ ಸಂಬಳ ತರುವೆ ಕೊಡುವಿ ಉರಿವ ಕಾಟವನೆಂದು ನುಡಿವೆ ಆಹಾ ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3 ವೃತ್ತಪತ್ರಿಕೆಯಲ್ಲಿ ಹೆಸರು ಎತ್ತಿಹಾಕುವರೆನೆ ಒಡನೆ ವಿತ್ತದಾನವಗೈವೆ ಬರಿ ಉ- ನ್ಮತ್ತಕಾರ್ಯಕಾದರು ಸರಿಯೇ ಆಹಾ ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4 ಕಂಡು ಕರೆಯುತ ಭಾರಿ ಊಟ ತೊಂಡನಂದದಿ ನೀಡಿ ಮನದಿ ಉಂಡು ಹರುಷವ ನೆನೆವೆ ಧನ್ಯ\ ಆಹಾ ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5 ದಾನಗೈದರು ಒಮ್ಮಿಂದೊಮ್ಮೆ ಮಾನಪಡೆಯಲು ಊರ ಒಳಗೆ ನಾನೆಂಬ ಹಂಕಾರ ಬಿಡದೆ ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು- ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6 ನೂರಿತ್ತು ಸಂಬಳ ಹಿಂದೆ ಮನದಿ ಊರಿತ್ತು ಹರಿಭಕ್ತಿ ಎಲ್ಲಿ ಈಗ ನೂರ್ಹತ್ತು ಕೊಟ್ಟರು ದೇವ ಬೆ- ನ್ಹತ್ತಿದೆ ತಾಪತ್ರಯ ಬಹಳ ಆಹಾ ಸಿರಿ ಕೃಷ್ಣವಿಠಲನೆ ದೃಷ್ಟಿ ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
--------------
ಕೃಷ್ಣವಿಠಲದಾಸರು
ಭಾಗವತ ದಶಮಸ್ಕಂದ ಕಥೆ ಜಯ ಜಯ ರಾಮಾನುಜ ಪಾಹಿ ಜಯ ಜಯ ಶ್ರೀಕೃಷ್ಣಪಾಹಿ ಜಯ ಪಾಂಡವ ಮಿತ್ರ ಪಾಹಿ ಜಯ ಜಯ ಜಯತು ಪ ಭವ ಪ್ರಮುಖ ಸುರರಿ- ಗಾನಮಿಸುತ ದಶಮಸ್ಕಂದದ ಕಥೆಯ ಪೇಳುವೆ 1 ತಾಮರಸಭವಂಗೆ ಪೋಗಿ ಮೊರೆಯನಿಟ್ಟಳು 2 ಹರಮುಖ ಸುಮನಸರ ಕೂಡಿ ವಿಧಿಯು ಕ್ಷೀರ ಶರಧಿಯೈದಿ ಪರುಷಸೂಕ್ತದಿಂದ ಹರಿಯ ಸ್ತೋತ್ರ ಮಾಡಲು 3 ಸುರರು ಯಾದವರಾಗಿ ನಾನು ಬರುವೆ ದೇವಕಿ ಪುತ್ರನೆನಿಸಿ ತರಿವೆ ನೀಚರನೆಂದಾಕಾಶವಾಣಿಯಾಯಿತು 4 ಕನ್ನಿಕೆಯರು ಭುವಿಯೊಳವತರಿಸುವದೆನ್ನುತ 5 ಮೃಡ ಸಡಗರದಲಿ ತಮ್ಮ ನಿಳಯಗಳನು ಸಾರ್ದರು 6 ಶೂರಸೇನನೆಂಬ ರಾಜ ಪಾರಂಪರ್ಯದಿ ಮಧುರೆಯಲ್ಲಿ ಧಾರುಣಿಯ ಪಾಲಿಸುತೆ ಧರ್ಮದಿಂದಲಿ 7 ದೇವಕನು ದೇವಕಿಯ ವಸುದೇವಗಿತ್ತು ಉತ್ಸವ ಬರೆ ಭಾವ ಮೈದ ಕಂಸ ರಥಕೆ ಸಾರಥಿಯಾದನು8 ನಭವುನುಡಿಯೆ ಜವದಿ ತಂಗಿಯ ಮುಡಿಯ ಪಿಡಿಯೆ ಕಂಸ ಕೋಪದಿ9 ಪುಟ್ಟಿದ ಮಕ್ಕಳನೆಲ್ಲ ನಿನಗೆ ಕೊಟ್ಟುಬಿಡುವೆ ಕೊಲ್ಲದಿರವಳ ಸಿಟ್ಟು ಸೈರಿಸೆನುತ ಪೇಳ್ದ ಶೌರಿಭಾವಗೆ 10 ಕೊಡಲು ಕಂಸ ಹೃದಯದಲಿ ಸತ್ಯಕೆ ಮೆಚ್ಚಿ ಭಾವಗೆಂದನು 11 ಇವನ ಭಯವು ಎನಗೆ ಇಲ್ಲ ಈವುಂದೆಂಟನೆ ಸುತನ ಮಾತ್ರ ತವಕದಿಂದ ಮನೆಗೆ ಪೋಗು ಪುತ್ರ ಸಹಿತದಿ 12 ಸೆರೆಯೊಳಿಡಿಸಿ ಘನವಿಭವದಿ ಭುವಿಯನಾಳುತಿರ್ದ ಕಂಸನು 13 ಸುರ ಋಷಿ ರಹಸ್ಯದಲಿ ಬಂದು ಪೇಳಿದ 14 ಉರಿದ ಕಣ್ಣೊಳು ಕಿಡಿಗಳುದುರೆ ಶೌರಿಯ ಬಂಧನದೊಳಿಟ್ಟು ತರಿದನಾರುಮಂದಿ ಸುತರ ತವಕದಲಿ 15 ಏಳನೆಯ ಗರ್ಭ ಉದರವಿಳಿದೆಂದು ತಿಳಿಯೆ ಜನರು ಶ್ರೀಲತಾಂಗಿಯರಸನಂಶ ಬಳಿಕ ಬೆಳೆದುದು 16 ಅದನು ವಯ್ದು ದುರ್ಗಿ ರೋಹಿಣಿಯುದರದಲ್ಲಿ ಇಟ್ಟೆಶೋದೆ ಯುದರದಲ್ಲಿ ತಾನು ಸೇರಿ ಬೆಳೆಯುತಿರ್ದಳು 17 ಬಳಿಕಯಿಂದಿರೇಶ ತಾನು ಜಲಜಮುಖಿ ದೇವಕಿಯ ಗರ್ಭ ದಲಿ ಪ್ರವಿಷ್ಠನಾಗಿರ್ದ ಮಹಿಮೆಯಿಂದಲಿ 18 ಮುಖದಿ ಕಳೆಯೇರಿರಲ್ಕೆ ಖಳನಿದೇ ಇದೇ ಎನುತ್ತ ಸಕಲ ಭಾಗದಿ ಕಾವಲಿಟ್ಟು ಸಮಯ ನೋಡುತ್ತಿರೆ 19 ಸುರರು ಹರಿಯ ವೇದದಿಂದ ಸ್ತೋತ್ರಮಾಡಿ ಹೋದರು 20 ನಂದನರಸಿಯಲ್ಲಿ ದುರ್ಗಿಯಂದುದಿಸಿರೆ ನಭೋ ಮಾಸದಿ ಅಂದುರಾತ್ರಿಯ ಶಿತಪಕ್ಷಯಷ್ಟಮಿ ದಿನದಲಿ 21 ಸರಸಿಜಾಪ್ತನುದಿಸಿದಂತೆ ಬೆಳಕು ತುಂಬಲು 22 ದರ ಗದಾರಿ ಪದ್ಮ ಪೀತಾಂಬರ ಶ್ರೀವತ್ಸ ಕೌಸ್ತುಭಗಳ ಶೌರಿ ನೋಡಿದ 23 ದಿವ್ಯರೂಪವ ಕಾಣುತ ವಸುದೇವ ಮನದಿ ಹಿಗ್ಗಿ ಮುದದಿ ಗೋವುಗಳನು ಹತ್ತುಸಾವಿರ ಧಾರೆಯೆರೆದನು 24 ತುತಿಸಲಂದು ಸತೀಪತಿಗಳು ಹಿತದಿ ತೇಜವ ಮಾಯಗೈದು ಸುತನು ಮಗುವಿನಂತೆ ತೋರೆ ಸೊಬಗಿನಿಂದಲಿ 25 ಕಾಲಲಿದ್ದ ಸಂಕೋಲೆಗಳು ಕಳಚಿ ಬಿದ್ದುದಾಗ ದೇವಕಿ ಬಾಲನನ್ನು ನೋಡಿ ಮನದಿ ಭಯವ ಪಟ್ಟಳು 26 ಬೀಗಮುದ್ರೆ ಸಹಿತ ಎಲ್ಲ ಬಾಗಿಲು ತನ್ನಿಂತಾನೆ ತೆಗಿಯೆ ಶೌರಿ ನಡೆದನು 27 ಗೋಕುಲವನೈದಿ ಕಮಲನಾಭನಂ ಯಶೋದೆಯ ಬಳಿಯಲಿಟ್ಟನು 28 ಆಕೆ ಪಡೆದ ಹೆಣ್ಣು ಶಿಶುವ ತಾ ಕೈಕೊಂಡು ಮನೆಗೆ ಬಂದು ಜೋಕೆಯಿಂದ ಮೊದಲಿನಂತೆ ತೋರುತಿರ್ದನು 29 ಅಳಲು ಶಿಶವು ಕೇಳಿಯೆಲ್ಲ ಖಳರು ಹೋಗಿ ಕಂಸಗುಸುರೆ ಝಳಪಿಸುತ್ತ ಖಡ್ಗವನ್ನು ಜವದಿ ಬಂದನು 30 ವಂದನಾದರೂ ಬಿಡಬಾರದೆ ಸುಂದರಿ ಇವಳಣ್ಣ ಎನಲು ಮುಂದುಗಾಣದೆ ಯೋಚಿಸುತ್ತ ಮುಗುವನೆತ್ತಿದ 31 ನಭದಿನಿಂತು ಸಾರಿ ಛೀ ದುರಾತ್ಮ ಯಾರ ಕಡಿವೆ ಯೆಂದಳು? 32 ವೈರಿ ಮೀರಿ ಕೊಂದು ಪಾಪಿಯಾದೆ ಛೀ! ಹೋಗೆಂದಳು 33 ಮನದಿ ನೊಂದು ಕಂಸನು ತನ್ನನುಜೆಯನ್ನು ಭಾವನನ್ನು ವಿನಯದಿಂದ ಬೇಡಿಕೊಂಡ ಕ್ಷಮಿಸಿರೆನ್ನುತಾ 34 ನೆರಹಿ ತನ್ನ ಮಂದಿಯಾದ ದುರುಳರಿಗೀ ಸುದ್ದಿಪೇಳೆ ಬರಲಿ ಹರಿಯು ಕೊಲುವೆವವನ ಭಯಬಿಡೆಂದರು 35 ಧರೆಯೊಳು ಪುಟ್ಟಿದ ಶಿಶುಗಳನ್ನು ತರಿವುದೆಂದು ಪೂತನೆಯೆಂಬ ಮರುಳೆಯನ್ನು ಕಳುಹಿ ವಿಸ್ಮಯದಿಂದಲಿರ್ದನು 36 ನಂದಗೋಕುಲದಲ್ಲಿ ಮಹಾನಂದವಾಗಿ ಜನರೆಶೋದೆಯ ಕಂದನನ್ನು ನೋಡಿ ಹಿಗ್ಗಿಯುತ್ಸವಗೈದರು 37 ಪ್ರೀತಿಯಿಂದ ನಂದಗೋಪ ಜಾತಕರ್ಮ ಮಾಡಿಸಲ್ಕೆ ಶ್ರೀ ತರುಣಿಯ ಕಳೆ ದಿನದಿನದಿ ಪೆರ್ಚುತಿಹುದು 38 ಶೌರಿಯ ಮಧುರೆಯಲಿ ನೋಡಿ ಆದರಿಸಿ ಎನ್ನ ಮಗನೆ ಧೀರ ನಿನ್ನ ಮಗನೆನ್ನುತ ಗೋಪ ನುಡಿದನು39 ಏಳನೆಯ ದಿನದಿ ಪೂತನಿ ಬಾಲಕಂಗೆ ಮೊಲೆಯನೊಡೆ ಹಾಲಾಹಲವನೀಂಟಯಸುವನೆಳದು ಕೊಂದನು40 ಬಿಡುಬಿಡೆನ್ನುತಾರ್ಭಟಿಸುತಲೊಡನೆ ಯೋಜನವಾಗಿ ದೇಹ ಪೊಡವಿಗುರುಳೆ ನೋಡಿಗೋಪರು ಭೀತಿಗೊಂಡರು 41 ಜನ್ಮತಾರೆಯುತ್ಸವದಲಿ ಶಕಟನು ಬಂಡಿಯೊಳು ಸೇರಿ ಇರಲು ನನ್ನಿಯಿಂದಲೊದ್ದು ಕೆಡಹಿ ಕೊಂದಿತಾ ಶಿಶು ಪೋರ 42 ಬಾರಿಬಾರಿಗೆ ರಕ್ಷೆಕಟ್ಟಿನಾರಾಯಣ ಕವಚವ ತೊಡಿಸಿ ಪೋರಬಾಲನನ್ನು ಸಲಹೆನುತ ಹರಿಯ ಬೇಡಿದರು43 ಸಾರಿ ನೆಲಕೆ ಕೆಡಹಿ ಮೇಲೆ ಆಡುತಿರ್ದನು 44 ಶೌರಿ ನೇಮದಿಂದ ಗರ್ಗ ಸೇರಿ ಗೋಕುಲವನು ಸಂ ಸ್ಕಾರ ಕ್ಷತ್ರದಿಂದ ಮಾಡಿದ ಶಿಶುಗಳೆರಡಕೆ 45 ರಾಮಕೃಷ್ಣರೆಂದು ಪೆಸರ ಪ್ರೇಮದಿಂದಲಿಡಿಸಿ ನಂದನ ನೇಮಕೊಂಡು ತಾ ತೆರಳಿದ ಗರ್ಗಾಚಾರ್ಯನು46 ಶುಕ್ಲಪಕ್ಷದ ಚಂದ್ರನಂತೆ ಶುಕ್ಲನಾಮಕ ಹರಿಯು ಜನದೊ ಳಕ್ಕರಿಯಲ್ಲಿ ಬಾಲಲೀಲೆ ತೋರುತಿರ್ದನು 47 ಅಂಬೆಗಾಲಿಡುತ್ತ ಕೃಷ್ಣ ಸಂಭ್ರಮದಲಿ ಮನೆಮನೆಗಳೊ ಳಿಂಬಾಗಿ ಪಾಲು ಬೆಣ್ಣೆ ಕದ್ದು ತಿಂಬನು 48 ವಂದು ನೋಡಿ ಕಣ್ಣುಮುಚ್ಚಿ ವಿಸ್ಮಿತಳಾದಳು 49 ಮನೆಮನೆಗಳ ಪೊಕ್ಕೆಶೋದೆತನಯ ಪಾಲುಬೆಣ್ಣೆಸವಿದು ವಿ ನಯದಿಂದ ಅರಿಯದವನಂತಿರುವ ತಾಯಿಗೆ 50 ಗೋಪಿ ವಿಧ ವಿಧ ಗುಣದಿಂದಲೂಖಲಕ್ಕೆ ಕಟ್ಟಿದಳ್ 51 ವರಳ ಸೆಳೆದುಕೊಂಡು ಮತ್ತಿಮರಗಳನ್ನು ಮುರಿಯೆ ಸಿದ್ಧ ಪರುಷರೀರ್ವರಾಬಾಲಗೆ ನಮಿಸಿ ತುತಿಸಿ ಪೋದರು 52 ವನಜನಾಭ ಕೃಷ್ಣನನ್ನು ದೂರುತಿರುವರು 53 ಸೂನು ನಮ್ಮ ಮನೆಗೆ ಬಂದು ಆನಂದದಿ ಯಾರು ಆಡದಾಟ ಆಡುವ 54 ಬಾಯಿಗೊರಸಲತ್ತೆ ಸೊಸೆಯ ಹೊಡೆಯೆ ನಗುತ ಓಡಿ ಬಂದ ತವಸುತ 55 ಲೀಲೆಯಿಂದಲಿವನು ನೆಲುವಿನ ಮೇಲಿಟ್ಟಿರುವ ಭಾಂಡವನ್ನು ಕೋಲಿನಿಂದ ತಿವಿದು ವಡೆದು ಪಾಲ ಸವಿದನು56 ಎತ್ತಿಕೊಳ್ಳೆನುತ್ತ ಮೈಯ್ಯ ಹತ್ತಿ ನೆಲುವಿನ ಭಾಂಡವನ್ನು ಮತ್ತೆ ನಿಲುಕಿಸಿಕೊಂಡು ಪಾಲಕೆನೆಯ ಮೆದ್ದನು 57 ಸತಿಪತಿಗಳ್ ಮಲಗಿರೆ ಮಧ್ಯೆ ಸರ್ಪವನು ಹಾಕಿ ತಾನ- ಗುತ್ತಲಿ ಜುಟ್ಟು ಜಡೆಗೆ ಗಂಟಿಕ್ಕಿ ಓಡಿದ58 ಅಳುತಲಿರುವ ಶಿಶುವಿನ ತಲೆಯ ಕೂದಲು ಕರುವಿನಬಾಲಕೆ ಎಳೆದು ಗಂಟುಹಾಕಿ ಬೀದಿಯಲ್ಲಿ ನೂಕುವ 59 ಬೆಣ್ಣಿಯನ್ನು ಮೆದ್ದು ಮಿಕ್ಕದನ್ನು ಕೋತಿಗಿತ್ತದು ತಿನ್ನತಿರಲು ನಗುತ ನಗುತ ತಿರುಗುತಿರುವನು 60 ಇನಿತು ಎಲ್ಲ ಪೇಳೆ ಗೋಪವನಿತೆ ತಾನು ಮಗನ ಮುದ್ದಿಸಿ ಘನ ಪ್ರಮೋದ ಚಿತ್ತಳಾಗಿ ಕಾಲಕಳೆವಳು 61 ಪ್ರೀತಿಯಿಂದ ಬನ್ನಿ ಎಂದು ಕರೆವ ಬಾಲರ 62 ಮೂರು ವರ್ಷವಾಗೆ ಕೃಷ್ಣ ಮುದದಿ ಕರುಗಳ ಕಾಯುತ್ತ ವಾರಿಗೆಯವರಿಂದ ಕೂಡಿ ಕುಣಿಯುತಿರುವನು 63 ವತ್ಸ ಬಕರ ಮುರಿದು ಕೃಷ್ಣ ಸ್ವೇಚ್ಛೆಯಿಂದಲಣ್ಣನೊಡನೆ ನಿಶ್ಚಲ- ಚಿತ್ತರುಲಿಯಲಾಡುತೆಸೆದ ಮೋದದಿ64 ವೃಂದಾವನಕೆ ಪೋಗಲಲ್ಲಿ ಇಂದಿರೇಶ ವಿಷದ ಮಡುವ ನೊಂದು ದಿನದಿ ಧುಮುಕಿ ಜಲವ ನಿರ್ಮಲಗೈದನು 65 ವನದೊಳಗ್ನಿಯನು ನುಂಗಿ ಜನರ ಸಲಹಿ ರಾತ್ರಿಯಲ್ಲಿ ಮುನಿ ಜನೇಢ್ಯನಾಗಿ ಗೋಕುಲದೊಳೆಸೆದನು 66 ಅಜಗರನಾಗಿದ್ದಸುರನ ನಿಜಶರೀರ ಬೆಳಸಿ ಕೊಂದು ಸ್ವಜನರನ್ನು ಪಾಲಿಸಿದನು ವೃಜಿನದೂರನು 67 ಳನ್ನು ಕಾಯ್ದ ಕೃಷ್ಣ ತಾನು ನನ್ನಿಯಿಂದಲಿ 68 ಕರುಗಳನ್ನು ಹುಡುಗರನ್ನು ಸರಸಿಜಭವ ಬಚ್ಚಿಡಲ್ಕೆ ಹರಿಯುತಾನು ತತ್ವದ್ರೂಪವಾಗಿ ಮೆರೆದನು 69 ನಾನಾಲಂಕಾರದಿ ಗೋವುಗಳ
--------------
ಗುರುರಾಮವಿಠಲ
ವನಭೋಜನ ಊರ್ವಶಿ: ಇದೀಗ ಮನವು ಇಂದಿರಾಕ್ಷಿ ಇದೀಗ ಮನವುಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವುಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ4 ಊರ್ವಶಿ : ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ5
--------------
ತುಪಾಕಿ ವೆಂಕಟರಮಣಾಚಾರ್ಯ
ವನಭೋಜನ ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ 1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ 2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ 3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು 5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವು ಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ 1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ 2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ 3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ 4 ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ 2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ 3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ 4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ 5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ 6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ 7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ 2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ 3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ 4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ 5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ 1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ 2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು 3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂ ಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ 1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ 2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ 2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ 3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು 4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ 5 ಭೋಗವಿನ್ನಂತೆಯಿಲ್ಲಿ ರೋಗ ದುರಿತವೆಲ್ಲ ನೀಗಿತು ಎನುತನು- ರಾಗದಿ ಸವಿದುಂಡು ತೇಗಿದರೆಲ್ಲರು 6 ಪುಣ್ಯ-ಫಲದಿಂದ ದೊರಕಿತಲ್ಲೇ ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ ಜಲಜಂತು ಸಹವು ನಿರ್ಮಲಿನವಾದವು ಕಾಣೆ 7 ಪಾವನವಾದರು ಹಿಂಡು ಉದ್ದಂಡ ಮೃಗಗಳೆಲ್ಲ &ಟಿb
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ ಉದಿಸಿದ ಶ್ರೀನಿವಾಸಾರ್ಯರೆಂಬ ಪ್ರಚಲಿತ ನಾಮದ ದಾಸಾರ್ಯರ ಚರಿತೆ ಗುರುಗಳ ದಯದಿಂದ ಅರಿತಷ್ಟು ಪೇಳುವೆ ಬುಧ ಜನರು ನಿಷ್ಕಪಟ ಭಾವದಿಂದಲಿ ಕೇಳಿ ಸಿರಿಗುರುತಂದೆವರದಗೋಪಾಲವಿಠ್ಠಲನ ಭಕ್ತರೊಳಗಿವರೊಬ್ಬರು ಕಾಣಿರೊ 1 ಶ್ರೀ ರಮೇಶಕೃಷ್ಣನು ತನ್ನ ಪರಿವಾರ ಸಹಿತಾಗಿ ಓಲಗದಿ ಕುಳಿತಿರಲು ಸಾವಧಾನದಿ ತಾನು ಶ್ರೀದೇವಿ ಋಷಿಯಾಜ್ಞೆಯಿಂದಲಿ ಬಂದು ಶಿರಬಾಗಿ ಧರಣಿಯೊಳು ಭಾಗವತರ ಮಹಿಮೆತಿಳಿದು ಸಾಧನೆಗೈಯ್ಯಬೇಕೆಂಬ ಕುತೂಹಲದಿಂದ ದೇವಾಂಶರ ಬಿಡದೆ ಅವತಾರ ಮಾಡಿದ ಪವಿತ್ರವಂಶದಿ ಬಹುಕಾಲ ಪುತ್ರಾಪೇಕ್ಷೆಯಿಂದಲಿ ಶ್ರೀನಿವಾಸನ ಸೇವೆಗೈದ ಮಾತೆ ಶ್ರೀ ರುಕ್ಮಿಣೀದೇವಿ ಪಿತ ರಾಘವೇಂದ್ರರ ಉದರದಿಂದಲಿ ಜನಿಸಿ ಬಾಲತ್ವ ಕೆಲಕಾಲ ಕಳೆದು ತದನಂತರದಿ ಭೂವೈಕುಂಠಪುರದಲ್ಲಿ ದ್ವಿಜತ್ವವನೆ ಪಡೆದು ಲೌಕಿಕ ವಿದ್ಯೆಗಳನೆಲ್ಲ ಕಲಿಸಿ ಬಳಿಕ ಸಂಗೀತ ವಿದ್ಯೆಯ ಸಾಧನಕೆ ಮಿಗಿಲೆಂದು ಸಾಧಿಸಿ ಬಿಡದೆಲೆ ಪ್ರಾವೀಣ್ಯತೆಯ ಪಡೆದು ಅತಿ ಗೌಪ್ಯದಿಂದಲಿ ಶಿರಿಗುರು ತಂದೆವರದಗೋಪಾಲವಿಠ್ಠಲನ ಸ್ತುತಿಸಿ ಮನದಿ ಅತಿ ಹಿಗ್ಗುತಲಿರ್ದ ಬಗೆ ಕೇಳಿ 2 ಗುರು ಕಾಳಿಮರ್ದನ ಕೃಷ್ಣಾಖ್ಯದಾಸರ ಸಹವಾಸದಿಂದಲಿ ಲೌಕಿಕದಿ ಹುರುಳಿಲ್ಲವೆಂಬ ಮರ್ಮವ ತಿಳಿದು ಮನದಿ ವಿಚಾರಿಸುತಿರಲು ಕಾಲವಶದ ಸೋತ್ತುಮ ರಾಜ್ಯದಿ ಸ್ವರೂಪ ಕ್ರಿಯೆಗಳಾಚರಣೆಗೆ ಮನಮಾಡುತಲಿಹ ಓರ್ವ ದ್ವಿಜನ ಮರ್ಮವ ತಿಳಿಯದೆ ನಿಂದಿಸುವ ಮನವ ಮಾಡೆ ಶ್ರೀವದ್ವಿಜಯರಾಯರುತಮ್ಮ ವಂಶಜನಿವನೆಂದು ಶ್ರೀಮತ್ ರಾಘವೇಂದ್ರ ಮುನಿಗೆ ಬಹು ವಿಧ ಪ್ರಾರ್ಥಿಸಿ ಫಲ ಮಂತ್ರಾಕ್ಷತೆಯನಿತ್ತು ಧ್ಯಾನಕ್ಕೆ ತೊಡಗಿಸಿ ಶ್ರೀಮದ್ ಭಾವಿ ಸಮೀರ ಪದರಜವೇ ಬಹು ಭಾಗ್ಯವೆಂದು ಧೇನಿಪ ಭಕ್ತವರ್ಯರಾದ ತಂದೆವರದಗೋಪಾಲ ವಿಠಲದಾಸರಾಯರ ಪದಪದ್ಮಂಗಳಿಗೊಪ್ಪಿಸಿ ಅಪರಾಧಗಳನ್ನೆಲ್ಲ ದೃಷ್ಟಿ ಮಾತ್ರದಿ ದಹಿಸಿ ಫಣಿಗೆ ಮೃತ್ತಿಕೆ ತಡೆದು ಗುರುಗಳನೆ ಅರುಹಿ ನಿಜ ಮಾರ್ಗದಿಂದ ಶಿರಿಗುರುತಂದೆವರದಗೋಪಾಲವಿಠ್ಠಲನ ಕರುಣಿ ಪಡೆವ ಮಾರ್ಗವನೆ ಪಿಡಿದರು ಜವದಿ 3 ಭವದೊಳು ಬಳಲುವ ಭೌತಿಕ ಜೀವಿಗಳ ಬಹು ಬೇಗದಿಂದಲಿ ಉದ್ಧರಿಸಲೋಸುಗ ಬೋಧಮುನಿ ಕೃತ ಗ್ರಂಥಸಾರವ ಬೋಧಿಪ ಮುನಿಗಳ ದರ್ಶನಗೋಸುಗ ಪೊರಟ ಸಮಯದಲಿ ಶ್ರೀಗುರು ವಾದಿರಾಜ ಮುನಿವರ್ಯ ತನ್ನಯ ಪುತ್ರನ ಮೊರೆಕೇಳಿ ಶ್ರೀಲಕ್ಷ್ಮೀಹಯವದನನ ಮೂರ್ತಿಯ ಪ್ರಾರ್ಥಿಸೆ ರೌಪ್ಯಪೀಠ ಪುರವಾಸಿ ಶ್ರೀಕೃಷ್ಣನ ಕರದಿ ಶೋಭಿಪ ವಸ್ತುವಿನ ಪುರದಿ ಸ್ವಪ್ನದಿ ಬಂದು ತಂದೆವರದವಿಠ್ಠಲನೆಂಬ ಅಂಕಿತವನಿತ್ತು ಅದೇ ಸುಂದರ ರೂಪವ ತೋರಿ ನೈಜಗುರುಗಳ ದ್ವಾರಾ ಭಜಿಸೆಂದು ಬೋಧಿಸಿದ ನಂತರದಿ ಬಹು ಸಂಭ್ರಮದಿಂದಲಿ ಉಬ್ಬುಬ್ಬಿ ತನ್ನ ತನುಮನಧನ ಮನೆ ಮಕ್ಕಳನೆಲ್ಲ ನಿನ್ನ ಚರಣಾಲಯಕೆ ಅರ್ಪಿತವೆಂದು ಅರ್ಪಿಸಿ ಗುರುಗಳ ದ್ವಾರಾ ಸಿರಿಗುರು ತಂದೆವರದಗೋಪಾಲಗೆ ಸದಾ ಧೇನಿಸುತ ಮೈಮರೆತಿರ್ದನೀ ದಾಸವರ್ಯ 4 ಪಾದ ಕರವ ಮುಗಿದು ಸ್ವಾಮಿ ಶ್ರೀಗುರುರಾಜಾತ್ವದ್ದಾಸವರ್ಗಕೆಸೇರಿದ ಬಾಲಕ ದಾಸನೀತಾ ಕರುಣದಿಂದಲಿ ಜವದಿ ಕರುಣ ಕಟಾಕ್ಷದಿ ಈಕ್ಷಿಸಿ ಉದ್ಧರಿಸಬೇಕೆಂದು ಬಹುವಿಧ ಪ್ರಾರ್ಥಿಸಲು ಪರಮ ಕರುಣಾನಿಧಿ ಋಜುವರ್ಯ ಶ್ರೀ ವಾದಿರಾಜಾರ್ಯ ತನ್ನ ಹಂಸರೂಪಿಣಿ ಶ್ರೀ ಭಾವೀ ಭಾರತಿಯಿಂದೊಡಗೂಡಿ ಬಹು ಆನಂದದಿಂದಲಿ ಪಂಚ ಬೃಂದಾವನ ರೂಪದಿ ಮೆರೆವ ತನ್ನಯ ರೂಪವ ತೋರಿ ತುತಿಸಿಕೊಂಡು ಬಹು ಆನಂದಭರಿತರಾಗಿ ಬಹು ಬೇಗ ಸಾಧಿಸುವ ಗೈಸಲೋಸುಗ ಶಿರಿಗುರು ತಂದೆವರದಗೋಪಲವಿಠಲನ ಪ್ರಾರ್ಥಿಸಿ ಸಕಲ ಉತ್ಸವಗಳ ತೋರಿ ಶ್ರೀಮದ್ವಿಶ್ವೇಂದ್ರರ ದ್ವಾರಾ ತವ ಪಾದರೇಣು ಫಲ ಮಂತ್ರಾಕ್ಷತೆಯನಿತ್ತು ಬಗೆಯನೆಂತು ವರ್ಣಿಸಲಿ ಪಾಮರ ನರಾಧಮನು ನಾನು 5 ಕೇವಲ ಲೌಕಿಕ ಜನರಂತೆ ಆಧುನಿಕ ಪದ್ಧತಿಗನುಸರಿಸಿ ದಿನಚರ್ಯವನೆ ತೋರುತಲಿ ಭಾರತೀಶನ ಪ್ರಿಯವಾಗಿಹ ಕರ್ಮಗಳನೊಂದನೂ ಬಿಡದೆ ತಿಳಿದು ಮನದಿ ಮಾಡುತಲಿ ಮಂಕುಗಳಿಗೆ ಮೋಹಗೊಳಿಸಿ ಮಮಕಾರ ರಹಿತನಾಗಿ ದಿನಾಚರಣೆಗೈದು ಶ್ರೀ ಶುಕಮುನಿ ಆವೇಶಯುತರಾದ ಸದ್ವಂಶಜಾತ ಶ್ರೀಕೃಷ್ಣನ ಸೇವೆಗೋಸುಗ ಅವತರಿಸಿದ ವಾಯುದೇವ ಪೆಸರಿನಿಂದಲಿ ಶೋಭಿಪ ಕುಲಪುರೋಹಿತರ ಬಳಿಯಲಿ ಬಹು ವಿನಯದಿಂದಲಿ ಶ್ರೀ ನಿಜತತ್ವಗಳ ಮರ್ಮಗಳ ಕೇಳಿಕೊಂಡು ಮನದಿ ವಿಚಾರಿಸಿ ದೃಢೀಕರಣ ಪೂರ್ವಕ ಪಕ್ವವಾದ ಮನದಿಂದಲಿ ಶ್ರೀಶಶ್ರೀ ಮಧ್ವಮುನಿ ಶ್ರೀಗುರುಗಳ ಕರಣವನೆ ಕ್ಷಣಕ್ಷಣಕೆ ಬಿಡದೆ ಸ್ಮರಿಸುತಾನಂದ ಭಾಷ್ಯೆಗಳ ಸುರಿಸುತ ಭಾಗವತರ ಸಮ್ಮೇಳನದಿ ತತ್ವಗಳ ವಿಚಾರಿಸುತ ಶ್ರೀ ದಾಸಾರ್ಯರಾ ಉಕ್ತಿಗಳ ಆಧಾರವನೆ ಪೇಳುತಲಿ ಮನದಿ ಗುರುಗಳ ಸನ್ನಿಧಿಗೆ ಅರ್ಪಿಸಿ ತತ್ವದ್ವಾರ ತಿಳಿದುಪೂರ್ಣ ಸಾಧನವಗೈದು ಶ್ರೀ ಪ್ರಲ್ಹಾದ ಬಲಿ ಮಾಂಧಾತ ಕರಿರಾಜ ಶಿಬಿಮೊದಲಾದ ಚಕ್ರವರ್ತಿಗಳಲಿ ಬಹುಬೇಗ ಸಾಧನವ ಗೈದರು ಇವರಾರೊ ನಾ ಕಾಣೆ ಶಿರಿ ಗುರುತಂದೆವರದ-ಗೋಪಾಲವಿಠಲನ ಆಣೆ 6 ಸತಿ ವತ್ಸರ ವತ್ಸರ ಸತಿ ಮಾಯಾ ಶುಭ ದಿನದಿ ಸಂಖ್ಯಾ ಕಾಲದಿ ಪ್ರಥಮ ಯಾಮವೆಮಿಗಿಲೆಂದು ಮನದಿ ಲಯ ಚಿಂತನೆಯ ಬಿಡದೆ ಮಾಡುತದೇವತೆಗಳ ದುಂದುಭಿ ವಾದ್ಯಗಾಯನಗಳ ರಭಸದಿಶ್ರೀ ಲಕುಮಿ ದೇವಿಯ ಸೌಮ್ಯ ದುರ್ಗಾ ರೂಪಕೆನಮೋ ನಮೋ ಎಂದು ಶಿರಿಗುರುತಂದೆವರದಗೋಪಾಲ ವಿಠಲನಪುರಕೆ ಪುಷ್ಪಕ ವಿಮಾನ ರೋಹಿಣಿಯನೆ ಮಾಡಿನಲಿನಲಿದಾಡುವ ತೆರಳಿ ಪೋದಾರಿವರು 7 ಜತೆ :ಸತಿದೇವಿ ರಮಣನ ಭಕ್ತನೇ ನಿನ್ನಯಸುಖತನವೆಂದಿಗೂ ಕೊಡಲೆಂದು ಬೇಡಿಕೊಂಬೆಸಿರಿಗುರುತಂದೆವರದಗೋಪಾಲ ವಿಠಲನಿಗೆ 8
--------------
ಸಿರಿಗುರುತಂದೆವರದವಿಠಲರು
ಶ್ರೀ ಶ್ರೀ ಶ್ರೀಸತ್ಯಪ್ರಮೋದತೀರ್ಥರು ಸತ್ಯಾಭಿಜ್ಞ ಕರಜ ಶ್ರೀ | ಸತ್ಯಪ್ರಮೋದಾ |ತೀರ್ಥ ನಿಮ್ಮಯ ಚರಣ ದ್ವಂದ್ವಕಾ ನಮಿಪೆ ಪ ವೈರಾಗ್ಯ ಸದ್ಭಾಗ್ಯ | ಪರಮ ನಿಧಿಯೆನಿಸುತಲಿಶ್ರೀರಾಮ ಪದತುಂಗ | ಸರಸಿರುಹ ಭೃಂಗಾ |ಊರೂರು ಚರಿಸುತಲಿ | ಆ ರಾಮ ಪದದ್ವಂದ್ವಆರಾಧಕರಿಗ್ವೊರೆದ | ಪರಮ ತತ್ವಗಳಾ 1 ವಾದಿಗಳ ಹೃದಯ ನಿ | ರ್ಭೇದ ಗೈಸುವ ನಿಮ್ಮವಾದಗಳ ಗಡಣೆಗಳ | ವಾದಿಗಳು ಕೇಳೀ |ಪಾದವನು ಕ್ರಮಿಸುತ್ತ | ಗೈದರು ಪಲಾಯನವಮೋದ ಪ್ರಮೋದ ಹರಿ | ಕಾರುಣ್ಯ ಪಾತ್ರಾ 2 ಕಲ್ಯಾಣ ಪುರಿಯೊಳಗೆ | ಎಲ್ಲ ವೈಷ್ಣವರ್ನೆರೆದುಪುಲ್ಲನಾಭನು ಶ್ರೀ ವೇದವ್ಯಾಸರನೂ |ಚೆಲ್ವಗಜ ವಾಹನದಿ | ಕುಳ್ಳಿರಿಸಿ ಐತರಲುಎಲ್ಲ ಭಕ್ತರು ಮೊರೆಯೆ | ಅಂಬರವು ಬಿರಿಯೇ 3 ವತ್ಸರ ಚಾರು ಸಿರಿ | ಸತ್ಯಧ್ಯಾನರ ಭಕ್ತಿಲೀ 4 ಭವ ಬಂಧಾ 5 ಕೋಪರಹಿತರುಯೆನಿಸಿ | ಶ್ರೀ ಪತಿಯ ಧ್ಯಾನಿಸುತತಾಪಸೀಗಳು ತೀರ್ಥ | ಪ್ರಾಪಿಸುತ್ತಿರೆ ಭಕುತರೂ |ಪಾಪ ಕಳೆದೆವು ಯೆಂಬ ಸ | ಲ್ಲಾಪದೊಳು ತಪನತಾಪ ಮರೆತರು ನೋಡಿ | ಪಾಪ ಹೊರದೂಡೀ 6 ಹತ್ತಾರು ಸಾಸಿರಕೆ | ಮತ್ತೆ ಭೋಜನಗೈಸಿಕೃತಿವಾಸನ ತಾತ | ಉತ್ತಮೋತ್ತಮನೆನ್ನುತಾ |ಸತ್ಯವಲ್ಲಭ ಗುರೂ | ಗೋವಿಂದ ವಿಠಲನಪ್ರತ್ಯಹರ್ ಅರ್ಚಿಸುವ | ಸತ್ಯ ಪ್ರಮೋದಾರ್ಯ 7
--------------
ಗುರುಗೋವಿಂದವಿಠಲರು
124-2ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಆರಣೀ ಸಜ್ಜನರ ಸೌಭಾಗ್ಯ ಏನೆಂಬೆಸೂರಿವರ ಸತ್ಯವರ್ಯ ಭಾವಿ ಸತ್ಯಪ್ರಿಯರಆರಾಧಿಸಿ ಕಳುಹಿಸಿದ ಸ್ವಲ್ಪ ಕಾಲದಲೆಆರಣಿಗೆ ಬಂದರು ಸತ್ಯವಿಜಯಾರ್ಯ 1ಸಂಸ್ಥಾನ ಮೂರ್ತಿಸ್ಥ ಹರೀಪೂಜೆ ವೈಭವವುನಿತ್ಯಪ್ರವಚನ ಪಾಠ ಕೀರ್ತನೆ ಏನೆಂಬೆಸತ್ಯವಿಜಯರು ಯುಕ್ತ ಕಾಲದಲಿ ದೇಹಅದಾರುಢ್ಯ ಹೊಂದಿದರು ರಾಜಗೆ ಹೇಳಿದರು 2ತಮ್ಮ ತರುವಾಯ ಸಂಸ್ಥಾನ ಸರ್ವಾಡಳಿತಶ್ರೀಮನೋಹರ ಹರಿಪ್ರಿಯರು ಸತ್ಯವರ್ಯಸುಮನೋಹರ ಸತ್ಯಪ್ರಿಯ ತೀರ್ಥ ನಾಮದಲಿರಮಾರಮಣನ ಸೇವೆಗೆ ವಹಿಸಬೇಕೆಂದು 3ಆದ ಕಾರಣ ಆ ಸ್ವಾಮಿಗಳ ಕರೆತರಿಸಿಭಕ್ತಿ ವಿನಯದಿ ಮಠವ ಒಪ್ಪಿಸಬೇಕೆಂದುಹಿತದಿ ಆಜ್ಞಾಪಿಸಿ ಹರಿಪುರಯೈದಿದರುಚೈತ್ರ ಕೃಷ್ಣ ಪುಣ್ಯದಿನ ಏಕಾದಶಿ ದ್ವಾದಶಿಲಿ 4ಆರಣೀರಾಜನು ಸತ್ಯವರ್ಯ ತೀರ್ಥರಲಿಅರಿಕೆ ಮಾಡಿ ಸ್ವಾಮಿಗಳು ಕೆಲವು ದಿನಮೇಲ್ಆರಣಿಗೆ ಪೋದರು ಶ್ರೀಮಠದ ಆಡಳಿತಹರಿಪ್ರೀತಿ ಸೇವೆಗೆ ಕೊಂಡರು ತಾವು5ಮೊದಲೇವೆ ಶ್ರೀ ಸತ್ಯವರ್ಯ ತೀರ್ಥರ ಮಠಸಂಸ್ಥಾನ ವೈಭವದಿ ಪ್ರಕಾಶಿಸುತ್ತಿತ್ತುಸತ್ಯ ವಿಜಯರ ಕೋರಿಕೆಯಂತೆ ಈವಾಗಹೊಂದಿದರು ಸತ್ಯವಿಜಯರ ಸಂಸ್ಥಾನ 6ಸತ್ಯಾಭಿನವರ ಪದ್ಧತಿಯಲ್ಲಿ ಶ್ರೀಮಠಸತ್ಯಪೂರ್ಣ ಸತ್ಯವಿಜಯರಿಂದ ವೈಭವದಿಇದ್ದ ಆಮಠ ಪೀಠ ಅಲಂಕರಿಸಿದರೀಗಸತ್ಯವರ್ಯ ವೈರಾಗ್ಯ ನಿಧಿಯು ಶ್ರೀಮಾನ್ 7ಬಾದರಾಯಣರಾಮ ಯದುಪತಿಯ ಸೇವೆಗೆಪ್ರೀತಿಗೆ ಸ್ವಾಮಿಗಳು ಮಠವನ್ನು ಹೊಂದಿಸತ್ಯವಿಜಯರು ಕೋರಿದಂತೆ ತಮ್ಮಯನಾಮಸತ್ಯಪ್ರಿಯತೀರ್ಥರೆಂದು ಕೊಂಡರು ಮುದದಿ 8ಧನ ಸತ್ಯಪ್ರಿಯ ತೀರ್ಥರುವಿಜೃಂಭಣೆಯಿಂದ ಚರಿಸಿ ಪುರಜನರ್ಗೂರಾಜನಿಗೂ ಫಲ ಮಂತ್ರಾಕ್ಷತೆಗಳ ಕೊಟ್ಟುರಾಜ ಮಾರ್ಯಾದೆ ಕೊಂಡುಹೊರಟರು ಅಲ್ಲಿಂದ 9ಆಂಧ್ರದೇಶದ ಕಡಪ ಉತ್ತರ ಕರ್ನಾಟಕಮತ್ತು ದಕ್ಷಿಣ ಕರ್ನಾಟಕ ಶ್ರೀರಂಗಇಂಥ ಸ್ಥಳಗಳಲ್ಲಿ ಸಂಚಾರ ಮಾಡುತ್ತಾಹಿತದಿ ಅನುಗ್ರಹಿಸಿದರು ಭಕ್ತವೃಂದಕ್ಕೆ 10ಪೀತಾಸಿಂಗ ರಾಘವಜಿ ಮುರಾರಿ ಮೊದಲಾದಕೃತಜÕ ಜನ ಪ್ರಮುಖರ ಭಕ್ತಿ ಯುತವಾದಭೂದಾನ ಗ್ರಾಮದಾನ ಮಾಡಿದ್ದ ಸ್ವೀಕರಿಸಿಶ್ರೀದನಿಗೆ ಅರ್ಪಿಸುತ ಒಲಿದರು ಸಜ್ಜನಕೆ 11ರಾಯಚೂರು ಹರಿಯಾಚಾರ್ಯರೆಂಬ ವೈಷ್ಣವಕಾಯವಾಙ್ಮನ ಇದ್ದ ಬ್ರಾಹ್ಮಣ ದಂಪತಿಯುಪ್ರಿಯ ವತ್ಸರುಗಳೊಡೆ ಸ್ವಾಮಿಗಳ ಕಡೆ ಬಂದುವಿನಯದಿ ನಮಿಸಿ ನಿಂತರು ಮಠದಲ್ಲಿ 12ಹರಿಯಾಚಾರ್ಯರ ಮಕ್ಕಳಲಿ ರಾಮಾರ್ಯಸ್ಫುರದ್ವರ್ಚಸ್ ಯುತ ಬಹುಚೂಟಿಯಾದ ಮಗನುಶ್ರೀ ಶ್ರೀಗಳು ಆ ಹುಡುಗಗೆ ಮಠದಲ್ಲಿಶಾಸ್ತ್ರಾಭ್ಯಾಸಾದಿಗಳ ಒದಗಿಸಿದರು 13ಕಾಲಕ್ರಮದಲ್ಲಿ ವಟುಗೆ ವಿವಾಹ ಮಾಡಿದರುಮಕ್ಕಳು ರಾಮಚಾರ್ಯರಿಗೆ ಎರಡುಮಾಲೋಲ ಇಚ್ಛೆಯಿಂ ಸ್ವಾಮಿಗಳು ದಕ್ಷಿಣಸ್ಥಳ ಯಾತ್ರೆ ಗೈದರು ಸೇತು ಸಮೀಪ 14ಮಾನಾಮಧುರೆಯ ವೇಗವತೀ ತೀರವುತನ್ನ ಮಠವನ್ನು ಸ್ಥಾಪಿಸಿದರು ಅಲ್ಲಿಘನಮಹಾ ಸೂರಿಯು ರಾಮಚಾರ್ಯರನ್ನತನ್ನ ಸಮೀಪದಲ್ಲೇ ನಿಲ್ಲಿಸಿದರು 15ಬಹು ವರ್ಷ ಸಂನ್ಯಾಸ ರತ್ನರಾಗಿ ಬೆಳಗಿವಹಿಸಿ ಸಂಸ್ಥಾನವ ಏಳು ವರ್ಷಶ್ರೀಹರಿಗೆ ಪ್ರಿಯರಾಮಾಚಾರ್ಯರಿಗೆ ಸಂನ್ಯಾಸವಿಹಿತದಿ ಇತ್ತರು ಶ್ರೀ ಸ್ವಾಮಿಗಳು 16ಸತ್ಯಪ್ರಿಯ ಗುರುವರ್ಯ ತಮ್ಮ ಪ್ರಿಯ ಶಿಷ್ಯರಿಗೆಸತ್ಯಬೋಧ ತೀರ್ಥವೆಂಬ ಸಂನ್ಯಾಸ ನಾಮವನ್ನಿತ್ತುಚೈತ್ರ ಶುದ್ಧ ಹದಿಮೂರನೆ ಪುಣ್ಯ ದಿನದಿಯದುಪತಿಯ ಧ್ಯಾನಿಸುತ ಹರಿಪುರಯೈದಿದರು 17ಮತ್ತೊಂದು ಅಂಶದಲಿ ಬೃಂದಾವನದಲ್ಲಿನಿಂತಿಹರು ಅಶ್ವಾಸ್ಯಧ್ಯಾನಪರರಾಗಿಹಿತದಿ ಕೊಡುತಿಹರು ವಾಂಛಿತವ ಶರಣರಿಗೆಸದಾನಮೋ ಮಾಂಪಾಹಿ ಗುರುವರ್ಯ ಶರಣು 18ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 19 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀವಿಜಯದಾಸಾರ್ಯ ಚರಿತ್ರೆ135ಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಅಶೇಷ ಗುಣಗಣಾರ್ಣವಅನಘಶ್ರೀರಮಣಶ್ರೀ ಶ್ರೀನಿವಾಸ ನರಹರಿ ವ್ಯಾಸ ಕೃಷ್ಣಹಂಸ ನಾಮಕ ಪರಂ ಬ್ರಹ್ಮವಿಧಿಸನಕಾದಿದಶಪ್ರಮತಿ ಗುರುವಂಶ ಸರ್ವರಿಗೂ ನಮಿಪೆ 1ವ್ಯಾಸರಾಜರ ಮುಖ ಕಮಲದಿಂದುಪದಿಷ್ಟದಾಸರಾಜರು ಪುರಂದರದಾಸಾರ್ಯವಸುಧೆಯಲ್ಲಿ ನಾರದರೇಪುರಂದರದಾಸರು ಎನಿಸಿಶ್ರೀಶನ್ನ ಸೇವಿಸುತ ಭಕ್ತÀನ್ನ ಕಾಯ್ತಿಹರು 2ಹರಿಸಮೀರರೂ ಸದಾ ಪ್ರಚುರರಾಗಿಹಪುರಂದರದಾಸಾರ್ಯರವರಶಿಷ್ಯರೇವೆಧರೆಯಲ್ಲಿ ಪ್ರಖ್ಯಾತ ವಿಜಯದಾಸಾರ್ಯರುಸುರವೃಂದ ಮಹಾ ಋಷಿಯು ಭೃಗು ಮಹಾ ಮುನಿಯು 3ಋಗ್ ಜಯಾಸಿತ ಯಜುಸ್ ಸಿತ ಯಜುಸ್ಸಾಮಅರ್ಥರ್ವಾಂಗಿರಸಕೆ ಕ್ರಮದಲಿ ಪ್ರವರ್ತಕರುಬಾಗುವೆ ಶಿರ ಪೈಲಗೆ ವೈಶಂಪಾಯನನಿಗೆಅರ್ಕಗೆ ಜೈಮಿನಿಗೆ ಸುಮಂತು ಸಿಂಧುಜಗೆ 4ನಮೋ ಬ್ರಹ್ಮ ವಾಯು ವಿಪ ಫಣಿಪಶುಕಸಂಕ್ರಂದಕಾಮಾರ್ಕ ನಾರದ ಭೃಗು ಸನತ್‍ಕುಮಾರಾದಿಕಾಮಯುಕ್ ಸೂತ ಗಂಧರ್ವನೃಪಶ್ರೇಷ್ಠರಿಗೆಭೂಮಿ ಸುರ ನರರಿಗೆ ಶ್ರೀಶ ಚಲಪ್ರತಿಕ 5ಸ್ವರ್ಣಾಂಡ ಬಹಿರಂತವ್ರ್ಯಾಪ್ತತೇಜಪುಂಜಜ್ಞಾನ ಸುಖ ಪೂರ್ಣ ಶ್ರೀಪತಿ ವೇದ ವ್ಯಾಸಜ್ಞಾನ ಸಂಯುತ ಕರ್ಮಯೋಗ ಪ್ರವರ್ತಿಸುವುದಕೆತಾನೇ ಸೇವಿಸಿದನು ಭೃಗು ಋಷಿಯು ಅಂದು 6ಸುರ ನದಿತೀರದಲಿ ಭೂಸುರರು ಋಷಿಗಳುಸತ್ರಯಾಗ ಎಂಬಂಥ ಜ್ಞಾನಕರ್ಮಚರಿಪೆ ಜಿಜ್ಞಾಸದಲಿ ನಾರದರು ಪ್ರೇರಿಸಿಹೊರಟರು ಭೃಗು ಮುನಿಯು ತತ್ವ ನಿರ್ಣಯಕೆ 7ಶೃತಿಸ್ಮøತಿಪುರಣೇತಿಹಾಸಾದಿಗಳಲ್ಲಿಅದ್ವಿತೀಯನು ಸರ್ವೋತ್ತಮಹರಿಶ್ರೀಶಪದುಮಭವ ರುದ್ರಾದಿಸುರರುತಾರ ತಮ್ಯದಲಿಸದಾ ಅವರಂಬುದನು ಪರಿಕ್ಷೆ ಮಾಡಿದರು 8ನೇರಲ್ಲಿ ತಾ ಪೋಗಿ ಅರಿತು ಪೇಳಿದರುಹರಿಃ ಸರ್ವೋತ್ತಮ ಸಾಕ್ಷಾತ್ ರಮಾದೇವಿ ತzನÀಂತರಸರಸಿಜಾಸನ ವಾಣಿ ರುದ್ರಾದಿಸುರರುತರತಮದಿ ಅವgವÀರು ಸಂಶಯವಿಲ್ಲ ಎಂದು 9ಈ ರೀತಿ ಹಿಂದೆ ಈ ಭೃಗು ಹರಿಯ ನಿಯಮನದಿಅರುಹಿದಂತೆ ಈಗವಿಜಯದಾಸಾರ್ಯನಾರದಪುರಂದರದಾಸಾರ್ಯರನ್ನನುಸರಿಸಿಹರಿಮಹಿಮೆ ಸತ್ ತತ್ವ ಅರುಹಿದರು ಜನಕ್ಕೆ10ವಿಜಯರಾಯರ ಶಿಷ್ಯ ಸೂರಿಗಳೊಳ್ ಪ್ರವರನುಧೂರ್ಜಟೆ ಉಮಾಸುತನುಕ್ಷಿಪ್ರಪ್ರಸಾದಗಜಮುಖನೆ ಗೋಪಾಲ ದಾಸಾರ್ಯರಾಗಿಪ್ರಜ್ವಲಿಸುತಿಹ ನಮೋ ಗುರುವರ್ಯ ಶರಣು 11ಪುರಂದರದಾಸಾರ್ಯರು ವಿಜಯರಾಯರಲ್ಲಿಇರುವರು ಒಂದಂಶದಿಂದ ಜ್ವಲಿಸುತ್ತಬರೆಸಿಹರು ಇಪ್ಪತ್ತು ಮೇಲೈದು ಸಾವಿರಶ್ರೀವರನ ಸಂಸ್ತುತಿ ತತ್ವ ಕವಿತೆಗಳ 12ಕೃತ ತ್ರೇತ ದ್ವಾಪರ ಕಲಿಯುಗ ನಾಲ್ಕಲ್ಲಿಯೂಸುತಪೋನಿಧಿ ಭೃಗು ಮೂಲ ರೂಪದಲುತ್ರೇತಾದಿ ಮೂರಲ್ಲಿಯೂ ಅವತಾರ ರೂಪದಲುಗಾಯತ್ರಿ ನಾಮನ್ನ ಸಂಸೇವಿಸುವರು 13ಪುರಂದರಾರ್ಯರ ಮನೆಯಲ್ಲಿ ಗೋವತ್ಸತರುವಾಯು ಸುಕುಮಾರ ಮಧ್ವಪತಿಯಾಗಿಸರಿದ್ವರ ಶ್ರೀ ತುಂಗಭದ್ರ ತೀರದಿ ಪುನಃಅರಳಿ ನೃಸಿಂಹ ಕ್ಷೇತ್ರದಲಿ ತೋರಿಹರು 14ಅಶ್ವತ್ಥ ನರಸಿಂಹ ಕ್ಷೇತ್ರಕ್ಕೆ ಮತ್ತೊಂದುಹೆಸರುಂಟು ರೂಢಿಯಲಿ ಚೀಕಲಾಪುರಿಯುಕುಸುಮಭವಪಿತಅಂಭ್ರಣಿಪತಿಎನ್ನಪ್ರಶಾಂತ ಚಿತ್ತದಿ ಧ್ಯಾನಿಸೆ ತಕ್ಕ ಸ್ಥಳವು 15ಶ್ರೀಪದ್ಮನಾಭತೀರ್ಥರಕರಕಂಜದಿಂದಉದ್ಭೂತ ಲಕ್ಷ್ಮೀಧರರ ವಂಶಜರುಶ್ರೀಪಾದ ರಾಜರೂ ಈ ಕ್ಷೇತ್ರದಲಿಸ್ಥಾಪಿಸಿದರು ಅಶ್ವತ್ಥÀ ನರಹರಿಯ 16ಹುಂಬೀಜ ಪ್ರತಿಪಾದ್ಯ ಭೂಪತಿಯ ವಕ್ತ್ರದಿಂಸಂಭೂತ ತುಂಗಾ ಸರಿದ್ವರದ ತೀರಗಂಭೀರ ಭೂ ಕಲ್ಪತರುವು ಅಶ್ವತ್ಥ್ಥವುಸಂರಕ್ಷಿಸುವ ನಾರಸಿಂಹ ಭದ್ರದನು 17ನಾರಾಯಣ ಬ್ರಹ್ಮರುದ್ರಾದಿ ದೇವರ್‍ಗಳುಇರುತಿಹರು ಅಶ್ವತ್ಥ್ಥ ಕಲ್ಪ ವೃಕ್ಷದಲಿನಾರಾಯಣ ಶ್ರೀ ನರಸಿಂಹ ಪುರುಷೋತ್ತಮನೆಶರಣಾದೆ ಪೊರೆಯುತಿಹವಾಂಛಿತಪ್ರದನು18ಕಾಶಿ ಬದರಿಯಂತೆ ಇರುವ ಈ ಕ್ಷೇತ್ರದಲಿಭೂಸುರವರರು ಶ್ರೀನಿವಾಸಾಚಾರ್ಯರಲಿಶ್ರೀ ಶ್ರೀನಿವಾಸನ ಪ್ರಸಾದದಿ ಜನಿಸಿಹರುಶ್ರೀಶ ಭಕ್ತಾಗ್ರಣಿ ಈ ಹರಿದಾಸವರರು 19ಕುಸುಮಾಲಯ ಪದ್ಮಾವತಿ ನೆನಪು ಕೊಡುವಕುಸುಮಕೋಮಲ ಮುಖಿ ಆದ ಕಾರಣದಿಕೂಸಮ್ಮ ನೆಂದು ಕರೆಯಲ್ಪಟ್ಟ ಸಾಧ್ವಿಯಈ ಶ್ರೀನಿವಾಸ ಆಚಾರ್ಯಕರಹಿಡಿದರು20ಪತಿವ್ರತಾ ಶಿರೋಮಣಿ ಕೂಸಮ್ಮನ ಗರ್ಭಅಬ್ಧಿಯಿಂ ಹುಟ್ಟಿತು ಉತ್ತಮ ರತ್ನಹತ್ತು ದಿಕ್ಕಲು ಪ್ರಕಾಶಿಸುವ (ದ್ಯುತಿವಂತ) ಕೀರ್ತಿಮಾನ್ಪುತ್ರ ರತ್ನನು ಬೆಳೆದ ದಾಸಪ್ಪ ನಾಮಾ 21ಕೂಸಮ್ಮ ಶ್ರೀನಿವಾಸಪ್ಪ ದಂಪತಿಗೆದಾಸಪ್ಪನಲ್ಲದೆ ಇನ್ನೂ ಕೆಲಪುತ್ರರುಕೇಶವಾನುಗ್ರಹದಿ ಹುಟ್ಟಿ ಸಂಸಾರದಿಈಜಿದರು ಯದೃಚ್ಛಾ ಲಾಭ ತುಷ್ಟಿಯಲಿ 22ಯಾರಲ್ಲೂ ಕೇಳದಲೇ ಅನಪೇಕ್ಷ ದಂಪತಿಯುಹರಿದತ್ತ ಧನದಲ್ಲಿ ತೃಪ್ತರಾಗುತ್ತಅರಳಿ ನೃಸಿಂಹನ್ನ ಸೇವಿಸುತ ಮಕ್ಕಳಲಿಹರಿಮಹಿಮೆ ಹೇಳುತ್ತ ಭಕ್ತಿ ಬೆಳಸಿದರು23ನಮ್ಮ ದಾಸಪ್ಪನಿಗೆ ಹದಿನಾಲ್ಕು ಮಯಸ್ಸಾಗೆಕರ್ಮಸುಳಿಯು ಮೆಲ್ಲ ಮೆಲ್ಲನೆ ತೋರಿಸಮುದ್ರ ಶಯನನ ಅಧೀನವು ಎಲ್ಲ ಎನ್ನುತ್ತಒಮ್ಮೆಗೂ ಲೆಕ್ಕಿಸಲಿಲ್ಲ ಬಡತನವನ್ನ 24ಬದರಮುಖ ಬ್ರಹ್ಮವರ್ಚಸ್ವಿ ದಾಸಪ್ಪಹದಿನಾರುವತ್ಸರದ ಬ್ರಹ್ಮಚಾರಿಮಾಧವನೆ ಹಾದಿ ತೋರುವ ತನಗೆ ಎಂದುಹೋದರು ಪೂರ್ವದಿಕ್ಕಿನ ಕ್ಷೇತ್ರಗಳಿಗೆ 25ಜಲರೂಪಿ ಕೃಷ್ಣನ್ನ ನೆನೆದು ಕೃಷ್ಣಾನದಿಯಲ್ಲಿ ಮಿಂದು ಅಲ್ಲಿಂದ ಮಂತ್ರಾಲಯಅಲ್ಲಿ ಶ್ರೀ ರಾಘವೇಂದ್ರರ ವಾದೀಂದ್ರರ ದಿವ್ಯಜಲಜಪಾದಗಳಿಗೆ ಬಾಗಿದರು ಶಿರವ 26ಆದವಾನಿನಗರನವಾಬನ ಸರ್ಕಾರಅಧಿಕಾರಿ ಡಾಂಭಿಕ ಓರ್ವನ ಗೃಹದಿಮದುವೆ ಪೂರ್ವದ ದೇವರ ಸಮಾರಾಧನೆಯುಹೋದರು ಆ ಮನೆಗೆ ದಾಸಪ್ಪ ಆರ್ಯ 27ಇತ್ತದ್ದು ಹರಿಯೆಂದು ತಂದೆ ಮಾಡುವ ಅತಿಥಿಸತ್ಕಾರ ನೋಡಿದ್ದ ದಾಸಪ್ಪಾರ್ಯನಿಗೆಇಂದುಆದವಾನಿ ಗೃಹಸ್ಥ ದಾಸಪ್ಪನಉದಾಸೀನ ಮಾಡಿದ್ದು ನೂತನಾನುಭವ 28ತೇನ ತ್ಯೆಕ್ತೇನ ಭುಂಜೀಥಾಃ ಮಾಗೃಥೆಃಕಸ್ಯ ಸ್ವಿದ್ಧನಂ ಎಂದು ಮನಸ್ಸಿಗೆ ತಂದುಆದವಾನೀಯಿಂದ ಹೊರಟು ಮಾರ್ಗದಲಿಇದ್ದ ಛಾಗಿ ಎಂಬ ಗ್ರಾಮ ಸೇರಿದರು 29ಉಪೋಷಣದಿ ತನುವು ಬಾಡಿದ್ದರೂ ಮುಖಸ್ವಲ್ಪವೂ ಮ್ಲಾನ ವಿಲ್ಲದೆ ಹರಿಯ ಸ್ಮರಿಸಿಬಪ್ಪ ದಾಸಪ್ಪನ್ನ ನೋಡಿ ಕೇಶವರಾಯಎಂಬ ವಿಪ್ರನು ಕರೆದ ತನ್ನ ಮನೆಗೆ 30ಛಾಗಿ ಗ್ರಾಮದ ಪ್ರಮುಖ ಕೇಶವರಾಯನುಆ ಗೃಹಸ್ಥನ ತಾಯಿ ಕುಟುಂಬಜನರೆಲ್ಲಾಭಗವಂತನ ಶ್ರೇಷ್ಠ ಪ್ರತೀಕ ಇವರೆಂದುಭಾಗಿ ಶಿರ ಆತಿಥ್ಯ ನೀಡಿದರು ಮುದದಿ 31ಆ ಮನೆಯ ದೊಡ್ಡ ಆಕೆಯು ಪಾಕ ಮಾಡಿಶ್ರೀ ಮನೋಹರನಿಗೆ ದಾಸಪ್ಪ ಅದನ್ನಸಂಮುದದಿ ನೈವೇದ್ಯ ಅರ್ಪಿಸಿ ಉಂಡರುರಮಾಪತಿನಿತ್ಯತೃಪ್ತಗೆ ತೃಪ್ತಿ ಆಯ್ತು32ಭಿನ್ನಸ್ವಭಾವಿಗಳು ಭಿನ್ನಜೀವರುಗಳಲಿಭಿನ್ನ ಕರ್ಮವ ಮಾಡಿ ಮಾಡಿಸುವಅನಘಘನ್ನ ಗುಣನಿಧಿ ಸರ್ವ ಜಡಜೀವ ಭಿನ್ನಶ್ರೀನಿಧಿಯ ಸ್ಮರಿಸುತ್ತೆ ಹೊರಟರು ವೇಂಕಟಕೆ 33ಭೂವೈಕುಂಠ ಈ ತಿರುಪತಿ ಕ್ಷೇತ್ರದಲಿದೇವದೇವೋತ್ತಮ ದೇವಶಿಖಾಮಣಿಯಮೂವತ್ತೆರಡು ಮುವತ್ತಾರುಬಾರಿಮೇಲೆಸೇವಿಸಿಹರು ಎಂದು ಕೇಳಿಹೆನು 34ದಾಸಪ್ಪ ನಾಮದಲೂ ವಿಜಯರಾಯರೆನಿಸಿಯೂದೇಶದೇಶದಿ ಹರಿಕ್ಷೇತ್ರ ಪೋಗಿಹರುಕಾಶೀಗೆ ಮೂರು ಸಲ ಪೋಗಿ ಬಂದಿರುವರುಕಾಶಿ ಬದರಿ ನಮಗೆ ಇವರ ಸಂಸ್ಮರಣೆ 35ಪಂಕೇರುಹೇಕ್ಷಣವರಾಹವೆಂಕಟ ಪತಿಯವೇಂಕಟಗಿರಿಯಲ್ಲಿ ಭಕ್ತಿಯಿಂ ಪುನಃತಾ ಕಂಡು ಆನಂದಪುಲಕಾಶ್ರು ಸುರಿಸಿಶಂಕೆಯಿಲ್ಲದೆ ಧನ್ಯ ಮನದಿ ತಿರುಗಿದರು 36ತಿರುಗಿ ಚೀಕಲಪುರಿ ಬಂದು ಹೆತ್ತವರಚರಣಪದ್ಮಗಳಲ್ಲಿ ನಮಿಸಿ ಅಲ್ಲಿನರಹರಿ ಶ್ರೀ ಶ್ರೀನಿವಾಸನ್ನ ಸೇವಿಸುತಪರಿತೋಷಿಸಿದರು ಗಾರ್ಹ ಧರ್ಮದಲಿ 37ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 38-ಇತಿಃ ಪ್ರಥಮಾಧ್ಯಾಯಃ-ದ್ವಿತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪತಿರುಪತಿ ಘಟಿಕಾದ್ರಿ ಕಾಶಿ ಮೊದಲಾದಕ್ಷೇತ್ರಾಟನೆ ಮಾಡಿ ಬಂದ ಪುತ್ರನಿಗೆಭಾರಿಗುಣ ಸಾಧ್ವಿಯ ಮದುವೆ ಮಾಡಿಸಿದರುವಿಪ್ರರ ಮುಂದೆಶುಭಮುಹೂರ್ತದಲಿ ತಂದೆ1ಗುಣರೂಪವಂತಳು ವಧು ಅರಳಿಯಮ್ಮಘನಮಹಾ ಪತಿವ್ರತಾ ಶಿರೋಮಣಿಯು ಈಕೆತನ್ನ ಪತಿಸೇವೆಯ ಪೂರ್ಣ ಭಕ್ತಿಯಲಿಅನವರತಮಾಡುವ ಸೌಭಾಗ್ಯವಂತೆ2ಪುತ್ರೋತ್ಸವಾದಿಶುಭಸಂಭ್ರಮಗಳು ಆದುವುನಿತ್ಯಹರಿತುಳಸೀಗೆ ಪೂಜಾ ವೈಭವವುತ್ರಾತಹರಿ ಸಾನ್ನಿಧ್ಯ ಅನುಭವಕೆ ಬರುತ್ತಿತ್ತುಶ್ರೀದಹರಿವಿಠ್ಠಲನು ತಾನೇವೆ ಒಲಿದ 3ಧನಸಂಪಾದನೆಗಾಗಿ ಅನ್ಯರನು ಕಾಡದೆಅನಪೇಕ್ಷ ಮನದಿಂದ ಹರಿಕೊಟ್ಟದ್ದಲ್ಲೇದಿನಗಳ ಕಳೆದರು ಹೀಗೆ ಇರುವಾಗಫಣಿಪಗಿರಿವೇಂಕಟನು ಮನದಲ್ಲಿ ನಲಿದ 4ನರಹರಿಗೆ ಸನ್ನಮಿಸಿ ಅಪ್ಪಣೆ ಪಡೆದುಹೊರಟರು ವೇಂಕಟನಾಥನ್ನ ನೆನೆದುಸೇರಿದರು ಶೇಷಗಿರಿ ನಮಿಸಿ ಭಕ್ತಿಯಲಿಏರಿದರು ಎರಗಿದರು ನಾರಸಿಂಹನಿಗೆ 5ನರಸಿಂಹನಿಗೆ ಗುಡಿ ಗಾಳಿಗೋಪುರದಲ್ಲಿಕರೆವರು ಬಾಷಿಂಗನರಸಿಂಹನೆಂದುಹರಿದಾಸರಿಗೊಲಿವ ಕಾರುಣ್ಯಮೂರ್ತಿಯುಕರುಣಿಸಿದ ಜಗನ್ನಾಥದಾಸರಿಗೆ ಪೀಠ 6ದಾಸಪ್ಪ ವಿಜಯದಾಸರು ಆದ ತರುವಾಯಈಶಾನುಗ್ರಹವ ಬ್ಯಾಗವಟ್ಟಿಯವರ್ಗೆಶಿಷ್ಯರದ್ವಾರಾ ಒದಗಿ ಜಗನ್ನಾಥದಾಸರಾಗಿ ಮಾಡಿಹರು ಪರಮದಯದಿಂದ 7ನರಸಿಂಹನಪಾದ ಭಜಿಸಿ ಅಲ್ಲಿಂದಗಿರಿ ಅರೋಹಣವನ್ನ ಮುಂದುವರಿಸಿಶ್ರೀ ಶ್ರೀನಿವಾಸನ ಭೇಟಿ ಒದಗಿಸುವಂತೆವರಅಂಜನಾಸೂನು ಹನುಮಗೆರಗಿದರು8ಮಹಾತ್ಮ್ಯೆ ಶ್ರೀ ನಿಧಿ ಶ್ರೀ ಶ್ರೀನಿವಾಸನ್ನಮಹಾದ್ವಾರ ಗೋಪುರದಲ್ಲಿ ಸಂಸ್ಮರಿಸಿಮಹಾದ್ವಾರದಲಿ ಕರಮುಗಿದು ಉತ್ತರದಿಇಹ ಸ್ವಾಮಿತೀರ್ಥದಲಿ ಸ್ನಾನ ಮಾಡಿದರು 9ಭೂರ್ಭುವಃ ಸ್ವಃಪತಿಭೂಧರವರಾಹನ್ನಉದ್ಭಕ್ತಿ ಪೂರ್ವಕದಿ ವಂದಿಸಿ ಸರಸ್ಯಇಭರಾಜವರದನ್ನ ಸ್ಮರಿಸುತ್ತ ಸುತ್ತಿಶುಭಪ್ರದಪ್ರದಕ್ಷಿಣೆ ಮಾಡಿದರು ಮುದದಿ 10ಪ್ರದಕ್ಷಿಣೆಗತಿಯಲ್ಲಿ ಸಾಕ್ಷಿಅಶ್ವತ್ಥನ್ನಭೂಧರನ್ನ ನೋಡುತ್ತ ನಿಂತ ಹನುಮನ್ನವಂದಿಸಿ ಮಹಾದ್ವಾರ ಸೇರಿ ಕೈಮುಗಿದುಇಂದಿರೇಶನ ಆಲಯದೊಳು ಹೋದರು 11ಬಲಿಪೀಠ ಧ್ವಜಸ್ತಂಭ ತತ್ರಸ್ಥ ಹರಿಯನೆನೆದುಬೆಳ್ಳಿ ಬಾಗಿಲದಾಟಿ ಗರುಡಗೆ ನಮಿಸಿಒಳಹೋಗೆ ಅಪ್ಪಣೆ ಜಯವಿಜಯರಕೇಳಿಬಲಗಾಲ ಮುಂದಿಟ್ಟು ಹೋದರು ಒಳಗೆ 12ಬಂಗಾರ ಬಾಗಿಲ ದಾಟಲಾಕ್ಷಣವೇಕಂಗೊಳಿಸುವಂತ ಪ್ರಾಜ್ವಲ್ಯ ಕಿರೀಟಚಂಚಲಿಸುವ ತಟಿನ್ನಿಭಕರ್ಣಕುಂಡಲವಿಟ್ಟಗಂಗಾಜನಕವೆಂಕಟೇಶನ್ನ ನೋಡಿದರು13ಆನಂದಜ್ಞಾನಮಯ ಪಾದಪಂಕಜತತ್ರಸುನೂಪುರ ಉಡಿವಡ್ಯಾಣಕೌಶೇಯಮಿನುಗುವಾಂಬರ ಸಾಲಿಗ್ರಾಮದ ಹಾರಘನಮಹಾ ಹಾರಗಳು ಸರಿಗೆ ವನಮಾಲೆ14ಶ್ರೀವತ್ಸ ಕೌಸ್ತುಭಮಣಿ ವೈಜಯಂತೀದಿವ್ಯ ಪ್ರಜ್ವಲಿಸುವ ಪದಕಂಗಳುಕಿವಿಯಲ್ಲಿ ಮಿಂಚಿನಂದದಿ ಪೊಳೆವಕುಂಡಲಸರ್ವಾಭರಣಗಳ ವರ್ಣಿಸಲು ಅಳವೇ 15ಅಕಳಂಕ ಪೂರ್ಣೇಂದು ಮುಖಮುಗುಳುನಗೆಯುಕಂಗಳುಕಾರುಣ್ಯ ಸುರಿಸುವನೋಟಕಾಕುಇಲ್ಲದ ನೀಟಾದ ಫಣೆ ತಿಲಕವುಚೊಕ್ಕ ಚಿನ್ನದಿ ನವರತ್ನ ಜ್ವಲಿಪ ಕಿರೀಟ 16ಬ್ರಹ್ಮಪೂಜಿತಶ್ರೀ ಶ್ರೀನಿವಾಸನ್ನಮಹಾನಂದದಿ ನೋಡಿ ಸನ್ನಮಿಸಿ ಮುದದಿಬಹಿರದಿ ಬಂದು ಮತ್ತೊಮ್ಮೆ ಪ್ರದಕ್ಷಿಣೆ ಮಾಡಿಮಹಾಪ್ರಾಕಾರದಲಿ ಕೊಂಡರು ಪ್ರಸಾದ 17ಹೇಮಮಯ ಆನಂದನಿಲಯ ವಿಮಾನ ಗೋಪುರದಿಶ್ರೀಮನೋಹರ ಶ್ರೀ ಶ್ರೀನಿವಾಸನ್ನ ಪುನಃನೆಮ್ಮದಿದಿ ನೋಡಿ ಸನ್ನಮಿಸಿ ಶ್ರೀನಾರಸಿಂಹನ್ನ ವಂದಿಸಿ ಹೋದರು ಒಳಗೆ 18ಏಕಾಂತ ಸೇವೆ ಶಯ್ಯೋತ್ಸವವ ನೋಡಿಅಕಳಂಕ ಭಕ್ತಿಯಲಿ ಮನಸಾ ಸ್ತುತಿಸಿಶ್ರೀಕರಾಲಯ ಪ್ರಕಾರ ಮಂಟಪದಲ್ಲಿಭಕುತವತ್ಸಲನ್ನ ನೆನೆದು ಮಲಗಿದರು 19ಬಂಗಾರಬಾಗಿಲು ಅರ್ಧಮಂಟಪವುಪುರಂದರದಾಸಾರ್ಯರುಯೋಗ ನಾರಸಿಂಹನ ಸ್ಥಾನ ಬಲಪಾಶ್ರ್ವಏಕಾಂತ ಮಂಟಪವುಪುರಂದರದಾಸಾರ್ಯರುಶ್ರೀಕರನ ಭಜಿಸುತ್ತಾ ಇರುವರು ಅಲ್ಲಿ 20ಅರ್ಧ ಮಂಟಪ ಹೊರಗೆ ಉತ್ತರ ಪ್ರಾಕಾರದಿಎತ್ತರ ಮಂಟಪದ ಜಗುಲಿಯಲ್ಲೂಆಸ್ಥಾನ ಮಂಟಪಕೆ ಪಶ್ಚಿಮ ಮಂಟಪದಲ್ಲೂಆಸ್ಥಾನ ಶ್ರೇಷ್ಠರು ಕುಳಿತದ್ದು ಉಂಟು 21ಮನುಷ್ಯ ಲೋಕದಿ ಹುಟ್ಟಿ ಮಾನುಷಾನ್ನವನುಂಡುಮಾನುಷಾನ್ನದ ಸೂಕ್ಷ್ಮ ಭಾಗ ಪರಿಣಮಿಸಿಮನಖಿನ್ನನಾದಂತೆ ಇದ್ದ ದಾಸಪ್ಪನಿಗೆಶ್ರೀ ಶ್ರೀನಿವಾಸನು ಬಂದು ತಾ ಒಲಿದ 22ಶ್ರೀನಿಧಿಃ ಶ್ರೀ ಶ್ರೀನಿವಾಸವೇಂಕಟಪತಿಘನದಯದಿ ಸೂಚಿಸಿದ್ದು ತಿಳಕೊಂಡರುಸ್ವಪ್ನದಿ ಭಾಗೀರಥಿಯಪುರಂದರದಾಸಾರ್ಯರಬಿಂದುಮಾಧವ ಅಂಭ್ರಣೀಶನ್ನ ನೋಡಿದರು 23ಭೂವರಾಹವೆಂಕಟರಮಣನ್ನ ಮರುದಿನಸೇವಿಸಿ ಹನುಮಂತನಿಗೆ ನಮಸ್ಕರಿಸಿದೇವಾನುಗ್ರಹದಿ ಐದಿದರು ವಾರಣಾಸಿದೇವ ತಟಿನೀಸ್ನಾನ ಮೂರ್ತೀ ದರ್ಶನವು 24ಜಾಗ್ರತೆ ಅಲ್ಲ ನಿದ್ರೆಯೂ ಅಲ್ಲ ಸಂಧಿಆ ಕಾಲದಲಿ ಆನಂದ ಅನುಭವವುಹೇಗೆಂದರೆ ವಿಠ್ಠಲ ಶ್ರೀನಿವಾಸನುಝಗಿಝಗಿಸಿ ತೋರ್ವನು ವಿಜಯಸಾರಥಿಯು 25ತೃಟಿಮಾತ್ರದಲಿ ಮುಂದೆ ನಿಂತರುಪುರಂದರವಿಟ್ಠಲ ದಾಸರು ಕೃಪೆಯ ಬೀರುತ್ತತಟ್ಟನೇ ಎದ್ದರು ದಾಸಪ್ಪ ಆರ್ಯರುಸಾಷ್ಠಾಂಗ ನಮಿಸಿದರು ಗುರುವರ್ಯರೆಂದು 26ಕರಕೊಂಡು ಹೋದರು ಆಚೆದಡದಲ್ಲಿರುವಕ್ಷೇತ್ರಕ್ಕೆ ಅಲ್ಲಿ ಶ್ರೀಪತಿವ್ಯಾಸನ್ನತೋರಿಸಿದರು ಆ ವ್ಯಾಸ ಮೂರ್ತಿಯಲ್ಲಿಸುಪ್ರಕಾಶಿಪಹರಿರೂಪಗಳ ಕಂಡರು27ವಿಜಯಸಾರಥಿಕೃಷ್ಣ ವಾಶಿಷ್ಠಮಾಧವಅಜಭುಜಗಭೂಷಣಾದಿಗಳಿಂದಸೇವ್ಯರಾಜರಾಜೇಶ್ವರಿ ಶ್ರೀನಿಧಿಯ ಮನದಣಿಯಭಜಿಸಿ ಸ್ತುತಿಸಲು ಯತ್ನಿಸಿದರು ದಾಸಪ್ಪ 28ಸೌದಾಮಿನಿಗಮಿತ ರಂಜಿಸುವ ಜ್ಯೋತಿಯುಬದರೀಶನಿಂ ಪುರಂದರದಾಸರ ದ್ವಾರಬಂದು ನೆಲಸಿತು ದಾಸಪ್ಪನ ಜಿಹ್ವೆಯತುದಿಯಲ್ಲಿ ವಿಜಯಾಖ್ಯ ಸುಶುಭನಾಮ 29ರಾಜೀವಜಾಂಡದೊರೆ ರಾಜೀವಾಲಯಪತಿವಿಜಯವಿಠ್ಠಲ ನಿಮ್ಮ ಹೃದ್‍ರಾಜೀವದಲಿಪ್ರಜ್ವಲಿಸುತಿಹ ಸರ್ವತೋಮುಖನೆಂದುನೈಜವಾತ್ಸಲ್ಯದಿ ಪೇಳಿದರು ಗುರುವು 30ಗುರುಗತುರಗಾಸ್ಯ ವಿಠ್ಯಲವ್ಯಾಸ ತನ್ನ ಹೊರವೊಳುಪ್ರಕಾಶಿಪುದು ಅನುಭವಕೆ ಬಂತುಎರಗಿದರುವಿಜಯದಾಸರು ಪುರಂದರಾರ್ಯರಿಗೆಸರಿ ಏಳು ಎಂದರು ಗುರುವರ್ಯ ಹಿತದಿ 31ಎದ್ದರು ಎಚ್ಚರಿಕೆ ಆಗಿ ವಿಜಯಾರ್ಯರುವೇದ್ಯವಾಯಿತು ಶ್ರೀಯಃಪತಿಯು ಗುರುವುಹಿತದಿ ತಾವೇ ಬಂದು ಅನುಗ್ರಹ ಮಾಡಿದ್ದುಇಂಥ ಭಾಗ್ಯವು ಎಲ್ಲರಿಗೂ ಲಭಿಸುವುದೇ 32ಶ್ರೀಕಾಂತ ಕಪಿಲ ಶ್ರೀ ಶ್ರೀನಿವಾಸನ್ನಹಿಂಕಾರ ಪ್ರತಿಪಾದ್ಯ ಕೃತಿಪತಿ ಪ್ರದ್ಯುಮ್ನಶ್ರೀಕರ ವಿಠ್ಠಲ ವ್ಯಾಸಹಯಮುಖನ್ನ ಸ್ಮರಿಸುತ್ತಗಂಗೆಯ ಸೇರಿದರು ಮಿಂದರು ಮುದದಿ 33ವಿಧಿಪೂರ್ವಕ ಸ್ನಾನ ಅಘ್ರ್ಯಾಧಿಗಳಿತ್ತು ಅಘ್ರ್ಯಾದಿಆ ದೇವತಟನೀಯ ದಡದಲ್ಲಿ ಕುಳಿತುಸದ್ವೈಷ್ಣವಚಿನ್ನಾಲಂಕೃತರು ಜಪಿಸಿದರುಮಧ್ವಸ್ಥ ವಿಜಯವಿಠ್ಠಲಶ್ರೀಪತಿಯ 34ಪದುಮಜನ ಸುತ ಭೃಗುವೆ ಅವನಿಯಲಿ ಅವತರಿಸಿಬಂದಿಹನು ಮಾಧವನು ಒಲಿದಿಹನು ಎಂದುಮಂದಾಕಿನಿವ್ಯಜನಚಾಮರಗಳ್ ಬೀಸುವಂತೆಬಂದು ಪ್ರವಹಿಸಿದಳು ದಾಸರ ಆವರಿಸಿ 35ಜನರೆಲ್ಲ ನೋಡುತಿರೆ ಪ್ರವಾಹವು ಉಕ್ಕಿಪೂರ್ಣ ಆವರಿಸಿತು ವಿಜಯರಾಯರನ್ನಏನು ಅದ್ಭುತ ಇದು ಶಾಂತವಾಗಲು ಕ್ಷಣದಿನೆನೆಯಲಿಲ್ಲ ವಸ್ತ್ರ ಊಧ್ರ್ವ ಪುಂಡ್ರಗಳು 37ಹರಿಆಜೆÕಯಲಿಸುರರುಸಜ್ಜನೋದ್ಧಾರಕ್ಕೂಪ್ರಾರಬ್ಧಕರ್ಮ ಕಳೆಯಲು ಜನಿಪರು ಭುವಿಯೋಳ್ಇರುವುವು ಅಣಿಮಾದಿಗಳು ಶಕ್ತ್ಯಾತ್ಮನಾಗುರುಒಲಿಯೆ ವ್ಯಕ್ತವಾಗುವುವು ಆಗಾಗಾ38ಸುರರುಭೃಗುದಾಸಪ್ಪ ಜಾತಾಪರೋಕ್ಷಿಗೆಪುರಂದರದಾಸ ನಾರದರೊಲಿದ ಮೇಲೆಇರುತ್ತಿದ್ದಅಪರೋಕ್ಷಅಣಿಮಾದಿ ಮಹಿಮೆಯುಸುಪ್ರಕಟವಾದವು ಶ್ರೀಶನ ದಯದಿ 39ವರ್ಣಪ್ರತಿಪಾದ್ಯಹರಿಒಲಿಯೆ ವರ್ಣಂಗಳುಆಮ್ನಾಯನಿಗಮತತಿ ಸತ್‍ತತ್ವಜ್ಞಾನಅನಾಯಸದಿಂದೊದಗಿ ವಿಜಯದಾಸಾರ್ಯರುಅನಿಲಸ್ಥ ಶ್ರೀವರನ್ನ ಸ್ತುತಿಸಿ ಹಾಡಿದರು 40ಜನಗಳು ವಿಜಯದಾಸಾರ್ಯರು ಶ್ರೀಹರಿಯಧ್ಯಾನಿಸಿ ಶ್ರೀಪತಿಯ ರೂಪಕ್ರಿಯೆಗಳನ್ನುಗುಣಗಳನ್ನು ಗಂಗಾದಡದಲ್ಲಿ ಕುಳಿತುಗಾನಮಾಡುವುದನ್ನ ಕೇಳಿದರು ಮುದದಿ 41ಘನಮಹಾತ್ಮರು- ಇವರು ಸಜ್ಜನೋದ್ಧಾರಕರುಶ್ರೀನಿಧಿಯ ಸತ್‍ತತ್ವಜ್ಞಾನ ಪೂರ್ವಕದಿಗಾನಮಾಡಿ ಲೋಕಕ್ಷೇಮಕೆÀ್ಕೂದಗುವರೆಂದುಧನ ದ್ರವ್ಯಕಾಣಿಕೆಇತ್ತರು ಜನರು42ಪೋದಕಡೆ ಎಲ್ಲೆಲ್ಲೂ ಮರ್ಯದೆ ಪೂಜೆಗಳುಸಾಧುಸಜ್ಜನರ ಕೈಯಿಂದ ತಾ ಕೊಂಡುಮಾಧವಮಧ್ವಮುನಿ ಪುರಂದರಾರ್ಯರ ಭಾಗ್ಯಎಂದು ಶ್ರಿ ಕೃಷ್ಣಂದೇ ಸರ್ವವೆಂಬುವರು 43ಭಾರಿ ಬಹು ಬಹುವುಂಟು ವಿಜಯರಾಯರ ಮಹಿಮೆಅರಿಯೆನಾ ಅಲ್ಪಮತಿ ಹೇಗೆ ವರ್ಣಿಸಲಿಹರಿಗೆ ಪ್ರಿಯತರ ಈ ಸುಮಹಾತ್ಮರು ತನಗೆಎರಗಿದವರನ್ನ ಕಾಯ್ವರು ಕೈಬಿಡದೆ 44ವಾರಣಾಸಿರಾಜ ಪೂಜಿಸಿದ ಇವರನ್ನಎರಗಿ ಜನರು ಶಿಷ್ಯ ರಾದರಲ್ಲಲ್ಲಿಊರಿಗೆ ಬರುವಷ್ಟರಲ್ಲೇ ಇವರ ಕೀರ್ತಿಹರಡಿತು ಹರಿದಾಸಜ್ಞಾನಿವರರೆಂದು 45ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 46-ಇತಿಃ ದ್ವಿತಿಯಾಧ್ಯಾಯಃ-ತೃತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಕಾಶಿ ಗಯಾ ಪಿತೃಕಾರ್ಯ ಪೂರೈಸಿ ಬರುವಾಗದೇಶ ದೇಶದಿ ಹರಿಯ ಮಹಿಮೆ ತೋರುತ್ತಾಅಸಚ್ಚಾಸ್ತ್ರ ವಾದಗಳ ಕತ್ತರಿಸಿ ಬಿಸುಡುತ್ತಸುಚ್ಛಾಸ್ತ್ರ ಬೋದಿಸುತ್ತ ಬಂದರು ಮನೆಗೆ 1ಸಕುಟಂಬ ತಿರುಪತಿಗೆ ಪೋಗಿ ಶ್ರೀನಿಧಿಯಭಕುತಿಯಿಂದಲಿ ಸ್ತುತಿಸಿ ಊರಿಗೆ ತಿರುಗಿಶ್ರೀಕರನ ಪ್ರೀತಿಕರ ಶಿಷ್ಯೋದ್ಧಾರಕ್ಕೆಬೇಕಾದ ಯತ್ನಗೈದರು ದಾಸ ಆರ್ಯ 2ಈ ಪುಣ್ಯ ಶ್ಲೋಕರು ಷಷ್ಠ್ಯುಪರಿಸಂಖ್ಯಾಸುಪುಣ್ಯ ಶಿಷ್ಯರಿಗೆ ಬಲುದಯದಿಂದಅಪರೋಕ್ಷಒದಗಲು ಉಪದೇಶವಿತ್ತಿಹರುಅಪವರ್ಗಯೋಗ್ಯರಿಗೆಮಾರ್ಗತೋರಿಹರು3ಮೊದಲು ಗೋಪಾಲ ವೇದವ್ಯಾಸ ಹಯವದನಶ್ರೀದನ ಈ ಮೂರು ಉತ್ಕøಷ್ಠನಾಮಅಂಕಿತವ ನಾಲ್ವರಿಗೆ ವಿಜಯದಾಸಾರ್ಯರುಉತ್ತುಂಗಮಹಿಮರು ಇತ್ತಿಹರು ದಯದಿ 4ಸಾಧುವರ್ಯ ತಮ್ಮನಿಗೆ ಹಯವದನಾಂಕಿತ ನಾಮಉತ್ತನೂರು ಭಾಗಣ್ಣ ರಾಯರ್ಗೆ ಗೋಪಾಲಆದವಾಣಿ ತಿಮ್ಮಣ್ಣರ್ಗೆ ವೇಣುಗೋಪಾಲಆದವಾಣಿಯವರದ್ವಾರಾ ವ್ಯಾಸ ಸುಬ್ಬಣ್ಣರ್ಗೆ 5ಗುರುವರ್ಯ ಗೋಪಾಲದಾಸಾರ್ಯರಚರಣಸರಸಿಜಯುಗ್ಮನಾ ನಂಬಿದೆ ನಿಶ್ಚಯದಿಕಾರುಣ್ಯ ಔದಾರ್ಯ ನಿಧಿಗಳು ಇವರಲ್ಲಿಶರಣಾದೆ ಸಂತತಸ್ಮರಿಸೆ ಪಾಲಿಪರು 6ಗಾಯತ್ರಿಯಲಿ ಕೇಶವಾದಿ ಇಪ್ಪತ್ತನಾಲ್ಕುಹಯಗ್ರೀವರೂಪಗಳು ಆರನ್ನೂ ಸ್ಮರಿಸಿಗಾಯತ್ರಿನಾಮ ಶ್ರೀವೇಂಕಟಕೃಷ್ಣನಿಗೆಪ್ರಿಯಗಾಯತ್ರಿಮಂತ್ರ ಸಿದ್ಧಿಪಡೆದವರು 7ಇಂಥಾ ಮಹಾಭಕ್ತ ಭಾಗಣ್ಣನ ಬಳಿಬಂದು ವಿಜಯಾರ್ಯರು ಇತ್ತರು ದಯದಿಸೌಂದರ್ಯಸಾರ ಗೋಪಾಲವಿಠ್ಠಲ ನಾಮಇಂದಿರಾಪತಿ ಅಖಿಳಪ್ರದನ ಅಂಕಿತವ 8ಆದವಾಣಿಸುಲ್ತಾನನ ಮಂತ್ರಿಯುಸಾಧುಶೀಲನು ತಿಮ್ಮಣ್ಣರಾಯಈತನು ವೀರ ವೈಷ್ಣವಮಾಧ್ವಬ್ರಾಹ್ಮಣನುಭಕ್ತಿಮಾನ್ ಜ್ಞಾನವಾನ್ ವೈರಾಗ್ಯಶಾಲಿ 9ಹಿಂದಿನ ಜನ್ಮದಿ ಆದಿಕೇಶವನನ್ನವಂದಿಸಿ ಸ್ತುತಿಸಿದ ರಾಮಾನುಜೀಯಇಂದುಸದ್ವೈಷ್ಣವಕುಲದಲ್ಲಿ ಹುಟ್ಟಿಹನುಇಂದಿರೇಶನ ನಾಮಾಂಕಿತ ಬೇಡಿದ್ದ ಮೊದಲೇ 10ಮೊದಲೇವೆ ತಾಳೆಂದು ಹೇಳಿ ಈಗ ವಿಜಯಾರ್ಯಇತ್ತರೂ ಶ್ರೀ ವೇಣುಗೋಪಾಲವಿಠ್ಠಲ ಈಉತ್ತಮ ಈ ನಾಮ ಉಪದೇಶ ಮಾಡಿದರುಈ ತಿಮ್ಮಣ್ಣ ರಾಯರಿಗೆ ನಮೋ ನಮೋ ಎಂಬೆ 11ಕಲ್ಲೂರು ಸುಬ್ಬಣ್ಣಾಚಾರ್ಯರು ನ್ಯಾಯಸುಧಾಮಂಗಳ ಅನುವಾದ ಚರಿಸಿ ವಿಜಯಾರ್ಯಅಲ್ಲಿ ಪಾಚಕ ವೇಷದಲಿ ಪೋಗಿ ಮಂಡಿಗೆಗಳಮಾಡಿದರು ಮಧುಸೂದನನ ಪ್ರೀತಿಗೆ12ಸುಬ್ಬಣ್ಣಾಚಾರ್ಯರು ಮಹಾದೊಡ್ಡ ಪಂಡಿತರುಶುಭತಮಸುಧಾಮಂಗಳದ ಅನುವಾದಸಂಭ್ರಮದಿ ಕದಡಿದ್ದ ಬಹು ಬಹು ಮಂದಿಯಸಭೆಯೊಳು ಪ್ರವೇಶಿಸಿದರು ವಿಜಯಾರ್ಯ 13ನೆರೆದಿದ್ದವರಲ್ಲಿ ವಿಜಯರಾಯರ ಮಹಿಮೆಅರಿತಿದ್ದಜನ ನಮ್ರಭಾವದಲಿ ಎದ್ದುಮರ್ಯಾದೆ ಮಾಡಿದರು ಅದನೋಡಿ ಆಚಾರ್ಯಪ್ರಾಕೃತಹಾಡುವವಗೆ ಪೂಜೆಯೇ ಎಂದ14ವ್ಯಾಸಪೀಠದ ಮುಂದೆ ವಿಜಯರಾಯರು ಪೋಗಿವ್ಯಾಸಗೆ ಮಧ್ವಗೆ ಜಯಾರ್ಯಗೆ ನಮಿಸಿಸಂಶಯ ಕಳೆದು ಯಥಾರ್ಥಜ್ಞಾನವನೀವಶ್ರೀಸುಧಾ ಕೇಳುವೆ ಎಂದು ಪೇಳಿದರು 15ಕನ್ನಡ ಕವನಮಾಡುವ ನಿಮಗೆ ಈ ಸುಧಾಘನವಿಷಯಗಳು ತಿಳಿಯಲಿಕೆ ಬೇಕಾದಜ್ಞಾನನಿಮಗೆ ಏನು ಇದೆ ಹೇಳಿ ಎಂದು ಆಚಾರ್ಯತನ್ನ ಪಾಂಡಿತ್ಯದ ಗರ್ವದಿ ಕೇಳಿದನು 16ಸುಬ್ಬಣ್ಣಾಚಾರ್ಯನ ಈ ಮಾತುಕೇಳಿಒಬ್ಬ ಪರಿಚಾರಕನ ಕರೆದು ವಿಜಯಾರ್ಯಅವನಿಗೆ ವಿಧ್ಯಾಭ್ಯಾಸ ಉಂಟೇ ಎನ್ನೆಅಪದ್ಧಅಡದೇ ಅವ ವಿದ್ಯಾಹೀನನೆಂದ17ಸಭ್ಯರು ನೋಡುತಿರೆ ವಿಜಯದಾಸಾರ್ಯರುಕಪಿಲ ಖಪತಿ ಗರುಡಾಸನ ಘರ್ಮಶ್ರೀಪತಿ ಆಜ್ಞಾಸಾರ ವರಾಹನ್ನ ಸ್ಮರಿಸಿದರುಆ ಪರಮದಡ್ಡನ ಶಿರದಿ ಕರವಿಟ್ಟು 18ಕರವಿಡಲು ವಿಜಯರಾಯರ ಜ್ಞಾನಪೀಯೂಷಧಾರೆ ಆ ಪುರುಷನ ಶರೀರದೊಳು ಪೊಕ್ಕುರುಧಿರನಾಳಂಗಳು ತನುನರನಾಡಿ ಶಾಖೆಗಳುತೀವ್ರಸುಪವಿತ್ರವಾದವು ತತ್ಕಾಲ 19ವರ್ಣಾಭಿಮಾನಿಗಳು ಭಾರತೀ ಸಹವಾಯುವರ್ಣಪ್ರತಿಪಾದ್ಯ ಹರಿರಮಾಸಮೇತತನು ಮನವಾಕ್ಕಲ್ಲಿ ಪ್ರಚುರರಾಗಿ ಅವನುಘನತರ ಸುಧಾಪಂಕ್ತಿಗಳ ಒಪ್ಪಿಸಿದನು 20ಅಣುವ್ಯಾಖ್ಯಾನ ಸುಧಾ ನ್ಯಾಯ ರತ್ನಾವಳೀಇನ್ನು ಬಹುಗ್ರಂಥಗಳ ವಾಕ್ಪ್ರವಾಹದಲಿಘನಮಹ ವಿಷಯಗಳಸಂದೇಹಪರಿಹರಿಪಅನುವಾದಮಾಡಿದ ಅದ್ಭುತ ರೀತಿಯಲ್ಲಿ 22ಸುಬ್ಬಣ್ಣಾಚಾರ್ಯರು ದಾಸಾರ್ಯರಲ್ಲಿಉದ್ಭಕ್ತಿಗುರುಭಾವದಿಂದೆದ್ದು ನಿಲ್ಲೆಸೌಭಾಗ್ಯ ಪ್ರದಸುಧಾ ಮಂಗಳವ ಪೂರೈಸುಶುಭೋದಯವು ನಿನಗೆಂದು ಪೇಳಿದರು ದಾಸಾರ್ಯ 23ಮಂಗಳಪ್ರಸಾದವ ಸಭ್ಯರಿಗೆ ಕೊಟ್ಟಮೇಲ್ಕಂಗಳಲಿ ಭಕ್ತಿಸುಖ ಬಾಷ್ಪ ಸುರಿಸುತ್ತಗಂಗಾಜನಕಪ್ರಿಯ ವಿಜಯರಾಯರಪಾದಪಂಕಜದಿ ಶರಣಾದರು ಸುಬ್ಬಣ್ಣಾರ್ಯ 24ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೆ ಶರಣು 25-ಇತಿಃ ತೃತೀಯಾಧ್ಯಾಯಃ-ಚತುರ್ಥ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪರಾಜರು ಸ, ಂಸ್ಥಾನ ಮಂಡಲೇಶ್ವರರೆಲ್ಲವಿಜಯದಾಸಾರ್ಯರಿಗೆ ಎರಗಿ ತಮ್ಮರಾಜಧಾನಿಗೆ ಕರೆದು ಕೃತಕೃತ್ಯರಾದರುವಿಜಯಸಾರಥಿಒಲುಮೆ ಏನೆಂಬೆ ಇವರೊಳ್1ಅಲ್ಲಲ್ಲಿ ಪೋದ ಸ್ಥಳದಲ್ಲಿ ನರಹರಿ ಮಹಿಮೆಎಲ್ಲ ಸಜ್ಜನರಿಗೂ ಕೀರ್ತಿಸಿ ತೋರಿಸಿಕಲಿಕಲ್ಮಷ ಪೀಡಿತ ಜನರ ಕಷ್ಟಗಳಎಲ್ಲವ ಪರಿಹಾರ ಮಾಡಿ ಕಾಯ್ದಿಹರು 2ಹರಿನಾಮಾ ಐನೂರು ಸಾವಿರ ಕೀರ್ತನೆ ಗ್ರಂಥಗಳೊಳುತಾನೇ ಸ್ವತಮಾಡಿದ್ದಲ್ಲದೆ ಮಿಕಿಲಾದ್ದುಇನ್ನೂರೈವತ್ತುನೂರು ವಿಜಯರಾಯರಲಿ ನಿಂತುಪೂರ್ಣ ಮಾಡಿಸಿಹರು ಶ್ರೀ ಪುರಂದರದಾಸಾರ್ಯ 3ಹರಿನಾಮ ಜಿಹ್ವೆಯಲಿ ಭೂತದಯಾ ಮನಸಿನಲ್ಲಿಹರಿಮೂರ್ತಿ ಗುಣರೂಪ ಅಂತಃಕರಣದಲಿಪುರಂದರಾರ್ಯರು ಇವರು ರಚಿಸಲೆ ಬಿಟ್ಟಿದ್ದಭಾರಿ ಸಂಕೀರ್ತನೆಗಳನ್ನ ಹಾಡಿಹರು 4ಪ್ರಿಯತಮ ಶಿಷ್ಯರು ಗೋಪಾಲ ದಾಸರೊಡೆತೋಯಜಾಕ್ಷನ ಸ್ಮರಿಸಿ ನಡಿಯುತಿರುವಾಗಬಾಯಾರಿಕೆ ಪೀಡಿತ ಕತ್ತೇಗೆ ದಯಮಾಡಿತೋಯವನು ಕುಡಿಸಿಹರು ಕಾರುಣ್ಯಶರಧಿ5ಬಹುಕಾಲದ ಹಿಂದೆ ತಾ ಕೇಶವರಾಯನಗೃಹದಲ್ಲಿ ಹುಗ್ಗಿಯ ಉಂಡದ್ದು ನೆನಪಾಗಿಆ ಗೃಹಕ್ಕೆ ಪೋದರು ಗೋಪಾಲ ದಾಸರ ಸಹಹಾಹಾ ಅಲ್ಲಿಸ್ಥಿತಿ ಏನೆಂಬೆ ಆಗ 6ಏಳು ಜನ್ಮದಕರ್ಮಗತಿಸುಳಿಯಲ್ಲಿಸಿಲುಕಿ ಆ ಮನೆಯ ಯುವಕನುಅಸುಬಿಟ್ಟತಲೆ ಸ್ಫೋಟನವಾಗಿ ತಾಕಿ ಬೋದಿಗೆಗೆಅಳುತ್ತಿದ್ದರು ಜನರು ದುಃಖದಲಿ ಮುಳಗಿ 7ಕರುಣಾ ಸಮುದ್ರರು ಭೂತದಯಾ ಪರರುಎರದರು ತಮ್ಮ ಆಯುಷ್ಯದಿ ಮೂರು ವರುಷವರಾಹಭಿಷಕ್ ನರಹರಿಯ ಜಪವನ್ನು ಗೈದುನರಸಿಂಹನ ಸ್ತುತಿಸಿ ಬದಕಿಸಿದರು ಯುವಕನ್ನ 8ಅಳುತ್ತಿದ್ದ ಜನರೆಲ್ಲ ಆನಂದ ಬಾಷ್ಪದಮಳೆ ಸುರಿಸಿ ಬಲು ಕೃತಜÕತೆ ಭಾವದಿಂದಮಾಲೋಲ ಪ್ರಿಯವಿಜಯದಾಸರ ಪದಯುಗಳನಳಿನದಲಿ ನಮಿಸಿದರು ಭಕ್ತಿ ಪೂರ್ವಕದಿ 9ಚೀಕಲ ಪರವಿಯಿಂದಲಿ ನಾಲಕು ಕ್ರೋಶನಗರವು ಮಾನವಿ ಎಂಬುದು ಅಲ್ಲಿಪ್ರಖ್ಯಾತ ಪಂಡಿತನು ಶ್ರೀನಿವಾಸಾಚಾರ್ಯನುಪುಷ್ಕಲ ಶ್ರೀಮಂತ ಬಹು ಶಿಷ್ಯಸೇವ್ಯ10ಸುರಗಂಧರ್ವಾಂಶರು ಬ್ಯಾಗವಟ್ಟೀಯವರುನರಸಿಂಹ ದಾಸರುಅವರಮಗನುಈ ಶ್ರೀನಿವಾಸನು ಕೇಳಿದ್ದ ಮೊದಲೇವೇಹರಿದಾಸವರ್ಯ ವಿಜಯಾರ್ಯರ ಪ್ರಭಾವ 11ಹರಿಭಕ್ತಾಗ್ರಣಿ ಪ್ರಹ್ಲಾದನ ಭ್ರಾತನುಧೀರ ಸಂಹ್ಲಾದನೆ ಈ ಧೀರ ಶ್ರೀನಿವಾಸಭಾರಿ ಸಾಧÀನೆ ಇವಗೆ ಒದಗಿಸ ಬೇಕೆಂದುಹರಿದಾಸವರ್ಯರು ಪೋದರು ಮಾನವಿಗೆ 12ಮಾನವಿಯಲ್ಲಿ ವಿಜಯಾರ್ಯರು ಮುಖಾಂ ಹಾಕಿಜನರಲ್ಲಿ ಹರಿಭಕ್ತಿ ಜ್ಞಾನ ಬೆಳಸುತ್ತದೀನರಿಗೆ ಯೋಗ್ಯ ವಾಂಛಿತವ ಒದಗಿಸುತ್ತಘನಮಹಿಮಹರಿಸೇವೆ ಮಾಡುತ್ತ ಇದ್ದರು13ಶ್ರೀನಿವಾಸಾಚಾರ್ಯನಿಗೆ ಉದ್ಧಾರ ಕಾಲವುಶ್ರೀನಿಧಿಯ ನಿಯಮನದಿ ಬಂದಿಹುದು ಎಂದುಶ್ರೀನಿವಾಸಾಚಾರ್ಯನಲಿ ಪೋಗಿ ವಿಜಯಾರ್ಯರುಬನ್ನಿರಿ ಹರಿಪ್ರಸಾದ ಕೊಳ್ಳಿರಿ ಎಂದರು 14ವಿಜಯದಾಸಾರ್ಯರ ಆಹ್ವಾನ ಲೆಕ್ಕಿಸದೆರಾಜಸದಿ ತಾನು ಪಂಡಿತನೆಂಬ ಗರ್ವದಿವಿಜಯಾರ್ಯರ ಕುರಿತು ಅವಜÕ ಮಾಡಿದನುಬೊಜ್ಜೆಯಲಿ ರೋಗವು ತನ್ನಿಮಿತ್ತ ಬಂತು 15ಸೋತ್ತಮಾಪರಾಧದಿಂ ವ್ಯಾಧಿ ಪೀಡಿತನಾಗಿಸೋತು ತತ್ ಪರಿಹಾರ ಯತ್ನ ಸರ್ವದಲೂಬಂದು ವಿಜಯಾರ್ಯರಲಿ ಶರಣಾಗಿ ಕ್ಷಮಿಸೆನ್ನೆಹಿತದಿಂದ ವಿಜಯಾರ್ಯರು ಕರುಣಿಸಿದರು 16ಗೋಪಾಲ ದಾಸರು ಉದ್ಧರಿಸುವರು ಪೋಗೆಂದುಕೃಪೆಯಿಂದಲಿ ವಿಜಯಾರ್ಯರು ಪೇಳಿ ಶ್ರೀನಿವಾಸಗೋಪಾಲದಾಸರಲಿ ಪೋಗಿ ಶರಣಾಗಲು ದಾಸಾರ್ಯರಲಿಶ್ರೀಪನ್ನ ಸ್ತುತಿಸೆ ಗುರುಗಳು ಒಲಿದರು ಆಗ 17ಗೋಪಾಲವಿಜಯವಿಠ್ಠಲನನ್ನ ವಿಜಯಾರ್ಯಸುಪವಿತ್ರ ಚೀಕಲಪರವಿಯಲಿ ಸ್ತುತಿಸೆಗೋಪಾಲ ದಾಸಾರ್ಯರು ಅರಿತು ಶ್ರೀನಿವಾಸನಿಗೆಉಪದೇಶ ಮಾಡಿದರು ತನ್ನಗುರುಪೇಳ್ದ ರೀತಿ18ಶ್ರೀನಿವಾಸಾಚಾರ್ಯರು ಗೋಪಾಲ ದಾಸಾರ್ಯರ ದಯದಿಪುನರಾರೋಗ್ಯ ಆಯುಷ್ಯವು ಹೊಂದಿಶ್ರೀನಿಧಿ ಭೀಮರತಿ ತೀರಸ್ಥ ವಿಠ್ಠಲನ್ನಸನ್ನಮಿಸಿ ಸಂಸ್ತುತಿಸಿ ಖ್ಯಾತರಾದರು ಜಗನ್ನಾಥ ದಾಸರೆಂದು 19ವಿಜಯನಗರಾದಿ ರಾಜ ಜಮೀನುದಾರಗಳುವಿಜಯರಾಯರನ್ನ ತಮ್ಮ ಸ್ಥಳಕ್ಕೆ ಕರೆತಂದುನಿಜಭಕ್ತಿಯಲಿ ಮರ್ಯಾದೆಗಳ ಮಾಡಿದರುವಿಜಯದಾಸರ ಮಹಿಮೆ ನೇರಲ್ಲಿ ಕಂಡು 20ತಿರುಗಿ ಬರುವಾಗ ಶ್ರೀದಾಸ ಮಹಂತರುಚಕ್ರತೀರ್ಥದಿ ಸತ್ರಯಾಗ ಮಾಡಿದರುಪುರಂದರದಾಸಾರ್ಯರು ಇದ್ದ ಸ್ಥಳ ಈ ಕ್ಷೇತ್ರಹರಿಶಿರಿಗೆ ಹನುಮಗೆ ಶಿವಗೆ ಆನಮಿಪೆ 21ಸತ್ರಯಾಗ ಕಾಲದಲಿ ಒಂದು ದಿನ ರಾತ್ರಿವಿಧವೆ ಓರ್ವಳು ತನ್ನ ಕಜ್ಜಿ ಮಗು ಸಹಿತನದಿಯಲ್ಲಿ ಬೀಳಲು ಯತ್ನಿಸಲು ಅದು ಕಂಡುಇತ್ತು ಅಭಯವ ವಿಜಯಾರ್ಯರು ಕಾಯ್ದರು 22ಭೀಮಪ್ಪನಾಯಕಧನವಂತ ಬ್ರಾಹ್ಮಣನಧರ್ಮಪತ್ನಿಯು ಆಕೆ ಪತಿಯ ಕಳಕೊಂಡ್ಲುತಾಮಸಪ್ರಚುರಮೈದುನ ಬಂದು ಬಹಳ ಕ್ರೂರಹಿಂಸೆ ಕೂಡಲು ನದಿಯೊಳು ಬೀಳೆ ಬಂದಿಹಳು 23ಸಾಧ್ವಿಯೂ ಆಕೆಯೂ ಶಿಶು ಮಹಾಭಾಗವತಎಂದು ಜ್ಞಾನ ದೃಷ್ಟಿಯಲಿ ಅರಿತರು ವಿಜಯಾರ್ಯಎಂಥವರು ಆದರೂ ಆತ್ಮಹತ್ಯೆ ಶಿಶುಹತ್ಯಯತ್ನ ತಡೆದು ರಕ್ಷಿಪುದು ಭೂತದಯವು 24ತಾಯಿಶಿಶು ಈರ್ವರನು ಮಠಕೆ ಕರಕೊಂಡು ಹೋಗಿಭಾರ್ಯೆ ಅರಳಿಯಮ್ಮ ಕೈಲಿ ಒಪ್ಪಿಸಿ ಆಕೆಹಯವದನ ಆಕೆಯ ಮೃತಮಗನ ಪ್ರತಿಯಾಗಿದಯದಿ ಕೊಟ್ಟಿಹ ಶಿಶುವ ಎಂದು ಪೋಷಿಸಿದಳು 25ಔದಾರ್ಯ ಕರುಣದಿ ಶಿಶುವನ್ನು ತಾಯಿಯನ್ನುಆದರಿಸಿ ದಾಸಾರ್ಯೆ ದಂಪತಿಯು ಮಗುವಹಿತದಿ ಮೋಹನನೆಂದು ಹೆಸರಿಟ್ಟು ಆಶಿಸಿಒದಗಿದರು ಇಹಪರಉದ್ಧಾರವಾಗೆ26ಯುಕ್ತ ಕಾಲದಿ ಮುಂಜಿ ಮದುವೆ ಮೋಹ ಮೋಹನನಿಗೆಶ್ರೀಕರನ್ನ ಅನುಗ್ರಹದಿ ಮಾಡಿಸಿ ಹರಿಯುಉತ್ಕøಷ್ಠ ನಾಮಾಂಕಿತ ಮೋಹನ ವಿಠಲ ಎಂದುಕೃಪಾಕರ ದಾಸಾರ್ಯರು ಇತ್ತರು ಮುದದಿ 27ಒಂದು ಸಮಯದಿ ಮೋಹನನಿಗೆ ಅಪಮೃತ್ಯು ಬರಲಿರಲುಶ್ರೀ ದಾಸರಾಯರು ಮೊದಲೇ ಹೇಳಿದರುಶ್ರೀ ಬಿಂದು ಮಾಧವನ್ನು ಸೇವಿಸೆ ಹೋಗಿ ನಾ ಬರುವೆಮೃತನಾದ ದೇಹವ ಕಾಪಾಡು ಹರಿಯ ಸ್ಮರಿಸೆಂದು 28ಅದರಂತೆ ಮೋಹನಗೆ ಅಪಮೃತ್ಯು ಸೋಕಲುಸಾಧ್ವಿಸತಿ ದೇಹವ ಹೊರತಂದು ರಕ್ಷಿಸೆಕದನಗೈದು ಓರ್ವ ಸಾಗಿಸಲು ಯತ್ನಿಸೆಸತಿಯು ವಿಜಯಾರ್ಯರನ್ನು ಸ್ಮರಿಸಿ ಮೊರೆಯಿಟ್ಟಳು 29ಶ್ರಿಬಿಂದುಮಾಧವನ್ನ ಸೇವಿಸಿ ದಾಸಾರ್ಯರುತಾಪೋಗಿ ಧರ್ಮರಾಜನಲಿ ಅರಿಕೆ ಮಾಡಿಕ್ಷಿಪ್ರದಲಿಅಸುತಿರುಗಿ ತÀರಿಸಿ ಬದುಕಿಸಿದರುಆರ್ಭಟದಿ ಬಲುತ್ಕಾರ ಮಾಡಿದವ ಬಿದ್ದ 30ಈ ರೀತಿ ಅಪಮೃತ್ಯು ಪರಿಹರಿಸಿದ್ದನ್ನಕೇಳಿಮೋಹನಭಾರಿ ಕರುಣಾಳು ವಿಜಯಾರ್ಯರ ಸ್ತುತಿಸಿಉತ್ಕøಷ್ಟ ಕೀರ್ತನೆ ಹಾಡಿರುವುದು ಲೋಕಅರಿವುದು ಅದ್ಯಾಪಿ ಹೋಗಳುವರು ಜನರು 31ಶ್ರೀ ವಿಜಯದಾಸರ ಅನುಗ್ರಹದಿ ಮೋಹನಕೋವಿದವರ್ಯನು ಶ್ರುತಿಯುಕ್ತ ಯುತವಾದತತ್ವಬೋಧಕ ಕೀರ್ತನೆಗಳು ಶ್ರೀಹರಿಯಅವತಾರಲೀಲಾನು ವರ್ಣನ ಮಾಡಿಹರು 32ರಾಜೀವಾಸನ ಪಿತ ಪ್ರಸನ್ನ ಶ್ರೀನಿವಾಸ ಶ್ರೀರಾಜೀವಾಲಯ ಪತಿಗೆ ಪ್ರಿಯಕರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣು ಶರಣಾದೆ 33- ಇತಿ ಚತುರ್ಥಾಧ್ಯಾಯ ಸಮಾಪ್ತಿ -ಪಂಚಮ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿವಿನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪವಿಜಯದಾಸಾರ್ಯರು ದೇವ ವೃಂದದವರೆಂದುನಿಜವಾಗಿ ಅರಿವುದಕೆ ಇತಿಹಾಸ ಬಹು ಉಂಟುನಿಜಭಕ್ತರಲ್ಲದೆ ಪಾಮರರು ಸಹ ಅರಿತಸಜ್ಜನರು ಹೊಗಳುವ ಇತಿಹಾಸಕೇಳಿ1ಬಾಲ ವಿಧವೆಯುಕರ್ಮಸುಳಿಯಲ್ಲಿ ಸಿಲುಕಿಬಲು ನೀಚ ವೃತ್ತಿಯವಳಂತೆ ತೋರಿಕಲುಷವಂತಳು ಎಂದು ಬಹಿಷ್ಕøತಳಾದವಳಆಲಯದಿ ವಿಜಯಾರ್ಯ ಕೊಂಡರು ಅವತನವ 2ತಮ್ಮ ಆಹ್ವಾನವ ಲೆಕ್ಕಿಸದೆ ಮೊದಲೇ ಈಆಧಮಳ ಆಹ್ವಾನ ಮನ್ನಣೆÉ ಮಾಡಿಆ ಮನೆಯಲ್ಲಿ ಪೂಜಾನೈವೇದ್ಯ ಮಾಡಿದರೆಂದುಶ್ರೀಮಠದ ಭೂಸುರರು ಕೋಪ ಹೊಂದಿದರು 3ಶ್ರೀವರನು ವಿಧಿವಾಯು ಅಮರ ಶ್ರೇಷ್ಠರ ಸಹಯಾವ ದಾಸಾರ್ಯರಲಿ ಪ್ರಚುರನಾಗಿಹನೋಯಾರನ್ನ ಸ್ಮರಿಸಲು ದುರಿತಹರ ಪುಣ್ಯದವೋಅವರು ಭೋಜನ ಮಾಡುತಿರೆ ನಿಂತಳು ಬಾಲೆ 4ಮಹಾನ್ ದಾಸರಿಗೆ ಆಕೆ ಮಾಡಿಸಿದ ಪೂಜೆಯಿಂದೇಹಜದುರಿತಗಳು ಪರಿಹಾರವಾಗಿಶ್ರೀ ಹರಿಯದಾಸರಿಗೆ ಮನಸಾ ಸನ್ನಮಿಸಿದೇಹೇಂದ್ರಿಯಗಳ ಲಯವ ಚಿಂತಿಸಿದಳು 5ದಾಸಾರ್ಯರು ಭೋಜನವ ಪೂರೈಸಲುಅಸುಆಕೆಗಾತ್ರಬಿಟ್ಟು ಹೊರಟು ಹೋಯಿತುದಾಸವರ್ಯರು ತಾವೇ ಆಕೆಗೆ ಸಂಸ್ಕಾರಶ್ರೀಶಹರಿಪ್ರೀತಿಯಾಗಲಿಕೆ ಮಾಡಿದರು6ದೂಷಿತ ಬಹಿಷ್ಕøತ ಸ್ತ್ರೀ ಮನೆಯಲ್ಲಿ ಉಂಡುದೂಷಣಾರ್ಹ ಕ್ರಿಯಾ ಚರಿಸಿಹರು ಎಂದುದೀಕ್ಷಾ ಪ್ರವರ್ಧಕ ಶ್ರೀ ಮಠಾಧಿಕಾರಿಗಳುಬಹಿಷ್ಕಾರ ಮಾಡಿದರಂತೆ ದಾಸಾರ್ಯರಿಗೆ 7ತಪೋನಿಧಿಗಳುಸೂರಿವರಸ್ವಾಮಿಗಳುಶ್ರೀಪನ್ನ ಪೂಜಿಸಿ ಪ್ರತಿಮೆಯಲ್ಲಿಅಪರೋಕ್ಷಜ್ಞಾನದಿ ಸರ್ವವ ಅರಿತುಶ್ರೀಪ ಪ್ರಿಯ ವಿಜಯಾರ್ಯರನ್ನು ಬರಮಾಡಿದರು 8ಜ್ಞಾನಿವರ್ಯ ದಾಸಾರ್ಯರು ಇದು ಮೊದಲೇ ಅರಿತುತನ್ನ ಶಿಷ್ಯರೊಡೆ ಹೇಳೆ ಆಹ್ವಾನ ಬಂದುತನ್ನವರ ಸಹ ಶ್ರೀ ಮಠಕೆ ಪೋಗಿ ಸ್ವಾಮಿಗಳಅನುಗ್ರಹ ಹೊಂದಿ ಸಂಭಾಷಿಸಿದರು ಮುದದಿ 9ಪ್ರತಿಮೆಯಲಿ ಶ್ರೀಹರಿಯ ಸಾನ್ನಿಧ್ಯ ಲಕ್ಷಣವೇದ್ಯವಾಗುವಿಕೆ ದಾಸಾರ್ಯರು ಒದಗಲಿಕ್ಕೇ ಎಂದುಸುತಪೋನಿಧಿ ಸ್ವಾಮಿಗಳು ಹೇಳಿ ದಾಸಾರ್ಯರುಇಂದಿರೇಶ ಸುಪ್ರಚುರ ವ್ಯಾಪ್ತನೂ ಎಂದರು 10ಪ್ರತಿಮೆಯಲಿ ಹಿಂದಿನ ದಿನಕ್ಕಿಂತ ಆಗಆದಿಯಂತೇವೆಯೇ ಶ್ರೀಯಃಪತಿ ಜ್ವಲಿಸಿಮುದಮನದಿ ಶ್ರೀಗಳು ಪೂಜಾದಿ ಪೂರೈಸಿಕೇಳ್ದರು ದಾಸರನ್ನ ಬಾಲೆಯ ವೃತ್ತಾಂತವ 11ದಾಸವರ್ಯರು ಹೇಳಿದರು ಆ ಬಾಲೆಯುಸುಮನಸವೃಂದದಿ ಓರ್ವಳು ಪೂರ್ವವಸುಧೆಯಲಿ ಪುಟ್ಟುವೆನು ಎನ್ನನುದ್ಧರಿಸಿರಿವಾತ್ಸಲ್ಯದಿ ಎಂದು ಬೇಡಿದ್ದಳೆಂದು 12ತತ್ಕಾಲ ಮುಗಿಯಬೇಕಾದ ಪ್ರಾರಬ್ಧಕರ್ಮಆಕೆಗೆ ಮುಗಿಯುವ ಸಮಯ ವಿಜಯಾರ್ಯಆಕೆ ಮನೆಗೆ ಹೋಗಿ ಸಾಧನ ಸಂಪತ್ತೊದಗಿಆಕೆಗೆ ಗತಿಯ ಕಲ್ಪಿಸಿಹರು ದಯದಿ 13ಪ್ರಾರಬ್ಧ ಕಳೆಯಲಿಕೋ ಶಾಪ ನಿಮಿತ್ತವೋಸುರರುಭುವಿಯಲ್ಲಿ ಪುಟ್ಟಿ ಒಮ್ಮೊಮ್ಮೆ ನಿಷಿದ್ದಕರ್ಮಚರಿಸಿದರೂ ಪಾಪ ಲೇಪವಾಗವುಇತರರಿಗೆ ಲೇಪವುಂಟುಹರಿಪರಾನ್ಮುಖರ್ಗೆ14ಹರಿಗೆ ಪ್ರಿಯಕರ ವಿಜಯರಾಯ ಪ್ರಭಾವತೋರಿಸಿದ ಈವೃತ್ತಾಂತದಿಕ್ಕು ದಿಕ್ಕುಹರಡಿತು ಜನರೆಲ್ಲ ವಿಜಯದಾಸಾರ್ಯರುಸುರರೇವೇ ನರರಲ್ಲೆಂದು ನಿಶ್ಚಯಿಸಿದರು 15ತಿರುಪತಿಯಲ್ಲಿ ಶ್ರೀ ಶ್ರೀನಿವಾಸನ ರಥದಾರಿಯಲ್ಲಿ ನಿಲ್ಲಲು ವಿಜಯದಾಸಾರ್ಯರುಹರಿತತ್ವ ಮಹಿಮೆಯ ಕವನ ರೂಪದಿ ಸ್ತುತಿಸೆಗರುಡ ಗಮನನು ರಥದಿ ಸರಸರನೆ ಬಂದ 16ಮೂರುಬಾರಿಕಾಶಿಗೆ ಹೋದಾಗಲೂ ಗಂಗೆಅರಿತು ಭೃಗುಮುನಿ ಅವತಾರವೆಂದುಹರುಷ ತೋರಿ ಉಕ್ಕಿದಳು ಭೃಗು ವಿಜಯರಾಯರುವರಅತಿಥಿ ಶಿವತಾತ ಪ್ರಿಯರೆಂದು17ವೇದ ವೇದಾಂತ ಪುರಾಣಾರ್ಥ ರಹಸ್ಯಗಳುಸದಾಗಮ ಸರ್ವರ್ಥಗಳ ಸಾರೋದ್ಧಾರವುಈ ದಾಸ ಮಹಂತರ ಗ್ರಂಥ ಸುಳಾದಿಗಳುಓದಿ ಕೇಳ್ವವರಿಗೆ ಇಹಪರಉದ್ಧಾರ18ಇಂದ್ರಾದಿ ಜಗದ್ಗುರು ಸದಾಶಿವನ್ನ ಸೇವಿಸುತ್ತರುದ್ರಾಂತರ್ಯಾಮಿ ನರಹರಿಯ ಅರ್ಚಿಸುತ್ತವಂದಿಸುತ್ತ ಚಿಪ್ಪಗಿರಿ ವಾಸಿಷ್ಠ ವಿಜಯವಿಠ್ಠಲ ಕೃಷ್ಣನ್ನಹೊಂದಿದರು ದಾನವಾಗಿ ಆಕ್ಷೇತ್ರವನ್ನು ಮೂರ್ತಿಯನ್ನು 19ಪಾಲಸಾಗರಪೋಲು ಆ ವಾಪಿ ಸುಪವಿತ್ರತಟದಲ್ಲಿಯೇ ವಾಸಸ್ಥಾನ ಮಾಡಿಕೊಂಡುಅಲ್ಲೇ ಇದ್ದರು ದಾಸಾರ್ಯರು ಪಾಠ ಪ್ರವಚನ ಭಜನೆಮಾಲೋಲ ಸುಪ್ರೀತಿಕರವಾಗಿ ಮಾಡುತ್ತ 20ಮೋದಮಯ ಶ್ರೀ ಶ್ರೀನಿವಾಸನ್ನ ಸೇವಿಸುತಮೇದಿನಿಯಲಿ ಸುಜರನ್ನ ಉದ್ಧರಿಸಿಕಾರ್ತೀಕ ಶುಧ್ಧ ದಶಮಿಯಲ್ಲಿ ಸ್ವಸ್ಥಾನಯೈದಿದರು ಹರಿಪಾದ ಧ್ಯಾನಿಸುತ್ತ ಧೀರ 21ವಿಜಯರಾಯರ ನೆನೆದರೆ ಆಯುಷ್ಯ ಆರೋಗ್ಯಶ್ರೀನಿಜಭಕ್ತಿ ಜ್ಞಾನವುವಿಜಯಎಲ್ಲೆಲ್ಲೂವಿಜಯದಾಸಾಂತಸ್ಥ ಮಧ್ವಾಂತರ್ಗತ ಶ್ರೀಶವಿಜಯಸಾರಥಿ ಶ್ರೀನಿವಾಸನುಈವ22ಧೀರ ಭಕ್ತಾಗ್ರಣಿ ಶ್ರೀಮದ್ ಗುರುವರ್ಯರುಭೂರಿಕರುಣಿಯು ಗೋಪಾಲದಾಸಾರ್ಯಹರಿದಾಸವರ ಹಯವದನ ವಿಠ್ಠಲವಿರಾಗಿ ವೇಣುಗೋಪಾಲ ಜಗನ್ನಾಥದಾಸರು 23ಹರಿದಾಸ ವೃಂದದಿ ಖ್ಯಾತ ಸೂರಿಗಳೆಲ್ಲರೂಗುರುಶ್ರೀಶ ವಿಠ್ಠಲಾಂಕಿತ ಕುಂಠೋಜಿ ಆರ್ಯಶ್ರೀ ರಘುಪತಿ ವಿಠ್ಠಲ ಇಂಥ ಸರ್ವರೂನೂಪರಿಪರಿ ವಿಧದಿ ಸ್ತುತಿಸಿಹರು ವಿಜಯಾರ್ಯರನ್ನ 24ವಿಜಯಾರ್ಯ ರಕ್ಷಿತ ಪೋಷಿತ ಉಪದಿಷ್ಟನಿಜದಾಸವರ್ಯ ಮೋಹನ್ನ ದಾಸಾರ್ಯವಿಜಯದಾಸಾರ್ಯನುಗ್ರಹದಿ ಬಹುಕವನಗಳಭುಜಗಭೂಷಣ ಈಡ್ಯನ್ನ ಸ್ತುತಿಸಿ ರಚಿಸಿಹರು25ಉತ್ತಮಶ್ಲೋಕ ಸ್ತುತಿಶತ ಸಹಕೀರ್ತನೆಗಳ್ಭಕ್ತಿಜ್ಞಾನ ವರ್ಧಿಪುದು ಮಹಾನ್ ಮೋಹನ್ನ ರಚಿಸಿದ್ದುಗ್ರಂಥಗಳುಪಂಡಿತಪಾಮರರಿಗೂ ಸಹ ಸುಬೋಧಕವುಸುಧಾರಸ ಪೋಲು ಹಾಡಿ ರಸಿಕರೇ ಪಠಿಸಿ 26ನಿರ್ಮತ್ಸರ ಸಾತ್ವಿಕನು ಹರಿಭಕ್ತನುವಿಮಲ ಹರಿದಾಸ ಸಾಹಿತ್ಯ ಸೂತ್ರಭಾಷ್ಯಕ್ರಮದಿ ಕಲಿತ ಆನಂದಾಚಾರ್ಯ ಎನ್ನಲಿ ಬಂದುಪ್ರೇಮದಿಂ ಪಠಿಸೆ ನಾಕೇಳಿಸುಖಿಸಿಹೆನು27ಪ್ರಸನ್ನರಾಮ ಶ್ರೀನಿವಾಸಅಖಿಳಸದ್ಗುಣನಿಧಿಯೇದೋಷದೂರನೇ ಗುರಗ ದಯದಿ ಸಲಹೋ ಇವನ್ನದಾಸದೀಕ್ಷೆ ಜ್ಞಾನ ಪ್ರವಚನ ಪಟುತ್ವವೀಯೋಕುಸುಮಭವ ಪಿತ ನಮೋ ಶ್ರೀ ಪ್ರಸನ್ನ ಶ್ರೀನಿವಾಸ 28 ಪ- ಇತಿ ಪಂಚಮೋದ್ಯಾಯ ಸಮಾಪ್ತ-
--------------
ಪ್ರಸನ್ನ ಶ್ರೀನಿವಾಸದಾಸರು