ಒಟ್ಟು 21 ಕಡೆಗಳಲ್ಲಿ , 12 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮದ್ರಾಮಾಯಣ ಮಂಗಳಂ ಮಂಗಳಂ ಮಹಾನುಭಾವಗೆ ಮಂಗಳಂ ಲೋಕಮಾತೆ ಸೀತೆಗೆ ಮಂಗಳಂ ಶತ್ರುಘ್ನ ಭರತಗೆ ಮಂಗಳಂ ಸೌಮಿತ್ರಿರಾಮಗೆ ಪ ದಶರಥನ ಉದರದಲಿ ಜನಿಸುವೆನೆಂದು ವರವನಿತ್ತ ರಾಮಚಂದ್ರಗೆ 1 ಭರತಸಹವಾಗಿ ಜನಿಸಿದ ರಾಮಚಂದ್ರಗೆ 2 ಜಾತಕರ್ಮವು ನಾಮಕರಣವು ಚೌಲ ಉಪನಯನಗಳ ಮಾಡಿ ವಿಶ್ವಾ ಮಿತ್ರರೊಡನೆ ಸಕಲ ವಿದ್ಯವ ಕಲಿಯೆ ಪೊರಟ ರಾಮಗೆ3 ಬಲ ಅತಿಬಲವೆಂಬ ವಿದ್ಯವ ವಿಶ್ವಾಮಿತ್ರರೊಡನೆ ಕಲಿತು ಅಶ್ವಿನಿದೇವತೆಗಳಂದದಿ ಬಂದ ಸೌಮಿತ್ರಿರಾಮ್ರಗೆ 4 ಭರದಲಿ ಅನಂಗನಾಶ್ರಮವನು ಪೊಕ್ಕು ಸರಯು ನದಿಯನು ದಾಟಿ ಬರದೂಷಣಜಾ ದೇಶದೊಳಗುಳ್ಳ ತಾಟಕಾಂತಕ ರಾಮಚಂದ್ರಗೆ 5 ಅಸ್ತ್ರವನ್ನು ಗ್ರಹಿಸಿ ಬೇಗನೆ ಸಿದ್ಧಾಶ್ರಮಕ್ಕೆ ನಡೆತಂದು ಸುಭಾಹುವ ನು ಸಂಹರಿಸಿ ಭರದಿ ಮಾರೀಚನ ಹಾರಿಸಿದ ರಾಮಗೆ 6 ವಿಶ್ವಾಮಿತ್ರರ ಯಜ್ಞ ಪಾಲಿಸಿ ಕುಶನ ವಂಶವಿಸ್ತಾರವ ಕೇಳಿ ಆಸರ [ಯು]ನದಿಯ ದಾಟಿ ಭರದದಿತಿಯಾಶ್ರಮಕೆ ಬಂದ ರಾಮಗೆ 7 ಮರುತ್ತ ಜನ್ಮವ ಕೇಳಿ ಅಹಲ್ಯೆಯನ್ನು ಪಾವನ ಮಾಡಿ ಬಂದ ರಾಮಗೆ 8 ಜನಕ ವಂದಿಸಿ ಧನ್ಯನೆನ್ನಲು ವಿಶ್ವಾಮಿತ್ರರು ವೃತ್ತಾಂತ ಹೇಳಿ ಧನುವ ತರಿಸಲು ನೋಡಿ ಕ್ಷಣದಿಮುರಿದಾ ರಾಮಚಂದ್ರಗೆ 9 ಕರವ ಪಿಡಿದು ಪೊರಟ ರಾಮಗೆ 10 [ಬೇಗ]ಮಾತಾಪಿತರ ಮಾತನಡೆಸಿ ಪ್ರೀತಿತೋರಿದ ಸೀತಾರಾಮಗೆ 11 ಕಂಡವರ ಮನದಲ್ಲಿ ರಮಿಸುವ ಪುಂಡರೀಕಾಕ್ಷನಿಗೆ ರಾಜ್ಯವ ಕೊಡುವೆನೆ[ನುತ] ದಶರಥ ವ್ರತವನಾಚರಿಸಿದ ರಾಮಚಂದ್ರಗೆ 12 ಕೈಕೆ ಪೂರ್ವದ ವರವ ಸ್ಮರಿಸಿ ಭರತನಿಗೆ ರಾಜ್ಯವನು ಬೇಡಿ ರಾಮನರ ಣ್ಯಕ್ಕೆ ಪೋಗೆನೆ ಬೇಗ ಪೊರಟ ಶ್ರೀರಾಮಚಂದ್ರಗೆ 13 ಮಾತೆಯನು ಬಹುವಿಧದಿ ಮನ್ನಿಸಿ ಪಿತನ ಪ್ರತಿಜ್ಞೆಯನು ಪಾಲಿಸಿ ಸೀತೆಲಕ್ಷ್ಮಣರೊಡನೆ ವನವಾಸಕ್ಕೆ ಪೊರಟ ರಾಮಚಂದ್ರಗೆ 14 ಪುರದ ಜನರನು ಸಂತವಿಟ್ಟು ಗುಹನ ಸಖ್ಯದಿ ನದಿಯ ದಾಟಿ ಭರದಿ ಭಾರದ್ವಾಜರ ಕಂಡು ಚಿತ್ರಕೂಟಕ್ಕೆ ಬಂದ ರಾಮಗೆ 15 ಅರಸು ಸ್ವರ್ಗವನೈದೆ ಭರತನಕರಸಿ ಕರ್ಮವನೆಲ್ಲ ಕಳೆದು [ವರ] ಮಾತೆಗೆ ಭಾಷೆ ಕೊಟ್ಟು ತಮ್ಮನಾಲಿಂಗಿಸಿದ ರಾಮಗೆ 16 ಭರತನಂಕದೊಳಿಟ್ಟು ಪ್ರೇಮದಿ ಮನ್ನಸಿ ಮೃದುವಾಕ್ಯದಿಂದ ಗುರುಗಳನುಮತದಿಂದ ಪಾದುಕೆಯಿತ್ತು ಕಳುಹಿದ ರಾಮಚಂದ್ರಗೆ 17 ಬೇಗನೆ ಚಿತ್ರಕೂಟವ ಬಿಟ್ಟು ಅತ್ರಿ ಯಾಶ್ರಮಕೆ ಬಂದು ಅಂಗರಾಗಾರ್ಪಣವನೆಲ್ಲ ಅಂಗೀಕರಿಸಿದ ರಾಮಚಂದ್ರಗೆ 18 ದಂಡಕಾರಣ್ಯವನ್ನು ಪೊಕ್ಕು ಉದ್ದಂಡವಿರಾಧನ್ನ ಕೊಂದು ಕಂಡು ಇಂದ್ರನ ಶರಭಂಗರಿಗೆ ಮುಕ್ತಿಯನಿತ್ತ ಶ್ರೀರಾಮಚಂದ್ರಗೆ 19 ಋಷಿಗಳಿಗೆ ಅಭಯವನು ಇತ್ತು ಲೋಕಮಾತೆಯ ನುಡಿಯ ಕೇಳಿ ಋಷಿಮಂಡಲವನು ಪೊಕ್ಕು ಬಂದು ಸುತೀಕ್ಷ್ಣರ ಕಂಡ ರಾಮಗೆ 20 ಅಸ್ತ್ರವನು ಕೊಡಲು ಗ್ರಹಿಸಿ ಪಂಚವಟಿಗೆ ಬಂದ ರಾಮಗೆ 21 ಶೂರ್ಪನಖಿ ರಘುಪತಿಯ ಮೋಹಿಸೆ ಕರ್ಣನಾಸಿಕವನ್ನು ಛೇದಿಸಿ ದುರುಳ ಖರದೂಷಣರ ಕೊಂದು ಸತಿಯನಾಲಿಂಗಿಸಿದ ರಾಮಗೆ 22 ದುರುಳ ಖಳನು ಜಾನಕಿಯ ಕದ್ದೊಯ್ಯೆ ಮಾರಿಚನ್ನ ಕೊಂದು ಬರುತ ಮಾರ್ಗದಿ ಗೃಧ್ರರಾಜಗೆ ಮುಕ್ತಿಯಿತ್ತ ಶ್ರೀರಾಮಚಂದ್ರಗೆ 23 ಕಬಂಧನಾ ವಾಕ್ಯವನು ಕೇಳಿ ಮಾರ್ಗದಲಿ ಅಯಮುಖಿಯ ಭಂಗಿಸಿ ಶಬರಿ ಭಕ್ತಿಯೊಳಿತ್ತ ಫಲವನು ಸವಿದು ಮುಕ್ತಿಯನಿತ್ತ ರಾಮಗೆ 24 ಸೀತೆಯರಸುತ ಮಾರ್ಗದಲಿ ಋಷ್ಯಮೂಕಪರ್ವತವ ಸೇರಿ ಪಂ ಪಾತೀರದಿ ತಮ್ಮನೊ[ಂದಿ]ಗೆ ನಿಂತ ಶ್ರೀರಘುರಾಮಚಂದ್ರಗೆ 25 ಪಂಪಾಪುಳಿನದ ವನವಕಂಡು ಪಂಕಜಾಕ್ಷಿಯ ನೆನೆದು ವಿರಹ [ತಾಪದರೆ] ಬಂದ ಆಂಜನೇಯಗೆ ಸಖ್ಯ ನೀಡಿದ ರಾಮಚಂದ್ರಗೆ 26 ಅಭಯವನು ಇತ್ತು ರವಿಜಗೆ ಏಳು ತಾಳೇಮರವ ಛೇದಿಸಿ ದುಂ ದುಭಿಯ ಕಾಯವನು ಒಗೆದ ಇಂದಿರಾಪತಿ ರಾಮಚಂದ್ರಗೆ 27 ಇಂದ್ರಸುತನು ರವಿಜನೊಡನೆ ದ್ವಂದ್ವಯುದ್ಧವ ಮಾಡುತಿರಲು ಒಂದುಬಾಣದಿಂದ ವಾಲಿಯ ಕೊಂದು ಕೆಡಹಿದ ರಾಮಚಂದ್ರಗೆ 28 ಮುದ್ರೆಯುಂಗುರವಿತ್ತು [ಅ]ಸಾಧ್ಯ ಇವನೆಂತೆಂದ ರಾಮಗೆ 29 ಬೆಳೆದ ಹನುಮಗೆ 30 ಶತ್ರುಪಟ್ಟಣವ ಕಂಡು ಛಾಯೆಯ ಕುಟ್ಟಿ ಸುರಚಿಯುಪಾಯದಿಮನ್ನಿ ಸುತ್ತ ಮೈನಕನ ಭರದಲಿ ಲಂಕಿಣಿಯನಡಗಿಸಿದ ಹನುಮಗೆ 31 [ವೀರ] ಹನುಮಗೆ 32 ದುರುಳ ರಾ ವಣನ ನಿಂದಿಸಿ ಪುರವಸುಟ್ಟಾ ವೀರಹನುಮಗೆ 33 ಸೀತೆಯೊಡನೆ ಗುರುತಕೇಳಿ ಸಮುದ್ರತೀರಕೆ ಬಂದು ಬೇಗನೆ ಜಾಂಬ ವಂತ ಅಂಗದರ ಕೂಡಿ ಮಧುವನವ ಭಂಗಿಸಿದ ಹನುಮಗೆ 34 ಕಂಡೆ ಲೋಕಮಾತೆಯನನ್ನೆನ್ನುತ ಬಂದು ಮುದದಿ ವಂದಿಸಿ ಇತ್ತ ಹನುಮನನಾಲಿಂಗಿಸಿದವಗೆ 35 ಬಂದ ರಾಮಗೆ 36 [ಭಕ್ತ] ವಿಭೀಷಣಗೆ ಅಭಯವನಿತ್ತು ಶರಧಿಗೆ ಸೇತುವೆಯನ್ನು ಬಂಧಿಸಿ ಮುತ್ತಿ ಲಂಕಾಪುರವ ಸಂಧಿಗೆ ಅಂಗದನ ಕಳುಹಿಸಿದ ರಾಮಗೆ 37 ಇಂದ್ರ[ಜಿತ್ತು]ವೊಡನೆ ಕಾದಿ ಸರ್ಪಾಸ್ತ್ರದಿಂದ ಬಿಡಿಸಿಕೊಂಡು [ಆ]ದುರುಳ ರಾವಣನ ನಡುಗಿಸಿ ಕಿರೀಟವನು ಭಂಗಿಸಿದ ರಾಮಗೆ 38 ಕುಂಭಕರ್ಣನ ತುಂಡುತುಂಡಾಗಿ ಕೊಂದುಕೆಡಹಿದ ರಾಮಚಂದ್ರಗೆ 39 ಕೊಂದು ವಜ್ರದಂಷ್ಟ್ರ ಆಕಂಪ ದೇವಾಂತಕ ನರಾಂತಕರನ್ನು ಮ ಹೋದರ ಮಹಾಪಾಶ್ರ್ವ ಅತಿಕಾಯ ತ್ರಿಶಿರಸ್ಸನ್ನು ಕೊಂದ ರಾಮಗೆ 40 ಮಾಯೆಯುದ್ಧದಿ ಮೇಘನಾಥನು [ಅನುಜನ] ಬ್ರಹ್ಮಾಸ್ತ್ರದಲಿ ಕಟ್ಟಲು ವಾಯುನಂದನನಿಂದ ಸಂಜೀವನವ ತರಿಸಿದ ರಾಮಚಂದ್ರಗೆ 41 ಮಾಯಾಸೀತೆಯ ಶಿರವನರಿಯಲು ವಿಭೀಷಣನ ಉ ಪಾಯದಿಂದ ಇಂದ್ರಜಿತ್ತು ಶಿರವಕಡಿದ ತಮ್ಮನಾಲಂಗಿಸಿದ ರಾಮಗೆ 42 ಮೂಲಬಲವನು ಕಡಿದು ರಾವಣನೊಡನೆ ಯುದ್ಧವ ಯೋಚಿಸೆ ಕಡಿದ ರಾಮಗೆ 43 ರಾವಣಾನೆಂಬ ಗಂಧಹಸ್ತಿಯ ರಾಮಕೇಸರಿ ಬಂದು ಮುರಿಯಲು ಸುರರು ಶಿರದಿ ಧರಿಸಿದ ರಾಮಚಂದ್ರಗೆ 44 ವಿಭೀಷಣಗೆ ಪಟ್ಟವನು ಕಟ್ಟಿ ಸೀತೆಯೊಡನೆ ಪ್ರತಿಜ್ಞೆ ಮಾಡಿ ರೆ ಬ್ರಹ್ಮರುದ್ರಾದಿಗಳು ಸ್ತುತಿಸಲು ತಂದೆಗೆರಗಿದ ರಾಮಚಂದ್ರಗೆ 45 ಸೀತೆಯಂಕದೊಳಿಟ್ಟು ಕಪಿಗಳಸಹಿತ ಪುಷ್ಪಕವೇರಿ ಭರದಿ [ಬ ರುತ್ತ] ಭಾರದ್ವಾಜರಿಗೆರಗಿ ಭರತನ ಮನ್ನಿಸಿದ ರಾಮಗೆ 46 ಕೈಕೆಸುತ ಕೈಮುಗಿದು ಕಿಶೋರ ಭಾರವ ತಾಳಲಾಗದೆಂದಾ ಳುತ [ಲಾ]ಯಿತ್ತ ರಾಜ್ಯವನ್ನು ಕೊಡಲು ಗ್ರಹಿಸಿದ ರಾಮಚಂದ್ರಗೆ 47 ಉಟ್ಟ ಮಡಿಯ ಜಟೆಯನುತಾ ಶೋಧಿಸೆ ಸೀತೆ ಸಕಲಾಭರಣ ತೊಟ್ಟು ಸುಗ್ರೀವ ಸಕಲರೊಡನೆ ರಥವನೇರಿದ ರಾಮಚಂದ್ರಗೆ 48 ಸರಮೆಪತಿ ಸೌಮಿತ್ರಿ ಚಾಮರ ಪಿಡಿಯೆ ಶತ್ರುಘ್ನ ಛತ್ರಿಯನು ಭರತ ಸಾರಥ್ಯವನು ಮಾಡಲು ಪುರಕೆತೆರಳಿದ ರಾಮಚಂದ್ರಗೆ 49 ರಾಜಗೃಹವನು ತೋರಿ ರವಿಜಗೆ ಶರಧಿಯುದಕಗಳೆಲ್ಲ ತರಿಸಿ [ವಿ ರಾಜಿಸಿ] ಪೀಠದಿ ಸೀತೆಯೊಡನೆ ವೊಪ್ಪಿದಾ ರಘುರಾಮಚಂದ್ರಗೆ 50 ವಸಿಷ್ಠ ಮೊದಲಾದ ಸಪ್ತ ಋಷಿಗಳು ಲಕ್ಷ್ಮೀಪತಿಗಭಿಷೇಕ ಮಾಡಲು ರಾಮಚಂದ್ರಗೆ 51 ಪಾದ ಪಿಡಿದಿಹ ರಾಮಚಂದ್ರಗೆ
--------------
ಯದುಗಿರಿಯಮ್ಮ
ಕೆಡಬೇಡವೋ ಎಲೆ ಕರ್ಮಿ ಮನುಜ ನೀಕೆಡದಿಹ ಪಥವ ಕೇಳಿನ್ನು ಪ ಹಿಂಡು ಹಿಂಡು ಸಂದಳಿಯ ಬಿಡು ಇನ್ನು 1 ಬಹುಗೃಹ ಕಟ್ಟಿದೆ ದಿಕ್ಕಿಲ್ಲವೆಂಬೆ ಬಹು ಗೃಹವನು ಸುಡಲೆನ್ನುಇಹುದಿದು ದ್ರವ್ಯವು ಇದಕೇನೆಂಬೆಯ ಇಹುದನು ಧರ್ಮವ ಮಾಡಿನ್ನುದಾಹದಿ ಗಳಿಸಿದೆ ಆಸ್ತಿಯನೆಂಬೆಯ ಸಜ್ಜನರಿಗೆ ಕೊಳ್ಳೆನ್ನುಇಹೆ ನಾಲಕು ದಿನ ಎಂಬ ಭ್ರಮೆಯನು ಇಡು ಪಾದರಕ್ಷೆಯೊಳಿನ್ನು 2 ಮತಿವಂತರು ಆರಿಲ್ಲವೆಂಬೆಯ ಮತಿಗೆ ಶಿವ ತಾನಿಹೆನೆನ್ನುಗತಿಯೇನಿನ್ನು ಈ ಕುಟುಂಬಕೆಂಬೆಯ ಗತಿಯಿದ್ದಾಗುವುದೆನ್ನುಅತಿ ಋಣ ಭಾರವು ಆಗಿಹುದೆಂಬೆಯ ಆರಿಗೆ ಋಣ ಎಂದೆನ್ನುಸುತರಿಲ್ಲ ತನಗೆ ಗತಿಯಿಲ್ಲವೆಂಬೆಯ ಸುತರಿಂದ ಗತಿಯು ಸಾಕಿನ್ನು 3 ಪರ ಬ್ರಹ್ಮವ ನೋಡುತ ಸುಖದಲಿ ಆನಂದದಿ ಮಲಗಿನ್ನು4 ನಿರಂಜನ ನಿರವಯ ನಿತ್ಯನು ಬೇರಿಲ್ಲೆನ್ನುಪ್ರತ್ಯಗಾತ್ಮ ಪರಾತ್ಪರ ಪರತರ ಪ್ರತ್ಯಗೆ ತಾನಹುದೆನ್ನುಚಿತ್ತಿನ ಪ್ರಭೆಯದು ಢಾಳಿಸುತಿರುತಿರೆ ಚಿತ್ತವಲಯ ಮಾಡಿನ್ನುಪ್ರತ್ಯಗಾತ್ಮ ಚಿದಾನಂದನ ನೆನೆಯುತ ಪ್ರಾಣವ ಕಳೆಯಿನ್ನು 5
--------------
ಚಿದಾನಂದ ಅವಧೂತರು
ಜ್ಯೇಷ್ಠಾಭಿಷೇಕ ಗೀತೆ ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ. [ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ ವಿಪ್ರರು ಪೋದ ವಿಚಿತ್ರ[ವ] ನೋಡಿದೆ 1 ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ 2 ವೇದಘೋಷಗಳಿಂದ ವಿಪ್ರರು ಕೊಡಗಳ ವಿ ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ 3 ಕರಿ ಕೊಡವನ್ನು ಇಳಿಸಲು ಅಸಮಾನ [2ನಿ2]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] 4 ಗರ್ಭಗೃಹವು ಗಾಯಿತ್ರಿ ಮಂಟಪವನ್ನು ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ ವು ಬರುವಂಥ ಗಂಧÀವ ತಳಿದರು ಅಂದು ಆಲಯಕ್ಕೆಲ್ಲ 5 ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ 6 ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ ನಂದದಿ ಯೆರೆದರು ಇಂದಿರೆರಮಣಗೆ 7 ಕೇಸರಿ ಪುನಗಿನ ತೈಲವನೆ ತೆಗೆದು ವಾಸುಕಿಶಯನಗೆ ಲೇಪವನು ಮಾಡಿ ಸ ಹಸ್ರಕೊಡದ ಅಭಿಷೇಕವ ಮಾಡಿದರು 8 ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ9 ದಧಿ ಕದಳಿ ಫಲದಿಂದ ನೈ [ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ 10 ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] 11
--------------
ಯದುಗಿರಿಯಮ್ಮ
ತಿಳಿದು ನೋಡಲೆ ಮನವೆ ತೀವ್ರ ತಾಮಸವೇಕೆ ತಿಳಿದುಕೋನಿನ್ನ ನೀನು ತಿಳಿಯೆ ಮಾಯೆಗಳಿಲ್ಲ ತಿಳಿಯೆ ಶಿವನಾಗುತಿಹೆಬಲುಮರವೆ ಯಾಕೆ ಪಾಪಿ ಮನವೆ ಪ ಶೂನ್ಯ ದುರಿತ ಭಂಗತರ ತರಂಗ ಮೂರ್ತಿಜಂಗಮನೆ ನೆಲೆಸಿಹನು ಜನಿಸಿನೀ ನಿನ್ನೊಳಗೆ ಕಣ್ಗಾಣದಿಪ್ಪೆ ಗುರುವ ಮನವೆ 1 ಮಾಯೆ ಮೋಹಕೆ ಸಿಲುಕಿ ಮಗ್ನನಾಗಿರುತಿಹೆ ಕಾಯವಿದು ನಿನಗೆ ಸ್ಥಿರವೇಆಯಾಸಂಬಡಬಹುದೆ ಅಲ್ಪ ಮತಿಗಳ ಕೂಡಿ ನ್ಯಾಯವೆ ನಿನಗೆರಾಯ ನಾನೆಂಬ ಹೆಮ್ಮೆಯ ತಾಳ್ದು ರತಿ ಬಹಳ ಸ್ತ್ರೀಯರಲಿ ಸೊಗಸಬಹುದೇಮಾಯಕಿಂತಕಟ ನೀ ಶಿಲ್ಕಿ ಒಳಗಾಗುವುದುಮಾಯವೋ ಇದು ಮಹಿಮೆಯೋ ಮನವೇ 2 ಎನ್ನ ಸತಿಸುತ ಬಂಧು ಎನ್ನ ಗೃಹವು ಇದೆಂದು ಬನ್ನಬಡುತಿಹೆ ಯಾತಕೆನಿನ್ನೊಳಗೆ ಇಹ ವಸ್ತು ನೀನೆ ಕಾಣದಲಿರೆ ಮನ್ನಿಸಾ ಗುರುಹಿರಿಯರಉನ್ನತ ಕಟಾಕ್ಷದಲಿ ಒಳಗೆ ದೃಷ್ಟಿಸಿ ಕಂಡು ನಿನ್ನೊಳಗೆ ಪುಳಕನಾಗುಚಿನ್ಮಯ ಚಿದಾನಂದ ಚಿದ್ರೂಪ ತಾನೆಂದುನಿನ್ನ ಸಂಶಯ ಕಳೆಯೋ ಮನವೇ 3
--------------
ಚಿದಾನಂದ ಅವಧೂತರು
ನಾರಿಯರಲಿ ಮಾದರಿಯೆಂದೆನಿಸಿರಮ್ಮ ಮೂರುಕುಲಕೆ ಕೀರುತಿಯನು ತನ್ನಿರಮ್ಮ ಸೇರಿದ ಪತಿಮಂದಿರವನುದ್ಧರಿಸಿರಮ್ಮ ಬೇರೆ ಜನಕೆ ಸೋದರಿಯೆಂದರಿಯಿರಮ್ಮ ಅಬಲೆಯರಿರಬಹುದು ದೇಹ ಶಕುತಿಯಲಿ ಪ್ರಬಲಸ್ಥಾನ ನಿಮಗಿಹುದು ಸಮಾಜದಲ್ಲಿ ಶುಭಪರಂಪರೆಗಳ ಪತಿಗೆ ಕೋರಿರಮ್ಮ ಲಭಿಸುವುದತಿಸುಲಭದಿ ಪರಲೋಕವಮ್ಮ ಗೃಹಿಣಿಯೇ ಗೃಹವೆಂಬ ಮಾತನರಿಯಿರಮ್ಮ ಗಹನದ ಸಂಸಾರಪಥವ ಜರಿಯಬೇಡಿರಿ 10 ವಹಿಸಿರಿ ಗೃಹಕೃತ್ಯಗಳನು ಆದರದಲ್ಲಿ ಸಹಿಸಿರಿ ಸುಖದು:ಖಗಳನು ಖೇದವಿಲ್ಲದೆ ಶ್ರದ್ಧೆಯಿರಲಿ ಗೃಹಿಣಿಯ ಕಾರ್ಯದಲಿ ಸರ್ವದ ಸ್ಪರ್ಧೆಯ ಮಾಡಬೇಡಿ ಪುರುಷಗುಚಿತ ಕಾರ್ಯದಿ ತಿದ್ದಿರಮ್ಮ ವಿನಯದಿಂದ ಪತಿಯ ದೋಷವÀ ಹದ್ದಿನಂತೆ ಕಾಯಿರಮ್ಮ ಪತಿಯ ಶ್ರೇಯವ ದೈವದತ್ತವಿಹುದು ನಿಮ್ಮ ಮುಖದ ಕಾಂತಿಯು ಸೇರಿಸಿ ಫಲವೇನು ವಿವಿಧ ಸುಣ್ಣಬಣ್ಣವ ಹೂವುಗಳನು ಕಸಕಲದರ ಗಂಧವಿರುವುದೆ ಯಾವ ಕೃತಕ ಬೇಕಿದೆ ಸ್ವಭಾವ ಶೋಭೆಗೆ 20 ಅನುಗಾಲವು ಊರಿಗೆ ಉಪಕಾರಿಯಾದರು ಮನೆಗೆ ಮಾರಿಯಾಗಬೇಡಿರಮ್ಮ ಎಂದಿಗು ವಿನಯವಿರಲಿ ನಡೆನುಡಿಯಲಿ ಸರ್ವ ಜನರಲು ಪ್ರಣಯ ಸರಸ ಬೇಡಿರಮ್ಮ ಬಂಧು ಜನರಲಿ ದುಡಿದು ದಣಿದು ಉಶ್ಶೆನುತಲಿ ಬರುವ ಪತಿಯಲಿ ಕಿಡಿಕಿಡಿಯಾಗಲಿ ಬೇಡಿರಿ ತರಲು ಮರೆತರೆ ಬಡತನವಿರಬಹುದು ಸದ್ಯ ನಿಮ್ಮ ಪಾಲಿಗೆ ಅಡಿಗಡಿಗದನಾಡಬೇಡಿ ಒಡೆಯನೆದುರಲಿ ನೆರೆಮನೆ ವೆಂಕಮ್ಮನೊಂದು ಸೀರೆ ಕೊಂಡರೆ ಗುರು ಗುರುಗುಟ್ಟುತಲಿ ನೋಡಬೇಡಿ ಪತಿಯನು 30 ಮರುಕದಿ ಸಂತೈಸಲವನು ಮನವು ಕರಗದೆ ಸೆರೆಸೆರೆ ಕಣ್ಣೀರುಗಳನು ಸುರಿಸಬೇಡಿರಿ ತುಳಸಿಯ ಪೂಜೆಯನು ಮಾಡ ಮರೆಯಬೇಡಿರಿ ಕೆಲಸಗಳನು ದಿಟ್ಟತನದಿ ಮಾಡಿ ಮುಗಿಸಿರಿ ಕಲಿಯಿರಿ ಸಂಸಾರದಲಿ ನೆಪ್ಪು ನೇರವ ಹಳಿಯಬೇಡಿರಮ್ಮ ನೀವು ನೆರೆ ಹೊರೆ ಜನರ ಉಳಿಸಿ ಬಳಸಿರಮ್ಮ ತಂದ ಧಾನ್ಯವ ತಿಳಿಸಬೇಡಿ ಮನೆಯ ಗೋಪ್ಯ ಪರರಿಗೆಂದಿಗು ಕಾಲ ಕಳೆಯಬೇಡಿ ಕೆಲಸವಿದ್ದರೆ ಪ್ರಳಯ ಮಾಡಬೇಡಿ ಸಣ್ಣ ಪುಟ್ಟ ಮಾತಿಗೆ 40 ಸೊಟ್ಟ ಬೈತಲೆಯನು ತಗೆಯಲಿಷ್ಟಪಡದಿರಿ ಅಷ್ಟವಕ್ರದುಡುಪುಗಳನು ಧರಿಸಬೇಡಿರಿ ರಟ್ಟು ಮಾಡಬೇಡಿರಮ್ಮ ರೂಪು ರಚನೆಯ ಸಿಟ್ಟು ಮಾಡಬೇಡಿ ಮುದಿಯ ಬುದ್ಧಿವಾದಕೆ ಶ್ರವಣ ಮಾಡಿರಮ್ಮ ಹರಿಯ ಕಥೆಗಳನುದಿನ ಶ್ರವಣ ಮಾಡುವಾಗ ಹರಟೆ ನಿದ್ರೆ ಬೇಡವು ಕಿವಿಯ ಕಚ್ಚಬೇಡಿರಮ್ಮ ಪರರ ವಾಕ್ಯಕೆ ಲವಲವಿಕೆಯು ಬೇಡಿರಮ್ಮ ಚಾಡಿ ಚುದ್ರದಿ ರೂಢಿಯಿಲ್ಲದಿರುವ ನಡತೆ ಬೇಡಿರೆಂದಿಗು ಮೂಢರೆನಿಸಬೇಡಿ ಹಾಡುಹಸೆಯ ಕಲಿಯದೆ 50 ಪಾಡುಪಡುತ ಪತಿಗೆ ಹರುಷನೀಡಿ ಗೃಹದಲಿ ಪ್ರೌಢವಿದ್ಯೆ ಕಲಿತು ದುಡಿಯಬೇಡಿ ಪರರಿಗೆ ಬಣ್ಣವಿಲ್ಲದಿರುವುದು ಬಂಗಾರವಲ್ಲವು ಕಣ್ಣಿಗೆ ಹಿತವಲ್ಲದು ಶೃಂಗಾರವಲ್ಲವು ಉಣಲು ತಾ ದೊರೆಯದಿರಲು ಸಂಪತ್ತಲ್ಲವು ಅನ್ನ ಮಾಡಲರಿಯದಿರಲು ಹೆಣ್ಣದಲ್ಲವು ದುಂದುಗಾರಿಕೆಯನು ಕಲಿಯಬೇಡಿರೆಂದಿಗು ಮುಂದೆ ಕಾಲಚಕ್ರಗತಿಯನು ಮನದಿ ಯೋಚಿಸಿ ಬಂದ ಮಾತುಗಳನು ಬಾಯಿತಡೆದು ಆಡಿರಿ ನಂದಗೋಕುಲವನೆ ಮಾಡಿ ಗೃಹವ ನಗುತಲಿ 60 ಬಳಕೆಯಲ್ಲದಿರುವ ಕಲೆಯ ಕಲಿಯಬೇಡಿರಿ ಕಲಿಸಿರಮ್ಮ ಕೆಲಸಕಾರ್ಯ ಮಕ್ಕಳುಗಳಿಗೆ ಗಳಿಸಿರಮ್ಮ ಪುಣ್ಯಕೀರ್ತಿ ತಿಳಿಯಮನದಲಿ ಸುಲಭವು ಸಾಧನವು ನಿಮಗೆ ಪುಣ್ಯಲೋಕಕೆ ಮನವತಿ ಚಂಚಲತೆಯನ್ನು ಹೊಂದಬಿಡದಿರಿ ಅನುಮತಿ ಕೊಡಬೇಡಿ ದುಷ್ಟ ಜನರ ಬೋಧೆಗೆ ಘನಮತಿಯನು ಪೊಂದಿ ಸತಿಯ ಮಾರ್ಗ ತೋರಿರಿ ಗುಣವತಿಯೆಂದೆನಿಸಿರಮ್ಮ ಹಿರಿಯ ಜನರಲಿ ದುಡುಕಿನ ಹೆಣ್ಣೆಂದು ಹೆಸರು ಪಡೆಯಬೇಡಿರಿ ಸಿಡುಕಿನ ಮೋರೆಯನು ತೋರಬೇಡಿ ಜನರಿಗೆ 70 ಒಡಕಿನ ಬಾಯವಳು ಎಂದು ಎನಿಸಬೇಡಿರಿ ಕೆಡುಕ ಕೋರಬೇಡಿ ಕೋಪದಿಂದ ಪರರಿಗೆ ಧ್ವನಿಯು ಮಧುರವಿರಲಿ ನಿಮ್ಮ ಮಾತುಕಥೆಯಲಿ ಕೆಣಕಬೇಡಿ ಮರೆತುಬಿಟ್ಟ ಜಗಳ ಕದನವ ಇಣಕಿ ನೋಡಬೇಡಿ ಪರರ ನಡೆನುಡಿಗಳನು ಸಾರಥಿಯೆಂದೆನಿಸಿರಿ ಸಂಸಾರ ರಥದಲಿ ವೀರರಮಣಿಯೆಂಬ ದಿವ್ಯ ಕೀರುತಿ ಬರಲಿ ನಾರಿಯರಲಿ ಮಾದರಿಯನು ಪಡೆದು ತೋರಿದ ಭಾರತ ಭೂಮಾತೆಗೆ ಪ್ರತಿಬಿಂಬವೆನಿಸಿರಿ 80 ದೇಶಸೇವೆಯೆಂದು ರಾಜಕೀಯ ಬೇಡಿರಿ ಮೋಸ ಹೋಗಬೇಡಿ ಆಸೆ ತೋರುವ ನುಡಿಗೆ ಕಾಯ ಕ್ಲೇಶ ಬೇಡಿರಿ ಭಾಷಣ ಬಹಿರಂಗದಲ್ಲಿ ಭೂಷಣಲ್ಲವು ಸಿರಿರಮಣಗೆ ತುಳಸಿಗಿಂತ ಪುಷ್ಪವಿಲ್ಲವು ಹಿರಿಯತನಕೆ ಸತ್ಯಕ್ಕಿಂತ ಯುಕ್ತಿಯಿಲ್ಲವು ಅರಸಿ ನೋಡೆ ತಾಯಿಗಿಂತ ನಂಟರಿಲ್ಲವು ಕರಿಮಣಿ ಸಮ ನಾರಿಜನಕೆ ನಗಗಳಿಲ್ಲವು ದಾಸರ ನುಡಿ ಧರ್ಮಗಳ ಪ್ರಕಾಶ ಮಾಡಿತು ಸ್ತ್ರೀ ಸಮೂಹದಿಂದ ನಾಶವಾಗದುಳಿದವು 90 ಆ ಸುಧಾಮ ಸತಿಯರೆ ಈ ದೇಶದ ಸೊಬಗು ಮಾಸದಂತೆ ರಕ್ಷಿಸಿ ಪ್ರಾಚೀನ ನಡತೆಯ ನುಡಿಯಬೇಡಿರಮ್ಮ ಪರರ ವಂಚನೆನುಡಿಯ ಕೊಡಲಿ ಹಾಕಬೇಡಿರಮ್ಮ ಕುಳಿತ ಕೊಂಬೆಗೆ ಇಡಲಿಬೇಡಿ ಮತ್ಸರವನು ದೀರ್ಘ ಕಾಲದಿ ಪುಡಿಯನಿಡಲಿಬೇಡಿರಮ್ಮ ಪುಣ್ಯ ಕಾರ್ಯಕೆ ಸಣ್ಣನುಡಿಗಳೆಂದು ತಿಳಿಯಬೇಡಿರಿವುಗಳ ಭಿನ್ನ ಭಿನ್ನ ದೇಶಕಾಲದನುಭವಗಳಿದು ಬಣ್ಣವತಿಶಯೋಕ್ತಿಯಲ್ಲ ಅರಿತು ನೋಡಿರಿ ಘನ್ನ ಸುಗುಣಭರಿತ ಶ್ರೀ ಪ್ರಸನ್ನ ಸಲಹುವ 100
--------------
ವಿದ್ಯಾಪ್ರಸನ್ನತೀರ್ಥರು
ನೀನೆ ಅನಾಥನಾಗಿರಲು ಅನ್ಯರಿಗೆ ಏನು ದಾನವ ನೀ ಮಾಡುವಿಯೊ ಪ ಜ್ಞಾನಪೂರ್ಣ ನೀನೆಂದು ಅರಿತು ನಿನ್ನ ಜ್ಞಾನಲೇಶವನು ಯಾಚಿಸುವೆ ಅ.ಪ ಯಾರು ನಿನ್ನ ತಂದೆ ಯಾರು ನಿನ್ನ ತಾಯಿ ತೋರೆಲೊ ಈರೇಳು ಭುವನದಲಿ ಊರೊಳು ವಾಸಕೆ ಗೃಹವನು ಕಾಣದೆ ವಾರಿಧಿಯೊಳು ನೀನಡಗಿದೆಯೊ ರಂಗ 1 ಎಡಬಿಡದಿಹ ನಿನ್ನ ಮಡದಿಯ ಬಯಸದೆ ಪಡೆದೆಯೊ ನಾಭಿಯೊಳ್ನಾಲ್ಮುಗನ ಅಡಿಯಾಕಾಶವ ಕಾಣದ ಇಂತಹ ದುಡುಕಿನ ಲೋಕೋತ್ತರ ಪುರುಷ 2 ಪೆತ್ತುದನೆಲ್ಲವ ತುತ್ತು ಮಾಡುವುದು ಎತ್ತರ ನಡತೆಯೊ ನಾ ಕಾಣೆ ಪುತ್ಥಲಿ ಗೊಂಬೆಗಳಂದದಿ ಎಲ್ಲರ ಸುತ್ತಿಸುತಿಹೆ ಪುರುಷೋತ್ತಮನೆ 3 ಚಂಚಲಳಾದÀ ಮಡದಿಯು ನಿನ್ನನÀು ವಂಚಿಪಳೆನ್ನುವ ಭಯದಿಂದ ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು ಸಂಚರಿಸುವೆ ವಿಲಕ್ಷಣ ಪುರುಷ 4 ಅಣುವಿನೊಳಗೆ ಅಣು ಮಹತಿನೊಳಗೆ ಮಹ ತೆನಿಪ ವಿರೋಧ ಧರ್ಮಕೆ ಧರ್ಮಿ ಎನ್ನಿಪ ನಿನ್ನಯ ಗುಣವರಿಯಲು ಸಂತತ ಸುಜನ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ಬಾರೋ ನೂತನ ಗೃಹಕೆ ಹರಿಯೆ ಸಿರಿ ಮಾರುತ ಮುಖಸುರರೊಡಗೂಡಿ ಧೊರಿಯೆ ಪ ಯಾರು ಕೇಳದಲಿಹ ಸ್ಥಳವ ನೀನೆ ಪ್ರೇರಿಸಿ ಗೃಹವ ನಿರ್ಮಿಸಿದೆಯೋ ದೇವ ನೂರಾರು ಪರಿರೂಪಾಂತರವ ಪೊಂದಿ ಈ ರೀತಿ ನವಸುಸಂಸ್ಕøತವಾದ ಗೃಹವ 1 ಈರಪ್ಪÀ ಬಡಿಗನೆಂಬುವನು ಮನಿಯ ಚಾರುತನದಲಿಂದ ನಿರ್ಮಿಸಿರುವನು ತೋರುವ ಸಿಂಹಾಸನವನು ಮಧ್ಯಾ ಗಾರದಿನಿನಗಾಗಿ ವಿರಿಚಿಸಿಹನು 2 ಸುತ್ತಲು ನಿರ್ಭಯವಿಹುದು ವಂ - ಭತ್ತು ದ್ವಾರಗಳಿಂದ ಶೋಭಿಸುತಿಹುದು ಹತ್ತಿರೆ ಗುರುಗೃಹ ವಿಹುದು ಮುಂದೆ ಚಿತ್ತಜನಯ್ಯನ ಮಂದಿರ ವಿಹುದು 3 ಉತ್ತಮ ಗೃಹವೆನಿಸುವದು ಇ - ಪ್ತತ್ತುನಾಲಕುವಸ್ತುಗಳಕೂಡಿಹುದು ಸುತ್ತೇಳು ಪ್ರಾಕಾರವಿಹುದು ಸುತ್ತು ಮುತ್ತಲು ದ್ವಿಜಜನಹೊಂದಿ ಕೊಂಡಿಹುದು 4 ಗೃಹವುನಾಲ್ಕು ವಿಧವಿಹುದು ಸೂಕ್ಷ್ಮ ಗೃಹ ನಿನಗಾಗಿಯೆ ನೇಮಿಸಿಯಿಹುದು ಬಹಿರದಿ ಪಾಕಗೃಹ ವಿಹುದು ಅಲ್ಲಿ ಗೃಹಿಣಿಯಿಂ ತ್ರಿವಿಧಾನ್ನ ಪಕ್ವಗೈತಿಹುದು5 ನಡುಮನೆ ದೊಡ್ಡದಾಗಿಹುದು ಅಲ್ಲಿ ಸಡಗರದಲಿ ಬ್ರಹ್ಮವೃಂದ ಕೂಡುವದು ಬಿಡದೆ ಸತ್ಕಥೆನಡೆಯುವದು ಮುಂದೆ ಪಡಸಾಲೆಯಲಿ ಸರ್ವಜನ ಸಭೆಯಹುದು 6 ಶ್ವಸನ ಮಾರ್ಗವಲಂಬಿಸಿರುವೆ ಮನಿಯ ಹಸನ ಮೆಹದೀನಾದಿಯಿಂ ಮಾಡಿಸಿರುವೆ ಹೊಸಸುಣ್ಣವನು ಹಚ್ಚಿಸಿರುವೆ ಏಕಾ ದಶ ಸೇವಕರ ನಿನ್ನ ವಶದೊಳಿರುಸುವೆ 7 ನಾನಾಧನ ನಿನಗರ್ಪಿಸುವೆನು ತನು ಮಾನಿನಿಸಹ ನಿನ್ನಾಧೀನ ಮಾಡುವೆನು ಜ್ಞಾನಭಕ್ತಿಯೆ ಇಚ್ಛಿಸುವೆನು ನಿನ್ನ ಧ್ಯಾನಾನಂದದಿ ಧನ್ಯನೆಂದಿನಿಸುವೆನು8 ಹರಿಯೆ ಲಾಲಿಸು ಎನ್ನ ಸೊಲ್ಲಾ ಮುಂದೀ - ಪರಿಗೃಹದೊರೆವುದು ಸುಲಭವೇನಲ್ಲಾ ¨ರೆ ನಿನ್ನ ಬಿಡೆನೊ ಶ್ರೀ ನಲ್ಲಾ ಎನ್ನ ಮೊರೆಯ ನಾಲಿಸಿ ನೋಡೋ ವರದೇಶವಿಠಲಾ9
--------------
ವರದೇಶವಿಠಲ
ಭಕ್ತವತ್ಸಲ ಹರಿ ಎಂಬ ಬಿರುದು ನಿನ ಗಿತ್ತವರ್ಯಾರಯ್ಯಾ ಹೇ ಜೀಯಾ ಪ ತತ್ತರಿಸುತಲಿಹರು ಈ ಜಗದೊಳು ಅ.ಪ ಪರಿಪರಿಯಲಿ ನಿನ್ನ ಮೊರೆಯ ಹೊಕ್ಕಿರುವ ಪರಮ ಸುಜನರುಗಳು ಈ ಧರೆಯೊಳು ಒರಳಿಗೊಡ್ಡಿರುವ ಶಿರಗಳುಳ್ಳವರಂತೆ ದುರುಳರ ಭಯದಿಂದ ನರಳುತಿರೆ 1 ವಾಸಕೆ ಗೃಹವಿಲ್ಲ ಲೇಶ ಸುಖಕೆ ಅವ ಕಾಶ ಇವರಿಗಿಲ್ಲ ಈ ಭುವಿಯೊಳು ಶ್ರೀಶನಾಗಿರೆ ನಿನ್ನ ದಾಸರೊಳಗೆ ಪರಿ ಹಾಸ ಮಾಡುತಲಿಹೆಯೋ ಜಗದೀಶ 2 ಪರಿ ಘನ್ನಬಿರುದುಗಳು ಇನ್ನು ಉಳಿವುದೆಂತೋ ನಾ ಕಾಣೆ ಸನ್ನುತಿಸುವವರಿಗೆ ಇನ್ನಾದರು ಸುಖ ವನ್ನು ನೀ ದಯಮಾಡೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಯಾಕೆನ್ನೊಳಿಂತು ನಿರ್ದಯವೆಲೊ ದೇವ ನೀ ಕರುಣದಿ ನೋಡದಿರಲು ಮತ್ತಾವ ಕಾವ ಪ ಗಜರಾಜನ ನೀ ಸಲಹಲಿಲ್ಲೇ ಅಂದು ನಿಜಭಕ್ತ ಪ್ರಹ್ಲಾದನ ಪೊರೆಯಲಿಲ್ಲೇ ಪರಿ ಎಲ್ಲ ಬಲ್ಲೆ ನಿನ್ನ ಭಜನೆಯೊಳಿಹ ಎನ್ನನೇಕೆ ನೋಡಲೊಲ್ಲೆ 1 ದ್ರೌಪದಿ ಕರೆಯಲಕ್ಷಯ ವಸ್ತ್ರವ ಕೊಟ್ಟೆ ನೀನು ಶಾಪದ ಶಿಲೆಯ ಕುಲಕೆ ತರಲಡಿಯಿಟ್ಟೆ ಪಾಪಿ ಅಜಮಿಳನ ಅಘಗಳ ಸುಟ್ಟೆ ಸ್ವಾಮಿ ಶ್ರೀಪದಗ್ರಸ್ತನಾದೆನ್ನ ನೀ ಕೈಬಿಟ್ಟೆ 2 ಬಿಡಬೇಡೆನ್ನ ಕೈಯ ಶ್ರೀನಿವಾಸ ಬಹು ಬಡವ ನಾನಹುದು ಮಧ್ವಗೃಹವಾಸ ಕಡುಪಾಪಿ ನಾನಲ್ಲವೊ ರಂಗೇಶವಿಠಲ ದೃಢವಾಗಿ ನಂಬಿಹೆನೊ ನಿನ್ನ ಸರ್ವೇಶ 3
--------------
ರಂಗೇಶವಿಠಲದಾಸರು
ವೃಂದಾವನಕೈತಂದನು ಆ-ನಂದದಿಂ ಕ್ಷೀರಾಬ್ಧಿಯಿಂದ ಶ್ರೀಕೃಷ್ಣನು ಪ ತೆತ್ತೀಸರೂಪಿ ದೇವತೆಗಳೋಲೈಸಲುಮುತ್ತಿನ ಚಾಮರಗಳನಿಕ್ಕಲುಮುತ್ತೈದೆಯರೆಲ್ಲಾ ಧವಳವ ಪಾಡಲುಅರ್ಥಿಯಿಂದಿಂದಿರೆ ಸಹಿತ ಶ್ರೀಕೃಷ್ಣನು 1 ದ್ವಾರಾವತಿಯಿದ್ದು ಕ್ಷೀರಸಾಗರವಿದ್ದುಸಾರತರ ಶ್ವೇತದ್ವೀಪವಿರ್ದುಶ್ರೀ ವೃಂದಾವನ ಸುಖಮಂದಿರವೆನುತಲಿಕ್ಷೀರಸಾಗರವಾಸಿಯಾದ ಶ್ರೀಕೃಷ್ಣನು 2 ನಂದಗೋಕುಲವಿದ್ದು ಮಂದರಗಿರಿಯಿದ್ದುಚಂದವಾದ ವೈಕುಂಠಲೋಕವಿದ್ದುವೃಂದಾವನಪತಿಸುಖ ಗೃಹವೆನುತಲಿಇಂದಿರಾದೇವಿಯಿಂ ಸಹಿತ ಶ್ರೀಕೃಷ್ಣನು3 ಸುರದುಂದುಭಿ ದಂಧಣರೆಂದು ಮೊಳಗಲುಸುರರು ಹೂವಿನ ಮಳೆಯನು ಕರೆಯತರುಣ ತುಲಸಿಮಾಲೆಯಲುಗಲಿಂದಿರೆ ಸಹಗರುಡನ ಹೆಗಲಿನಿಂದಿಳಿದು ಶ್ರೀಕೃಷ್ಣನು4 ಉರದ ಕೌಸ್ತುಭರತ್ನ ಥಳಥಳಥಳಿಸಲುಕೊರಳ ವೈಜಯಂತಿಯ ಸರವಲುಗೆಸರಸಿಜ ಭವಮುಖ್ಯ ಸುರರೋಲೈಸಲುಪರಮ ಸಂಭ್ರಮದಿಂದ ಶ್ರೀಕೃಷ್ಣರಾಯನು5
--------------
ಕೆಳದಿ ವೆಂಕಣ್ಣ ಕವಿ
ಶೌನಕಾದಿ ಮುನಿಗಳಿಗೆ ಸಾನುರಾಗದಲಿ ಪೇಳಿದರು 1 ಕೈಲಾಸಶಿಖರ ಮೆರೆವುದು ಮೇಲಾದ ರತ್ನಕಾಂತಿಗಳಿಂ2 ಜಂಬುಕೇತಕಿ ಪನಸ ಪುನ್ನಾಗ ಸರ್ವಾತಿಶಯದಲಿ ತೋರುವದು 3 ಸಿದ್ಧಿದಾಯಕ ವೆಂದಿಲ್ಲಿ ಪದಧ್ಯಾನದಿ ಕುಳಿತಿಹರು 4 ದಿವಿಜ ಅವನಿಧರಾಗ್ರಣಿಯಾಗಿ ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ ಗಿರಿಯು ಮೆರೆಯುವುದು5 ಪಾರ್ವತಿಯೊಡನೆ ಸತಿ ನಮಿಸಿ ನುಡಿದಳು 6 ನುಡಿಯ ಲಾಕ್ಷಣದಿ ನಾಕರುಣಿಸುವೆ ಕೇಳೆಂದ7 ವರಮಹಾಲಕ್ಷ್ಮಿಯ ವೃತವು ದೊರೆವುದು ಸಕಲಸೌಭಾಗ್ಯ 8 ಶ್ರಾವಣ ಪೂರ್ಣ ಮಾಸಿಯ ದಿನದಿ ಪೂಜಿಪದು ವಿಶ್ವಾಸದಿಂದಾರಾಧಿಸುತಲಿ 9 ಪಕ್ವಾನ್ನ ಲೇಹ್ಯಾದಿ ನೈವೇದ್ಯ ತತ್ತನ್ನಿಯಾಮಕರ ಚಿಂತಿಪುದು 10 ಕೃಪಾಪಯೋನಿಧೆಯ ಪೂಜಿಪುದು ಬಿಂಬಾಪರೋಕ್ಷಿಗಳು ಪೂಜಿಪರು 11 ಕಾಮಿತ ಪಡೆದವರ್ಯಾರು ಮಹಾಮಹಿಮೆಯನು ಚನ್ನಾಗಿ12 ಮಡದಿ ತಾನಿರಲು ಕರೆಯುವರೆಲ್ಲಾರು ಪುರದಿ 13 ವನಜನಾಭನ ಶೇವೆಯೆಂದು ಗುಣದಿ ಭೂಷಿತಳು 14 ಬಂದಳು ವರಮಹಾಲಕ್ಷ್ಮಿ ಪರಮ ಸಂಭ್ರಮದಿ 15 ನಿರ್ಮಿಸುವನು ಜಗವೆಲ್ಲ ನೀ ಕರುಣಿಸು ಮಾತೆ 16 ಶ್ರಾವಣ ಹರುಷದಿಂದೆನ್ನಯ ವೃತವ ವರಗಳನಿತ್ತಳು ದಯದಿ 17 ಸಂತೋಷದಲಿ ಪೇಳಲವರು ಚಿಂತಿತ ಫಲವೀವುದೆಂದು 18 ಸಿಂಗರಿಸಿದಳಾದಿನದಿ ವಿಪ್ರಾಂಗನೆಯರನು ಕರೆದಳು 19 ಶಿರಿದೇವಿ ಪೂಜಾಸಾಧನವ ನೆರೆದರಾ ದ್ವಿಜನಮಂದಿರದಿ 20 ಕುಂಭಗಳಿಟ್ಟಘ್ರ್ಯಾದಿಗಳಿಂ ಸುರರ ಸಮ್ಮುಖದಿ 21 ಇಂದಿರ ದೇವಿಗಾರುತಿಯ ಬಂಧÀ£ವÀನÉ ಮಾಡುತಿಹರು 22 ಪೂಜಿಸುತಿರಲಾಗೃಹವು ಸೋಜಿಗವಾಯ್ತು ನೋಳ್ಪರಿಗೆ 23 ಕೊರಳೊಳುನವರತ್ನಹಾರ ಸಿರಿದೇವಿ ಕರುಣವಿದೆಂದು 24 ಇತ್ತರು ಬಾಗಿಣಗಳನು ಪೋದರು ತಮ್ಮ ಮನೆಗೆ 25 ಪುಣ್ಯದಿಂದೆಲ್ಲರು ನಾವೆಂ ಧನಧಾನ್ಯ ಸಂಪದಾಗಮನ 26 ಪಾಲಿಸುವಳು ಸಿರಿಯೆಂದು ಶಿವನು ಹೀಗೆಂದು ||27| ಕಾಯಜ ಜನನಿಯ ಕಾಯುವದೆಂದು ನೀ ತಿಳಿಯೆ 28 ನಿರ್ಮಲ ಭಕ್ತಿಜ್ಞಾನ ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ ಒಲಿವನು ನಿರುತ ಪಠಿಸಲು30
--------------
ಕಾರ್ಪರ ನರಹರಿದಾಸರು
ಶ್ರೀ ಸತ್ಯಬೋಧರು ನೋಡಿದೇ | ಗುರುವರರ ನಾ ನೋಡಿದೇ ಪ ಪಾದ | ಈಡಾಡಿ ಶಿರವನುಬೇಡೆ ಭಕ್ತಿ ಜ್ಞಾನ ನೀಡುತ ಪೊರೆವರ ಅ.ಪ. ಪಾದ ತಾಮರಸವ ಧರಿಸಿಭೂಮಿಯೊಳಗೆ ಚರಿಸಿ | ಮೆರೆಸಿದ ಗುರುಗಳ 1 ಶೇಷರೂಪಿಲಿ ಬಂದ ಹರಿಯಾ | ಗುಪ್ತಭಾಷೆಯ ಕೇಳುತ್ತ ಗೃಹವಾ | ಪೊಕ್ಕುಮೀಸಲೆಂದೆನಿಸಿದ ಧನವಾ | ಲೇಸಾಯಾಸಿಲ್ಲದೆ ತೆಗಿಸ್ಯದನಾ | ಆಹಏಸೇಸೋ ಜನುಮದಿ | ಪೋಷಿಸಿರೂವದನಶ್ರೀ ಶಗರ್ಪೀಸುತಲಿ ತೋಷವ ಪಡಿಸಿದರ 2 ವಿನುತ ಗುರುಗೊವಿಂದ ವಿಠಲನಪಾದ ಪಿಡಿದು ಸವಣೂರಲಿ ಮೆರೆವರ3
--------------
ಗುರುಗೋವಿಂದವಿಠಲರು
ಶ್ರೀರಾಮ ನಿನ್ನ ಪದಕೆರಗಿ ನಮಿಸಿವೆನು ತೋರೆನಗೆ ನಿಜರೂಪ ಪರಿವಾರ ಸಹಿತ ಪ. ಶ್ರೀ ಗುರುಗಳಿಗೆರಗಿ ಅವರ ಕರುಣಾಬಲದಿ ಈಗ ಈ ಜನ್ಮದಲಿ ನಿನ್ನ ಭಜಿಪೆ ನಾಗಶಯನನೆ ನಿನ್ನ ಜನ್ಮಕರ್ಮದ ದಿನದಿ ಬೇಗ ಬಂದೆನ್ನೊಳಗೆ ನೆಲಸಿದೆಯೊ ದೇವ 1 ನಿನ್ನ ದರುಶನಕೆಂದು ಘನ್ನ ಯೋಗಿಗಳು ಬರೆ ಮನ್ನಿಸೆ ಇರುತಿರಲು ದ್ವಾರಪಾಲಕರು ಇನ್ನವರ ಶಾಪದಲಿ ದೈತ್ಯಕುಲದಲಿ ಜನಿಸೆ ಮುನ್ನವರ ಪೊರೆಯಲು ಭೂಮಿಯೊಳು ಬಂದೆ 2 ದಶರಥಗೆ ಸುತನಾಗಿ ತಾಟಕಿಯ ಸಂಹರಿಸಿ ಅನುಜ ಕುಶಲದಿಂದಲಿ ಶಿಲೆಯ ಹೆಣ್ಣುಗೈಯುತ ಬಂದು ಶಶಿಮುಖಿ ಸೀತೆಯನು ಕರಪಿಡಿದ ದೇವ 3 ಧನುವ ಮುರಿದುದ ಕೇಳೀ ಜಮದಗ್ನಿ ಕುವರನು ನಿನ ಸಂಗಡದಲಿ ಕಾಳಗಕೆ ಬರಲು ದನುಜರಿಗೆ ಭ್ರಮೆಗೊಳಿಸಿ ಕನಲುತಿಬ್ಬರು ಕಾದಿ ಘನಬಲ ಗೆಲಿದಂಥ ಅನುಗುಣನೆ ರಾಮ 4 ಅನುಜ ಸೀತೆ ಸಹಿತದಿ ವನಕೆ ಪ್ರೀತಿಯಿಂದಲಿ ಪೋದೆ ನೀತಿಯನು ತಿಳಿದು ಪಾತಕವ ಹರಿಸುವ ಪರಮ ಪಾವನ ಮೂರ್ತಿ ಈ ತೆರದ ಲೀಲೆಯನು ತೋರಿದೆಯೊ ಜಗಕೆ 5 ಕಂಡು ಮಾಯಾಮೃಗವ ಅಂಡಲೆದು ಅದರೊಡನೆ ಭಂಡ ರಾವಣ ಬಂದು ಭಿಕ್ಷುಕನ ತೆರದಿ ಲಂಡನತದಲಿ ಸೀತೆಯನು ಕದ್ದು ಓಡಲು ಕಂಡು ನಿರ್ಜನ ಗೃಹವ ಬೆಂಡಾದ ರಾಮ 6 ಅನುಜನೊಡನೆ ವನವ ಅಲೆದಲೆದು ಕಂಗೆಟ್ಟು ಘನ ಪಕ್ಷಿಯಿಂದಲಿ ವಾರ್ತೆ ತಿಳಿದು ಹನುಮ ಸುಗ್ರೀವರಿಗೆ ಒಲಿದು ವಾಲಿಯ ಕೊಂದು ವನಿತೆ ಸೀತೆಯನರಸೆ ವಾನರರ ಕಳುಹಿದೆ 7 ಹನುಮನಿಂದಲಿ ಸುಟ್ಟು ದನುಜಪುರ ಉಂಗುರವ ವನಿತೆ ಸೀತೆಗೆ ಕೊಟ್ಟು ವಾರ್ತೆ ತರಿಸಿ ವನಧಿಗೆ ಸೇತುವೆಯ ಕಟ್ಟಿ ವಾನರರೊಡನೆ ದನುಜ ರಾವಣ ಸಹಿತ ರಕ್ಕಸರ ಕೊಂದೆ 8 ಅಗ್ನಿಯಿಂ ಸೀತೆಯನು ಶುದ್ಧಳೆನಿಸಿ ಗ್ರಹಿಸಿ ವಿಘ್ನವಿಲ್ಲದ ಪದ ವಿಭೀಷಣಗಿತ್ತು ಮಗ್ನನಾಗಿರೆ ಭರತ ನಿನ್ನ ಪದಧ್ಯಾನದಲಿ ಅಗ್ನಿಸಖಸುತನೊಡನೆ ವಾರ್ತೆ ಕಳುಹಿಸಿದೆ 9 ಬಂದೆದುರುಗೊಳ್ಳೆ ಭರತನು ಸಕಲ ಪರಿವಾರ ಬಂದಯೋಧ್ಯೆಗೆ ಸಕಲ ಸನ್ನಾಹದಿ ಅಂದು ಸಿಂಹಾಸನದಿ ಪಟ್ಟಾಭಿಷೇಕವಗೊಂಡು ಬಂದ ಭಕ್ತರಿಗೆ ಇಷ್ಟ್ಟಾರ್ಥ ಸಲಿಸಿದೆಯೊ 10 ಕೊಟ್ಟು ಕಪಿಗೆ ಬ್ರಹ್ಮಪಟ್ಟದ ಪದವಿಯನು ಶ್ರೇಷ್ಠನೆನಿಸಿದೆಯೊ ಜಗಕೆ ಬೆಟ್ಟದೊಡೆಯ ಇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಎನಗೆಕೆಟ್ಟ ಸಂಸೃತಿ ಬಿಡಿಸಿ ಕೊಟ್ಟಭಯ ಸಲಹೊ 11
--------------
ಅಂಬಾಬಾಯಿ
ಶ್ರೀವರ ಕೀರ್ತಿಯಂ ಅರ್ಥಿಯಿಂದಾಲಿಸೈ ಚಿತ್ತಶುದ್ಧಿಯಿಂ ಪ ಭಾವಿಸಿವಾರ್ತೆಯ ವ್ಯಾಸ ವಾಲ್ಮೀಕಿಯು [ಆವರ]ಶುಕ ಮನುಶ್ರೇಷ್ಠರೆಲ್ಲ ನಿತ್ಯಪಠಿಪರೋ ಅ.ಪ ಘೋರಾರಣ್ಯದಿ ತಿರುಗುತ್ತ ಶೌರ್ಯದಿ ಗೋಗ್ರಹಣವನು ಸಾಧಿಸುತಲಿ ಮೀರಿ ಸಂಧಿಕೇಳದ ದುರ್ಯೋಧನರ ಹತಗೈದ 1 ರಾಮನು ಕಾಡೊಳು ಮೃಗವನು ಮರ್ದಿಸಿ ಭೂಮಿಜೆಯಂ ತರೆ ರವಿಜನಿಂ ಆ ಮಹಾಸಾಗರವನು ಬಂಧಿಸಿ ಲಂಕಾ ಪ್ರೇಮಿಯನ್ನು ಕೊಂದು ಬಂದ ರಾಮಚರಿತಮಂ2 ದೇವಕಿಸುತ ಗೋಪೀಗೃಹವರ್ಧನ ಗೋವರ್ಧನಗಿರಿಯೆತ್ತಿದ ಮಾವಕಂಸಾದಿ ದುರ್ದೈತ್ಯರ ಖಂಡಿಸಿ ಸೇವಿಸುವ ಸಿಂಧುಗಳ ಸಲಹುವ ಜಾಜೀಶನು 3
--------------
ಶಾಮಶರ್ಮರು
ಹಗಲು ಸಮಯದಲಿ ಇರುಳು ನೋಡಿದ ಬಾವಿ ಗುರುಳಬಹುದೇ ನರರು ಈ ಜಗದೊಳು ಪ ಮರುಳು ಮಾಡುವ ಭವದುರುಳು ಬಂಧನದೊಳು ಸಿಗಲು ಬಯಸಬಹುದೇ ಅವಿವೇಕದಿ ಅ.ಪ ಅಡಿ ಐದು ಉದ್ದದ ಒಡಕು ಒಂಭತ್ತಿನ ಕಡು ದುಃಖ ದೇಹಕೆ ಸಿಡಿವುದು ತರವೆ ಪೊಡವೀಶನಾದರೂ ಮಡಿಯಲು ನಿನ್ನಯ ಸಡಗರವೆಲ್ಲವು ಹಿಡಿಯೊಳಗಲ್ಲವೇ 1 ಅನುದಿನದಲಿ ನೀನು ಹಣ ಹಣವೆನ್ನುತ ಕುಣಿಯುವುದನು ನೋಡಿ ಅಣಕಿಸುವರು ನಿನ್ನ ತನುಮನ ಕ್ಲೇಶವನನುಭವಿಸುತ ಸದಾ ಹಣವಗಳಿಸಲದನುಣುವರು ಬೇರಿಹರು 2 ಗೃಹಿಣಿ ಗೃಹಿಗಳೆಲ್ಲ ಕುಹಕವೆಂದರಿಯದೆ ಗೃಹವು ಎನ್ನದು ಎಂದು ಗೃಹಿಣಿ ಎನ್ನವಳೆಂದು ಬಹುವಿಧ ವೈಭವವೆನಗಿಹುದೆನ್ನುವ ಮಹದಾಗ್ರವನ್ನು ಸಹಿಸುವನೇ ಹರಿ 3 ಸಿರಿ ಸಂತತ ಗಳಿಸಲು ಅಂತಕ ತನುವನು ಸೆಳೆಯಲು ಗಳಿಸಿದ ಕಂತೆಗಳೆಲ್ಲವೂ ಎಂತು ನಿಲ್ಲಿಸುವುವು ಚಿಂತಿಸಿ ಮನದೊಳು ಹರಿಯನು ನಿಲಿಸೊ 4 ಊಹಿಸುತೆಲ್ಲವ ಈ ಮಹಿಯೊಳಗಿನ ಮೋಹವ ಜರಿಯುತ ಪಾಹಿ ಎಂದು ಆ ಮಹಾಮಹಿಮ ಪ್ರಸನ್ನ ಹರಿಯ ದಿವ್ಯ ಸ್ನೇಹಸುಜಲದ ಪ್ರವಾಹದೊಳಗೆ ನಲಿಯೊ 5
--------------
ವಿದ್ಯಾಪ್ರಸನ್ನತೀರ್ಥರು