ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿ ನಿಜಸುಖ ಕೂಡಿ ಗುರುಮುಖ ಧ್ರುವ ವ್ಯರ್ಥವ್ಯಾಕೆ ಡಂಭ ಆರ್ತು ನಾಡಿಗುಂಭ ಗುರ್ತುಮಾಡಿಕೊಡುವ ಪೂರ್ಣ ಗುರು ನಿರಾಲಂಬ 1 ಙÁ್ಞನ ನಿಜಗೂಢ ಏನುಬಲ್ಲ ಮೂಢ ಸ್ವಾನುಭವಕಾಗಿ ನೀವು ಮಾಡಿ ಮನದೃಢ 2 ತೋರುತಿದೆ ಖೂನ ಪರಮ ಸೂಕ್ಷ್ಮ ಙÁ್ಞನತರಳ ಮಹಿಪತಿ ನಿಜಾನಂದ ಸುಖಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾಕೆ ನಿನಗೆ ಲೋಕದುಸಾಬರಿ ಜಗ ದೇಕನಾಥನಿಗೆ ಬೀಳು ಮೊರೆ ಪ ಸಾಕುಯೆಂದು ಲೋಕೈಕನ ಬೇಡಿ ನಡಿ ಏಕಚಿತ್ತದಿ ವೈಕುಂಠದಾರಿ ಅ.ಪ ಸತ್ಯಸಂಗವೆಂಬ ಛತ್ತರ್ಹಿಡಿ ಪಥ ಚಿತ್ತ ಶುದ್ಧಿಯಿಂದ ಗುರ್ತುಮಾಡಿ ಭಕ್ತವತ್ಸಲನ ಸತ್ಯ ಬಿರುದುಗಳ ಭಕ್ತಿಯಿಂ ಕೂಗುತ್ತ ನಿರ್ತ ತುರ್ತುನಡಿ 1 ವನಜನಾಭನ ಕಥೆ ಶ್ರವಣಮಾಡಿ ಬಿಡ ದನುಭವದೊಳು ನಿಜಮರ್ಮ ಹುಡುಕಾಡಿ ಮನಸಿಜ ಜನಕನ ಚರಣದಾಸರ ಕೂಡಿ ಪಡಿ 2 ಮಾನ ಅಭಿಮಾನವೆಲ್ಲ ಸಮ ನೋಡಿ ನಿನ್ನ ನಾನಾ ಕಲ್ಪನೆಗಳ ಕಡೆಮಾಡಿ ಜ್ಞಾನಜ್ಯೋತಿ ಹಚ್ಚಿ ಧ್ಯಾನದೃಷ್ಟಿ ಚಾಚಿ ಜಾಣ ಶ್ರೀರಾಮನ ಖೂನ ಹಿಡಿ 3
--------------
ರಾಮದಾಸರು
ಸ್ಮರಿಸು ಮನವೆ ಶ್ರೀಹರಿಯಚರಣ ಕಮಲಯುಗವರಿಯಾ ಮೂರುಲೋಕದ ನಿಜಧೊರಿಯ ಮರೆಯದಿರು ನರಹರಿಯ ಧ್ರುವ ತಂತು ಪಿಡಿದನುದಿನ ಚಿಂತಿಸೊ ಕಂತಿಪಿತನ ನಿತ್ಯ ನಿಜಾನಂದ ಘನ ಸಂತತ ನೆರಿಯ ಪೂರ್ಣ 1 ಕರ್ತು ಶ್ರೀ ಸದ್ಗುರುವಿನ ಗುರ್ತುಮಾಡಿಕೊ ನಿಧಾನ ನಿತ್ಯ ನಿಜಾನುಸಂಧಾನ ಪ್ರಾರ್ಥಿಸೋ ಪರಮಾತ್ಮನ 2 ಇಹ್ಯ ಪರಾನಂದಘನ ಬಾಹ್ಯಾಂತ್ರ ಸದೋದಿತನ ಧ್ಯಾಯಿಸೋ ನೀ ಪರಿಪೂರ್ಣ ಮಹಿಪತಿ ಪ್ರಾಣನಾಥನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು