ಭೂರಿ ಕರುಣಾಕರನೋ ಸಾರುವ ತೆರೆದೊಳು
ತೋರಿಹ ಭಕ್ತರ ಪ.
ಅಗಣಿತ ಮಹಿಮನ ಪೊಗಳುವೆ ನಾನೆಂತು
ಬಗೆ ಬಗೆ ರೂಪದಿ ಸಿಗದೆಸಿಗುವ ಹಾಂಗೆ
ಪೊಗಳಿಸಿಕೊಂಡು ತಾ ಝಗಝಗಿಸುತ ಬಹ
ನಗೆಮೊಗ ಚೆನ್ನಿಗ ನಿಗಮಗೋಚರ ಕೃಷ್ಣಾ 1
ಭಕ್ತ ಪ್ರಹ್ಲಾದಗೆ ಅತ್ಯಧಿಕ ಹಿಂಸೆ
ಯಿತ್ತ ಪಿತನ ಕೊಂದು ಇತ್ತ ಮುಕುತಿ ಅವ
ನತ್ಯಪರಾಧವನೆತ್ಯಾಡಿದನೇ
ಚಿತ್ತಜನೈಯ್ಯನು ಭಕ್ತವತ್ಸಲ ದೇವ 2
ಅಣುರೇಣು ತೃಣಕಾಷ್ಠ ಪರಿಪೂರ್ಣ ನೀನೆಂದು
ಕ್ಷಣ ಬಿಡದಲೆ ಗಜರಾಜನು ಸ್ತುತಿಸೆ
ಅನುವಿಲಿ ಚಕ್ರದಿ ನಕ್ರನ ಹರಿಸಲು
ದಣಿದ ಹರಿಗೆ ಗಜರಾಜನೇನಿತ್ತನೋ 3
ಭಕ್ತರ ಮನದಘ ನಿತ್ಯದಿ ಕಳೆದನೋ
ಅಶಕ್ತ ಅಜಮಿಳನೆಮ ಭೃತ್ಯರೆಳೆಯಲು
ಇತ್ತು ನಾರಗನುಡಿ ಮತ್ತೆ ಯಮಭಟರ
ಇತ್ತ ಮುಕುತಿ ದೇವ ಅತ್ಯಧಿಕ 4
ಮೂಗುತಿ ನೆವದೊಳು ಸಾಗಿಸಿ ಭಾಗ್ಯವ
ಜಾಗರ ಮೂರುತೆ ಯೋಗಿಗಳರಸನು
ಬಾಗಿಸಿ ತನ್ನವರಾಗಿಸಿ ದಾಸರ
ಸರ್ವರ ಅನುರಾಗದಿ ಸಲಹುವ 5