ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.
ಯಾಕೆ ಪಂಥ ಲೋಕೈಕನಾಥ ದಿ-
ವಾಕರಕೋಟಿಪ್ರಭಾಕರ ತೇಜನೇ ಅ.ಪ.
ಪೂರ್ವಾರ್ಜಿತ ಕರ್ಮದಿಂದಲಿ
ಇರ್ವೆನು ನರಜನ್ಮ ಧರಿಸುತ
ಗರ್ವದಿಂದ ಗಜರಾಜನಂತೆ ಮತಿ
ಮರ್ವೆಯಾಯ್ತು ನಿನ್ನೋರ್ವನ ನಂಬದೆ
ಗರ್ವಮದೋನ್ಮತ್ತದಿ ನಡೆದೆನು
ಉರ್ವಿಯೊಳೀ ತೆರದಿ ಇದ್ದೆನಾದರೂ
ಸರ್ವಥಾ ಈಗ ನಿಗರ್ವಿಯಾದೆಯಹ
ಪರ್ವತವಾಸ ಸುಪರ್ವಾಣ ವಂದಿತ 1
ಯಾರಿಗಳವಲ್ಲ ಮಾಯಾ
ಕಾರ ಮಮತೆ ಸಲ್ಲ ಸಂತತ
ಸಾರಸಾಕ್ಷ ಸಂಸಾರಾರ್ಣವದಿಂದ
ಪಾರಗೈದು ಕರುಣಾರಸ ಸುರಿವುದು
ನತ ಮಮ
ಕಾರ ಹೋಯ್ತೆ ಕಡೆಗೆ ಏನಿದು
ಭಾರಿ ಭಾರಿ ಶ್ರುತಿ ಸಾರುವುದೈ ದಯ
ವಾರಿಧಿ ನೀನಿರಲ್ಯಾರಿಗುಸುರುವುದು 2
ಬಾಲತ್ವದ ಬಲೆಗೆ ದ್ರವ್ಯದ
ಶೀಲವಿತ್ತೆ ಎನಗೆ ಆದರೂ
ಪಾಲಿಸುವರೆ ನಿನಗಾಲಸ್ಯವೆ ಕರು-
ಸಾಲದೆರಡು ಮೂರು ನಿನ್ನಯ
ಮೂಲ ಸಹಿತ ತೋರು ಮುನಿಕುಲ
ಪಾಲ ಶ್ರೀಲಕ್ಷ್ಮೀನಾರಾಯಣ ಗುಣ
ಶೀಲ ಕಾರ್ಕಳ ನಗರಾಲಯವಾಸನೇ 3