ಕಾಲ ಕಳೆವರೆ ಮನವೆ ಪ
ಖಲಜನಸಂಗದಲಿ ಸದಾ
ಕಲ್ಮಶಭಾಜನನಾಗುತ
ಹಲಧರಾನುಜನ ಶ್ರೀ ಪದ
ಜಲಜಯುಗಳವ ಸುಜ್ಞಾನದಿ ಅ.ಪ
ಇಂದ್ರಿಯಗಳ ಬಂಧಿಸಿ ಮನ-
ಸೊಂದಾಗಿ ನಿಲಿಸಿ ಒಳಗೆ ಮು-
ಮಂದಬುದ್ಧಿಯಾಗಿ ನೀನು 1
ಯಮನವರೋಡಿ ಬರುತ ನಿ-
ಸಮಯದಿ ಭ್ರಮೆಯಿಂದಲ್ಲಿ
ಕಾಲ್ಗೆರಗಲು ಬಿಡುವರೆ ನಿನ್ನ 2
ತಾಮಸನಾಗುತ ಶ್ರೀಗುರು-
ರಾಮವಿಠಲ ಶರಣೆನ್ನದೆ
ಕಾಮಿಸುತಲಿ ಸೊಕ್ಕುತ ನೀ 3