ಜೀವನೇ ಶಶಿಹಾಸ ಕೇರಳ
ಜಡಪ್ರಕೃತಿ ಕುಂತಳಪುರ ಶರೀರವಿದು
ಸಮ್ಯಕ್ ಜ್ಞಾನ ಪಾವನದ ಶಾಸ್ತ್ರಗಳು ಗಾಲವ
ಭಾವಿಸಲು ಶುಭಫಲವು ಚಂಪಕ ಮಾಲಿನಿಯು ಕನ್ಯೆ 1
ಮದನ ಚಂದ್ರಮುಖಿ ವಿಷಯೆಯು ವಿಷಯವುಮು
ಕುಂದನಾತ್ಮನು ಸಾಲಿಗ್ರಾಮವು
ಕಂದನೊಯ್ದ ಕಟುಕರು ಪಂಚಾಘಗಳು ತಿಳಿಯುವುದೂ 2
ಕೆಟ್ಟಕರ್ಮವು ಕಾಲೊಳಾರನೆ
ಬೆಟ್ಟುನೋಡಲು ಕಾಳಿಕೆಯು ತಾ
ಶ್ರೇಷ್ಠಮೂಲಪ್ರಕೃತಿ ಖಡ್ಗವು ನಿಷ್ಠೆಯೆನಿಸುವುದೂ
ಸೃಷ್ಟಿಯೊಳಗೀ ವಿವರ ತಿಳಿದು
ತ್ಕøಷ್ಟವೆಂದಾಲಿಪರ ಗುರುರಾಮ
ವಿಠ್ಠಲನು ಕೈಪಿಡಿದು ಕೊಡುವನಭೀಷ್ಟಸಿದ್ಧಿಗಳಾ 3