ರಾಮನ ನೆನ ಮನವೇ-ಹೃದಯಾ-ರಾಮನನೆನೆ ಮನವೇ ಪ
ಸದ್ಗುಣ ಧಾಮನಾ ಸೀತಾ ಅ.ಪ.
ದಶರಥ ನಂದನನಾ-ಧರಣಿಯೊಳಸುರರ ಕೊಂದವನ
ಪಶುಪತಿ ಚಾಪವ ಖಂಡಿಸಿಮುದದಿಂ
ವಸುಮತಿ ಸುತೆಯಂ ಒಲಿದೊಡಗೂಡಿದ-ರಾಮನ 1
ತಂದೆಯ ಮಾತಿನಲಿ-ವನಕೈತಂದು ಸರಾಗದಲಿ
ಬಂದ ವಿರಾಧನ ಕೊಂದು ನಿಶಾಚರಿ
ಯಂದವಳಿದು ಖಳವೃಂದವ ಸವರಿದ 2
ಸೀತೆಯನರಸುತಲಿ-ಕಬಂಧನ ಮಾತನು ಸರಿಸುತಲಿ
ವಾತನಮಗನೊಳು ಪ್ರೀತಿಯಿಟ್ಟು ಪುರುಹೂತನ
ಸುತನಂ ಘಾತಿಸಿ ದಾತನ-ರಾಮನ 3
ತರಣಿ ತನಯನಿಂದ-ಕಪಿಗಳ ಕರೆಸಿ ವಿಲಾಸದಿಂದ
ತರುಣಿಯನರಸಲು ಮರುತನ ಮಗನಿಗೆ
ಬೆರಳುಂಗುರವನು ಗುರುತಾಗಿತ್ತನ-ರಾಮನ4
ಗುರುತು ಕೊಂಡು
ಅರಿಪುರವನು ಸುಟ್ಟುರುಹಿದ ವಾನರ-
ವರನಿಗೆ ಸೃಷ್ಠಿಪಪದವಿತ್ತಾತನ-ರಾಮನ 5
ಶರನಿಧಿಯನು ಕಟ್ಟಿ-ಶತ್ರುನಿಕರವನು ಹುಡಿಗುಟ್ಟಿ
ಶರಣನ ಲಂಕೆಗೆ ಧೊರೆಯನು ಮಾಡಿ
ಸಿರಿಯನಯೋಧ್ಯಗೆ ಕರೆತಂದಾತನ-ರಾಮನ 6
ಸರಣಿಯ ಲಾಲಿಸುತ
ಶರಣಾಭರಣ ಪುಲಿಗಿರಿಯೊಳು ನೆಲೆಸಿದವರದವಿಠ್ಠಲ ಧೊರೆ ಪರಮೋದಾರನ-ರಾಮನ 7