(ಯರ್ಡನಾಡ ವಿಷ್ಣುಮೂರ್ತಿ)
ಸಾರಥಿ ಪ.
ಶಿಷ್ಟರಾಯಸದ ಸಜ್ಜನರ ಮೇಲ್ಕರುಣಾ
ದೃಷ್ಟಿಯಿಂದಲಿ ಉಭಯಾರ್ಥದ ಪುರದಿ
ಕಷ್ಟಪಾಶವ ಕಡಿದರಿಗಳ ಗೆಲಿಸುತ
ಭೀಷ್ಟ ಕೊಡುವ ಸರ್ವೋತ್ಕøಷ್ಟ ಪರೇಶಾ 1
ಕ್ಷೋಣಿಸುತೆಯ ಚೂಡಾಮಣಿಯ ಬೇಗದಿ ತಂದ
ಪ್ರಾಣನಾಥನು ಸುಪ್ರವೀಣನೆಂದದಿರು
ಕಾಣಿಕೆ ಕಪ್ಪ ಪೂಜೆಗಳ ತನ್ಮತದಿಂದ
ಮಾನಿಸಿಕೊಳುತಿಹ ಮನ್ಮಥ ಜನಕ 2
ನಿನ್ನ ಕಟಾಕ್ಷ ಸಂಪೂರ್ಣ ಪೊಂದಿಹರಾ
ಹೆಂಣಾ ತಂದಿಹನಾ ಮೇಲಿರಿಸು ಪದ್ಮ ಕರಾ
ಪನ್ನಗಚಲವಾಸ ಪವಮಾನವಂದಿತ
ನಿನ್ನ ದಾಸರ ದಾಸ್ಯ ದಯಮಾಡು ಸುಪ್ರೀತ 3